ಕಾಲಚಕ್ರದ ಬಲೆಯೊಳಗೆ ನಿನ್ನ ಮೋಕೆದ…


Team Udayavani, Feb 22, 2019, 12:30 AM IST

1.jpg

ಬೈಕಂಪಾಡಿ ಮೀನಕಳಿಯದ ವಿದ್ಯಾರ್ಥಿ ಸಂಘ ಮತ್ತು ಮಹಿಳಾ ಸಮಾಜದವರ ನೂತನ ರಂಗಮಂದಿರ ಉದ್ಘಾಟನೆ ಸಂದರ್ಭದಲ್ಲಿ ಹಿರಿಯ ನಾಟಕಕಾರ, ರಂಗಕರ್ಮಿ ರಾಮಚಂದರ್‌ ಬೈಕಂಪಾಡಿಯವರ ನಿನ್ನ ಮೋಕೆದ… ನಾಟಕ ಚಲನಚಿತ್ರ ನಟ ಕಾಸರಗೋಡು ಚಿನ್ನಾ ತಂಡದವರಿಂದ ಅಭಿನಯಿಸಲ್ಪಟ್ಟಿತ್ತು. ಈ ನಾಟಕ ಸುಮಾರು 30 ವರ್ಷದ ಹಿಂದೆ ಪರದೆಯ ನಾಟಕವಾಗಿ “ಕಾಲಚಕ್ರ’ ಎಂಬ ಹೆಸರಿನಿಂದ ಜನಪ್ರಿಯವಾಗಿ ಪ್ರಶಸ್ತಿ ಎತ್ತಿತ್ತು. ಎಲ್ಲ ಕಾಲಕ್ಕೂ ಸರಿಹೊಂದುವ ಕತೆಯೇ ನಾಟಕದ ಜೀವಾಳ. ರಂಗದಲ್ಲಿ ಹಲವಾರು ಪ್ರಯೋಗಗಳನ್ನು ಕಂಡರೂ, ಈಗ ಚಿನ್ನಾರವರ ದಕ್ಷ, ಪರಿಪಕ್ವ ನಿರ್ದೇಶನಕದಲ್ಲಿ, ಚೊಕ್ಕ ರಂಗವಿನ್ಯಾಸದೊಂದಿಗೆ ಮನಸೂರೆಗೊಂಡಿತು. 

ಕೇವಲ ಒಂದು ಮನೆಯೊಳಗೆ ನಡೆಯುವ ಕುತೂಹಲಕಾರಿ ಕಥೆ-ದೃಶ್ಯವೂ ಒಂದೇ ಮನೆಯದ್ದು . ಹಿಂದಿನ ಕೆಲವೊಂದು ನಾಟಕಗಳಂತೆ ಕತೆ ಅನಂತರ ಪ್ರೇಕ್ಷಕರಿಗೆ ಅರ್ಥವಾಗುವಂತಹ ತಂತ್ರವನ್ನು ಅಳವಡಿಸಿದ ಕಾರಣ ಕುತೂಹಲಕಾರಿಯಾಗಿ ನಡೆಸಿಕೊಂಡು ಹೋಗುತ್ತದೆ. ಪ್ರೊಫೆಸರ್‌ ಕೆಲಸದ ನಿಮಿತ್ತ ಅಮೇರಿಕಕ್ಕೆ ಹೋಗಿ, ಅಲ್ಲಿ ಲ್ಯಾಬಲ್ಲಿ ಕೆಲಸ ಮಾಡುವಾಗ ಕೆಮಿಕಲ್‌ನ ಕೊಳವೆ ಸ್ಫೋಟಗೊಂಡು, ಮುಖ ಕರ್ರಗೆ ವಿಕಾರಗೊಳ್ಳುತ್ತದೆ. ವಾಪಾಸು ಊರಿಗೆ ಬರುವಾಗ ಅವನ ಹೆಂಡತಿ ಮಗು ಇವನನ್ನು ಎದುರುಗೊಳ್ಳಲು ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಗಂಡನ ಮುಖ ಕಂಡು ಹೆದರಿ ಚೀರಿ ಓಡುವಾಗ ಎದುರಿನಿಂದ ಬಂದ ಕಾರಿಗೆ ಢಿಕ್ಕಿ ಹೊಡೆದು ಪ್ರಜ್ಞೆ ತಪ್ಪಿದಾಗ ಅದರಲ್ಲಿರುವ ನಾಟಕದ ಹೀರೋ ಆಸ್ಪತ್ರೆಗೆ ಕರೆದೊಯ್ದು ಶುಶ್ರೂಷೆ ಮಾಡಿಸುತ್ತಾನೆ.ನೆನಪು ಅಳಿಸಿ ಹೋಗಿರುವ ಅವಳನ್ನು ಇಹಪರಗಳನ್ನು ವಿಚಾರಿಸದೆ ಮದುವೆಯಾಗಿ ಸ್ವಲ್ಪ ಸಮಯದಲ್ಲಿ, ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡು ಇರುವಾಗ, ಇತ್ತ ಅವಳ ಪ್ರೇಮಿ ಮತ್ತು ಅವಳು ಮನೆಯೊಳಗೆ ನಡೆಯುವ ಚಕ್ಕಂದ, ಇದನ್ನು ಮೂಕ ಪ್ರೇಕ್ಷಕರಾಗಿ ನೋಡುವ ಮನೆಯ ಇಬ್ಬರು ಕೆಲಸದಾಳುಗಳು, ಕೊನೆಗೆ ಮುಂಬೈಗೆ ಕರೆದುಕೊಂಡು ಹೋಗಿ ಇವನ ಕಣ್ಣನ್ನು ಸರಿ ಮಾಡಿಸಿದ ಇವನ ಕಾಲೇಜು ಗೆಳೆಯ ಡಾ| ನಾಗರಾಜ್‌. ಇವನು ಕಣ್ಣು ಸರಿಯಾದರೂ ಕುರುಡನಾಗಿ ನಟಿಸಿ, ಇವರ ಚಕ್ಕಂದ ಕಣ್ಣಾರೆ ಕಂಡು (ಯಾರೂ ಹೇಳಿದರೂ ಕೇಳದ ಒಬ್ಬ ಭಗ್ನಪ್ರೇಮಿ) ಕೊನೆಗೆ ಪಶ್ಚಾತ್ತಾಪಪಟ್ಟು ಇವಳನ್ನು ಮನೆಯಿಂದ ಹೊರಗೆ ಹಾಕುವ ಹೊತ್ತಿಗೆ, ಇವಳ ನಿಜವಾದ ಗಂಡ ಪ್ರೊಫೆಸರ್‌ ಬಂದು, ಇವಳನ್ನು ಕರೆದುಕೊಂಡು ಹೋಗುತ್ತೇನೆಂದು ಹೇಳುವ ಹೊತ್ತಿಗೆ ಇವಳು ಹೃದಯಾಘಾತದಿಂದ ಸಾಯುತ್ತಾಳೆ. ಹೀಗೆ ಕೇವಲ ಒಂದು ಕಾಮಿಡಿ ಮತ್ತು 7 ಜನರೊಳಗೆ ನಡೆಯುವ ಕಥೆಯೇ ನಿನ್ನ ಮೋಕೆದ… ನಾಟಕ. 

ಈ ನಾಟಕದಲ್ಲಿ ವೃತ್ತಿಪರ ರಂಗನಟರೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಹೀರೋ ಶ್ರೀಧರ್‌ ಆಗಿ ಭೂಷಣ್‌, ಸುಧೀರ್‌ ಪಾತ್ರದಲ್ಲಿ ಶ್ರೀಜಿತ್‌, ರೂಪನ ಪಾತ್ರದಲ್ಲಿ ನಮಿತ್‌ ಕುಳೂರು. ಪ್ರೊ| ಚಕ್ರವರ್ತಿಯಾಗಿ ಹೆಸರಾಂತ ನಟ ಡಿ.ಎಸ್‌. ಬೋಳೂರು, ಡಾ| ನಾಗರಾಜನಾಗಿ ಸುಧಾಕರ್‌ ಸಾಲ್ಯಾನ್‌, ಮನೆಗೆಲಸದ ಸರಸು – ಮಂಗಳಾ ಹಾಸ್ಯಪಾತ್ರದ ದುಬೈ ಬಾಬು ಆಗಿ ನಟ ಸುಧೀರ್‌ರಾಜ್‌ ಉರ್ವ, ಮತ್ತೋರ್ವ ಕೆಲಸದಾಳುವಾಗಿ ರಂಜನ್‌ ಬೋಳೂರು ಪಾತ್ರಗಳಿಗೆ ಜೀವ ತುಂಬಿದರು.

ಯೋಗೀಶ್‌ ಕಾಂಚನ್‌ 

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.