ಹೊಸ ಅನುಭವ ನೀಡಿದ ತಾಳಮದ್ದಳೆ – ಯಕ್ಷಗಾನ 


Team Udayavani, Feb 8, 2019, 12:30 AM IST

8.jpg

 ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿ ಪುಣೆ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷ ಸಂಭ್ರಮ -2018 ರ ಅಂಗವಾಗಿ ಯಕ್ಷ ಬಳಗ ಹೊಸಂಗಡಿ ,ಮಂಜೇಶ್ವರ ಕಲಾವಿದರಿಂದ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಮಹೇಶ್‌ ಕನ್ಯಾಡಿ ,ಚೆಂಡೆಯಲ್ಲಿ ಶಶಿಕಂಠ ಭಟ್‌ ಉಜಿರೆ ,ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಸಹಕಾರ ನೀಡಿದರು . ಪಾತ್ರವರ್ಗದಲ್ಲಿ ಹನುಮಂತನಾಗಿ ಸದಾಶಿವ ಆಳ್ವ ತಲಪಾಡಿ ,ಅರ್ಜುನನಾಗಿ ಜಬ್ಟಾರ್‌ ಸಮೋ ಸಂಪಾಜೆ ,ವೃದ್ಧ ವಿಪ್ರನಾಗಿ ಸತೀಶ್‌ ಅಡಪ ಸಂಕಬೈಲ್‌ ಹಾಗೂ ಮದಂಗಲ್ಲು ಆನಂದ ಭಟ್‌ ಅರ್ಥಗಾರಿಕೆಯೊಂದಿಗೆ ರಂಜಿಸಿ ದರು . ಪುಣೆಯಲ್ಲಿ ಯಕ್ಷಗಾನ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತಿದ್ದರೂ ತಾಳಮದ್ದಳೆ ಬಹುಕಾಲದಿಂದ ನಡೆದಿರಲಿಲ್ಲ . ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ತಮ್ಮ ಅಪ್ರತಿಮ ಅರ್ಥಗಾರಿಕೆಯಿಂದ ಹಿಡಿದಿಡುವಲ್ಲಿ ಈ ತಾಳಮದ್ದಳೆ ಯಶಸ್ವಿಯಾಯಿತು. ಮುಖ್ಯವಾಗಿ ಜಬ್ಟಾರ್‌ ಸಮೋ ಹಾಗೂ ಸದಾಶಿವ ಆಳ್ವ ತಲಪಾಡಿ ಇವರುಗಳ ಮಾತುಗಾರಿಕೆಗೆ ಕಲಾರಸಿಕರು ಮನಸೋತರು. 

ಯಕ್ಷಸಂಭ್ರಮದಂಗವಾಗಿ ಸಂಜೆ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಕಲಾವಿದರಿಂದ ನಾಟ್ಯಗುರು ಮದಂಗಲ್ಲು ಆನಂದ ಭಟ್‌ ನಿರ್ದೇಶನದಲ್ಲಿ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು. ಹೊಸ ಕಲಾವಿದರ ಅಭಿನಯ ವಿಶೇಷ ಅನುಭವ ನೀಡಿದ್ದಲ್ಲದೆ ಉತ್ತಮ ಮನರಂಜನೆಯನ್ನೂ ಒದಗಿಸಿತು . ಈ ಪ್ರದರ್ಶನದಲ್ಲಿ ಮೂವರು ಅನುಭವಿ ಕಲಾವಿದರನ್ನು ಬಿಟ್ಟರೆ ಉಳಿದಂತೆ ಪ್ರತಿಯೊಬ್ಬರೂ ಹೊಸದಾಗಿ ತರಬೇತಿಯನ್ನು ಪಡೆದು ಅಭಿನಯಸಿ ಸೈ ಎನಿಸಿಕೊಂಡರು.

ಅನುಭವಿ ಕಲಾವಿದ ವಾಸು ಕುಲಾಲ್‌ ವಿಟ್ಲ ವಿಷ್ಣುವಿನ ಪಾತ್ರಕ್ಕೆ ಜೀವ ತುಂಬಿದ್ದಾರೆ . ದೇವೇಂದ್ರನಾಗಿ ರಂಗಸ್ಥಳದಲ್ಲಿ ಚುರುಕಿನಿಂದ ಅಭಿನಯಿಸುವ ಸುಕೇಶ್‌ ಶೆಟ್ಟಿ ಎಣ್ಣೆಹೊಳೆ ,ಸುದರ್ಶನ ಪಾತ್ರದಲ್ಲಿ ನುರಿತ ಕಲಾವಿದ ವಿಕೇಶ್‌ ರೈ ಶೇಣಿ ಪಾತ್ರಕ್ಕೆ ನ್ಯಾಯವೊದಗಿಸಿದರೆ ಉದಯೋನ್ಮುಖ ಕಲಾವಿದ ಜಗದೀಪ್‌ ಶೆಟ್ಟಿ ಶತ್ರುಪ್ರಸೂದನನ ಪಾತ್ರದಲ್ಲಿ ಮಿಂಚಿ¨ªಾರೆ . ಉಳಿದಂತೆ ಮೂರು ಬಾಲ ಕಲಾವಿದರೂ ಸೇರಿದಂತೆ ಮಂಡಳಿಯು ತರಬೇತಿ ನೀಡಿ ತಯಾರುಗೊಳಿಸಿದ ಹೊಸ ಕಲಾವಿದರೆಲ್ಲರೂ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದ ಭರವಸೆಯ ಕಲಾವಿದರಾಗಿ ನಿರೀಕ್ಷೆ ಹುಟ್ಟಿಸಿ¨ªಾರೆ . ಲಕ್ಷ್ಮೀಯಾಗಿ ಗೀತಾ ದಿನೇಶ್‌ ಪೂಜಾರಿ ಉತ್ತಮ ಪ್ರದರ್ಶನ ನೀಡಿದರೆ ,ದೇವೇಂದ್ರ ಬಲಗಳಾಗಿ ಸಹನಾ ಚಂದ್ರಶೇಖರ್‌ ಕುಲಾಲ್‌ ,ಪ್ರತೀûಾ ದಿನೇಶ್‌ ಪೂಜಾರಿ ಬಾಲ ಕಲಾವಿದರಾದ ಪ್ರಾಪ್ತಿ ಕಿರಣ್‌ ರೈ ,ರಿಷ್ಮಾ ರಮೇಶ್‌ ಶೆಟ್ಟಿ ಹಾಗೂ ಸಾನ್ವಿ ತಾರಾನಾಥ ರೈ ಅಭಿನಯಿಸಿದರು. ರಾಕ್ಷಸ ಬಲಗಳಾಗಿ ಸುದರ್ಶನ ಪೂಜಾರಿ,ನಯನಾ ಚಂದ್ರಹಾಸ್‌ ಶೆಟ್ಟಿ ,ನವಿತಾ ಸಂಜೀವ ಪೂಜಾರಿ , ಸರಸ್ವತಿ ಚಂದ್ರಶೇಖರ್‌ ಕುಲಾಲ್‌ ,ದೂತನಾಗಿ ನಾಗೇಶ್‌ ಕುಲಾಲ್‌ ಕಡಂದಲೆ ಅಭಿನಯಿಸಿದರು .ಭಾಗವತರಾಗಿ ಮಹೇಶ್‌ ಕನ್ಯಾಡಿ ,ಚೆಂಡೆಯಲ್ಲಿ ಶಶಿಕಂಠ ಭಟ್‌ ಉಜಿರೆ ,ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಸಹಕಾರ ನೀಡಿದರು . 

ಕಿರಣ್‌ ಬಿ. ರೈ ಕರ್ನೂರು 

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.