ಸಂಗೀತೋತ್ಸವದಲ್ಲಿ ಮಿಂಚಿದ ಸ್ಥಳೀಯ ಪ್ರತಿಭೆಗಳು


Team Udayavani, Mar 6, 2020, 3:53 AM IST

ಸಂಗೀತೋತ್ಸವದಲ್ಲಿ ಮಿಂಚಿದ ಸ್ಥಳೀಯ ಪ್ರತಿಭೆಗಳು

ರಾಗಧನದ ವತಿಯಿಂದ ಎಮ್‌.ಜಿ.ಎಮ್‌ ಕಾಲೇಜಿನ ಸಹಯೋಗದಲ್ಲಿ ಮೂರು ದಿನಗಳ ಶ್ರೀ ಪುರಂದರದಾಸ ಹಾಗೂ ತ್ರಿಮೂರ್ತಿ ಉತ್ಸವವು ಇತ್ತೀಚೆಗೆ ನಡೆಯಿತು. ಮೊದಲನೇ ದಿನದಂದು ಪ್ರಕಟಿತ ಕಲಾವಿದೆಯ ಗೈರು ಹಾಜರಿಯಲ್ಲಿ ಉಡುಪಿಯ ಕು| ಸಮನ್ವಿಯ ಕಛೇರಿಯನ್ನು ಏರ್ಪಡಿಸಲಾಗಿತ್ತು. ಇವರು ಅತಿ ಕಡಿಮೆ ಅವಧಿಯ ತಯಾರಿಯಲ್ಲಿ ಒಂದು ಪ್ರಬುದ್ಧವಾದ ಕಛೇರಿಯನ್ನು ನೀಡಿದರು.

ಶುರುವಿನ ಬೇಹಾಗ್‌ ವರ್ಣದಲ್ಲಿ ಸಾಟಿಲೇನಿಯಲ್ಲಿ ಮಾಡಿದ ಕ್ಷಿಪ್ರಗತಿಯ ಅಕಾರಗಳು ಹಾಗೂ ಕಛೇರಿಯ ಮಧ್ಯೆ ಮಧ್ಯೆ ನಿರೀಕ್ಷೆ ಮಾಡದ ಪರಿಯಲ್ಲಿ ಸೆಕುಂಡುಗಳಲ್ಲಿ ಹಾದು ಹೋಗಿ ಮುದ ನೀಡಿದ‌ ಅತಿವೇಗದ ಬಿರ್ಕಾಗಳು ಇನ್ನೂ ಕಿವಿಯಲ್ಲಿ ಅನುರಣಿಸುತ್ತಿವೆ. ಗೌಳದ ಅಗಣಿತ ಮಹಿಮಾ, ಬಳಿಕ ವರಾಳಿಯ ಮೈವೆತ್ತ ಮನೋಧರ್ಮದಲ್ಲಿ ಶ್ಯಾಮಾಶಾಸ್ತ್ರಿಗಳ ಬಂಗಾರು ಕಾಮಾಕ್ಷಿ ತುಂಬಾ ಚೆನ್ನಾಗಿ ಮೂಡಿ ಬಂತು. ವಿಸ್ತಾರಕ್ಕಾಗಿ ಬಳಸಿಕೊಂಡ ಇನ್ನೆರಡು ರಚನೆಗಳು, ಬೃಂದಾವನೀ ಸಾರಂಗದ ಸೌಂದರ ರಾಜಂ ಆಶ್ರಯೇ ಹಾಗೂ ಹರಿಕಾಂಭೋಜಿಯ ದಿನಮಣಿವಂಶ. ಬೃಂದಾವನಿಯಲ್ಲಿ ಶ್ರುತಿಬೇಧವನ್ನು ಮಾಡಿ ಅದರಲ್ಲಿ ಬೃಂದಾವನೀ ಹಾಗೂ ದುರ್ಗಾ ರಾಗಗಳನ್ನು ಬಹು ಚಾಕಚಕ್ಯತೆಯಿಂದ ನಿರೂಪಿಸಿದರು. ದಿನಮಣಿವಂಶದ ಒಂದು ಬೇರೆಯೇ ಸ್ವರೂಪವನ್ನು ತೆರೆದಿಟ್ಟರು.

ಲಘು ರಚನೆಗಳು ಮತ್ತು ವಿ|ಚಿತ್ರವೀಣಾ ರವಿಕಿರಣ್‌ ಸಂಯೋಜಿತ ಸಿಂಧುಭೈರವಿ ತಿಲ್ಲಾನ ಬಲು ಸೊಗಸಾಗಿತ್ತು. ಈ ಕಛೇರಿಗೆ ವೈಭವ್‌ ರಮಣಿ ವಯೊಲಿನ್‌ ಹಾಗೂ ತುಮಕೂರು ರವಿಶಂಕರ್‌ ಮೃದಂಗ ಸಹಕಾರವನ್ನಿತ್ತರು. ಮರುದಿನ ಅನೀಶ್‌ ವಿ. ಭಟ್‌ ಅವರಿಗೆ ಈ ಬಾರಿಯ “ರಾಗಧನ ಪಲ್ಲವಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅನಂತರದಲ್ಲಿ ಅವರದೇ ಕಛೇರಿ ನಡೆಯಿತು. ಮೊದಲಿಗೆ ನಳಿನ ಕಾಂತಿ ವರ್ಣ , ನಂತರ “ಪಲ್ಲವಪದ ಮೃದುತರಸ್ಯ’ದಲ್ಲಿ ಮಾಡಿದ ಸ್ವರಪ್ರಸ್ತಾರದೊಂದಿಗಿನ ಬೇಗಡೆಯ ವಲ್ಲಭನಾಯಕಸ್ಯ’ವನ್ನು ಹಾಡಿದರು. ಮುಂದೆ ಹಾಡಿದ ಶುದ್ಧ ಧನ್ಯಾಸಿಯ ಸುಬ್ರಹ್ಮಣ್ಯೇನ ರಕ್ಷಿತೋಹಂ ಕೃತಿಗೆ ಪಲ್ಲವಿಯಲ್ಲಿ ಮಾಡಿದ ಪುಟ್ಟ ಪುಟ್ಟ ಪ್ಯಾಟರ್ನ್ ಹಾಗೂ ಲೆಕ್ಕಾಚಾರದ ಸ್ವರ ಪ್ರಸ್ತಾರಗಳು ಸೊಗಸಾಗಿದ್ದುವು.

ಕಲ್ಯಾಣಿಯ ಈಶ ಪಾಹಿಮಾಂನ ಬಳಿಕ ಪ್ರಧಾನವಾಗಿ, ರಾಗಂ ತಾನಂ ಪಲ್ಲವಿಯನ್ನು ಗೌರೀಮನೋಹರೀ ರಾಗದಲ್ಲಿ ಹಾಡಿದರು. ಈ ನಿರೂಪಣೆಯಲ್ಲಿ ಕಲಾವಿದನಿಗೆ ಸಂಗೀತದ ಬಗೆಗಿರುವ ಹಸಿವು, ಆಳವಾದ ಪರಿಜ್ಞಾನ, ಬದ್ಧತೆಯನ್ನು ಕಾಣುವಂತಾಯಿತು. “ಗೌರೀಪತೇ ಪಶುಪತೇ ಉಮಾಪತೇ’ ಎನ್ನುವ ಸಾಹಿತ್ಯವನ್ನು ಖಂಡ ತ್ರಿಪುಟತಾಳದಲ್ಲಿ, ವಾಸಂತಿ, ಕಾಪಿ, ಬೇಹಾಗ್‌ ರಾಗಗಳಲ್ಲಿ ರಾಗಮಾಲಿಕೆಯೊಂದಿಗೆ ನಡೆಬೇಧಗಳೊಂದಿಗೆ ವಿದ್ವತೂ³ರ್ಣವಾಗಿಸಿದರು. ಇವರಿಗೆ ಗಣರಾಜ್‌ ಕಾರ್ಲೆ ಹಾಗೂ ಎಚ್‌. ಎಸ್‌. ನಾಗರಾಜ್‌ ಅವರು ಕ್ರಮವಾಗಿ ವಯೊಲಿನ್‌ ಹಾಗೂ ಮೃದಂಗ ಸಹಕಾರವನ್ನಿತ್ತರು.

ವಿದ್ಯಾಲಕ್ಷ್ಮೀ ಕಡಿಯಾಳಿ

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.