ಸಂಗೀತ ದಾಹ ತಣಿಸಿದ ಸಂಗೀತೋತ್ಸವ 


Team Udayavani, Jan 12, 2018, 3:22 PM IST

12-47.jpg

ಮಂಗಳೂರಿನ ರಾಮಕೃಷ್ಣ ಮಠ ,ಭಾರತೀಯ ವಿದ್ಯಾ ಭವನ ಮತ್ತು ಸಂಗೀತ ಪರಿಷತ್‌ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಜರಗಿದ “ಸಂಗೀತೋತ್ಸವ -2017′ ಆಸಕ್ತರ ಸಂಗೀತ ದಾಹ ತಣಿಸುವಲ್ಲಿ ಯಶಸ್ವಿಯಾಯಿತು.

ಮೊದಲ ದಿನ ಎನ್‌.ಜೆ. ನಂದಿನಿಯವರು ಕಾಂಬೋಜಿ ಅಟತಾಳ ವರ್ಣವನ್ನು ಆರಂಭಿಸಿ ತೋಡಿ ರಾಗದ ಕಾರ್ತಿಕೇಯ ಗಾಂಗೇಯ ತನಯ ಕೃತಿಯಲ್ಲಿ ಶೋತೃಗಳನ್ನು ಸೆರೆ ಹಿಡಿದರು.ಕನ್ನಡ ರಾಗದಲ್ಲಿ ನಿನ್ನಾಡನೇ ನೀರಾಜಾಕ್ಷಿ, ಅಹಿರಿ ರಾಗದ ಮಾಯಮ್ಮಾ, ಜಯಂತಿ ಶ್ರೀ ರಾಗದ ಮರುಗೇಲರಾ, ಕೇದಾರಗೌಳದ ಸರಗುಣ ಪಾಲಿಂಪ, ಪಶುಪತಿಪ್ರಿಯ ರಾಗದಲ್ಲಿ ಶರವಣ ಭವ ಕೀರ್ತನೆಗಳ ಪ್ರಸ್ತುತಿಗಳನ್ನು ನಿರೂಪಿಸಿದರು.

ಹಂಸಾನಂದಿ ರಾಗ, ತಾನ, ಪಲ್ಲವಿ ಈ ಪ್ರಸ್ತುತಿಯಲ್ಲಿ ಗೃಹಬೇಧ (ಹಿಂದೋಳ ರಾಗದಲ್ಲಿ) ,ಬೆಹಾಗ್‌ ರಾಗದ ಸಾಗರವಿಭೋ ಮತ್ತು ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು. ವಯಲಿನ್‌ನಲ್ಲಿ ಪಪ್ಪು ಜ್ಞಾನದೇವ್‌, ಮೃದಂಗದಲ್ಲಿ ಬಾಲಕೃಷ್ಣ ಕಾಮತ್‌, ಮೋರ್ಸಿಂಗ್‌ನಲ್ಲಿ ಪಯ್ಯನೂರು ಗೋವಿಂದ ಪ್ರಸಾದ್‌ ಸಹಕಾರ ನೀಡಿದರು.

ಎರಡನೇ ದಿನ ವಿನಯ ಎಸ್‌.ಆರ್‌. ಸರಸುಡ ಸಾವೇರಿ ವರ್ಣದೊಂದಿಗೆ ಕಛೇರಿ ಆರಂಭಿಸಿದರು. ಸ್ವಾಮಿನಾಥ ನಾಟ ರಾಗದಲ್ಲಿ ಸ್ವರ ಪ್ರಸ್ತಾರದ ಬಳಕೆ ಚೆನ್ನಾಗಿತ್ತು. ಆನಂದ ಭೈರವಿಯ ಮರಿವೇರೆಗತಿ ಎವ್ವರಮ್ಮಾ, ಕಮಲಾ ಮನೋಹರಿಯಲ್ಲಿ ಕಂಜದಳಾಯತಾಕ್ಷಿ ಕೃತಿಗಳ ಬಳಿಕ ಪ್ರಧಾನ ರಾಗದಲ್ಲಿ ಸಿಂಹೇಂದ್ರ ಮಧ್ಯಮ ರಾಮಾ-ರಾಮಾ ಗುಣಸೀಮಾ ರಚನೆಯನ್ನು ಆಲಾಪನೆ, ಸ್ವರ ಪ್ರಸ್ತಾರದೊಂದಿಗೆ ಪ್ರಸ್ತುತಪಡಿಸಿದರು. ಪಕ್ಕವಾದ್ಯದಲ್ಲಿ ಮತ್ತೂರು ಆರ್‌. ಶ್ರೀ ನಿಧಿಯವರು,ಮೃದಂಗದಲ್ಲಿ ತುಮಕೂರು ಬಿ. ರವಿಶಂಕರ್‌, ಘಟಂನಲ್ಲಿ ಕೊಟ್ಟಾಯಂ ಉನ್ನಿಕೃಷ್ಣನ್‌ ಸಹಕಾರ ನೀಡಿದರು.

 ಮೂರನೇ ದಿನ ಐಶ್ವರ್ಯಾ ವಿದ್ಯಾರಘುನಾಥ್‌ ಕಛೇರಿ ನಡೆಯಿತು. ಚಲಮೇಲ ನಾಟಕುರುಂಜಿ ವರ್ಣದೊಂದಿಗೆ, ತುಳಸಿದಳ ಮಾಯಾಮಾಳವಗೌಳ ರಾಗದ ರೂಪಕತಾಳದ ಕೃತಿಯು ನೆರವಲ್‌, ಸ್ವರ ಪ್ರಸ್ತಾರದೊಂದಿಗೆ ಪ್ರಸ್ತುತಗೊಂಡಿತು.ಭುವಿನಿ ದಾಸುಡನೇ ಶ್ರೀರಂಜನಿ, ಮಾಯಮ್ಮ ಪಿಲಚಿತೇ ಅಹಿರಿ ರಾಗದಲ್ಲಿ ನಿರೂಪಣೆ ಚೆನ್ನಾಗಿತ್ತು. ನಾರದಮನಿ ವೆಡಲಿನ ಕಾಮವರ್ಧಿನಿ ರಾಗದ ನೆರವಲ್‌, ಸ್ವರಪ್ರಸ್ತಾರ ಚೆನ್ನಾಗಿ ಮೂಡಿಬಂತು. ಸರಸ ಸಾಮ ಬೇಧ ದಂಡ ಚತುರ ಕಾಪಿ ನಾರಾಯಣಿ ರಾಗದಲ್ಲಿ ಉತ್ತಮವಾಗಿತ್ತು. ಶಂಖರಾಭರಣ ರಾಗವನ್ನು ಪ್ರಧಾನವಾಗಿ ಎತ್ತಿಕೊಂಡು ಅಕ್ಷಯಲಿಂಗ ವಿಭೋಕೃತಿಯನ್ನು ನಿರ್ವಹಿಸಿದರು. 

ಮುಂದೆ ಕಾನಡ ರಾಗ – ತಾನ – ಪಲ್ಲವಿ. ಪಾಲಿಂಚು…ಶ್ರೀರಾಮಚಂದ್ರಾ ನನ್ನು ಪಾಲಿಂಚು… ಖಂಡ ತ್ರಿಪುಟದಲ್ಲಿ ಸ್ವರಪ್ರಸ್ತಾರ, ರಾಗಮಾಲಿಕೆ (ಮಂದಾರಿ, ಆನಂದಭೈರವಿ ಸುರುಡಿ)ಉತ್ತಮವಾಗಿತ್ತು. ದೇವಕಿ ನಂದನ ಮಾಂಡ್‌ ರಾಗದ ದೇವರ ನಾಮದೊಂದಿಗೆ ಕಛೇರಿಯನ್ನು ಮುಕ್ತಾಯಗೊಳಿಸಿದರು. ವಯಲಿನ್‌ನಲ್ಲಿ ನಳಿನಾ ಮೋಹನ್‌ ಮತ್ತು ಮೃದಂಗದಲ್ಲಿ ಕುಂಭಕೋಣಂ ಸ್ವಾಮಿನಾಥನ್‌ ಸಹಕಾರ ನೀಡಿದರು.

ನಾಲ್ಕನೇ ದಿನ ಚಂದನ್‌ಕುಮಾರ್‌ ಅವರ ಕೊಳಲು ವಾದನ ಕಛೇರಿ ನಡೆಯಿತು.ಅವರು ನಾಟಕುರುಂಜ ಶರ್ಣದೊಂದಿಗೆ ಕಛೇರಿಯನ್ನು ಆರಂಭಿಸಿದರು. ನಾಟ ರಾಗದಲ್ಲಿ ಮಹಾಗಣಪತಿಂ, ದ್ವಿಜಾವಂತಿ ರಾಗದಲ್ಲಿ ಅಖೀಲಾಂಡೇಶ್ವರಿ, ಕುಂತಲವರಾಳಿ ರಾಗದಲ್ಲಿ ಬೋಗೀಂದ್ರ ಶಾಹಿನಂ, ಬೃಂದಾವನ ಸಾರಂಗದಲ್ಲಿ ಕಮಲಾಸ್ತಕುಲ ಕೀರ್ತನೆ ,ಬಿಂದುಮಾಲಿನಿಯಲ್ಲಿ ಎಂತ ಮಧ್ದೋ ಉತ್ತಮವಾಗಿತ್ತು. ಮತ್ತೂರು ಆರ್‌. ಶ್ರೀನಿಧಿ ವಯಲಿನ್‌ನಲ್ಲಿ ,ಅರ್ಜುನ್‌ ಕುಮಾರ್‌ ಮೃದಂಗದಲ್ಲಿ ಹಾಗೂ ಗಿರಿಧರ್‌ ಉಡುಪ ಘಟಂನಲ್ಲಿ ಸಹಕರಿಸಿದರು.

ಕೊನೆಯ ದಿನ ಅಭಿಷೇಕ್‌ ರಘುರಾಂ ಕಛೇರಿ ನೀಡಿದರು. ಪಂಚರತ್ನದಂತಹ ವಿಶಿಷ್ಟ ರಚನೆಗಳನ್ನು ಮನೋಧರ್ಮಕ್ಕೆ ಅನುಗುಣವಾಗುವ ಕೃತಿಗಳ ರೂಪದಲ್ಲಿ ಹಾಡಲು ಸಾಧ್ಯವೇ ಎನ್ನುವ ಪ್ರಯತ್ನವನ್ನು ಅವರು ಮಾಡಿ ಯಶಸ್ವಿಯಾಗಿದ್ದಾರೆ. 

ನವರಾಗಮಾಲಿಕೆಯಲ್ಲಿ ವಲಚಿ ,ವರ್ಣ, ನಾಟ ರಾಗದಲ್ಲಿ ನಿನ್ನೇ ಭಜನಾ, ದೇವಾಮೃತ ವರ್ಷಿಣಿ ರಾಗದಲ್ಲಿ ಎವರನೀ , ಕಲ್ಯಾಣಿ ರಾಗದಲ್ಲಿ ಅಮ್ಮ ದಾನಮ್ಮ ಉತ್ತಮ ಪ್ರಸ್ತುತಿಯಾಗಿತ್ತು. ರಂಜನಿ ಮಾಲದಲ್ಲಿ ರಂಜನಿ ಮೃದುಪಂಕಜಲೋಚನಿ ಕೃತಿಯಲ್ಲಿ ಅಭಿಷೇಕ್‌ ಉತ್ತಮ ಕೆಲಸ ಮಾಡಿದರು. ಖಮಾಚ್‌ ರಾಗದಲ್ಲಿ ರಾಮಜೂಟಿ ಹಾಗೂ ಕೆಲವು ದೇವರನಾಮಗಳ ಪ್ರಸ್ತುತಿಗಳೊಂದಿಗೆ ಕಛೇರಿ ಸಂಪನ್ನಗೊಂಡಿತು. ವಿಠಲ್‌ ರಂಗನ್‌ ವಯಲಿನ್‌ ನುಡಿಸಿದರೆ, ಅರ್ಜುನ್‌ ಕುಮಾರ್‌ ಹಾಗೂ ಗಿರಿಧರ್‌ ಉಡುಪ ಮೃದಂಗ, ಘಟಂನಲ್ಲಿ ಸಹಕರಿಸಿದರು.

ಈ ಉತ್ಸವದ ಕಿರಿಯರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀಶ ಪಿ. ಆರ್‌. ಖರಹರಪ್ರಿಯ ರಾಗದಲ್ಲಿ ಪಕ್ಕಲ ನಿಲಬಡಿ ಪ್ರಸ್ತುತಪಡಿಸಿದರು. ಧನಶ್ರೀ ಶಬರಾಯ ವಯಲಿನ್‌ ಸೋಲೋ ವಾದನದಲ್ಲಿ ಮಂದಾರಿ ರಾಗದ ವರ್ಣ, ವರವಲ್ಲಭ ಬೇಗಡೆ ರಾಗದಲ್ಲಿ ಶ್ರೀ ಗುರುಗುಹ ಶುದ್ಧ ಸಾವೇರಿ ರಾಗದಲ್ಲಿ, ಬಿರಾನವಲಿಚ್ಚಿ ಕಲ್ಯಾಣಿ ರಾಗದಲ್ಲಿ ವೆಂಕಟಾಚಲನಿಲಯಂ ಸಿಂಧುಭೈರವಿ ರಾಗದಲ್ಲಿ ಪ್ರಸ್ತುತಪಡಿಸಿದರು.

ರಕ್ಷಿತಾ ರಮೇಶ್‌ ವೀಣಾ ವಾದನದಲ್ಲಿ ಭೈರವಿ ರಾಗದ ತನಯುನಿ ಬ್ರೋವ ಉತ್ತಮವಾಗಿ ಮೂಡಿಬಂತು. ನಿಕ್ಷಿತ್‌ ಟಿ. ಪುತ್ತೂರು ಮೃದಂಗದಲ್ಲಿ, ಕಲಾಮಂಡಲ ಶೈಜು ಘಟಂನಲ್ಲಿ ಸಹಕರಿಸಿದರು.ಹಿರಿಯರ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ ದಿವ್ಯಶ್ರೀ ಈಗಾಗಲೇ ಕಛೇರಿಯ ಮಟ್ಟಕ್ಕೆ ಬೆಳೆದ ಪ್ರತಿಭಾವಂತೆ. 

ರಸಿಕ 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.