ಮರಾಠಿಯಲ್ಲಿ ರಂಜಿಸಿದ ಪಂಡರಾಪುರಚಾ ಮಹಿಮಾ
Team Udayavani, Jun 28, 2019, 5:00 AM IST
ಮಹಾರಾಷ್ಟ್ರದ ಮರಾಠಿಗರಿಗೆ ಯಕ್ಷಗಾನ ಅಭಿರುಚಿ ಹುಟ್ಟಿಸುವ ಸಲುವಾಗಿ ಪ್ರಸಂಗಕರ್ತ ಎಂ. ಟಿ. ಪೂಜಾರಿಯವರು ಪಂಡರಾಪುರದ ಪಾಂಡುರಂಗನ ಕುರಿತಾದ “ಪಂಡರಾಪುರಚಾ ಮಹಿಮಾ’ ಎಂಬ ವ್ಯಾಖ್ಯಾನವನ್ನು ರಚಿಸಿದ್ದಾರೆ. ಇದರ 17ನೇ ಪ್ರಯೋಗ ಇತ್ತೀಚೆಗೆ ಡೊಂಬಿವಲಿಯಲ್ಲಿ ನಡೆಯಿತು. ಯಕ್ಷ ಕಲಾತರಂಗ ಮೇಳದವರು ಈ ಪ್ರಸಂಗವನ್ನುಪ್ರದರ್ಶಿಸಿದರು. ಇದು ಇಲ್ಲಿನ ಕೊಂಕಣಿ, ಮರಾಠಿ ಭಾಷಿಗರಿಗೆ ಯಕ್ಷಗಾನದ ಸವಿಯನ್ನು ಉಣ್ಣಿಸಿ ಮೆಚ್ಚುಗೆಗೆ ಪಾತ್ರವಾಗಿದೆ. ಮರಾಠಿ ಭಾಷೆಯಲ್ಲಿ ಪದ್ಯ, ಅರ್ಥಗಳನ್ನು ರಚಿಸಿ ಇಲ್ಲಿನ ಮರಾಠಿ ಭಾಷಿಗರಲ್ಲಿ ಆಸಕ್ತಿಯನ್ನು ಹುಟ್ಟಿಸಿದೆ. ಮರಾಠಿ ಭಾಷೆಯಲ್ಲಿ ಯಕ್ಷಕಲಾತರಂಗ ಮಂಡಳಿ ಯಕ್ಷಗಾನ ಪ್ರದರ್ಶನ ಪ್ರಾರಂಭಿಸಿದ ಕೀರ್ತಿಗೆ ಪಾತ್ರವಾಯಿತು.
ಭಾಗವತರಾಗಿ ರವಿ ಆಚಾರ್ಯರವರ ಇಂಪಾದ ಮರಾಠಿ ಭಾಷೆಯಲ್ಲೇ ಭಾಗವತಿಕೆ, ಮಧು ಪಾನ್ ಹಾಗೂ ಪ್ರವೀಣ್ ಶೆಟ್ಟಿಯವರ ಚೆಂಡೆ ಮದ್ದಳೆಯ ಕೈಚಳಕ ಪ್ರದರ್ಶನಕ್ಕೊಂದು ಹೊಸ ಹುರುಪು ತಂದಿತ್ತು. ಪುಂಡಲಿಕನಾಗಿ ಬಡಗು, ತೆಂಕು ತಿಟ್ಟಿನ ಸವ್ಯಸಾಚಿ ವಿಠಲ ಪ್ರಭು ಕುಕ್ಕೆಹಳ್ಳಿಯವರ ಅಮೋಘ ಅಭಿನಯ ಕರತಾಡನಕ್ಕೆ ಕಾರಣವಾಯಿತು. ಚಂದ್ರಾಳ ಪಾತ್ರದಲ್ಲಿ ಕು| ಅಂಕಿತ ನಾಯಕ್ ವೃತ್ತಿ ಮೇಳದ ಸ್ತ್ರೀ ಪಾತ್ರಕ್ಕೆ ಸರಿಸಾಟಿಯಾಗಿ ಅಭಿನಯಿಸಿದರು. ಕೃಷ್ಣನಾಗಿ ಕು| ಪ್ರತೀಕ್ಷಾ ನಾಯಕ್ ಅವರ ಅಭಿನಯ ಮೆಚ್ಚುಗೆಗೆ ಪಾತ್ರವಾಯಿತು. ಉಳಿದಂತೆ ಗೋವಿಂದ ಸಪಲಿಗರವರ ಕಾಯವ, ರಾಧೆಯಾಗಿ ಶಿವಾನಿ ಪ್ರಭು, ರುಕ್ಮಿಣಿಯಾಗಿ ದಿಶಾ ಗೌಡ, ದೇವರಾಯನಾಗಿ ವಾಸುದೇವ ಶೆಣೈ, ಸತ್ಯವತಿಯಾಗಿ ಮೀನಾ ಕ್ಷೀರ್ಸಾಗರ್, ಮುಚುಕಂದನಾಗಿ ಎಸ್. ಕೆ. ನಾಯಕ್, ಕೃಷ್ಣಮೂರ್ತಿಯಾಗಿ ಕೃಷ್ಣ ನಾಯಕ್, ಕುಕುಟ ಮುನಿಯಾಗಿ ಟಿ. ವಿ. ಶೆಣೈ, ಕೃಷ್ಣನಾಗಿ ಸದಾನಂದ ನಾಯಕ್, ಬಾಲಗೋಪಾಲರಾಗಿ ಕೃಪಾ ಹಾಗೂ ಅವಿಷ್ಕಾರ್ವರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದರು. ಸುಮಾರು ಮೂರು ತಾಸಿನ ಈ ಯಕ್ಷಗಾನ ಪ್ರದರ್ಶನ ಪಂಡರಾಪುರದ ಪಾಂಡುರಂಗ ವಿಠನ ಮಹಿಮೆಯನ್ನು ಸಮರ್ಥವಾಗಿ ಬಿಂಬಿಸಿತು.
ಜಯರಾಮ್ ಜಿ. ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ