ವಿನೂತನ ಶೈಲಿಯ ಗಾನ ವೈಭವ


Team Udayavani, Nov 8, 2019, 3:40 AM IST

cc-3

ಶ್ರೀ ಗುರು ವಿಜಯವಿಠಲ ಯಕ್ಷಕಲಾ ಕೇಂದ್ರವು ಒಂದು ವಸಂತವನ್ನು ಪೂರೈಸಿದ ಸಂಭ್ರಮದಲ್ಲಿ ವಿನೂತನ ಶೈಲಿಯ ಯಕ್ಷಗಾನ-ವೈಭವ ಮತ್ತು ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಯಕ್ಷಕಲಾ ಕೇಂದ್ರದ ಗುರುಗಳಾದ ದಯಾನಂದ ಕೋಡಿಕಲ್‌ ಅವರ ಗರಡಿಯಲ್ಲಿ ಪಳಗಿದ ವಿದ್ಯಾರ್ಥಿಗಳ ಭಾಗವತಿಕೆಗೆ ಮದ್ದಳೆಯಲ್ಲಿ ಚೆಂಡೆ-ಮದ್ದಳೆ ಮಾಂತ್ರಿಕರಾದ ಕೃಷ್ಣರಾಜ್‌ ಭಟ್‌ ನಂದಳಿಕೆ ಅವರ ಗರಡಿಯಲ್ಲಿ ಪಳಗಿದ ವಿದ್ಯಾರ್ಥಿಗಳು ಸಾಥ್‌ ನೀಡಿದರು.

ಯಕ್ಷಗಾನ ವೇಷಧಾರಿ ಸಂದೇಶ್‌ ಬಡಗಬೆಳ್ಳೂರು, ಪ್ರಸಾದ್‌, ಹರೀಶ್‌ ಪೂರ್ವರಂಗ ಮತ್ತು ಪ್ರಸಂಗದ ಹಾಡುಗಳನ್ನು ಹಾಡಿ ಭಾಗವತಿಕೆಗೂ ಸೈ ಎನಿಸಿಕೊಂಡರು. ಬಜಪೆಯ ದಿಲೀಪ್‌ ಆಚಾರ್ಯ, ವಿಶ್ವನಾಥ್‌ ಇವರ ಭಾಗವತಿಕೆಗೆ ಕರತಾಡನ ಸಿಳ್ಳೆಗಳು ಕೇಳಿಬಂದವು. ಉಳಿದಂತೆ ಸಂತೋಷ್‌, ಪ್ರಣವ್‌, ಅಮೃತ್‌, ಪ್ರವೀಣ್‌ ಶೆಟ್ಟಿ, ಕೌಶಿಕ್‌ ಕತ್ತಲ್‌ಸಾರ್‌, ಸತೀಶ್‌ ಶೆಟ್ಟಿ, ಶುಭಕರ್‌, ಪವನ್‌ರಾಜ್‌, ಯತಿರಾಜ್‌, ಇಂದಿರಾ ನಾಗೇಶ್‌, ದೀûಾ, ನಿಶ್ಮಿತಾ, ಅಮೃತವರ್ಣ, ಅಮೃತವರ್ಷ ಮತ್ತು ಪವನ್‌ ಕಾವೂರು ಯಕ್ಷಗಾನ ವೈಭವಕ್ಕೆ ಹೊಸ ಕಳೆಯನ್ನು ತುಂಬಿದರು. ಇವರ ಭಾಗವತಿಕೆಗೆ ಮದ್ದಳೆಯಲ್ಲಿ ವಿದ್ಯಾರ್ಥಿಗಳಾದ ವಿನಯ್‌ ಆಚಾರ್ಯ, ವಿಜಯಪ್ರಸಾದ್‌, ಅಮೃತ್‌, ಕೌಶಿಕ್‌ ಕತ್ತಲ್‌ಸಾರ್‌, ಪ್ರಸಾದ್‌ ಸಾಥ್‌ ನೀಡಿದ್ದರು. ತಾಳ, ಶ್ರುತಿ, ರಾಗದಲ್ಲಿ ಲೋಪದೋಷಗಳು ಕಂಡುಬಂದಿದ್ದರೂ ಅವುಗಳನ್ನು ಸರಿಪಡಿಸಿಕೊಂಡು ಹೋಗುವಲ್ಲಿ ವಿದ್ಯಾರ್ಥಿಗಳು ಮಾಡಿದ ಪ್ರಯತ್ನ ಪ್ರಶಂಸನೀಯ. ತಾಳ, ಶ್ರುತಿ, ರಾಗದ ಲೋಪಗಳನ್ನು ಹೊಂದಿಸಿಕೊಂಡು ಭಾಗವತಿಕೆ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಸ್ವತಃ ಮದ್ದಳೆ ಗುರುಗಳೇ ಮದ್ದಳೆಯಲ್ಲಿ ಸಾಥ್‌ ನೀಡಿದ್ದರು. ಚೆಂಡೆಯಲ್ಲಿ ಅರಳು ಪ್ರತಿಭೆ ಅನಿರುದ್ಧ್ ಕೈಚಳಕ ಪ್ರದರ್ಶಿಸಿದ್ದರು.

ಇದಾದ ಬಳಿಕ ನಡೆದದ್ದು ನಾಟ್ಯ ಗುರುಗಳಾದ ರವಿಕುಮಾರ್‌ ಮುಂಡಾಜೆ ಅವರ ನಿರ್ದೇಶನದ ಶ್ರೀ ಸುದರ್ಶನೋಪಖ್ಯಾನ ಯಕ್ಷಗಾನ ಪ್ರದರ್ಶನ. ಇದೇ ಮೊದಲ ಬಾರಿಗೆ ಗೆಜ್ಜೆಕಟ್ಟಿ ರಂಗಸ್ಥಳವೇರುವ ಕಲಾವಿದರಿಂದ ಹಿಡಿದು ಈಗಾಗಲೇ ರಂಗವೇರಿದ ಕಲಾವಿದರು ಈ ನಾಟ್ಯಾಭ್ಯಾಸ ಮಾಡುತ್ತಿದ್ದು, ಅವರಿಂದ ಪ್ರದರ್ಶನಗೊಂಡ ಪ್ರಸಂಗವೇ ಶ್ರೀ ಸುದರ್ಶನೋಪಾಖ್ಯಾನ. ಪುಟಾಣಿಗಳು ಮತ್ತು ಹಿರಿಯ ಕಲಾವಿದರ ಕೂಡುವಿಕೆಯಿಂದ ಈ ಪ್ರದರ್ಶನ ಮೂಡಿಬಂತು.

ದೇವೇಂದ್ರನಾಗಿ ಲತಾ, ದೇವೇಂದ್ರ ಬಲಗಳಾಗಿ ಐಶ್ವರ್ಯಾ, ದೀಕ್ಷಾ ಬಿ., ದೀಪ್ತಿ, ಅರ್ಪಿತಾ, ಚಿತ್ರೇಶ್‌ ಮತ್ತು ಗಾಯತ್ರಿ, ಮೊದಲಾರ್ಧದ ಶತ್ರುಪ್ರಸೂಧನನಾಗಿ ಗೌತಮ್‌, ಉತ್ತರಾರ್ಧದಲ್ಲಿ ದುರ್ಗಾಪ್ರಸಾದ್‌, ಶತ್ರುಪ್ರಸೂಧನ ಬಲಗಳಾಗಿ ದಾಕ್ಷಾಯಿಣಿ, ವಿಜಯಾ, ನಿಶ್ಮಿತ ಮತ್ತು ಮನ್ವಿತ್‌, ಈಶ್ವರನಾಗಿ ಸಂದೇಶ್‌, ದೇವದೂತನಾಗಿ ಮಿಧುನ್‌, ವಿಷ್ಣುವಾಗಿ ಸೃಷ್ಟಿಕೃಷ್ಣ ಲಕ್ಷ್ಮೀಯಾಗಿ ದೀಪಿಕಾ, ಆರಂಭದ ಸುದರ್ಶನನಾಗಿ ಕೌಶಿಕ್‌ ಬಿ. ಮತ್ತು ಅನಂತರ ದೀಕ್ಷಾ ಕೆ., ರೇಣುಕೆಯಾಗಿ ಪ್ರತಿಭಾ ಶೆಟ್ಟಿ, ಜಮದಗ್ನಿಯಾಗಿ ಪ್ರದೀಪ್‌, ವಸುವಾಗಿ ಚರಣ್‌, ಸುಮನಾಗಿ ಕಿರಣ್‌, ಸುಮನನಾಗಿ ಸುದೀಪ್‌, ಬೃಹದಾºಣನಾಗಿ ಮಿಧುನ್‌, ಮೊದಲಾರ್ಧದ ಭಾರ್ಗವನಾಗಿ ಕೌಶಿಕ್‌ ಕೆ., ಉತ್ತರಾರ್ಧದ ಭಾರ್ಗವನಾಗಿ ಅಮೃತ್‌, ಕಾರ್ತವೀರ್ಯನಾಗಿ ಕಿಶೋರ್‌, ವನಪಾಲಕರಾಗಿ ಶುಭಕರ್‌, ಮಿಧುನ್‌, ಸುದೀಪ್‌, ಕಿರಣ್‌ ಮತ್ತು ಚಿತ್ರೇಶ್‌, ಕಾರ್ತವೀರ್ಯ ಬಲಗಳಾಗಿ ಲೋಲಾಕ್ಷಿ, ಅನುಪಮ, ಅನಿಲ್‌ ಮತ್ತು ಸಂದೀಪ್‌ ಮತ್ತು ಧೇನುವಾಗಿ ಮನ್ವಿತ್‌ ಪಾತ್ರಗಳಿಗೆ ಚ್ಯುತಿ ಬಾರದಂತೆ ಪ್ರದರ್ಶನ ನೀಡಿದ ಕಲಾವಿದರು.

ದಯಾನಂದ ಕೋಡಿಕಲ್‌ ಮತ್ತು ಸುಧಾಕರ್‌ ಸಾಲ್ಯಾನ್‌ ಗಾಯನಕ್ಕೆ ಶ್ರವಣ್‌ ಮದ್ದಳೆಯಲ್ಲಿ ಮತ್ತು ಕೃಷ್ಣರಾಜ್‌ ಭಟ್‌ ನಂದಳಿಕೆ ಮತ್ತು ಅನಿರುದ್ಧ್ ಚೆಂಡೆಯಲ್ಲಿ ಸಾಥ್‌ ನೀಡಿದ್ದರು.

ಇಂದಿರಾ ನಾಗೇಶ್‌ ಕೂಳೂರು

ಟಾಪ್ ನ್ಯೂಸ್

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.