ನರಾಡಿಗೆ ಸಾರ್ವಜನಿಕ ಸಮ್ಮಾನ


Team Udayavani, Dec 21, 2018, 6:00 AM IST

narady.jpg

ಬಡಗುತಿಟ್ಟು ಯಕ್ಷಗಾನದಲ್ಲಿ 40ಕ್ಕೂ ಅಧಿಕ ವರ್ಷಗಳ ಕಲಾಸೇವೆ ಮಾಡಿ 20 ವರ್ಷಗಳಿಂದ ಮಂದಾರ್ತಿ ಮೇಳದ ಪ್ರಧಾನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ನಡುತಿಟ್ಟಿನ ಪ್ರಾತಿನಿಧಿಕ ಕಲಾವಿದ ನರಾಡಿ ಭೋಜರಾಜ ಶೆಟ್ಟರಿಗೆ ಅರುವತ್ತರ ಹರೆಯ.ಅವರ ಅರವತ್ತರ ಅಭಿನಂದನೆ ಮತ್ತು ಸಾರ್ವಜನಿಕ ಸಮ್ಮಾನ ಮತ್ತು ನಿಧಿ ಅರ್ಪಣೆಯ ಕಾರ್ಯಕ್ರಮ ಅವರ ಅಭಿಮಾನಿಗಳು ಮತ್ತು ಶ್ರೀ ಮಂದಾರ್ತಿ ಮೇಳದ ಅಭಿಮಾನಿಗಳ ವತಿಯಿಂದ ಡಿ.22ರಂದು ಮಂದಾರ್ತಿ ಕ್ಷೇತ್ರದಲ್ಲಿ ನೆರವೇರಲಿದೆ. ಬಳಿಕ ಕೃಷ್ಣಾರ್ಜುನ ಯಕ್ಷಗಾನ ಪ್ರದರ್ಶನವಿದೆ. 

ನರಾಡಿ ಭೋಜರಾಜ ಶೆಟ್ಟರು ಯಕ್ಷಗಾನದಲ್ಲಿ ಆಸಕ್ತಿ ಕುದುರಿ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಗುರು ನಾರ್ಣಪ್ಪ ಉಪ್ಪೂರರ ಶಿಷ್ಯನಾಗಿ ಸೇರಿಕೊಂಡು ಹೆಜ್ಜೆಗಾರಿಕೆ ಕಲಿತರು.ಉಪ್ಪೂರರ ಪ್ರೇರಣೆಯಂತೆ 16ನೇ ವಯಸ್ಸಿನಲ್ಲಿ ಅಮೃತೇಶ್ವರಿ ಮೇಳದಲ್ಲಿ ಗೆಜ್ಜೆಕಟ್ಟಿದರು.ಶಿರಿಯಾರ ಮಂಜು ನಾಯ್ಕರ ಹೂವಿನಕೋಲಿನಲ್ಲಿ ಬಾಲ ಕಲಾವಿದರಾಗಿ ಕಾಣಿಸಿಕೊಳ್ಳುತಿದ್ದ ಇವರು ಮಂಜು ನಾಯ್ಕರು ಮತ್ತು ಕೋಟ ವೈಕುಂಠನವರಲ್ಲಿ ಮಾತುಗಾರಿಕೆ ಕಲಿತು,ಸಾಲಿಗ್ರಾಮ ಮೇಳದ ಪುಂಡು ವೇಷದಾರಿಯಾಗಿ ಕಾಣಿಸಿಕೊಂಡರು.ಬಳಿಕ ಶಿರಸಿ,ಪೆರ್ಡೂರು,ಕಮಲಶಿಲೆ,ಸೌಕೂರು,ಮಾರಣಕಟ್ಟೆ ಮೇಳಗಳಲ್ಲಿ ಪುರುಷ ವೇಷದಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಮೃತೇಶ್ವರಿ ಮೇಳದ ಸಂಚಾಲಕರಾಗಿ ಯಜಮಾನಿಕೆಯ ಸಿಹಿಕಹಿಯನ್ನೂ ಉಂಡವರು. ಎರಡನೇ ವೇಷ ಹಾಗೂ ಪುರುಷ ವೇಷಗಳಿಗೆ ಸಮಾನ ನ್ಯಾಯ ಒದಗಿಸಬಲ್ಲ ಇವರ ಕರ್ಣ, ಅರ್ಜುನ, ಭೀಷ್ಮ ಪರಶುರಾಮ, ವೀರಮಣಿ , ಪುಷ್ಕಳ, ದಶರಥ, ಮಾರ್ತಾಂಡತೇಜ ಜಾಂಬವ, ಕೌರವ,ರಾವಣ, ಹಿರಣ್ಯಕಶ್ಯಪು, ಕಂಸ, ಕಾಲನೇಮಿ,ಶುಂಬಾಸುರ, ಸುದನ್ವ, ತಾಮ್ರದ್ವಜ ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಪಡೆದಿವೆ. 

ಸುಂದರವಾದ ಆಳಂಗ,ನೀಳಕಾಯ,ವಿಶಿಷ್ಟವಾದ ಶ್ರುತಿಬದ್ಧತೆ, ಹಿತಮಿತವಾದ ಕುಣಿತ,ಪ್ರತ್ಯುತ್ಪನ್ನ ಮತಿತ್ವ, ಸಮರ್ಥವಾದ ಪದ್ಯದ ಎತ್ತುಗಡೆಯಿಂದ ಬಡಗಿನ ಹಿರಿಯ ಕಲಾವಿದರಾದ ಐರೋಡಿ ಗೋವಿಂದಪ್ಪ ಮತ್ತು ನಗರ ಜಗನ್ನಾಥ ಶೆಟ್ಟಿಯವರ ಉತ್ತರಾಧಿಕಾರಿಯಾಗಿ ಇವರನ್ನು ಗುರುತಿಸಬಹುದಾಗಿದೆ.ಮಾತುಗಾರಿಕೆಯಲ್ಲಿ ಯಕ್ಷಗಾನದ ಆವರಣ ಭಂಗಮಾಡದ ಬದ್ಧತೆ ಅವರದ್ದು. ಉತ್ತಮ ನಾಟ್ಯಪಟುವೆಂದು ಗುರುತಿಸಿಕೊಳ್ಳದಿದ್ದರೂ ಜಾಪಿನ ಮತ್ತು ತೂಕದ ಹೆಜ್ಜೆಗಾರಿಕೆ, ಕಟ್ಟುಮೀಸೆಯ ಹಾರಾಡಿ ಶೈಲಿ,ರಂಗಸ್ಥಳವನ್ನು ತುಂಬುವ ಅವರ ದೊಡ್ಡ ಗಾತ್ರದ ವೇಷ, ಪಾತ್ರಕ್ಕೆ ತಕ್ಕಷ್ಟು ಮಾತುಗಾರಿಕೆ ಅವರ ಹೆಚ್ಚುಗಾರಿಕೆ. 

– ಪ್ರೊ|ಎಸ್‌.ವಿ.ಉದಯ ಕುಮಾರ ಶೆಟ್ಟಿ 

ಟಾಪ್ ನ್ಯೂಸ್

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.