ಸಂಗೀತ ಪರಿಷತ್‌ ರಜತಪಥದ ಹೆಜ್ಜೆಗಳು


Team Udayavani, Mar 22, 2019, 12:30 AM IST

music.jpg

ಕಾಲು ಶತಮಾನದ ಹಿಂದೆ ಮಂಗಳೂರಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕಾಗಿಯೇ 1993ರಂದು ಹುಟ್ಟಿಕೊಂಡ ಸಂಸ್ಥೆಯೇ ಸಂಗೀತ ಪರಿಷತ್‌ (ರಿ.). ಸಾರ್ಥಕ ಸಂಭ್ರಮದ 25 ವರ್ಷಗಳನ್ನು ಈ ಬಾರಿ (2018-19ರಲ್ಲಿ) ಪೂರ್ಣಗೊಳಿಸುವುದಕ್ಕೆ ಸಜ್ಜಾಗಿ ನಿಂತಿದೆ. ಈ ರಜತ ಸಂಭ್ರಮದ ಹೆಜ್ಜೆಗಳನ್ನು ವೈಶಿಷ್ಟ್ಯಪೂರ್ಣವಾಗಿ, ಮೌಲ್ಯಯುತವಾಗಿ ಆಚರಿಸುತ್ತಾ ಬರುತ್ತಿದ್ದು, ಮಾ. 24ರಂದು ಅದರ ವಿಧ್ಯುಕ್ತ ಮಂಗಳಾಚರಣೆಯನ್ನೂ ಯೋಜಿಸುತ್ತಿದೆ. 

ಮಂಗಳೂರಿನ ಡಾ| ಸಿ.ಆರ್‌. ಬಲ್ಲಾಳರ ಸಾರಥ್ಯದಲ್ಲಿ ಉದ್ಘಾಟನೆಗೊಂಡು ಈ ಸಂಗೀತ ಸಂಸ್ಥೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚು ಚಿಂತಿಸದೆ, ಕಲಾಮಾತೆಯ ಅನುಗ್ರಹ, ಸಾರ್ವಜನಿಕ ಮಹಾಶಯರ ಬೆಂಬಲ, ಪ್ರೀತಿ, ವಿಶ್ವಾಸಗಳನ್ನೇ ಆಧರಿಸಿ, ನಮ್ಮ ಪ್ರದೇಶದ ಸಂಗೀತ ಕಲಿಕಾ ವಿದ್ಯಾರ್ಥಿಗಳಿಗೆ, ಗುರುಗಳಿಗೆ, ಕಲಾವಿದರಿಗೆ ಹಾಗೂ ರಸಿಕರಿಗೆ ಅತ್ಯುತ್ತಮ ಮಟ್ಟದ ಸಂಗೀತ ಕೇಳ್ಮೆ, ವೇದಿಕೆ ಹಾಗೂ ಕಲಿಕೆಗಳನ್ನು ಶಾಸ್ತ್ರೀಯ ಚೌಕಟ್ಟಿನಲ್ಲೇ ಒದಗಿಸಿಕೊಡಲು ನೆರವಾಗುವ ಸದುದ್ದೇಶದಿಂದ, ಯಾವುದೇ ಶುಲ್ಕವಿಲ್ಲದೆ, ನಿಸ್ಪೃಹತೆಯಿಂದ ನಿರಾಂತಕವಾಗಿ ನಡೆದು ಬಂದಿದೆ. ಹಲವು ಪ್ರತಿಷ್ಠಿತ ವಿದ್ವಾಂಸರುಗಳಿಂದ, ಯುವ ಪ್ರತಿಭೆಗಳಿಂದ ಗಾಯನ, ವಾದನ ಕಛೇರಿಗಳು, ವೈವಿಧ್ಯಮಯ ಹಿಮ್ಮೇಳ ಕಲಾವಿದರ ಸಾಥ್‌, ವಿದ್ಯಾರ್ಥಿಗಳಿಗಾಗಿ 2 ಹಂತದ ಶಾಸ್ತ್ರೀಯ ಸಂಗೀತ ಸ್ಪರ್ಧೆಗಳು, ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹಿಗ್ಗಿಸಲು ಅನುಭವಿ ಕಲಾವಿದರುಗಳಿಂದ ಸಂಗೀತ ಶಿಬಿರಗಳು, ಶೈಕ್ಷಣಿಕ ಕಾರ್ಯಕ್ರಮಗಳಾಗಿ ಶಾಲೆಗಳಲ್ಲಿ ರಾಗಜ್ಞಾನ ಸೌರಭ, ಅಲ್ಲದೆ ಕಲಾವಿದರಿಗೆ ಸರಳ ಸಮ್ಮಾನಗಳು, ಸಂಗೀತ ಕೇಳ್ಮೆಗೆ ಹಿತವೆನಿಸುವ ಸಭಾಂಗಣ, ಧ್ವನಿಬೆಳಕಿನ ವ್ಯವಸ್ಥೆಗಳು, ಭರ್ಜರಿ ಭೋಜನ, ಉಪಹಾರಗಳು, ನಿಸ್ವಾರ್ಥ ಸೇವೆಗೈಯುವ ಆತ್ಮೀಯ ಸ್ವಯಂಸೇವಕರ ದಂಡು, ಸಭೆಯಲ್ಲೇ ಕುಳಿತು ಕಾರ್ಯಕ್ರಮದ ಒಪ್ಪ ಓರಣವನ್ನು ವಿಶ್ಲೇಷಿಸುತ್ತಾ ತಿಳಿಹೇಳುವ ಅಧ್ಯಕ್ಷರ ಮೇಲ್ವಿಚಾರಣೆ, ಪಾರದರ್ಶಕವಾಗಿ ಎಲ್ಲಾ ಸದಸ್ಯರುಗಳಿಗೂ ತಲುಪಿಸುತ್ತಿರುವ ಸಂಸ್ಥೆಯ ಹಣದ ವಹಿವಾಟಿನ ಪರಿಚಯ, ಪ್ರಾಯೋಜಕತ್ವ ವಹಿಸಿದ ವಿತ್ತೀಯ ಸಂಸ್ಥೆಗಳ, ದಾನಿಗಳ ಸಂಪೂರ್ಣನೆರವು, ಸಂಗೀತ ಶ್ರವಣ ಸುಖಕ್ಕಾಗಿಯೇ ಧಾವಿಸಿ ಬರುವ ರಸಿಕಗಡಣ-ಇವೆಲ್ಲವೂ ಈ ಸಂಸ್ಥೆ ಕಳೆದ 24 ವರ್ಷಗಳಿಂದ ಈ ಕ್ಷೇತ್ರದಲ್ಲಿ ಊರಿದ ಗಟ್ಟಿಯಾದ ಹೆಜ್ಜೆಗಳಾಗಿದ್ದು ಈ ರಜತಪಥದಲ್ಲಿ ಇದರೊಂದಿಗೆ ಇನ್ನಿತರ ಕೆಲವು ನವೀನ ಸಾಧ್ಯತೆಗಳೂ ಕಾಣಿಸಿಕೊಂಡದ್ದು ಈ ಸಂಸ್ಥೆಯ ತ್ರಿವಿಕ್ರಮ ಬೆಳವಣಿಗೆಯ ಒಂದು ಚೋದ್ಯ. ಈ ರಜತ ಸಂಭ್ರಮದ ಕಿರೀಟಕ್ಕೆ ಬೆಂಗಳೂರಿನ ಲಲಿತಕಲಾ ಮಂದಿರ ಲಲಿತಕಲಾ ಕುಸುಮ ಬಿರುದನ್ನು ಬೆಳ್ಳಿಗರಿಯೋಪಾದಿಯಲ್ಲಿ ಪ್ರದಾನ ಮಾಡಿದೆ ಎಂಬುದು ಸಂತೋಷದ ಸಂಗತಿ. 

– ವಿ. ಪ್ರತಿಭಾ ಎಂ.ಎಲ್‌. ಸಾಮಗ 
 

ಟಾಪ್ ನ್ಯೂಸ್

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.