ಸಾಮಗರಿಗೆ ಸಪ್ತತಿ ಸಂಭ್ರಮ


Team Udayavani, May 24, 2019, 5:50 AM IST

q-6

ಹಿರಿಯ ವೇಷಧಾರಿ, ಆರ್ಥಧಾರಿ, ಸಂಘಟಕ ಎಂ. ಆರ್‌. ವಾಸುದೇವ ಸಾಮಗರ ಸಪ್ತತಿ ಮೇ 26ರಂದು ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಮಕ್ಷ ಸಂಪನ್ನಗೊಳ್ಳಲಿದೆ.

ಸಾಮಗರದ್ದು ಸಾಹಸ ಪ್ರವೃತ್ತಿಯುಳ್ಳ, ಸವಾಲುಗಳನ್ನು ಎದುರಿಸುತ್ತಾ ಏರು-ಜಾರುಗಳಲ್ಲಿ ಹರಿದು ಭೋರ್ಗರೆವ ಜಲಪಾತದಂಥ ಬದುಕಿನ ದಾರಿ. ಸದಾ ಕ್ರಿಯಾಶೀಲ, ಕನಸುಗಾರ, ನವಾನ್ವೇಷಕ, ಸಾಧಿಸುವ ಛಲಗಾರ, ಸೋಲಿನಲ್ಲಿಯೂ ಗೆಲುವನ್ನು ಕಾಣುವ ಸಮಚಿತ್ತ.

ಸಾಮಗರ ಮೋಹನ ತರಂಗಿಣಿಯ ಮನ್ಮಥ, ಮಧುರಾ ಮಹೀಂದ್ರದ ಬಾಲಕಂಸ, ಕಚದೇವಯಾನಿಯ ಕಚ, ಯಕ್ಷಲೋಕ ವಿಜಯದ ಪ್ರದೀಪ, ಶನೀಶ್ವರ ಮಹಾತೆ¾ಯ ವಿಕ್ರಮಾದಿತ್ಯ, ಉತ್ತರ ಗೋಗ್ರಹಣದ ಉತ್ತರಕುಮಾರ ಪಾತ್ರಗಳು ಚಿತ್ತಭಿತ್ತಿಯಿಂದ ಅಳಿಸಿಹೋಗದು. ತಾಳಮದ್ದಳೆಯಲ್ಲಿ ನಿರ್ವಹಿಸದ ಪ್ರಸಂಗಗಳಿಲ್ಲ, ಪಾತ್ರಗಳೇ ಇಲ್ಲವೆನ್ನಬಹುದು. ಕರ್ಣ, ಅರ್ಜುನ, ಕೃಷ್ಣ, ಶಲ್ಯರಂಥಹ ಮುಖ್ಯಪಾತ್ರಗಳಲ್ಲದೇ, ಅಶ್ವಸೇನನಂತಹ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಂಬಿಗನ ಪಾತ್ರವನ್ನು ಹೊಸ ಚಿಂತನೆ ಯಲ್ಲಿ ಕಟ್ಟಿಕೊಟ್ಟದ್ದನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಆಟವಿರಲಿ, ಕೂಟವಿರಲಿ ವಾಸುದೇವ ಸಾಮಗರು ರಂಗದಲ್ಲಿ ಅನನ್ಯರಾಗಿಯೇ ಕಾಣಿಸಿಕೊಳ್ಳುತ್ತಾರೆ. ದೊಡ್ಡಪ್ಪ ಶಂಕರನಾರಾಯಣ ಸಾಮಗ ಮತ್ತು ತಂದೆ ರಾಮದಾಸ ಸಾಮಗರ ಪಾತ್ರ ನಿರ್ವಹಣೆಯ ಕೌಶಲದ ಬಳುವಳಿಯೊಂದಿಗೆ ತನ್ನದೇ ಆದ ಹೊಸ ಆಯಾಮದಲ್ಲಿ ಪಾತ್ರಗಳನ್ನು ಕಡೆದು ಕಟ್ಟಿಕೊಡುವ ಅಪೂರ್ವ ಕಲಾವಿದರು.

ತೆಂಕು-ಬಡಗು ರಂಗದಲ್ಲಿ ಪಾತ್ರೋಚಿತವಾಗಿ ಕುಣಿತವನ್ನು ಪ್ರದರ್ಶಿಸುವ ಸಾಮಗರು ವಾಚಿಕ, ಆಂಗಿಕ ಆಹಾರ್ಯಾಭಿನಯಗಳನ್ನು ಸಮದಂಡಿಯಾಗಿ ಸ್ವೀಕರಿಸಿದವರು. ಪ್ರಸಂಗವೊಂದರ ಆಶಯಕ್ಕೆ ಪೂರಕವಾಗಿ, ಅತಿ ಚಿಕ್ಕ ಪಾತ್ರಗಳನ್ನು ಕೂಡ ಅಷ್ಟೇ ಸಮರ್ಥವಾಗಿ ನಿರ್ವಹಿಸುವಲ್ಲಿ ಸಹ ಕಲಾವಿದರನ್ನು ತಿದ್ದಿತೀಡುವ ಹೃದಯ ವೈಶಾಲ್ಯ ಇವರದ್ದು.

– ಸುಜಯೀಂದ್ರ ಹಂದೆ ಎಚ್‌.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.