ನಾದಸುಧಾ ಸಂಗೀತ ವಿದ್ಯಾಲಯ: ಶಾಸ್ತ್ರೀಯ ಸಂಗೀತ ಕಛೇರಿ
Team Udayavani, Feb 2, 2018, 3:18 PM IST
ನಾದಸುಧಾ ಸಂಗೀತ ವಿದ್ಯಾಲಯ (ರಿ.) ಮಂಗಳೂರು ಇದರ ಹನ್ನೊಂದನೇ ವಾರ್ಷಿಕೋತ್ಸವ ಹಾಗೂ ತ್ಯಾಗರಾಜ ಆರಾಧನೆಯ ಅಂಗವಾಗಿ ಇತ್ತೀಚೆಗೆ ವಿದ್ವಾನ್ ವಿಷ್ಣುದೇವ ನಂಬೂದಿರಿ,ಚೆನ್ನೈ ಅವರ ಶಾಸ್ತ್ರೀಯ ಸಂಗೀತ ಕಛೇರಿ ಜರಗಿತು. ಶಹನಾ ರಾಗದ ವರ್ಣದೊಂದಿಗೆ ಪ್ರಾರಂಭವಾದ ಕಛೇರಿ ಶ್ರೀ ಮಹಾಗಣಪತಿ ರವತು ಮಾಂ… ಗೌಳರಾಗದ ಸ್ತುತಿಯಿಂದ ರಂಜಿಸಿತು. ಮಾಕೇಲರಾ ಕೃತಿಯ ಬಳಿಕ ಉಪಪ್ರಧಾನ ರಾಗವಾಗಿ ಪಂತುವರಾಳಿಯ ಎನ್ನಗಾನು ರಾಮಭಜನ… ಮನಗೆದ್ದಿತು. ಪ್ರಧಾನ ರಾಗ ಭೈರವಿಯ ರಕ್ಷ ಬೆಟ್ಟರೆಯ ಆಲಾಪನೆ, ನೆರವಲ್ ಸ್ವರಕಲ್ಪನೆಯು ಅತೀತ ಎಡುಪ್ಪಿನೊಂದಿಗೆ ಮೂಡಿಬಂತು. ಆರಭಿ ರಾಗದ ದೇವರ ನಾಮದ ಅನಂತರ ಹಮೀರ್ ಕಲ್ಯಾಣಿ ರಾಗದಲ್ಲಿ ಮಾಯೇ ಸಮುದಾಯೇ ಶಿವಜಾಯೇ ಪಾಹಿಮಾಂ… ಸಾಹಿತ್ಯದ ಮಿಶ್ರ ತ್ರಿಪುಟ ಗತಿಯ ರಾಗತಾನ ಪಲ್ಲವಿಯನ್ನು ರಾಗಮಾಲಿಕೆಯೊಂದಿಗೆ ಹಾಡಿದರು. ಗೋವಿಂದ ನಿನ್ನ ನಾಮವೇ ಚಂದ… ದೇವರನಾಮ ಜನಸಮ್ಮೊàಹಿನಿಯಲ್ಲಿ ಹಾಗೂ ಮೋಹನ ಕಲ್ಯಾಣಿಯ ತಕ ತಝಣ ಧೀಂತ… ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು. ವಯಲಿನ್ನಲ್ಲಿ ವಿದ್ವಾನ್ ಗಣರಾಜ ಕಾರ್ಲೆ ಮತ್ತು ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಿದರು.
ಇದಕ್ಕೂ ಮೊದಲು ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಹಾಡುಗಾರಿಕೆ ಹಾಗೂ ಶಿಕ್ಷಕಿ ವಿದುಷಿ ಅರುಣಾ ಕೆ.ಎಸ್.ಭಟ್ ನೇತೃತ್ವದಲ್ಲಿ ತ್ಯಾಗರಾಜ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನೆರವೇರಿತು. ವಿದ್ವಾನ್ ಶ್ರೀಧರ ರೈ ಕಾಸರಗೋಡು ಮೃದಂಗದಲ್ಲಿ ಮತ್ತು ಸುಮೇಧ ಅಮೈ ವಯಲಿನ್ನಲ್ಲಿ ಸಹಕರಿಸಿದರು.
ಶ್ರೋತೃ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ