ಸಾಹಿತ್ಯ- ಸಂಗೀತ ಮಿಲನ: ವಾದಿರಾಜ – ಕನಕದಾಸ ಸಂಗೀತೋತ್ಸವ


Team Udayavani, Jan 19, 2018, 2:42 PM IST

19-57.jpg

ಕಳೆದ ಡಿ.15,16 ರಂದು ನಡೆದ ವಾದಿರಾಜ – ಕನಕದಾಸ ಸಂಗೀತೋತ್ಸವ ಅರ್ಥಪೂರ್ಣ ಕಾರ್ಯಕ್ರಮವಾಗಿ ರೂಪುಗೊಂಡಿತು. ಈ ಸಂತದ್ವಯರ ಬದುಕು, ರಚನೆಗಳು, ಅವುಗಳ ತಾತ್ವಿಕತೆ, ಸಂದೇಶಗಳು ಮಾತ್ರವಲ್ಲದೆ ಸಂಗೀತದ ರಾಗ, ಲಯಗಳೊಂದಿಗೆ ಆ ರಚನೆಗಳ ಅವಿನಾಭಾವ ಸಂಬಂಧಗಳ ಕುರಿತಾದ ವಿಚಾರ ಸಂಕಿರಣ ನಡೆಯಿತು. ಕೆ.ಪಿ. ರಾವ್‌, ಉದ್ಯಾವರ ಮಾಧವಾಚಾರ್‌, ಪಾದೆಕಲ್ಲು ವಿಷ್ಣುಭಟ್‌ ಮತ್ತು ಅರವಿಂದ ಹೆಬ್ಟಾರ್‌ ಪಾಲ್ಗೊಂಡರು. ಈಶ್ವರಯ್ಯ ಅಧ್ಯಕ್ಷತೆ ವಹಿಸಿದರು.

ಮೊದಲ ದಿನದ ದ್ವಂದ್ವಗಾಯನ ಉಡುಪಿಯ ಅರ್ಚನಾ ಮತ್ತು ಸಮನ್ವಿ ಇವರಿಂದ. ಗಣಪತಿ ಶ್ಲೋಕದ ಅನಂತರ ಹಾಡಲಾದ ಆರಭಿ , ಲತಾಂಗಿ ರಚನೆ ಮತ್ತು ಅದರ ಸ್ವರವಿನಿಕೆಗಳು ಸಭೆಯನ್ನು ಸಿದ್ಧಗೊಳಿಸಿದವು. ಪರ್ಯಾಯವಾಗಿ ಹಾಡಲಾದ ಆಭೋಗಿ ಆಲಾಪನೆಯಲ್ಲಿ ರಾಗದ ಸುಂದರ ಸಂಚಾರಗಳನ್ನು ಪೋಣಿಸಿದರು. ಪ್ರಧಾನ ರಾಗ ತೋಡಿ. ಗಮಕ ಯುಕ್ತವಾದ ಆಲಾಪನೆ, ಕೃತಿ ನಿರೂಪಣೆ, ಪ್ರಬುದ್ಧವಾದ ಸ್ವರಗಳ ನೇಯ್ಗೆಗಳು ತೂಕದ್ದಾಗಿದ್ದವು. ಆಭೇರಿ ಮತ್ತು ಕಾಪಿ ರಾಗಗಳಲ್ಲಿ ಹಾಡಿದ ದೇವರನಾಮಗಳು ರಂಜಿಸಿದವು. ಮೃದಂಗದಲ್ಲಿ ಮಹೇಶ್‌ ಕುಮಾರ್‌ ಮತ್ತು ಪಿಟೀಲಿನಲ್ಲಿ ಶುಭಶ್ರೀ ಶಂಕರ್‌ ಸಹಕರಿಸಿದರು.

ಸಂಜೆಯ ಹಿಂದುಸ್ತಾನಿ ಹಾಡುಗಾರಿಕೆ ಮಣಿಪಾಲದ ರವಿಕಿರಣ್‌ ಅವರಿಂದ. ಎರಡು ರಾಗಗಳನ್ನು ಆಯ್ದುಕೊಂಡು ಮೊದಲು ಮುಲ್ತಾನಿಯ ಗಾಂಭೀರ್ಯಕ್ಕೆ ಇಂಬು ನೀಡುತ್ತ, ಔನ್ನತ್ಯಕ್ಕೆ ಸಾಗಿದರು. ಮುಂದೆ ಬೆಹಾಗ್‌ನ ಲಾಲಿತ್ಯದ ಹರಹು ಮತ್ತು ರಾಗವಿಸ್ತಾರದ ಅನಂತ ಮಿತಿಯನ್ನು ರಸಿಕರ ಮುಂದೆ ತೆರೆದಿಟ್ಟರು. ಈ ಮೇಲಿನ ಎರಡು ಪ್ರಸ್ತುತಿಗಳಲ್ಲೂ ವಿಲಂಬಿತ ಮತ್ತು ದ್ರುತ್‌ ಗತಿಗಳಲ್ಲಿ, ಮೂರು ಕಾಲಗಳಲ್ಲಿ ತಾನ, ಮತ್ತು ಬೋಲ್‌ತಾನ್‌ಗಳನ್ನು ಶ್ರುತಿಲೀನತೆ ಮತ್ತು ಸ್ವರಸ್ಥಾನ ನಿರೂಪಿಸಿದರು.ಮುಂದೆ ವಾಹಾಡಿ, ಲಲಿತ್‌, ದುರ್ಗಾ, ಭೈರವಿ ಮುಂತಾದ ರಾಗಗಳಲ್ಲಿ ದಾಸರ ರಚನೆಗಳೊಂದಿಗೆ ಕಛೇರಿ ಸಂಪನ್ನಗೊಂಡಿತು. ತಬಲಾದಲ್ಲಿ ಭಾರವಿ ದೇರಾಜೆ ಮತ್ತು ಹಾರ್ಮೋನಿಯಂನಲ್ಲಿ ಶಶಿಕಿರಣ್‌ ಸಹಕರಿಸಿದರು. 

ಡಿ.16ರಂದು ಮಣಿಪಾಲದ ದಿವ್ಯಶ್ರೀಯವರು ಶ್ರೀ ರಂಜನಿ ವರ್ಣ ಮತ್ತು ಷಣ್ಮುಖೀಪ್ರಿಯ ಪ್ರಸ್ತುತಿಯ ನಂತರ ವಾಗಧೀಶ್ವರಿಯನ್ನು ಎತ್ತಿಕೊಂಡು ಆರಭಿಯ ಕಣಿಯ ಕೇಳಲು ಬಂದ ರಚನೆಯನ್ನು ಐದು ನಡೆಗಳಲ್ಲಿ ಹಾಡಿದರು. ಪ್ರಧಾನ ರಾಗ ಕಾಂಭೋಜಿಯಲ್ಲಿ ಆಲಾಪನೆ, ನೆರವಲ್‌, ಕುರೈಪ್ಪುಗಳು, ಪೂರುತ್ತಂ ಮತ್ತು ಲೆಕ್ಕಾಚಾರದ ಮುಕ್ತಾಯಗಳಿದ್ದವು.ಆಹಿರ್‌ ಭೈರವ್‌ ಮತ್ತು ರಾಗಮಾಲಿಕೆ ಲಘು ಪ್ರಸ್ತುತಿಗಳೊಂದಿಗೆ ಹಾಡುಗಾರಿಕೆ ಕೊನೆಗೊಂಡಿತು. ವಸಂತಿ ರಾಮಭಟ್‌ ವಯಲಿನ್‌ನಲ್ಲಿ ಮತ್ತು ಶ್ರೀನಾಥ್‌ ವಿಶ್ವನಾಥನ್‌ ಮೃದಂಗದಲ್ಲಿ ಸಹಕರಿಸಿದರು. 

ಉಡುಪಿಯ ಮಹಾಬಲೇಶ್ವರ ಭಾಗವತ್‌ ಹಿಂದುಸ್ಥಾನಿ ಕಛೇರಿ ನೀಡಿದರು. ಶುದ್ಧ ಸಾರಂಗ್‌ ಮತ್ತು ಕಮಾಚ್‌ ರಾಗದ ಬಂದಿಶ್‌ಗಳನ್ನು ಆಯ್ದುಕೊಂಡು ವಿಸ್ತರಿಸಿ, ತಾನ್‌ ಮತ್ತು ಬೋಲ್‌ತಾನ್‌ಗಳಿಂದ ಸಿಂಗರಿಸಿದರು. ಭೂಪ್‌, ಭೀಂಪಲಾಸ್‌, ಕಲಾವತಿ ಮುಂತಾದ ರಾಗಗಳಲ್ಲಿ ಹಾಡುಗಾರಿಕೆ ಸಂಪನ್ನಗೊಂಡಿತು.ದಿನೇಶ್‌ ಶೆಣೈ ತಬಲಾದಲ್ಲಿ , ಶಂಕರ ಶೆಣೈ ಹಾರ್ಮೋನಿಯಂನಲ್ಲಿ ಸಹಕರಿಸಿದರು. 

ವಾರಿಜಾಕ್ಷಿ ಭಟ್‌ ಪರಂಪರಾಗತ ಪದ್ಧತಿಯನ್ನು ಉಳಿಸಿಕೊಂಡು, ಸಂಪ್ರದಾಯದ ಚೌಕಟ್ಟಿನೊಳಗೆ ಶುದ್ಧ ಕಛೇರಿ ನಡೆಸಿಕೊಟ್ಟರು. ರಾಗಮಾಲಿಕೆಯಲ್ಲಿ ಕನಕದಾಸರ ಉಗಾಭೋಗಗಳ ನಂತರ ಕಲ್ಯಾಣಿ ಮತ್ತು ಹಿಂದೋಳ ಪ್ರಸ್ತುತಿಗಳು ಹೃದ್ಯವಾಗಿದ್ದವು. ಬಿಲಹರಿ ಮತ್ತು ಷಣ್ಮುಖಪ್ರಿಯ ಪ್ರಧಾನ ರಾಗಗಳಾಗಿದ್ದವು. ವಯಲಿನ್‌ನಲ್ಲಿ ವಸಂತಿ ರಾಮಭಟ್‌ ಮತ್ತು ಮೃದಂಗದಲ್ಲಿ ಬಾಲಚಂದ್ರ ಆಚಾರ್ಯ ಸಹಕರಿಸಿದರು. ಮೋಹನ ರಾಗದ ರಚನೆಯೊಂದಿಗೆ ಕಛೇರಿ ಸಮಾಪನಗೊಂಡಿತು. 

 ಕೊನೆಯ ಕಾರ್ಯಕ್ರಮ ಮಣಿಪಾಲದ ಕೆ.ಆರ್‌. ರಾಘವೇಂದ್ರ ಆಚಾರ್ಯ ಇವರಿಂದ. ಶಾಸ್ತ್ರೀಯ, ಲಘು ಶಾಸ್ತ್ರೀಯದಲ್ಲಿ ಪರಿಶ್ರಮವನ್ನು ಹೊಂದಿರುವ ಅವರು ಉತ್ತರಾದಿ ಛಾಯೆಯಿರುವಂತಹ ರಕ್ತಿ ರಾಗಗಳಲ್ಲಿ ಸಂತದ್ವಯರ ರಚನೆಗಳನ್ನು ಹಾಡಿದರು. ಮಾಧವ ಆಚಾರ್ಯ ತಬಲಾದಲ್ಲಿ , ಶಂಕರ ಶೆಣೈ ಹಾರ್ಮೋನಿಯಂನಲ್ಲಿ ಸಹಕರಿಸಿದರು.

ಸರೋಜಾ ಆರ್‌. ಆಚಾರ್ಯ

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.