ಅಪೂರ್ವಅನುಭವ ನೀಡಿದ ನರ್ತನಾವರ್ತನ 


Team Udayavani, Feb 2, 2018, 3:19 PM IST

0-45.jpg

ವಿದ್ವಾನ್‌ ದೀಪಕ್‌ ಕುಮಾರ್‌ ನೇತೃತ್ವದ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ(ರಿ.) ದಶಮಾನೋತ್ಸವ ವರ್ಷದ ಆಚರಣೆಯನ್ನು ನರ್ತನಾವರ್ತನವೆಂಬ ಪರಿಕಲ್ಪನೆಯಲ್ಲಿ ಹತ್ತು ವರ್ಷಗಳ ಹಿಂದೆ ಆಚರಿಸಿತ್ತು. ಇದೀಗ ವಿಂಶತಿ ವರ್ಷಾಚರಣೆಯ ಸಂದರ್ಭದಲ್ಲಿ ಅದೇ ಹೆಸರಿನಲ್ಲಿ ಪುನರಾವರ್ತಿಸಿದೆ. ಕಳೆದ ವರ್ಷ ಪ್ರಾರಂಭವಾದ ವಿಂಶತಿ ವರ್ಷಾಚರಣೆ ಇತ್ತೀಚೆಗೆ ಸಮಾರೋಪಗೊಂಡಿದ್ದು, ಇದಕ್ಕಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜ.13 ಹಾಗೂ 14ರ ಎರಡು ದಿನಗಳ ಕಾರ್ಯಕ್ರಮದ ಮೊದಲಿನ ಭಾಗ ದೀಪಕ್‌ ಕುಮಾರ್‌ ಸಂಯೋಜಿತ ನೃತ್ಯ ರೂಪಕ ಕೊಲ್ಲೂರು ಶ್ರೀ ಮೂಕಾಂಬಿಕೆ. ಶ್ರೀ ಕ್ಷೇತ್ರ ಕೊಲ್ಲೂರಿನ ಕ್ಷೇತ್ರ ಪುರಾಣಕ್ಕೆ ಸಂಬಂಧಿಸಿದಂತೆ ಪ್ರಚಲಿತವಿರುವ ಆಖ್ಯಾಯಿಕೆಗಳಿಂದ ಆಯ್ದ ಭಕ್ತಾಭೀಷ್ಟಪ್ರದಾತೆಯಾದ ತಾಯಿ ಮೂಕಾಂಬಿಕೆ ದುಷ್ಟ ಮೂಕಾಸುರನ್ನು ವಧಿಸಿ ಆದಿ ಶಂಕರರ ಪ್ರಯತ್ನದಿಂದ ಧರೆಗಿಳಿದು ಕೊಲ್ಲೂರಲ್ಲಿ ನೆಲೆಸಿರುವ ಕಥಾನಕ ಇದರ ಹೂರಣ. ಪಾರಂಪರಿಕವಾಗಿ ಇಂದ್ರನ ಆಯುಧವಾದ ಝರ್ಝರವನ್ನು ವಿಘ್ನ ನಿವಾರಣೆಯ ಭದ್ರತೆಯೊಂದಿಗೆ ರಂಗದಲ್ಲಿ ಸ್ಥಾಪಿಸಿ ಪುಷ್ಪಾಂಜಲಿ ನೆರವೇರಿಸಿ ಮುಂದೆ ಲಾಸ್ಯ ನಿರೂಪಣೆಯ ನೃತ್ಯದ ವಿವಿಧ ಪಿಂಡಿಬಂಧಗಳ ಮೂಲಕ ಸಾಗಿ ಮೂಕಾಂಬಿಕೆಯ ಸ್ತುತಿ ಮಾಡಿ ನಾಟ್ಯಶಾಸ್ತ್ರದ ಪ್ರಾರಂಭದ ವಿಧಿಗಳನ್ನು ಪಾಲಿಸಲಾಯಿತು. ಮುಂದೆ ಕೋಲ ಮಹರ್ಷಿಯ ಯಜ್ಞಯಾಗಾದಿಗಳ ನಾಶಕ್ಕಾಗಿ ಕಂಹಾಸುರನ ಪ್ರವೇಶ. ಮುಂದೆ ಇಂದ್ರನ ಸೋಲು, ಅಧಿಕ ಶಕ್ತಿಗಾಗಿ ಕಂಹಾಸುರನ ತಪಸ್ಸು, ಶಿವ ಪ್ರತ್ಯಕ್ಷನಾಗುವುದು, ವಾಗೆªàವಿ ಸರಸ್ವತಿಯ ಕಾರಣದಿಂದ ಮೂಕನಾದದ್ದು-ಮೂಕಾಸುರನೆಂದು ಅನ್ವರ್ಥಗೊಂಡದ್ದು, ಮುಂದೆ ಬ್ರಹ್ಮಾಣಿ, ವೈಷ್ಣವಿ, ಶಾಂಭವಿ, ಇಂದ್ರಾಣಿ, ಕೌಮಾರಿ ಹಾಗೂ ವಾರಾಹಿಗಳೆಂಬ ಆರು ಶಕ್ತಿಗಳು ಸಿಂಹವಾಹಿನಿಯಾದ ದೇವಿಯಲ್ಲಿ ಲೀನವಾಗಿ ಆಕೆ ಮೂಕಾಸುರನನ್ನು ಸಂಹರಿಸಿ ಮೂಕಾಂಬಿಕೆಯಾಗಿ ಮುಂದೆ ಆದಿಶಂಕರರಿಗೊಲಿದು ಕೊಲ್ಲೂರಿನಲ್ಲಿ ನೆಲೆಯಾದ ಕಥಾನಕವಿದು. ಮೂವತ್ತಕ್ಕೂ ಅಧಿಕ ಕಲಾವಿದರನ್ನು ತರಬೇತುಗೊಳಿಸಿ ವಿವಿಧ ಹಂತಗಳಲ್ಲಿ ದುಡಿಸಿಕೊಂಡ ವಿಧಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ದೇವಿ ಹಾಗೂ ಅಸುರ ಪಾತ್ರಧಾರಿಗಳಾಗಿ ಕಲಾ-ದೀಪ ದಂಪತಿಯ ನಿರ್ವಹಣೆ ಉತ್ತಮ ಮಟ್ಟದಲ್ಲಿತ್ತು. ವರ್ಣಾಲಂಕಾರ, ರಂಗಸಜ್ಜಿಕೆಯಲ್ಲಿ ಭಾವನಾ ಕಲಾ ಆರ್ಟ್ಸ್ನ ಕಲಾವಿದರು ಪೌರಾಣಿಕದ ಪರಿಕಲ್ಪನೆ ಬರುವಂತೆ ಮಾಡಿದರೆ, ಧ್ವನಿ,ಬೆಳಕಿನಲ್ಲಿ ಮಂಗಳೂರಿನ ದೇವ್‌ ಸೌಂಡ್ಸ್‌ ಅಂಡ್‌ ಲೈಟ್ಸ್‌ ನವರು ವೇದಿಕೆಯಲ್ಲಿ ಒಂದು ಕಾಲ್ಪನಿಕ ಲೋಕವನ್ನು ಸೃಷ್ಟಿಸಿದ್ದರು. 

ಎರಡನೆಯ ದಿನದ ಕಾರ್ಯಕ್ರಮ ನಡೆಸಿಕೊಟ್ಟವರು ಅಂತರರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದೆ. ವಿದುಷಿ ಡಾ| ಜಾನಕಿ ರಂಗರಾಜನ್‌ ಚೆನ್ನೆç ಇವರು. ವಲ್ಲಭಾಚಾರ್ಯ ವಿರಚಿತ ರಾಗಮಾಲಿಕೆ ಹಾಗೂ ಆದಿತಾಳದಲ್ಲಿ ನಿಬದ್ಧವಾದ ಮಧುರಾಷ್ಟಕಂನಿಂದ ಕೈಗೆತ್ತಿಕೊಂಡು ಮುಂದೆ ಪದವರ್ಣದೆಡೆಗೆ ಸಾಗಿದರು. ಶ್ರೀ ಪಟ್ಣಂ ಸುಬ್ರಹ್ಮಣ್ಯಂ ಅಯ್ಯರ್‌ರವರಿಂದ ರಚಿತವಾದ ಈ ಪದವರ್ಣ ದರ್ಬಾರ್‌ ರಾಗದಲ್ಲಿದ್ದು ಖಂಡ ಅಟತಾಳದಲ್ಲಿ ನಿಬದ್ಧವಾಗಿದೆ. ಪಾರಮಾರ್ಥಿಕ ನಾಯಕ-ನಾಯಕಿ ಭಾವಕ್ಕಿಂತ ಕಲಾವಿದೆಯೇ ಪ್ರಚುರಪಡಿಸಿದಂತೆ ಲೌಕಿಕ ನಾಯಕ-ನಾಯಕಿ ಭಾವ ಪ್ರಸ್ತುತಿ ವಿಶೇಷವೆನಿಸಿತು.ಅಣ ಮಾಚಾರ್ಯರ ಸಂಕೀರ್ತನ ಜಂಜುರುಟಿ ರಾಗದಲ್ಲಿದ್ದು ಅಭಿನಯ ಪ್ರಧಾನವಾಗಿ ಮೆಚ್ಚುಗೆ ಪಡೆಯಿತು. ಟಿ.ವೈದ್ಯನಾಥ ಭಾಗವತರ ಪೂರ್ವಿರಾಗದ ತಿಲ್ಲಾನದೊಂದಿಗೆ ಮುಕ್ತಾಯಗೊಳಿಸಿದರು. ತಾನು ಪ್ರದರ್ಶಿಸಿದ ನೃತ್ಯದ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ಕಲಾವಿದೆಯು ನೀಡಿರುವುದು ಪ್ರದರ್ಶನವನ್ನು ಪ್ರೇಕ್ಷಕರು ಅರ್ಥೈಸಲು ಹಾಗೂ ಕಲಾವಿದೆಯೊಂದಿಗೆ ಸಂವಹನಗೊಳ್ಳಲು ಸಹಾಯಕವಾಯಿತು.                 

ವಿ| ರಾಮಕೃಷ್ಣ ಭಟ್ಟ ಯು.ಎಸ್‌.                    

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.