ಅಧ್ಯಾಪಕರಿಂದ ಮಧು ಕೈಟಭ ವಧೆ


Team Udayavani, Oct 18, 2019, 4:16 AM IST

f-43

ಇಬ್ಬರು ಪದವಿ ಪೂರ್ವ ವಿದ್ಯಾಲಯದ ಅಧ್ಯಾಪಕರು. ಒಬ್ಬರು ಪ್ರೌಢಶಾಲೆಯ ಶಿಕ್ಷಕರು, ಓರ್ವ ನಿವೃತ್ತ ಪ್ರಾಧ್ಯಾಪಕರು. ಇವರದೇ ಮುಮ್ಮೇಳದಲ್ಲಿ ನಡೆದ ಮಧುಕೈಟಭ ವಧೆ ತಾಳಮದ್ದಳೆ ಎಲ್ಲಿಯೂ ಬೇಸರ ಮೂಡಿಸುವ ಪಠ್ಯವಾಗದೆ ಕೇಳುಗರಿಗೆ ಒಂದು ಬಯಲಾಟದಷ್ಟೇ ರಂಜನೀಯ ಅನುಭವ ನೀಡಿದ್ದು ಗುರುವಾಯನಕೆರೆಯ ಪಾಂಡುರಂಗ ಮಂದಿರದಲ್ಲಿ, ನವರಾತ್ರೆಯ ಮೂರನೆಯ ದಿನ.

ಆದಿಮಾಯೆಯನ್ನು ಹರಿಹರ ಬ್ರಹ್ಮಾದಿಗಳು ಜಯತು ಜಯತು ಆದಿಮಾಯೇ ಎಂದು ಸ್ತುತಿಸುವಲ್ಲಿಂದ ಆರಂಭವಾದ ಕಥಾಭಾಗದಲ್ಲಿ ಬ್ರಹ್ಮನಾಗಿ ಪಾತ್ರ ನಿರ್ವಹಿಸಿದವರು ಉಪನ್ಯಾಸಕ ದಿವಾಕರ ಆಚಾರ್ಯ. ತಾನೇ ಸೃಷ್ಟಿಕರ್ತನೆಂಬ ಅಹಮಿಕೆಯಿಂದ ಮೆರೆಯುವ ಬ್ರಹ್ಮನ ಹಟಮಾರಿತನ, ಸೊಕ್ಕುಗಳನ್ನು ಪ್ರಬುದ್ಧವಾದ ಮಾತಿನ ಶೈಲಿಯಲ್ಲಿ ಪ್ರದರ್ಶಿಸುತ್ತಲೇ ಹೋದ ಅವರ ವಾಕ್ಯ ವೈಖರಿಗೆ ಸರಿಸಾಟಿಯಾಗಿ ವಿಷ್ಣುವಿನ ಪಾತ್ರದಲ್ಲಿ ಸ್ಪಂದಿಸಿದವರು ಪ್ರಾಧ್ಯಾಪಕ ಮೋಹನ ಕಲ್ಲೂರಾಯರು. ಸಂಯಮ ಕಳೆದುಕೊಳ್ಳದ ಮಾತುಗಾರಿಕೆ, ಸುಂದರವಾಗಿ ಪೋಣಿಸಿದ ಸರಳವಾದ ಪಡಿನುಡಿಗಳ ಮೂಲಕ ರಸಭರಿತವಾದ ಸನ್ನಿವೇಶವನ್ನು ಸೃಷ್ಟಿಸಿದ ಅವರು ವೇಷಗಾರಿಕೆಯಲ್ಲೂ ಪರಿಣತರಾದ ಕಾರಣ ಎಲ್ಲಿಯೂ ಹದ ತಪ್ಪಲಿಲ್ಲ. ಬ್ರಹ್ಮನ ಉದರದೊಳಗೆ ಪ್ರವೇಶಿಸುವ ವಿಷ್ಣು ಅಲ್ಲಿ ಕಂಡ ಅದ್ಭುತವನ್ನು ವರ್ಣಿಸುವ ಪರಿ, ವಿಷ್ಣುವಿನ ಉದರವನ್ನು ಹೊಕ್ಕ ಬ್ರಹ್ಮನ ದಿಗಿಲು ಮನೋಜ್ಞವಾದ ಪಾತ್ರ ಅಭಿವ್ಯಕ್ತಿಯ ಮೂಲಕ ಸೊಗಸಾಗಿ ಹೊರಹೊಮ್ಮಿ, ಇಬ್ಬರು ಸಮರ್ಥರಾದ ಕಲಾವಿದರ ಸಾಮರ್ಥ್ಯವನ್ನು ಶ್ರುತಪಡಿಸಿತು.

ಇನ್ನು ಮಧುವಾಗಿ ಆರ್ಭಟಿಸುತ್ತಲೇ ರಂಗ ಪ್ರವೇಶಿಸಿದ ಶಿಕ್ಷಕ ರಾಮಕೃಷ್ಣ ಬಳಂಜ, ಮಹಿಳೆಯಾದರೂ ಪುರುಷನಿಗಿಂತ ಕಮ್ಮಿಯಿಲ್ಲವೆಂದು ತೋರಿಸಿದ ಉಪನ್ಯಾಸಕಿ ಸುವರ್ಣ ಕುಮಾರಿ ಇಬ್ಬರದೂ ಸಮಂಜಸವಾದ ಪಾತ್ರ ನಿರ್ವಹಣೆ. ಮಾತಿನ ವರಸೆಯಲ್ಲೂ ಒಬ್ಬರಿಗಿಂತ ಒಬ್ಬರು ಮಿಗಿಲು. ಜಲರಾಶಿಯನ್ನು ಬಗೆಯುತ್ತ ಬ್ರಹ್ಮನನ್ನು ಬೆನ್ನಟ್ಟಿಕೊಂಡು ಹೋಗಿ, ವಿಷ್ಣುವಿನೊಂದಿಗೆ ಯುದ್ಧ ಮಾಡುವಾಗ ಮೆರೆದ ಪೌರುಷ ಒಂದು ಅಪೂರ್ವ ಅನುಭವ ನೀಡಿತು. ಕಡೆಗೆ ವಿಷ್ಣುವಿನ ವಿಶ್ವರೂಪ ದರ್ಶನದ ಬಳಿಕ ಮಧು ಕೈಟಭರಿಬ್ಬರೂ ಸುಜ್ಞಾನವಂತರಾಗಿ ವಿಷ್ಣುವನ್ನು ಸ್ತುತಿಸುವ ಸಂದರ್ಭ ರಾಮಕೃಷ್ಣ ಬಳಂಜರದು ಹೃದಯಸ್ಪರ್ಶಿ ಮಾತಿನ ಬಂಧದಲ್ಲಿ ಕೇಳುಗರನ್ನು ಭಾವುಕರನ್ನಾಗಿಸಿತ್ತು. ಇತಿಮಿತಿಯ ಮಾತಿನಲ್ಲೂ ಒಂದು ಪಾತ್ರವನ್ನು ಹೇಗೆ ಅಂದಗೊಳಿಸಬಹುದೆಂಬುದಕ್ಕೆ ಕೈಟಭನ ಪಾತ್ರ ಉತ್ತಮ ಉದಾಹರಣೆಯೆನಿಸಿತ್ತು. ಮಧುವಿನ ಮೇದಸ್ಸಿನಿಂದ ಭೂಮಿಯನ್ನು, ಕೈಟಭನ ದೇಹದಿಂದ ಪರ್ವತಗಳನ್ನು ಸೃಷ್ಟಿಸಿದ ವಿಷ್ಣುವಿನ ಸ್ವಗತದೊಂದಿಗೆ ಪ್ರಸಂಗ ಮುಕ್ತಾಯವಾಯಿತು.

ಎರಡೂವರೆ ತಾಸುಗಳ ಕಾಲ ಶ್ರೋತೃಗಳಿಗೆ ತಂಪೆರೆದ ಪ್ರಸಂಗದ ಆಕರ್ಷಣೆಗೆ ಇನ್ನೊಂದು ಕಾರಣ ಯುವ ಭಾಗವತ ವಿಷ್ಣು ಪ್ರಸಾದರ ಮನಮೋಹಕ ಕಂಠದ ಭಾಗವತಿಕೆ. ಸನ್ನಿವೇಶದ ಭಾವವನ್ನು ಅನುಭವಿಸುತ್ತಲೇ ಹಾಡಿದ ಅವರಿಗೆ ಮೃದಂಗದಲ್ಲಿ ಸಹಕರಿಸಿದ ನರಸಿಂಹ ಮೂರ್ತಿ ಕುಂಟಿನಿ, ಶ್ರವಣ್‌ ಹಾಗೂ ಚಂಡೆ ವಾದನ ಮಾಡಿದ ಸುದರ್ಶನ ಕಲ್ಲೂರಾಯರ ಸಾಥಿಯೂ ಪ್ರಸಂಗದ ಯಶಸ್ಸಿಗೆ ಕಾರಣವಾಯಿತು.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.