ಮಿಜಾರು ಮೋಹನ ಶೆಟ್ಟಿಗಾರರಿಗೆ ಯಕ್ಷಸಂಗಮ ಪ್ರಶಸ್ತಿ
Team Udayavani, Jul 26, 2019, 5:00 AM IST
ಮೂಡಬಿದಿರೆಯ ಯಕ್ಷಸಂಗಮದ 20ನೇ ವರ್ಷದ ಯಕ್ಷಸಂಗಮ ಪ್ರಶಸ್ತಿಗೆ ಕಟೀಲು ಮೇಳದ ಪ್ರಸಿದ್ಧ ಮದ್ದಲೆವಾದಕ ಮೋಹನ್ ಶೆಟ್ಟಿಗಾರರು ಆಯ್ಕೆಯಾಗಿದ್ದಾರೆ. ಅಜ್ಜ ಬಾಬು ಶೆಟ್ಟಿಗಾರರು ಹಿಮ್ಮೇಳ ವಾದಕರಾಗಿದ್ದ ಕಾರಣ ಶೆಟ್ಟಿಗಾರರಿಗೆ ರಕ್ತದಲ್ಲೇ ಯಕ್ಷಗಾನದ ನಂಟು ಬೆಳೆದಿತ್ತು.15ನೇ ಪ್ರಾಯದಲ್ಲೇ ಗುರುಪುರ ಅಣ್ಣಿಭಟ್ ರವರಲ್ಲಿ ಚೆಂಡೆ – ಮದ್ದಲೆ ವಾದನ ಕಲಿತುಕೊಂಡು ಪರಿಣತರಾದರು.
ಕುಲಕಸುಬಾದ ಕೈಮಗ್ಗದಲ್ಲೇ ಮುಂದುವರಿದರೂ ಹಲವಾರು ಮೇಳಗಳಿಗೆ ಹಿಮ್ಮೇಳವಾದಕರಾಗಿ ಭಾಗವಹಿಸುತ್ತಿದ್ದರು.1982ರಲ್ಲಿ ಕಟೀಲಿನ 3ನೇ ಮೇಳ ಆರಂಭವಾದಾಗ ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರ ಆಹ್ವಾನದ ಮೇರೆಗೆ ಮೂರನೇ ಮೇಳ ಸೇರಿದರು . ಆಗ ಕಟೀಲು ಮೂರನೇ ಮೇಳದಲ್ಲಿ ಭಾಗವತರಾಗಿದ್ದವರು ರಂಗ ನಾಯಕ ಎನಿಸಿದ ಕುರಿಯ ಗಣಪತಿ ಶಾಸ್ತ್ರಿ ಹಾಗೂ ಮುಖ್ಯ ಮದ್ದಲೆಗಾರರಾಗಿದ್ದವರು ಗುರುಗಳಾದ ನೆಡ್ಲೆ ನರಸಿಂಹ ಭಟ್ಟರು . ಇವರಿಬ್ಬರ ಸಾಂಗತ್ಯದಲ್ಲಿ ಶೆಟ್ಟಿಗಾರರಿಗೆ ಅಪೂರ್ವವಾದ ಅನುಭವ ದೊರಕಿತು . ಮೇಳದಲ್ಲಿದ್ದ ಕಲಾವಿದರೂ ದಿಗ್ಗಜರೇ ಆಗಿದ್ದ ಕಾರಣ ಶೆಟ್ಟಿಗಾರು ಹಿಮ್ಮೇಳ ವಾದನದಲ್ಲಿ ನೈಪುಣ್ಯತೆ ಗಳಿಸಿದರು. ಚೌಕಿಪೂಜೆಗೆ ಮದ್ದಲೆ ಹಿಡಿದರೆ , ಮುಂಜಾವು ಮಂಗಲಕ್ಕೇ ಕೆಳಗಿಡುವುದು . ಈ ಸಂದರ್ಭದಲ್ಲಿ ಶೆಟ್ಟಿಗಾರರ ವೃತ್ತಿ ಜೀವನಕ್ಕೊಂದು ದೊಡ್ಡ ತಿರುವು ದೊರಕಿತು . ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರು ತಮ್ಮದೇ ಯಾಜಮಾನ್ಯದ ಕರ್ಣಾಟಕ ಮೇಳಕ್ಕೆ ಹೋಗಲು ಸೂಚಿಸಿದರು . ಆ ಕಾಲದಲ್ಲಿ ಕರ್ಣಾಟಕ ಮೇಳವು ಯಕ್ಷದಿಗ್ಗಜರಿಂದ ಕೂಡಿದ್ದ ಗಜಮೇಳವಾಗಿತ್ತು . ಪ್ರಧಾನ ಭಾಗವತರಾಗಿದ್ದವರು ಸಂಗೀತ ವಿದ್ವಾನ್ ದಾಮೋದರ ಮಂಡೆಚ್ಚರು. ಮಂಡೆಚ್ಚರ ಸಂಗೀತ ಶೈಲಿಯ ಭಾಗವತಿಕೆಗೆ , ಶೆಟ್ಟಿಗಾರರ ಮದ್ದಲೆ – ಚೆಂಡೆಗಳ ವಾದನ ಅಪಾರ ಪ್ರಸಿದ್ಧಿ ಪಡೆಯಿತು .ಆಗ ಮೇಳದಲ್ಲಿ ಮದ್ದಲೆಗಾರರಾಗಿದ್ದ ಕಾಂಚನ ನಾರಾಯಣ ಭಟ್ಟರೂ ಶೆಟ್ಟಿಗಾರರನ್ನು ತಿದ್ದಿ ತೀಡಿದರು . ಮಂಡೆಚ್ಚರು ಅಸ್ತಂಗತರಾದ ನಂತರ ದಿನೇಶ ಅಮ್ಮಣ್ಣಾಯ , ಬೊಟ್ಟಿಕೆರೆ ಪುರುಷೋತ್ತಮ ಪೂಂಜರಂತಹ ಭಾಗವತ ದಿಗ್ಗಜರಿಗೂ ಮದ್ದಲೆವಾದಕರಾಗಿ ಮೆರೆದರು . 1990ರಲ್ಲಿ ಮೇಳ ಬಿಟ್ಟು ಮನೆಯಲ್ಲೇ ಕೈಮಗ್ಗದತ್ತ ಹೊರಳಿದರು. ಆದರೂ 1992ರಲ್ಲಿ ಕಲ್ಲಾಡಿ ವಿಠಲ ಶೆಟ್ಟರ ಒತ್ತಾಯಕ್ಕೆ ಪುನಃ ಕಟೀಲು 1ನೇ ಮೇಳ ಸೇರಿದರು . ನಂತರ ಕಟೀಲು 4ನೇ ಮೇಳ ಆರಂಭವಾದಾಗ ಅದಕ್ಕೆ ವರ್ಗಾಯಿಸಲ್ಪಟ್ಟಾಗ ಸುಪ್ರಸಿದ್ಧ ಭಾಗವತರಾದ ದಿ.ಕುಬಣೂರು ಶ್ರೀಧರ ರಾಯರ ಒಡನಾಟದಲ್ಲಿ ಮಿಂಚಿದರು . ಪ್ರಸ್ತುತ ಕಟೀಲು 4ನೇ ಮೇಳದಲ್ಲಿ ವೃತ್ತಿ ನಿರತರಾಗಿರುವ ಮೋಹನ ಶೆಟ್ಟಿಗಾರರು 37 ವರ್ಷಗಳ ತಿರುಗಾಟದ ಅನುಭವ ಹೊಂದಿದ್ದಾರೆ.
ಹಿಮ್ಮೇಳದ ವಾದನದ ಘಾತ ಪೆಟ್ಟು , ಹದಪೆಟ್ಟು , ಮೆದು ನುಡಿತ – ಇವೆಲ್ಲವನ್ನೂ ಸಂದಭೋìಚಿತವಾಗಿ ಬಳಸುವ ಶೆಟ್ಟಿಗಾರರ ವಾದನದಲ್ಲಿ ಯಕ್ಷಗಾನೀಯವಾದ ಇಂಪಿದೆ , ಕಂಪಿದೆ . ರಾಕ್ಷಸ ಪಾತ್ರಗಳ ತೆರೆಪೊರಪ್ಪಾಟು , ಹನುಮಂತನ ಪ್ರವೇಶ , ಕಿರಾತನ ಪ್ರವೇಶ ,ಶ್ರೀರಾಮನ – ಶ್ರೀಕೃಷ್ಣನ ಒಡ್ಡೋಲಗ ಮುಂತಾದ ಯಕ್ಷಗಾನದ ಅಪೂರ್ವ ಸನ್ನಿವೇಶಗಳ ಹಿಮ್ಮೇಳ ವಾದನ ಅರಿತವರಲ್ಲಿ ಶೆಟ್ಟಿಗಾರರೂ ಓರ್ವರು.
ಎಂ.ಶಾಂತರಾಮ ಕುಡ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್