ಅಬ್ಬರಿಸಿದ ಅಂಧಕಾಸುರ


Team Udayavani, Mar 8, 2019, 12:30 AM IST

q-10.jpg

ಉಡುಪಿ ಬೈಲೂರಿನ ಮಹಿಷ ಮರ್ದಿನಿ ಯಕ್ಷಗಾನ ಮಂಡಳಿ (ರಿ.) ಇದರ 35ನೇ ವಾರ್ಷಿಕೋತ್ಸವವು “ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಇತ್ತೀಚೆಗೆ ಜರಗಿತು. ಯಕ್ಷಗಾನವನ್ನು ಹವ್ಯಾಸಿ ಕಲಾವಿದರು, ವೃತ್ತಿಪರ ಕಲಾವಿದರಿಗೆ ಸರಿಸಮಾನವಾಗಿ ಅಭಿನಯಿಸಿ ತೋರಿಸಬಲ್ಲರು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಯಾವುದೇ ರೀತಿಯ ಅತಿರೇಖದ ಅಶ್ಲೀಲದ ಸಂಭಾಷಣೆಗಳಿಲ್ಲದೆ, ಶುದ್ಧವಾದ ಮಾತುಗಳಿಂದ, ನಾಟ್ಯಾಭಿನಯಗಳಿಂದ ಯಕ್ಷಗಾನವನ್ನು ಆಸ್ವಾದಿಸುವಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿ, ಸಹೃದಯ ಪ್ರೇಕ್ಷಕರು ಕಾರ್ಯಕ್ರಮವನ್ನು ಸಂತೋಷದಿಂದ ವೀಕ್ಷಿಸುವಂತೆ ನಡೆಸಿಕೊಟ್ಟರು. 

ಹೆಚ್ಚು ಪ್ರಚಾರವನ್ನು ಬಯಸದ ಶುದ್ಧ ಯಕ್ಷಗಾನ ಶೈಲಿಯ ಭಾಗವತರೆನಿಸಿರುವ ದೇವಿಪ್ರಕಾಶ್‌ ಕಟೀಲು ಇವರ ಭಾಗವತಿಕೆಯು ಯಕ್ಷಗಾನ ಯಶಸ್ವಿಯಾಗುವಲ್ಲಿ ಮಹತ್ತರ ಪಾತ್ರ ವಹಿಸಿತ್ತು. ಅವರಿಗೆ ಜೊತೆಯಾಗಿ ಚಂಡೆಯಲ್ಲಿ ಗುರುಗಳಾದ ಮುರಳೀಧರ್‌ ಭಟ್‌ ಕಟೀಲು, ಗಣೇಶ್‌ ಭಟ್‌ ಹಾಗೂ ಮದ್ದಲೆಯಲ್ಲಿ ಅವಿನಾಶ್‌ ಚಣಿಲರ ಸಹಕಾರ ಉತ್ತಮವಾಗಿತ್ತು. ದೇವೇಂದ್ರನಾಗಿ (ರಾಘವೇಂದ್ರ ಆಚಾರ್ಯ) ವಿದ್ವತ್‌ಪೂರ್ಣ ಮಾತುಗಳಿಂದ ತನ್ನ ಪ್ರತಿಭೆಯನ್ನು ತೋರಿಸಿದರು. ಅಗ್ನಿ (ಆದಿತ್ಯ ಜೆ.ಬಿ.) ವಾಯು (ಕಿರಣ್‌), ವರುಣ (ವಾದಿರಾಜ) ಇವರ ಪಾತ್ರ ಪೂರಕವಾಗಿತ್ತು. 

ಬಿರುಸಿನ ಗತ್ತುಗಾರಿಕೆಯ ನಡೆಯಿಂದ ರಂಗಸ್ಥಳವನ್ನು ಪ್ರವೇಶಿಸಿ ತನ್ನ ಪ್ರಬುದ್ಧ ಮಾತುಗಾರಿಕೆಯಿಂದ ಸಭಿಕರ ಮನದಲ್ಲಿ ಅಚ್ಚಳಿಯದೆ ನಿಲ್ಲುವಂತೆ ಮಾಡಿದ ರಮಣ ಆಚಾರ್ಯ ಅಂಧಕಾಸುರನಾಗಿ ತನ್ನ ನೈಪುಣ್ಯವನ್ನು ಕಾರ್ಯಕ್ರಮದ ಮುಕ್ತಾಯದ ವರೆಗೆ ಪರಿಣಾಮಕಾರಿಯಾಗಿ ಅಭಿನಯಿಸಿ ತೋರಿಸಿದರು. ಮಂತ್ರಿಯಾಗಿ ಮುರಳಿ, ಸೇನಾಧಿಪತಿಯಾಗಿ ಆಕಾಂಕ್‌ ಜೆ.ಬಿ. ಹಾಗೂ ದಂಡನಾಯಕನಾಗಿ ಪ್ರಜ್ವಲ್‌ ಇವರ ಉತ್ತಮ ರೀತಿಯ ನಾಟ್ಯ ಹಾಗೂ ಮುಖವರ್ಣಿಕೆ ದೀರ್ಘ‌ಕಾಲ ನೆನಪಿನಲ್ಲಿ ಉಳಿಯುವಂತಹದ್ದು. ಇತಿಮಿತಿಯ ಹಾಸ್ಯದೊಂದಿಗೆ ಗುರುಪ್ರಸಾದ್‌, ಸ್ತ್ರೀ ವೇಷದಲ್ಲಿ ಶಚಿಯಾಗಿ ಪ್ರಜ್ವಲ್‌ ಪರ್ಕಳ ನಾರದರಾಗಿ ವಿ| ರಾಮಕೃಷ್ಣ ಕೊಡಂಚ ವಿಷ್ಣುವಾಗಿ ಶ್ರೀಶ ಆಚಾರ್ಯ ಮಟ್ಟು, ಈಶ್ವರನಾಗಿ ಶ್ರೀಪತಿ ಅಲೆವೂರು ಪಾತ್ರಗಳಿಗೆ ನ್ಯಾಯ ಒದಗಿಸಿದರು. 

ಭಾರತಿ ಜಯಕರ್‌ 

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.