ಆಷಾಢದ ಮಳೆಗೆ  ಸಂಗೀತ ಸಾಥ್‌


Team Udayavani, Jul 28, 2017, 8:01 AM IST

28-KALA-2.jpg

ಉಡುಪಿಯ ರಾಗಧನ ಸಂಸ್ಥೆಯು ಆಯೋಜಿಸಿದ ಈ ಬಾರಿಯ “ಗೃಹಸಂಗೀತ’ದಲ್ಲಿ ಆಷಾಢದ ಜಿನುಗು ಮಳೆಯ ಸದ್ದಿನ ನಡುವೆ ಯುವ ಕಲಾವಿದೆ, ಕಾರ್ಕಳದ ಕು| ಆತ್ರೇಯೀ ಕೃಷ್ಣಾ ಅವರು ಕರ್ನಾಟಕ ಸಂಗೀತ ಹಾಡುಗಾರಿಕೆ ನಡೆಸಿಕೊಟ್ಟರು. ಜುಲೈ 15, 2017ರಂದು ಸಂಜೆ ರಾಘವೇಂದ್ರ ಆಚಾರ್ಯ ಮತ್ತು ಸರೋಜಾ ಆರ್‌. ಆಚಾರ್ಯ ಇವರ ಪುತ್ರ ಡಾ| ಶಶಿಧರ ಆಚಾರ್ಯ- ಡಾ| ಶ್ರುತಿ ಆಚಾರ್ಯ ದಂಪತಿಯ “ಸಿರಿ’ ನಿವಾಸದಲ್ಲಿ ಈ ಆಪ್ತ ಕಛೇರಿ ನಡೆಯಿತು. 

ಜಯಜಯ ಜಾನಕೀಕಾಂತ ನಾಟ ರಾಗ, ಖಂಡಛಾಪು ತಾಳದ ಪುರಂದರದಾಸರ ರಚನೆಯೊಂದಿಗೆ ಕಛೇರಿ ಆರಂಭಗೊಂಡಿತು. ಬಳಿಕ ರೀತಿಗೌಳದ ತ್ವರಿತಗತಿಯ ಆಲಾಪನೆಯೊಂದಿಗೆ ಚೇರರಾವದೇ ತ್ಯಾಗರಾಜರ ಆದಿತಾಳದ ಕೃತಿ, ಮಾಂಜಿ ರಾಗದಲ್ಲಿ ಶ್ರೀ ರಾಮಚಂದ್ರೇಣ ರಕ್ಷಿತಂ ಕೃತಿಗಳನ್ನು ಕಲಾವಿದೆ ಹೃದ್ಯವಾಗಿ ಪ್ರಸ್ತುತಪಡಿಸಿದರು. ಅನಂತರ ಎತ್ತಿಕೊಂಡ ಕಲ್ಯಾಣಿಯ ವಿಸ್ತಾರವಾದ ಆಲಾಪನೆಯು ಶ್ರೋತೃಗಳ ಮನಮುಟ್ಟಿತು. ಶ್ಯಾಮಾಶಾಸ್ತ್ರಿಗಳ ತಿಶ್ರ ಆದಿತಾಳದ ಕೃತಿ ಬಿರಾನವರಲಿಚ್ಚಿ ನೆರವಲ್‌, ಸ್ವರ ಪ್ರಸ್ತಾರಗಳಿಂದ ಪೋಷಿಸಲ್ಪಟ್ಟಿತು. ಆ ಬಳಿಕ ಶಹನಾ ರಾಗದ ಗಂಭೀರವಾದ ಆಲಾಪನೆಯೊಂದಿಗೆ ತ್ಯಾಗರಾಜರ ರಘುಪತೇ ರಾಮ, ದೇವರಂಜಿ ರಾಗದ ನಮಸ್ತೆ ಪರದೇವತೇ ಹಾಡಿದ ಬಳಿಕ, ಕಲಾವಿದೆ ಪ್ರಧಾನ ರಾಗವಾಗಿ ಆರಿಸಿಕೊಂಡದ್ದು ತೋಡಿ. ಶ್ರೋತೃಗಳ ನಿರೀಕ್ಷೆಗೆ ತಕ್ಕಂಥ ಆಲಾಪನೆ, ಸ್ಪಷ್ಟ, ನಿಖರವಾದ ಸಂಗತಿಗಳೊಂದಿಗಿನ ಕೊಲುವ ಮರೆಗದಾ ಕೃತಿಯ ನೆರವಲ್‌, ಕಲ್ಪನಾ ಸ್ವರಪ್ರಸ್ತಾರಗಳೊಂದಿಗಿನ ಪ್ರಸ್ತುತಿ ಮನೋಜ್ಞವಾಗಿತ್ತು. ರಾಮಮಂತ್ರವ ಜಪಿಸೋ (ಜೋನ್‌ಪುರಿ), ಮಧ್ಯಮ ಶ್ರುತಿ ರಾಗಮಾಲಿಕೆಯಲ್ಲಿ ನೀನ್ಯಾಕೋ ನಿನ್ನ ಹಂಗ್ಯಾಕೋ, ಬೃಂದಾವನೀ ರಾಗದ ತಿಲ್ಲಾನಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಶಾಸ್ತ್ರೀಯ ಸಂಗೀತಕ್ಕೆ ಹೇಳಿ ಮಾಡಿಸಿದಂತಹ ತೂಕವಾದ ಶಾರೀರ, ಸಾಧಿಸಲೇ ಬೇಕೆನ್ನುವ ಹಠ ಮತ್ತು ಪರಿಶ್ರಮ, ಉತ್ತಮ ಪಾಠಾಂತರ, ಮನೋಧರ್ಮಗಳನ್ನು ಹೊಂದಿರುವ ಈ ಯುವ ಪ್ರತಿಭಾವಂತೆ, ಇನ್ನೂ ಕೊಂಚ ಹೆಚ್ಚಿನ ಪರಿಶ್ರಮದಿಂದ ಸಾಧನೆ ಮಾಡಿದಲ್ಲಿ ಒಬ್ಬ ಪ್ರಬುದ್ಧ ಕಲಾವಿದೆಯಾಗಿ ಇನ್ನೂ ಎತ್ತರದ ಮಜಲುಗಳನ್ನು ಏರಬಲ್ಲಳು. ಪಕ್ಕವಾದ್ಯದಲ್ಲಿ ವಯಲಿನ್‌ ನುಡಿಸಿದ ವಿ| ಗಣರಾಜ ಕಾರ್ಲೆಯವರು ತಮ್ಮ ಮೃದುವಾದ ನುಡಿಸಾಣಿಕೆಯಲ್ಲಿ ಶಹನಾ, ಕಲ್ಯಾಣಿ, ತೋಡಿ ರಾಗಗಳ ಮಿಂಚಿನ ಸಂಚಾರಗಳನ್ನು ಕಾಣಿಸಿದರು. ವಿಳಂಬ ಆದಿತಾಳದಲ್ಲಿ ಉತ್ತಮ ಮಟ್ಟದ ತನಿ ಆವರ್ತನವನ್ನು ನುಡಿಸಿದವರು ವಿ| ಪನ್ನಗ ಶರ್ಮನ್‌. ಇವರಿಬ್ಬರೂ ಕಲಾವಿದೆಗೆ ಉತ್ತಮ ಸಹಕಾರವನ್ನು ನೀಡಿದರು.

ತಮ್ಮ ನಿವಾಸದಲ್ಲಿ ಗೃಹ ಸಂಗೀತವನ್ನು ಏರ್ಪಡಿಸಿ, ಉತ್ತಮ ಆತಿಥ್ಯದ ಜತೆಗೆ ಸಂಗೀತವನ್ನು ಸವಿಯುವ ಅವಕಾಶ ಮಾಡಿಕೊಟ್ಟ ಸಂಗೀತಾಭಿಮಾನಿ ಹಿರಿಯಕ್ಕ ಸರೋಜಾ ಆರ್‌. ಆಚಾರ್ಯ ಹಾಗೂ ಅವರ ಮನೆಯವರು ಅಭಿನಂದನಾರ್ಹರು.

ವಿದ್ಯಾಲಕ್ಷ್ಮೀ ಕಡಿಯಾಳಿ

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.