ಹಳ್ಳಾಡಿ ಸುಬ್ರಾಯ ಮಲ್ಯ ಪ್ರಶಸ್ತಿಗೆ ಪರಮೇಶ್ವರ ಹೆಗಡೆ 


Team Udayavani, Jun 29, 2018, 6:00 AM IST

x-5.jpg

ನಾಲ್ಕು ತಲೆಮಾರುಗಳಿಂದ ಯಕ್ಷ ಪರಂಪರೆ ಮುಂದುವರೆಸುತ್ತಿರುವ ಹಳ್ಳಾಡಿ ಮಲ್ಯ ಮನೆತನದ ದಿವಂಗತ ಸುಬ್ರಾಯ ಮಲ್ಯರ ಯಕ್ಷ ಪ್ರತಿಭೆ ಆರಾಧನೆ ಅದ್ವಿತೀಯವಾದುದು. ಇವರ ಅದ್ಭುತ ಯಕ್ಷ ಪ್ರತಿಭೆಯಿಂದಾಗಿ ಇವರನ್ನು “ದಶಾವತಾರ’ ಎಂದು ಸಂಭೋದಿಸಲಾಗುತ್ತಿತ್ತು. ಪ್ರಸ್ತುತ ಈ ಮನೆತನದ ಯಕ್ಷ ಆರಾಧನೆಯನ್ನು ಸುಬ್ರಾಯ ಮಲ್ಯರ ಮಗ ರಾಕೇಶ್‌ ಮಲ್ಯ (ಚೆಂಡೆ ಕಲಾವಿದ) ಮತ್ತು ಮಗಳು ಅರುಣ್‌ ಪೈ ಮುಂದುವರಿಸುತ್ತಿದ್ದು, ಅದರಲ್ಲೂ ಕಿರಣ್‌ ಪೈ ಯಕ್ಷರಂಗದಲ್ಲಿ ಸಾಕಷ್ಟು ಹೆಸರು ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ “ಸುಮುಖ’ ಕಲಾಕೇಂದ್ರ ಸ್ಥಾಪಿಸಿ ಯಕ್ಷ ತರಬೇತಿ ನೀಡುತ್ತಿದ್ದಾರೆ. ಶಿವಮೊಗ್ಗದ “ಶ್ರೀ ವಾಗೆªàವಿ ಮಹಿಳಾ ಯಕ್ಷ ಮಂಡಳಿ’ಯ ಕಲಾವಿದೆ “ಸುಮುಖ’ ಕಲಾಕೇಂದ್ರದ ಪ್ರಥಮ ವಾರ್ಷಿಕೋತ್ಸವದಂದು ತನ್ನ ತಂದೆಯ ಹೆಸರಿನಲ್ಲಿ “ಹಳ್ಳಾಡಿ ಸುಬ್ರಾಯ ಮಲ್ಯ ಸ್ಮಾರಕ ಪ್ರಶಸ್ತಿ’ ನೀಡುವ ಪರಂಪರೆಯನ್ನು ಪ್ರಾರಂಭಿಸಿದ್ದಾರೆ. ಯಕ್ಷ ಕಲಾವಿದ ಐನಬೈಲ್‌ ಪರಮೇಶ್ವರ ಹೆಗಡೆಯವರಿಗೆ ಈ ಚೊಚ್ಚಲ ಪ್ರಶಸ್ತಿಯನ್ನು ಇತ್ತೀಚೆಗೆ ಪ್ರದಾನಿಸಲಾಯಿತು. 

ಮೂವತ್ತಕ್ಕೂ ಅಧಿಕ ವರ್ಷಗಳಿಂದ ಯಕ್ಷ ಭಾಗವತ, ಯಕ್ಷಗುರು/ನಿರ್ದೇಶಕ ಪಾತ್ರಧಾರಿ, ಮದ್ದಳೆ – ಚೆಂಡೆ ಕಲಾಕಾರರಾಗಿ ತೊಡಗಿಸಿಕೊಂಡಿರುವ ಐನಬೈಲ್‌ ಪರಮೇಶ್ವರ ಹೆಗಡೆಯವರು ಉ.ಕ. ಜಿಲ್ಲೆಯ ಸಿದ್ಧಾಪುರ ತಾಲೂಕಿನ ಐನಬೈಲ್‌ ಗಣಪತಿ ಹೆಗಡೆ ಮತ್ತು ಸುಭದ್ರಾ ದಂಪತಿಯ ಪುತ್ರ. ತಂದೆಯ ಅಪೇಕ್ಷೆಯಂತೆ ಭಾಗವತರಾಗಿ ಯಕ್ಷರಂಗಕ್ಕೆ ಧುಮುಕಿದರು. ಬಾಳೆಗದ್ದೆ ಕೃಷ್ಣ ಭಾಗವತ, ಶಿರಳಗಿ ಮಂಜುನಾಥ ಭಟ್ಟ ಮತ್ತು ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಇವರ ಯಕ್ಷ ಗುರುಗಳು.

ತಾಳಗಳ ತಳಸ್ಪರ್ಶಿ ಜ್ಞಾನ, ಸುಮಧುರ ಶೈಲಿಯಲ್ಲಿ ಗಾಯನ, ಸುಶ್ರಾವ್ಯ ಶಾರೀರ, ಯಕ್ಷಕಲೆಯಲ್ಲಿ ಪ್ರೌಢಿಮೆ ಹೊಂದಿರುವ ಇವರು ಸೋಂದಾ ಮೇಳದಲ್ಲಿ ಕೆಲವು ವರ್ಷ ಸೇವೆ ಸಲ್ಲಿಸುವುದರೊಂದಿಗೆ ನಾಡಿನಾದ್ಯಂತ ಅಸಂಖ್ಯಾತ ಯಕ್ಷ/ತಾಳ ಮದ್ದಳೆಗಳಲ್ಲಿ ಭಾಗವಹಿಸಿ ಯಕ್ಷ ಕಲಾರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಬಭುವಾಹನ, ಧರ್ಮಾಂಗದ, ಸಾಲ್ವ , ಕೃಷ್ಣ, ಚಂದ್ರಹಾಸ, ಅಭಿಮನ್ಯು ಇತ್ಯಾದಿ ಪಾತ್ರಗಳಲ್ಲಿ ಇವರ ಅನನ್ಯ ಪ್ರತಿಭೆ ಪ್ರತಿಫ‌ಲಿಸುತ್ತದೆ. ಹೀಗೆಯೇ ಯಕ್ಷಗುರು/ನಿರ್ದೇಶಕರಾಗಿ ಅದೆಷ್ಟೋ ಪ್ರತಿಭೆಗಳನ್ನು ನೀಡಿದ್ದಾರೆ. “ಯಕ್ಷ ಕಲಾ ಬ್ರಹ್ಮ’, “ಯಕ್ಷ ಗುರು’, “ವೃತ್ತಿ ಕೌಶಲ್ಯ’ ಇವೆಲ್ಲ ಬಿರುದುಗಳ ಜೊತೆಗೆ ಹಲವಾರು ಸನ್ಮಾನ/ಗೌರವಗಳು ಅರಸಿ ಬಂದಿವೆ.

ಸಂದೀಪ್‌ ನಾಯಕ್‌ ಸುಜೀರ್‌ 

ಟಾಪ್ ನ್ಯೂಸ್

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.