ರುದ್ರವೀಣೆಯ ನಾದಾಭಿಷೇಕ


Team Udayavani, Feb 7, 2020, 4:05 AM IST

big-20

ಶಬ್ದ ತರಂಗಗಳು ಮನಸ್ಸಿನ ಅಂತರಾಳದಲ್ಲಿ ಹುದುಗಿರುವ ಸೂಕ್ಷ್ಮಾತಿಸೂಕ್ಷ್ಮ ಭಾವಕೋಶಗಳಿಗೆ ತಾಕುತ್ತಾ ತನ್ನಿರವನ್ನು ಅನುಭವದ ಮೇಲ್ಮೆ„ಗೆ ಎತ್ತಿಹಾಕುವ ಅನುಭವವೂ ಸಂಗೀತದ ಗಾಢ ಕೇಳ್ಮೆಯಿಂದ ಸಾಧ್ಯ. ಪೂರ್ವಿ ರಾಗದ ಒಂದೊಂದೂ ಸ್ವರಗಳೆಂಬ ಪ್ರಶಾಂತ ಸರಸ್ಸಿನಲ್ಲಿ ವೈಣಿಕರಾದ ಬಹಾವುದ್ದೀನ್‌ ಡಾಗರ್‌ ಕಣ್ಮುಚ್ಚಿ ಸದ್ದಿಲ್ಲದೆ ಮುಳುಗಿ ಮಡಿಯಾದುದಲ್ಲದೆ ಕಟೀಲಿನ ಬ್ರಹ್ಮಕಲಶದ ಸಂದರ್ಭದಲ್ಲಿ ತಡಸಂಜೆ ಏಳರ ಹೊತ್ತಿಗೆ ಸಂಗೀತ ರಸಿ ಕ ರನ್ನೂ ರಾಗ ಪೂರ್ವಿಯ ಏಳೂ ಸ್ವರಗಳ ಕೊಳದಲ್ಲಿ ಮುಳುಗಿಸಿ ಮಡಿಯಾಗಿಸಿ ಧ್ಯಾನಾವಸ್ಥೆಗೆ ಕೊಂಡೊಯ್ದರು. ರತ್ನಾಕರವರ್ಣಿ ಭರತೇಶವೈಭವದಲ್ಲಿ ಬರುವ ನಾಟ್ಯಸಂಧಿಯಲ್ಲಿನ ಸಾಂಗತ್ಯ ಹಾಡು ನೆನಪಾಗುತ್ತದೆ:

ಒಳಗುಮ್ಮಿದಾನಂದರಸ ತನ್ನ ತನು ತುಂಬಿ
ತುಳುಕಿ ಹೊರಗೆ ಸೂಸುವಂತೆ|
ತೆಳುವಸುರಿಂದ ಬಾಯ್ದೆರೆಯೊಳು ಸುಸ್ವರ
ಹೊಳೆದು ಮೋಹಿಸುತ್ತಿದ್ದುದಾಗ||

ಪೂರ್ವಿ ರಾಗ ಸಂಜೆಯ ಹೊತ್ತಿನ ಅನುಭೂತಿ ಹುಟ್ಟಿಸುವ ಅಥವಾ ಆ ಹೊತ್ತಿಗೆ ಹಾಡಬಹುದಾದ ಗಂಭೀರ ರಾಗ. ಬಹಾವುದ್ದೀನ್‌ ಡಾಗರ್‌ ಅವರು ತಮಗೆ ಪರಂಪರೆಯಾಗಿ ದೊರೆತ ರುದ್ರವೀಣೆಯ ನುಡಿಸುವಿಕೆಯಿಂದ ನಾದಾಭಿಷೇಚನ ಹೊಂದಿದ ಅನುಭವ ಕೊಡಿಸಿದರು. ಪೂರ್ವಿಯ ಮಂದ್ರ ಸ್ಥಾಯಿಯ ಸ್ವರಗಳು ಬೃಹತ್‌ ಗಾತ್ರದ ರುದ್ರವೀಣೆಯ ಮೂಲಕ ಇಡೀ ದೇಹವನ್ನೇ ಆವರಿಸಿ ಸ್ವರಗಳು ತನ್ನ ತೆಕ್ಕೆಗೆ ತೆಗೆದುಕೊಂಡು ಸೂಕ್ಷ್ಮಾತಿ ಸೂಕ್ಷ್ಮ ಸಂವೇದನೆಗಳ ಸ್ಥಾನಕ್ಕೆ ಮೆಲ್ಲನೆ ತಾಕಿ ಹರಿದಾಡಿ ಈಗಾಗಲೇ ಸಂವೇದನೆಗಳನ್ನು ಚಿಗುರುವಂತೆ ಮಾಡಿ ಮನಸ್ಸು, ಬುದ್ಧಿ , ಅಹಂಕಾರ ಚಿತ್ತ ಒಂದಾದ ಅನುಭವ ಕೊಟ್ಟ ಈ ಅತೀಂದ್ರಿಯ ವಾದ್ಯಕ್ಕೆ-ವಾದನ ವಿಸ್ಮಯಕ್ಕೆ ಹೇಗೆ ಕೃತಜ್ಞತೆ ತಿಳಿಸಲಿ.

ರಾಗ ಪೂರ್ವಿಯ ಪ್ರಸ್ತುತಿ ಒಟ್ಟು ಒಂದು ಕಾಲು ತಾಸು. ಮೊದಲ ಅರ್ಧ ತಾಸು ಕೇವಲ ಆಲಾಪ. ಮಂದ್ರ ಸಪ್ತಕ ಮತ್ತು ಮಧ್ಯಮ ಸಪ್ತಕದಲ್ಲೇ ಸಂಚರಿಸುವ ರಾಗವಿದು.ರಾಗದ ಸ್ವರಗಳನ್ನು ಓಲೈಸಿ ರಮಿಸಿ ತನಗೆ ಕೃಪೆದೋರಿ ಮತ್ತು ಕೇಳುಗರಿಗೂ ಕರುಣಾ ಸೇಚನ ಮಾಡಿಸು ಎಂಬ ಪ್ರಾರ್ಥನೆಯಂತೆ ಸಾವಕಾಶವಾಗಿ ಯಾವುದೇ ಅವಸರವಿಲ್ಲದೆ ಕೇವಲ ಸ್ವರಗಳು ಮತ್ತು ಅವುಗಳ ಸೂಕ್ಷ್ಮ ನೆಲೆಗಳಿಗೆ ಹೋಗುತ್ತಾ ಬರುತ್ತಾ ಮತ್ತೂಂದು ಸ್ವರಕ್ಕೆ ದಾಟಿಕೊಂಡು ಹೋಗುವುದು ಇಷ್ಟೆ. ವಾದಿ ಸ್ವರವಾದ ಗಾಂಧಾರ ಮತ್ತು ಸಂವಾದಿ ಸ್ವರ ನಿಷಾದ ಇವುಗಳ ಮೇಲೆ ಸಾವಧಾನವಾಗಿ ಚಲಿಸುತ್ತಾ ಪೂರ್ವಿಯ ಏಳೂ ಸ್ವರಗಳನ್ನು ಮತ್ತು ಅವರೋಹದ ಎರಡೂ ಜಾತಿಯ ಮಧ್ಯಮದ ಬಳಕೆಯಿಂದ ಹದಿನಾಲ್ಕು ಜಾತಿಯ ಸ್ವರಗಳನ್ನು ಬೀಜ ಮಂತ್ರದಂತೆ ಅವುಗಳ ಮನೆಗೆ ಹೋಗಿ ಅನುನಯಿಸಿ ರಾಗ ದೇವತೆಯನ್ನು ಒಲಿಸಿಕೊಳ್ಳುವ ರೀತಿಯ ಸಾವಕಾಶವಾದ ಸಾವಧಾನವಾದ ಆಲಾಪ. ಶುದ್ಧ ಮಧ್ಯಮದ ಜತೆ ತೀವ್ರ ಮಧ್ಯಮವನ್ನೂ ಸೇರಿಸಿದರೆ ಹದಿನೈದು ಸ್ವರಗಳು. ಮುಂದೆ, ಸ್ವರ ದೇವತೆಗಳು ತೃಪ್ತರಾದಂತೆ ಕಂಡುಬಂದ ಮೇಲೆ ಮತ್ತಿನ ಜೋಡ್‌- ರಾಗದ ಪ್ರತಿ ಸ್ವರಗಳನ್ನು ಮತ್ತೂಂದರ ಜತೆಗೆ ಹೆಣಿಗೆಯಾಗಿ ಕಟ್ಟುವುದು.

ಇದು ಮತ್ತಿನ ಇಪ್ಪತ್ತು ನಿಮಿಷದ ಪ್ರಕ್ರಿಯೆ. ವಿವಿಧಾಕೃತಿಯ ಹೆಣಿಗೆಗಳನ್ನು ಮಾಡಿ ಸ್ವರ ದೇವತೆಗಳೆಂಬ ಮಲ್ಲಿಗೆ ಮಾಲೆಯನ್ನು ಮಾಡಿಡುವಂತೆ ಡಾಗರ್‌ ಸಾಹೇಬರು ಬೇರೋಂದು ಲೋಕಕ್ಕೆ ಹೋಗಲು ಸಜ್ಜುಮಾಡಿದರು. ಮತ್ತಿನ ಹದಿನೈದು ನಿಮಿಷಗಳ ಅವಧಿ ದ್ರುಪದ್‌ ಪ್ರಬಂಧ (ಸಾಹಿತ್ಯದ) ಪ್ರಸ್ತುತಿ. ಗಂಭೀರ ನಾದಾನುರಣತೆಯ ಪಖ್ವಾಜ್‌ ಎಂಬ ವಾದ್ಯದೊಂದಿಗೆ. ರುದ್ರವೀಣೆಯ ಮಂದ್ರದ ನಾದಕ್ಕೆ ಸುಘಾತದಂತೆ ಪಖ್ವಾಜ್‌ನ ಆಳವಾದ ಧಿಂ ಕಾರಗಳು ಸೃಷ್ಟಿಸುತ್ತಿದ್ದ ನಾದವಿಸ್ಮಯ, ಜತೆಗೆ ಪಖ್ವಾಜ್‌ನ ಬಲ ಭಾಗದ ಕರ್ಣದ ಮಧ್ಯ ಭಾಗದಿಂದ ಹಸ್ತದ ಕಿರುಬೆರಳು ಮತ್ತು ಉಂಗುರ ಬೆರಳು ಮಧ್ಯ ಬೆರಳುಗಳ ಮೂಲಕ ನುಡಿಸುತ್ತಿದ್ದ ಅರೆ ಛಾಪಿನಂತಹಾ ತಾಂ ನಾದ ;ತೋರು ಬೆರಳ ನಂ ಕಾರ; ಅರಳಿ ಅರಳಿ ಬರುವ ಸರಳವಾದ ಉರುಳಿಕೆಗಳ ಯಕ್ಷಗಾನದ ಝಂಪೆ ತಾಳದ ರೀತಿಯ (ಅವರ ಹತ್ತಕ್ಷರದ) ತಾಳಾವರ್ತದ ಪ್ರಬಂಧ ರಚನೆ ಮಾಡಿದ ಮೋಡಿ ಅನನ್ಯ. ಆಲಾಪ ಮತ್ತು ಜೋಡ್‌ನ‌ಲ್ಲಿ ಹೆಣೆದ ಮಲ್ಲಿಗೆ ಮಾಲೆಯನ್ನು ದೇವಿಗೆ ಮುಡಿಸಿ ಪೂಜೆ ಮಾಡಿದಂತೆ ಭಾಸವಾಯಿತು ಕೊನೆಯ ಪ್ರಬಂಧದ ಪ್ರಸ್ತುತಿ. ಕೊನೆಯ ಹತ್ತು ನಿಮಿಷಗಳಲ್ಲಿ ರಾಗ ಜೋಗ್‌ ಪ್ರಸ್ತುತಿ ಮಾಡಿದರು.ಇದೂ ಹತ್ತಕ್ಷರದ ಪ್ರಬಂಧ ಪ್ರಸ್ತುತಿಯೇ ಆಗಿತ್ತು. ಪಖ್ವಾಜಲ್ಲಿ ಅವರಿಗೆ ಸಹಕರಿಸಿದವರು ಪ್ರತಾಪ್‌ ಆವಾಡ್‌.

ಕೃಷ್ಣಪ್ರಕಾಶ ಉಳಿತ್ತಾಯ

ಟಾಪ್ ನ್ಯೂಸ್

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.