ತಲ್ಲಣ, ಹೋರಾಟದ ಮುಖಾಮುಖಿ-ಮತ್ಸ್ಯಗಂಧಿ

ರೂಪಾಂತರ ತಂಡದ ಪ್ರಸ್ತುತಿ

Team Udayavani, Jun 7, 2019, 6:00 AM IST

f-11

ಮಹಾಭಾರತದ ಹಲವಾರು ಘಟನಾವಳಿಗಳನ್ನು ರಂಗರೂಪಕ್ಕೆ ಇಳಿಸಿದರೆ ಸಮಾಜಕ್ಕೆ ಒಂದು ದೊಡ್ಡ‌ ಕೊಡುಗೆ ನೀಡಿದಂತಾಗುತ್ತದೆ. ಅಂದಿನೆಲ್ಲಾ ಘಟನಾವಳಿಗಳು ಪ್ರೀತಿ-ಪ್ರೇಮ, ದ್ವೇಷ‌-ಅಸೂಯೆ; ಕರುಣೆ-ವ್ಯಾಮೋಹ; ತಿರಸ್ಕಾರ-ಪುರಸ್ಕಾರ; ಭೂಮಿಗಾಗಿ-ನೀರಿಗಾಗಿ ನಡೆಯುವ ಕಾಳಗ, ಯತ್ನ-ಒಂದೇ ಎರಡೇ?

ಮಂಚಿಯ ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್‌, ಕಂದಾಯ ಇಲಾಖಾ ನೌಕರರ ಸಂಘ ಬೆಂಗಳೂರು ಹಾಗೂ ಮಂಗಳೂರು ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘಗಳ‌ ಜಂಟಿ ಆಶ್ರಯದಲ್ಲಿ ಮಂಗಳೂರಿನಲ್ಲಿ ಇತ್ತೀಚಿಗೆ ಬಿ. ವಿ. ಕಾರಂತರ ನೆನಪಿನ ಎರಡು ದಿನಗಳ ನಾಟಕೋತ್ಸವ ಜರುಗಿತು. ಪ್ರಥಮ ದಿನ ಹಿರಿಯ ವಿದ್ವಾಂಸ ಡಾ| ಪ್ರಭಾಕರ ಶಿಶಿಲರ ಮತ್ಸéಗಂಧಿ ಕಾದಂಬರಿ ಆಧಾರಿತ ಅದೇ ಹೆಸರಿನ ನಾಟಕ ಪ್ರದರ್ಶನ ಉತ್ತಮವಾಗಿ ಮೂಡಿಬಂದು ಮುದ ನೀಡಿತು.

ಎನ್‌.ಟಿ. ಪ್ರಸನ್ನಕುಮಾರ್‌ ರಂಗರೂಪಕ್ಕೆ ತಂದ ಈ ಕೃತಿಯ ನಾಟಕವನ್ನು ರಂಗಕ್ಕಿಳಿಸಿದ್ದು ಬೆಂಗಳೂರಿನ ರೂಪಾಂತರ ತಂಡ. ಮೂಲಕೃತಿಗೆ ಸ್ವಲ್ಪವೂ ಚ್ಯುತಿಯಾಗದಂತೆ ವಿಸ್ತೃತವಾದ ಕಾದಂಬರಿಯ ಅತೀ ಅಗತ್ಯದ ಸನ್ನಿವೇಶಗಳನ್ನು ಸೇರಿಸಿ, ಸುಮಾರು ಎರಡು ತಾಸಿನ ಕಾಲ ಪ್ರೇಕ್ಷ‌ಕರನ್ನು ಹಿಡಿದಿಟ್ಟುಕೊಂಡು ನಾಟಕ ರೂಪದಲ್ಲಿ ತಲುಪಿಸುವಲ್ಲಿ ನಿರ್ದೇಶಕ ಕೆ.ಎಸ್‌.ಡಿ ಎಲ್‌. ಚಂದ್ರು ಯಶಸ್ವಿಯಾಗಿದ್ದಾರೆ. ಕಾದಂಬರಿಕಾರರೆ ಹೇಳುವಂತೆ ಕಾದಂಬರಿಯ ಎಲ್ಲಾ ಸನ್ನಿವೇಶಗಳನ್ನು ರಂಗದಲ್ಲಿ ಪ್ರಸ್ತುತಪಡಿಸಿದರೆ ಇದರ ಪ್ರದರ್ಶನಕ್ಕೆ ಸುಮಾರು 5 ಗಂಟೆ ಅವಧಿ ಬೇಕಾಗುತ್ತದಂತೆ. ಪ್ರೇಕ್ಷ‌ಕರ ವ್ಯವಧಾನ ಹಾಗೂ ಸಮಯವನ್ನೂ ಗಮನದಲ್ಲಿಟ್ಟುಕೊಂಡು ಬೇಕಾದ ಅಂಶಗಳನ್ನು ಸ್ವಲ್ಪವೂ ಬಿಡದೆ, ಕಥೆಯ ಓಘಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ನಾಟಕದ ಮುಖಾಂತರ ಪ್ರೇಕ್ಷಕರಿಗೆ ತಲುಪಿಸುವಲ್ಲಿನ ನಿರ್ದೇಶಕರ ಜಾಣ್ಮೆ ಮೆಚ್ಚಬೇಕು.

ಮಹಾಭಾರತದ ಹಲವಾರು ಘಟನಾವಳಿಗಳನ್ನು ರಂಗರೂಪಕ್ಕೆ ಇಳಿಸಿದರೆ ಸಮಾಜಕ್ಕೆ ಒಂದು ದೊಡ್ಡ‌ ಕೊಡುಗೆ ನೀಡಿದಂತಾಗುತ್ತದೆ. ಅಂದಿನೆಲ್ಲಾ ಘಟನಾವಳಿಗಳು ಪ್ರೀತಿ-ಪ್ರೇಮ, ದ್ವೇಷ‌-ಅಸೂಯೆ; ಕರುಣೆ-ವ್ಯಾಮೋಹ; ತಿರಸ್ಕಾರ-ಪುರಸ್ಕಾರ; ಭೂಮಿಗಾಗಿ-ನೀರಿಗಾಗಿ ನಡೆಯುವ ಕಾಳಗ, ಯತ್ನ-ಒಂದೇ ಎರಡೇ? ಪ್ರತಿಯೊಂದೂ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನಾವಳಿಗಳ ತದ್ರೂಪಿಗಳಿದ್ದಂತೆ. ಇವುಗಳನ್ನು ರಂಗರೂಪಕ್ಕೆ ಯಾರಾದರೂ ಇಳಿಸಿದರೆ; ಅವುಗಳನ್ನು ಇಂದಿನ ಜನತೆ ನೋಡಿದರೆ, ಇಂದಿನ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳು ದೊರೆಯಬಹುದೇನೋ?

ಮಹಾಭಾರತಕ್ಕೆ ಆರಂಭದಲ್ಲಿ ಗ‌ಟ್ಟಿಯಾದ ಅಡಿಗಲ್ಲು ಹಾಕಿಕೊಟ್ಟ ಒಂದು ಕಥಾನಕ/ಕಥಾ ನಾಯಕಿ (ಸತ್ಯವತಿ) ಮತ್ಸ್ಯಗಂಧಿ. ಈಕೆ ನದಿಯಲ್ಲಿ ತೇಲಿ ಬಂದ ಮಗು. ದಾಶರಾಜನ ಸಾಕು ಮಗಳು. ಮತ್ಸ್ಯಗಂಧಿ ಯೋಜನಾಗಂಧಿಯಾದುದು, ಕುರುಕುಲದ ಗಂಧಿಯಾದುದು, ಆಕೆಯ ಬದುಕಿನುದ್ದಕ್ಕೂ ಆದ ತಲ್ಲಣಗಳು, ಹೋರಾಟಗಳು ನಾಟಕದುದ್ದಕ್ಕೂ ಕಂಡುಬರುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯೊಬ್ಬಳು ಹೇಗೆ ಬಲಿಪಶುವಾಗುತ್ತಾಳೆಂಬುದನ್ನು ನಾಟಕದ ಮತ್ಸéಗಂಧಿ, ಅಂಬೆ, ಅಂಬಿಕೆ, ಅಂಬಾಲಿಕೆಯರ ಪಾತ್ರಗಳು ನಿರೂಪಿಸಿವೆ. ಶಿಕ್ಷಣ ಪಡೆದರೆ ಓರ್ವ ಬೆಸ್ತರ ಹುಡುಗಿಯೂ ಸಾಮ್ರಾಜ್ಯ ಕಟ್ಟಬಹುದು ಎಂಬುದು ಎಳೆಎಳೆಯಾಗಿ ರಂಗದಲ್ಲಿ ನಿರೂಪಿತವಾಗಿದೆ. ಮತ್ಸéಗಂಧಿ ಮೊದಲು ತನ್ನ ಕನ್ಯತ್ವ ಕಳಕೊಂಡ ಪ್ರಸಂಗ, ಶಂತನುವಿನ ಪ್ರಣಯ ನಿವೇದನೆ, ದೇವವ್ರತನ ಪ್ರತಿಜ್ಞೆ, ಅಂಬೆ, ಅಂಬಿಕೆ, ಅಂಬಾಲಿಕೆಯರ ಪ್ರಕರಣ, ಪರಶುರಾಮರ ಸಂಧಾನ ಪ್ರಯತ್ನ, ನಪುಂಸಕ ವಿಚಿತ್ರವೀರ್ಯನನ್ನು ಮದುವೆಯಾಗಬೇಕಾಗಿ ಬಂದ ಅನಿವಾರ್ಯತೆ, ಧಿಕ್ಕರಿಸಿದರೆ ಏನಾಗುತ್ತದೆ ಎಂಬ ಪಾಠ, ವ್ಯವಸ್ಥೆಯ ವಿರುದ್ಧ ಹೋರಾಡಿದುದರ ಪರಿಣಾಮ… ಒಂದೇ, ಎರಡೇ? ಎಲ್ಲವೂ ಸಕಾಲಿಕವಾಗಿಯೇ ತೋರುತ್ತದೆ.

ಉತ್ತಮವಾಗಿ ಮೂಡಿಬಂದ ಈ ನಾಟಕದಲ್ಲಿ ಪರಾಶರ ಮುನಿ ಮತ್ತು ಮತ್ಸéಗಂಧಿಯರ ಕೂಡುವಿಕೆಯ ದೃಶ್ಯವನ್ನು ಇನ್ನೂ ಸಾಂಕೇತಿಕವಾಗಿಯೂ, ನಂತರ ವೇದವ್ಯಾಸ ಹಾಗೂ ಅಂಬಿಕೆ, ಅಂಬಾಲಿಕೆಯರ ಕೂಡುವಿಕೆಯ ದೃಶ್ಯವನ್ನು ಸ್ವಲ್ಪ ಭಯಾನಕವಾಗಿಯೂ ಮೂಡಿಸಿದರೆ ಇನ್ನೂ ಚೆನ್ನಾಗಿರುತ್ತಿತ್ತೇನೋ? ಹಾಗೆಯೇ ಕೆಲವು ಪಾತ್ರಧಾರಿಗಳ ಉಚ್ಚಾರದೋಷ‌ ತಿದ್ದುಪಡಿಯಾದರೆ ಇನ್ನೂ ಉತ್ತಮ. ಮತ್ಸ್ಯಗಂಧಿ, ಅಂಬೆ, ಪರಾಶರ, ಭೀಷ್ಮ, ಪರಶುರಾಮ ಮತ್ತು ದಾಶರಾಜರ ಪಾತ್ರ ನಿರ್ವಹಣೆ ಸೊಗಸಾಗಿ ಮೂಡಿಬಂದಿದೆ.ಉತ್ತಮ ವಸ್ತ್ರ ವಿನ್ಯಾಸ, ಪೂರಕ ಬೆಳಕು, ಧ್ವನಿ, ಗಾಯನ ನಾಟಕದುದ್ದಕ್ಕೂ ಮೂಡಿಬಂದಿದೆ.

ಡಾ| ಟಿ ಕೃಷ್ಣಮೂರ್ತಿ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.