ಶೀನ ಕುಲಾಲ್ಗೆ ಮಹಾಬಲ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ
Team Udayavani, Nov 29, 2019, 4:20 AM IST
ಯಕ್ಷಗಾನ ಅರ್ಥದಾರಿ ಕುಕ್ಕೆಹಳ್ಳಿ ಬೈಲುಬೀಡು ಮಹಾಬಲ ಶೆಟ್ಟಿ ಸಂಸ್ಮರಣಾ ಪ್ರಶಸ್ತಿಗೆ ಈ ಬಾರಿ ನಡುತಿಟ್ಟಿನ ಹಾರಾಡಿ ಶೈಲಿಯ ಹಿರಿಯ ಕಲಾವಿದ ಗಾವಳಿ ಶೀನ ಕುಲಾಲರು ಆಯ್ಕೆಯಾಗಿದ್ದಾರೆ.ಪ್ರಶಸ್ತಿ ಪ್ರದಾನ ನ.30ರಂದು ಆದಿ ಉಡುಪಿಯಲ್ಲಿ ಪೆರ್ಡೂರು ಮೇಳದ ವೇದಿಕೆಯಲ್ಲಿ ನೆರವೇರಲಿದೆ.ಬಳಿಕ ಪೆರ್ಡೂರು ಮೇಳದವರಿಂದ ಮಾನಸಗಂಗಾ ಎಂಬ ಪ್ರಸಂಗದ ಪ್ರದರ್ಶನವಿದೆ.
ಎರಡನೇ ವೇಷದಾರಿಗಳಿಗೆ ಬೇಕಾದ ನೀಳವಾದ ಆಳಂಗ, ಬಹುದೂರ ಕೇಳಿಸುವ ಕಂಠ, ಗಂಭೀರವಾದ ನಿಲುವು, ಸಾಂಪ್ರದಾಯಿಕವಾದ ಪಾತ್ರಗಳ ಕಟ್ಟೋಣದಿಂದ ಬಹುಬೇಗ ಪ್ರಧಾನ ವೇಷಧಾರಿಯಾಗಿ ಗುರುತಿಸಲ್ಪಟ್ಟವರು ಗಾವಳಿ ಶೀನ ಕುಲಾಲರು.
ಇವರಿಗೀಗ ಎಪ್ಪತ್ತರ ಹರೆಯ.ಎರಡನೇ ತರಗತಿ ವಿದ್ಯಾಭ್ಯಾಸಕ್ಕೆ ಓದು ನಿಲ್ಲಿಸಿದ ಅವರು ಪರಿಶ್ರಮದಿಂದ ಕಲಾವಿದನಾಗಿ ಬೆಳೆದವರು.ಗಾವಳಿ ಚಂದಯ್ಯ ಶೆಟ್ಟಿ,ಬಾಬು ಕುಲಾಲ್.ಮತ್ತು ಬಸವ ಕುಲಾಲರಿಂದ ವ್ಯವಸ್ಥಿತವಾದ ರಂಗವಿದ್ಯೆಯನ್ನು ಕರಗತಮಾಡಿಕೊಂದ ಇವರು ಮಜ್ಜಿಗೆಬೈಲು ಚಂದಯ್ಯಶೆಟ್ಟರಿಂದ ಮಾತುಗಾರಿಕೆ ಕಲಿತರು. ಮಾರಣಕಟ್ಟೆ ಮೇಳದಲ್ಲಿ ಒಡ್ಡೋಲಗ ವೇಷದಾರಿಯಾಗಿ ಗೆಜ್ಜೆ ಕಟ್ಟಿದರು.ಬಳಿಕ ಕಮಲಶಿಲೆ, ಸೌಕೂರು, ಸಾಲಿಗ್ರಾಮ,ಅಮೃತೇಶ್ವರಿ ಮೇಳಗಳಲ್ಲಿ ಸೇವೆ ಸಲ್ಲಿಸಿ ಒತ್ತು ಎರಡನೇ ವೇಷದಾರಿಯಾಗಿ ಮಂದಾರ್ತಿ ಮೇಳಕ್ಕೆ ಸೇರ್ಪಡೆಯಾದರು.ಬಳಿಕ ಪೂರ್ಣ ಪ್ರಮಾಣದ ಎರಡನೇ ವೇಷದಾರಿಯಾಗಿ ಹಾಲಾಡಿ,ಕಳುವಾಡಿ ಮುಂತಾದ ಮೇಳಗಳಲ್ಲಿ ಸೇವೆ ಸಲ್ಲಿಸಿದರು. ಮುಂಡಾಸು ವೇಷದಾರಿಯಾಗಿ ಬಯಲಾಟ ರಂಗಸ್ಥಳಕ್ಕೆ ಅನುಪಮ ಸೇವೆ ಸಲ್ಲಿಸಿದ ಇವರ ರಾಮಾಂಜನೇಯದ ಶಕುಂತಕ, ಕೃಷ್ಣಾರ್ಜುನದ ಗಯಗಂಧರ್ವ,ಕೋಟೆಕರ್ಣ, ವೃಷಕೇತು,ಪ್ರದ್ಯುಮ್ನ, ಲೋಹಿತನೇತ್ರ, ವಿದ್ಯುನ್ಮಾಲಿ ಮುಂತಾದ ಕೆಂಪು ಮತ್ತು ಕಪ್ಪು ಮುಂಡಾಸುಗಳು ನಡುತಿಟ್ಟಿಗೆ ಅವರ ಅಪೂರ್ವವಾದ ಕೊಡುಗೆಗಳು.ಎರಡನೇ ವೇಷಗಳಾದ ಕರ್ಣ, ಜಾಂಬವ, ಭೀಷ್ಮ, ರಾವಣ, ವೀರಮಣಿ, ಶನೀಶ್ವರ ಪಾರ್ಟು ವೇಷಗಳಾದ ಕಂಸ, ಕಾಲನೇಮಿ, ಶುಂಭಾಸುರ ಮುಂತಾದ ವೇಷಗಳು ಜನಮನ್ನಣೆಗೆ ಪಾತ್ರವಾಗಿವೆ.
– ಪ್ರೊ| ಎಸ್.ವಿ.ಉದಯ ಕುಮಾರ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ