ಪಾಂಚಾಲಿಗೆ ಮರುಹುಟ್ಟು ಕೊಟ್ಟ ಸಮೂಹ ಕಲಾಲಾಂಛನ


Team Udayavani, Jan 24, 2020, 7:08 PM IST

jan-6

ಮಹಾಭಾರತದಲ್ಲಿ ಪಾಂಚಾಲಿಯಷ್ಟು ಸಂಕೀರ್ಣವಾದ ಮತ್ತೂಂದು ಪಾತ್ರವೇ ಇಲ್ಲ. ಆಕೆಯ ಕತೆಯನ್ನು ಇಲ್ಲಿನ ತನಕ ಕವಿಗಳು ಪುನರಪಿ ನಿರ್ಮಾಣ ಮಾಡುತ್ತಲೇ ಬಂದಿದ್ದಾರೆ. ರಂಗಕರ್ಮಿಗಳು ಆ ಕತೆಗೆ ಜೀವದುಂಬುತ್ತಲೇ ಬಂದಿದ್ದಾರೆ.

ಉದ್ಯಾವರ ಮಾಧವಾಚಾರ್ಯರ ಪಾಂಚಾಲಿಯು ದ್ರೌಪದಿಯ ಬದುಕಿನ ಏರಿಳಿತ ಗಳನ್ನು ಪದ್ಯ ಗದ್ಯ ಮಿಶ್ರಣದ ಸರಳಲಯದಲ್ಲಿ ಅಭಿವ್ಯಕ್ತಿಸುವ ನೃತ್ಯಮನೋಧರ್ಮದ ಹಿನ್ನೆಲೆಯ ಗೀತರೂಪಕ. ಇದನ್ನು ಯಕ್ಷ ಭರತ ಸಂಗಮ ನೃತ್ಯರೂಪಕವಾಗಿಯೂ ಅಭಿನಯಿಸುವುದು ಸಾಧ್ಯವಿರುವುದರಿಂದ ರಾಗ ತಾಳ ರಂಗಸಂಗತಿ ಮತ್ತು ವೇಷಭೂಷಣಗಳ ಕುರಿತು ಉದ್ಯಾವರರು ಹಲವು ಪ್ರಯೋಗಗಳನ್ನು ಮಾಡಿದ್ದಾರೆ.

ಉದ್ಯಾವರ ಮಾಧವಾಚಾರ್ಯರ ಪ್ರಯೋಗ ದ್ರೌಪದಿಯ ಜೀವಿತದ ಸ್ಥಿತ್ಯಂತರಗಳನ್ನು ನೃತ್ಯ ಮನೋಧರ್ಮದ ನೆಲೆಯಲ್ಲಿ ಸಂಗೀತವಾಗಿಸಲಿಕ್ಕೆ ಯಕ್ಷಗಾನ ಚೌಕಟ್ಟಿನ ಪದ್ಯದೊಂದಿಗೆ ಗದ್ಯಸಮ್ಮಿಶ್ರಣ ವನ್ನೂ ಬಳಸಿಕೊಂಡಿದೆ. ಈ ರೂಪಕದಲ್ಲಿ ಅವರು ಯಕ್ಷಗಾನ ಭಾಗವತರನ್ನು, ಚೆಂಡೆ ಮೃದಂಗ ವಾದಕರನ್ನು ಬಳಸಿದ್ದು ಮಾತ್ರವಲ್ಲ, ಪಾಂಚಾಲಿಯ ನೃತ್ಯವನ್ನು ಕಲಾತ್ಮಕಗೊಳಿಸಲು ಯಕ್ಷಗಾನದ ನಡೆ, ಹೆಜ್ಜೆಗಾರಿಕೆಗಳನ್ನು ದುಡಿಸಿಕೊಂಡಿದ್ದಾರೆ. ಭಾಗವತರಾದ ಕೆ.ಜೆ. ಗಣೇಶ್‌, ಕವಿ ಅಪೇಕ್ಷಿಸಿದ ರಾಗ, ತಾಳ, ರಂಗಸಂಗತಿಗಳನ್ನು ಗಮನದಲ್ಲಿರಿಸಿಕೊಂಡೇ ಪಾಂಚಾಲಿಯ ಪ್ರಯೋಗವನ್ನು ವಿಶಿಷ್ಟವಾಗಿಸುತ್ತಾ ಬಂದಿದ್ದಾರೆ.

ಉಡುಪಿ ರಾಜಾಂಗಣದಲ್ಲಿ ಜ.12ರಂದು, ಪಾಂಚಾಲಿಯ ಮತ್ತೂಂದು ಪ್ರದರ್ಶನವಾಯಿತು. ನಿರ್ದೇಶನ ಮತ್ತು ಗದ್ಯಕ್ಕೆ ಸ್ವರ ಕೊಟ್ಟಿದ್ದು ಮಾಧವಾಚಾರ್ಯರೇ. ಹಿಮ್ಮೇಳದಲ್ಲಿ ಕೆ.ಜೆ. ಗಣೇಶ್‌ ಸಹೋದರರು ಮತ್ತು ಪಾಂಚಾಲಿಯಾಗಿ ಭ್ರಮರಿ ಶಿವಪ್ರಕಾಶ್‌. ಮಾಧವಾಚಾರ್ಯರರಷ್ಟೇ ನೀಡಬಹುದಾದ ಸ್ವರ ಗಾಂಭೀರ್ಯವು ಅವರ ರೂಪಕಗಳನ್ನು ಬಹಳ ಎತ್ತರಕ್ಕೆ ಏರಿಸುತ್ತದೆ. ಅವರ ಏರುಸ್ವರವು ಆಪ್ಯಾಯಮಾನ ಅನುಭವವೊಂದನ್ನು ಉಳಿಸಿ ಬಿಡುತ್ತದೆ. ದ್ರೌಪದಿ ಸ್ವಯಂವರ, ವಸ್ತ್ರಾಪಹರಣ, ಮಹಾಪ್ರಸ್ಥಾನ ಸಂದರ್ಭಗಳನ್ನು ಉದ್ಯಾವರರು ಭಾವೋದ್ರಿಕ್ತ ಏರುಸ್ವರದಿಂದ ಅನೂಹ್ಯ ಎತ್ತರಕ್ಕೆ ಏರಿಸಿಬಿಡುತ್ತಾರೆ.

ಮೂಲ ನೃತ್ಯಕ್ಕೂ, ನೃತ್ಯದ ಮೂಲಕ ಪಾತ್ರನಿರ್ಮಾಣಕ್ಕೂ ಇರುವ ವ್ಯತ್ಯಾಸವನ್ನು ಭ್ರಮರಿ ಅರ್ಥಮಾಡಿಕೊಂಡಿದ್ದಾರೆ. ಶಾಸ್ತ್ರೀಯ ನೃತ್ಯ ಮತ್ತು ಯಕ್ಷಗಾನದ ಹೆಜ್ಜೆಗಾರಿಕೆಗಳ ನಡುವೆ ಹಸ್ತಭಾವ, ದೃಷ್ಟಿಭಾವಗಳ ಸಮತೋಲಿತ ಪ್ರಯತ್ನವನ್ನು ಅವರಿಲ್ಲಿ ಮುಂದುವರಿಸಿದ್ದಾರೆ. ಆಂಗಿಕವನ್ನು ಭಿನ್ನವಾಗಿ ಮತ್ತು ಸುಕುಮಾರವಾಗಿ ಪ್ರಯತ್ನಿಸುವ ಮನೋಧರ್ಮ ಅವರ ಹೆಚ್ಚು ಗಾರಿಕೆ. ಸ್ವಯಂವರದ ಸಂದರ್ಭದ ಹಿಂದೋಳ ಆಲಾಪ, ನಾಹಂವರ ಯಾಮಿಸೂತಂ ಎಂಬ ಗದ್ಯ ಸಂದರ್ಭಗಳಲ್ಲಿ ಅವರ ಆಂಗಿಕದ ನೆಗೆತವಂತೂ ಪ್ರಶಂಸಾರ್ಹ. “ಹೆಣ್ಣಲ್ಲವೇ ನೀವು ಅತ್ತೆ? ನಾನು ಕೇವಲ ಭಿಕ್ಷೆಯಾಗಿಬಿಟ್ಟೆನೆ?’ ಎಂಬಲ್ಲಿನ ಅವರ ಭಾವಾಭಿನಯ, ವಸ್ತ್ರಾಪಹರಣದ ಸಂದರ್ಭದಲ್ಲಿ ದುಶ್ಯಾಸನ, “ನನ್ನ ಮನದ ಮಗು, ನನ್ನ ಮೈದುನ’ ಎಂಬಲ್ಲಿನ ನಟನೆ ಇವೆಲ್ಲ ಆಂಗಿಕಕ್ಕೆ, ಆಹಾರ್ಯಕ್ಕೆ, ಸಾತ್ವಿಕಕ್ಕೆ ಬೆಲೆತರುವಂತಹದು.

ಬೆಳಗೋಡು ರಮೇಶ್‌ ಭಟ್‌

ಟಾಪ್ ನ್ಯೂಸ್

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.