ಹಿತಮಿತ‌ ನೀಲಾ ಸಂಗೀತ ಮನೋಧರ್ಮ


Team Udayavani, Aug 23, 2019, 5:00 AM IST

8

ರಂಜನಿ ಮೆಮೋರಿಯಲ್‌ ಟ್ರಸ್ಟ್‌ ಉಡುಪಿ ಇದರ ಅಶ್ರಯದಲ್ಲಿ ಲತಾಂಗಿಯಲ್ಲಿ ಜುಲೈ ತಿಂಗಳ ಕಾರ್ಯಕ್ರಮವಾಗಿ ವಿ| ನೀಲಾ ರಾಮ್‌ಗೊಪಾಲ್‌ ಅವರ ಕಛೇರಿಯನ್ನು ಆಯೋಜಿಸಲಾಗಿತ್ತು. 84ರ ಹರೆಯದ ನೀಲಾ ಅವರ ಸಂಗೀತದಲ್ಲಿ ರಾಗಾನುಭವವು ಸಾಣೆಗೆ ಹಿಡಿದಂತೆ ಒಪ್ಪವಾಗಿ ನುಣುಪಾಗಿ ಹೊರಬರುತ್ತದೆ. ಕಲ್ಪಿತ ಸಂಗೀತದ ಭಾಗಗಳೂ ಕೂಡ ಮನೋಧರ್ಮದಿಂದ ಹೊಳೆಯುತ್ತವೆ. ಕೇವಲ ಅಕಾರಗಳ ಓಡಾಟದ ಕಸರತ್ತು ಇವರ ಸಂಗೀತದಲ್ಲಿಲ್ಲ. ಖಚಿತವಾದ ರಾಗರೂಪ, ಘನನಯ, ನಿಲುಗಡೆ ಮತ್ತು ಶೃಂಗಾರದ ಶಾಂತತೆ ನೀಲಾ ಮಾಮಿಯವರ ಸಂಗೀತದ ತುರುಫ್. ಅವರು ಆರಿಸಿಕೊಂಡ ಅಷ್ಟೂ ಆಯ್ಕೆಗಳು ತೂಕದವುಗಳು. ಶಿವತ್ರಯ ಮಹಾಗಣಪತಿ ಎಂಬ ನಾಟ ರಾಗದ ಒಂದು ರಚನೆಯಲ್ಲಿ ನಾಟ ರಾಗದ ಪೂರ್ಣ ಕಲ್ಪನೆ ಮತ್ತು ಸ್ಥಾಪನೆಯಿದೆ. ತಪ್ಪಗನೆವಚ್ಚುನಾ ಎಂಬ ರೂಪಕತಾಳದ ತ್ಯಾಗರಾಜರ ಶುದ್ಧಬಂಗಾಲದ ಕೃತಿ ಅತ್ಯಂತ ಮುದ್ದಾಗಿ ಪ್ರಸ್ತುತಗೊಂಡಿತು.

ಪಂತುವರಾಳಿಯ ಮೈಸೂರು ವಾಸುದೇವಾಚಾರ್ಯರ ಶಂಕರಿ ನಿನ್ನೆ, ಅದೇಕೋ ಇತ್ತೀಚೆಗೆ ಕೇಳಿಬರುತ್ತಲಿಲ್ಲ. ಅದರ ಸೊಗಸಾದ ಸಾಹಿತ್ಯ ಮತ್ತು ನೆರವಲ್‌ ಜಾಗಗಳನ್ನು ನೀಲಾ ಮಾಮಿ ಸುಂದರವಾಗಿ ಹಿಡಿದಿದ್ದರು. ಆನಂದಭೈರವಿಯ ಓ ಜಗದಂಬಾದಲ್ಲಿ ಅವರು ನೀಡಿದ ವರಸೆಗಳಲ್ಲಿ ಒಂದಿಷ್ಟೂ ಉತ್ಪ್ರೇಕ್ಷೆ ಇರದು. ನೀಲಾ ಮಾಮಿಯವರು ಎತ್ತಿಕೊಂಡ ಕಾಣಾ ಕಣ್‌ಕೋಟಿ ವೇಣು ಎಂಬ ಕಾಂಭೋದಿ ರಚನೆಯು ಪೂರ್ಣಪ್ರಮಾಣದಲ್ಲಿ ತನ್ನ ಬೆಡಗನ್ನು ಹೊಮ್ಮಿಸಿತು. ಮೇಲ್‌ಸ್ಥಾಯಿಯಲ್ಲಿ ಹೆಚ್ಚಿನ ಸಂಚಾರವನ್ನು ಬಯಸುವ ಕಾಂಭೋದಿ ನೀಲಾಮಾಮಿಗೆ ಒಂದಿಷ್ಟೂ ತ್ರಾಸ ನೀಡಲಿಲ್ಲ. ವಯಸ್ಸಿನ ಕಡೆಗೆ ಒಂದಿಷ್ಟೂ ಗಮನ ಕೊಡದೆ ಅನಾಯಾಸವಾಗಿ ಗಾಂಧಾರ, ಮಧ್ಯಮ, ಪಂಚಮಗಳನ್ನು ಚ್ಯುತಿ ಇಲ್ಲದೆ ಶ್ರುತಿಲೀನತೆಯ ಶುದ್ಧತೆಯೊಂದಿಗೆ ಅವರು ಹಾಡಿದ ಈ ಕಾಂಭೋದಿ ಕೇಳುವುದಕ್ಕೆ ಕೋಟಿ ಕಿವಿಗಳೇ ಬೇಕು. ಇವರೊಂದಿಗೆ ಸಮರ್ಪಕವಾಗಿ ವಯಲಿನ್‌ನಲ್ಲಿ ಅನುಸರಣೆಯನ್ನು ಹಾಗೂ ತನಿಯಾಗಿ ಸುಂದರ ಆಲಾಪನೆಯನ್ನು ಸಮರ್ಪಕವಾಗಿ ನೀಡಿದ ಚಾರುಲತಾ ರಾಮಾನುಜಂ ಅಭಿನಂದನಾರ್ಹರು. ಮನ್ನಾರ್‌ಕೋಯಿಲ್‌ ಬಾಲಾಜಿಯವರ ಮೃದಂಗವಾದನದಲ್ಲಿ ನೀಲಾ ಮಾಮಿಯವರ ಮನೋಧರ್ಮಕ್ಕೆ ಅನುರಣಿಯಾಗಿ ನಡೆಯಿಸಿಕೊಂಡು ಹೋದ ಗೆಯೆ ಇದ್ದಿತು. ಅವರು ಅನಾವಶ್ಯಕವಾದ ಉರಟು ನಡೆಗಳನ್ನು ಹಾಕಿ ನೀಲಾ ಮಾಮಿಯವರು ಹಾಡುವ ಸಾಹಿತ್ಯಾಕ್ಷರಗಳನ್ನು ನುಂಗಿ ಹಾಕಲಾರರು. ಬಾಲಾಜಿಯವರದು ಜಾಣ್ಮೆಯ ನಡೆ, ಲೆಕ್ಕಾಚಾರ, ನುಡಿಕಾರ. ಬಹಳ ಕಾಲ ಸ್ಮರಣೆಯಲ್ಲಿ ಉಳಿಯಬಲ್ಲ ಸಂಗೀತ ನೀಲಾ ಮಾಮಿಯವರದು.

– ಗಾನಮೂರ್ತಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.