ಗಡಿನಾಡಿನ ನುಡಿ ಉತ್ಸವದಲ್ಲಿ ನಾದ ನಿನಾದ
Team Udayavani, Mar 6, 2020, 3:40 AM IST
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಏಳನೆಯ ಕೇರಳ ರಾಜ್ಯ ಕನ್ನಡ ಸಮ್ಮೇಳನದ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮ ಸಹಸ್ರಾರು ಕನ್ನಡ ಮನಸ್ಸುಗಳಿಗೆ ಮುದ ನೀಡಿತು. ಎರಡು ದಿನಗಳ ಕೇರಳ ಕರ್ನಾಟಕ ಉತ್ಸವದ ಮೊದಲ ದಿನ ಕುಶಾಲನಗರದ ನಾದಾಂತ ನಾಟ್ಯ ಮಯೂರಿ ನೃತ್ಯಾಲಯದ ಪ್ರತಿಭೆಗಳು ವಿ| ಮಂಜುಭಾರ್ಗವಿ ನಿರ್ದೇಶನದಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು. ಮಂಜುಭಾರ್ಗವಿ ಅವರ ಜೊತೆ ನಾದಾಂತದ ವಿದ್ಯಾರ್ಥಿಗಳಾದ ಲಾವಣ್ಯ ಬಿ.ಸಿ., ಪೂಜಾ ಎಸ್., ಶ್ರೇಣಿ ಗೌಡ, ಅಂಕಿತಾ ಬಾಲರಾಜ್ ಶೃತಿ ಮಧುರವಾದ ಹಾಡುಗಳಿಗೆ ಭಾವನೆಯ ಬಲೆ ಹೆಣೆದು ಭಾವಪರವಶವಾಗಿಸಿದರು.
ಪ್ರಾರಂಭದಲ್ಲಿ ಭೋ ಶಂಭೋ… ಹಾಡಿಗೆ ಹೆಜ್ಜೆ ಹಾಕಿದ ಕಲಾವಿದರು ಬಳಿಕ ಗಣೇಶ ಪುಷ್ಪಾಂಜಲಿ ಸಲ್ಲಿಸಿದರು. ಕನ್ನಡ ನಾಡುನುಡಿಗೆ ಸಂಬಂಧಿಸಿದ ರಚನೆಗಳಿಗೂ ಭಾವಪೂರ್ಣವಾಗಿ ನರ್ತಿಸಿದರು. ವಚನ ನೃತ್ಯ ಗಮನ ಸೆಳೆಯಿತು. ನಾದಾಂತ ನಾಟ್ಯಮಯೂರಿ ನೃತ್ಯಾಲಯದ ನಾದವೇದ ನಿನಾದ ಭಾವ ಅನುಭವದ ಅನುಭಾವ ಮಂಟಪದಲ್ಲಿ ಅದ್ಭುತ ಸನ್ನಿವೇಶ ಸೃಷ್ಟಿಸಿತು.
ರಾಧಾಕೃಷ್ಣ ಕೆ. ಉಳಿಯತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್