ಸಂಗೀತ ರಸದೌತಣ ನಾದಸಿರಿ 


Team Udayavani, Jun 22, 2018, 9:05 PM IST

b-4.jpg

ಸ್ವರಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ಸಂಸ್ಥೆಯ ಏಳನೇ ವರ್ಷದ ವಾರ್ಷಿಕ ಸಂಗೀತ ಸಮ್ಮೇಳನ ಇತ್ತೀಚೆಗೆ ಎಳೆಯ ಪ್ರತಿಭಾ ಪ್ರೋತ್ಸಾಹದ ರೂಪದಲ್ಲಿ ಪ್ರಾರಂಭವಾದ ಮೊದಲನೆಯ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕಲಾವಿದ ಕುಮಾರ್‌ ರಿಶಭ್‌ ಹಾನಗಲ್‌ ಧಾರವಾಡ್‌ ಇವರಿಂದ ಹಾರ್ಮೋನಿಯಂ ವಾದನ ನಡೆಯಿತು. ಆಹಿರ್‌ ಭೈರವ್‌ ರಾಗವನ್ನು ಅವರು ಪ್ರಸ್ತುತ ಪಡಿಸಿದರು. ಗಿಳಿಗುಂಡಿ ಮನೆಯ ಕಲಾವಿದರಾದ ಪ್ರತಿಭಾ ಹೆಗಡೆ ಅವರಿಂದ ಭೈರಾಗಿ ಭೈರವ್‌ ಹಾಗೂ ಕುಮಾರಿ ಸಂಗೀತಾ ಹೆಗಡೆ ಇವರಿಂದ ಜೌನಪುರಿ ಉತ್ತಮವಾಗಿ ಪ್ರಸ್ತುತಗೊಂಡವು. ನಂತರ ಪಂಡಿತಾ ಶುಭದಾ ಪರಾಡ್ಕರ್‌ ಅವರ ಶಿಷ್ಯೆ ಹೇಮಾಲಾ ರಾನಡೆ ಅಪರೂಪದ ರಾಗ ಪಂಚಮ್‌ ಹಾಗೂ ರಾಗ್‌ ಸರಸ್ವತಿ ಹಾಗೂ ಸಾರಂಗ್‌ ಮಿಶ್ರಣದ ರಾಗ್‌ ಅಂಬಿಕಾ ಸಾರಂಗ್‌ ಮೂಲಕ ಶ್ರೋತೃಗಳ ಮನ ತಣಿಸಿದರು. 

ಮಧ್ಯಾಹ್ನದ ಮೊದಲ ಕಛೇರಿಯನ್ನು ನಡೆಸಿಕೊಟ್ಟ ಯುವ ಕಲಾವಿದ ಗಾಂಧಾರ್‌ ದೇಶಪಾಂಡೆ ಬೃಂದಾವನೀ ಸಾರಂಗ್‌ನೊಂದಿಗೆ ಮನಗೆದ್ದರು. ವಿಲಂಬಿತ್‌ ತಿಲವಾಡದಲ್ಲಿ ಖ್ಯಾಲ್‌ನುಮ (ವಿಲಂಬಿತ್‌ ತರಾನಾ) ಹಾಗೂ ದೃತ್‌ ತೀನ್‌ ತಾಳದ ಬಂಧಿಶ್‌ ಅಲ್ಲದೆ ಮಿಶ್ರ ಪೀಲೂವಿನ ಒಂದು ಠುಮ್ರಿಯನ್ನು ಪ್ರಸ್ತುತಪಡಿಸಿದರು. ನಂತರ ಶಾರದಾ ಭಟ್‌ ಕಟ್ಟಿಗೆ ಇವರು ಭೀಮಪಲಾಸಿ ಹಾಗೂ ಮುಲ್ತಾನಿ ರಾಗಗಳನ್ನು ಹಾಡಿದರು. 

 ರಶ್ಮಿ ಪರಾಡ್ಕರ್‌ ಧನಶ್ರೀ ಹಾಗೂ ರಾಮ್‌ ಗೌರಿ ರಾಗಗಳನ್ನು ಪ್ರಸ್ತುತಪಡಿಸಿದರು. ನಂತರದ ಕಛೇರಿಯಲ್ಲಿ ಉಮಾ ಬಾಲಸುಬ್ರಹ್ಮಣ್ಯ ಪೂರ್ವಿ ಹಾಗೂ ಶ್ಯಾಮ್‌ ಕಲ್ಯಾಣ್‌ ರಾಗಗಳನ್ನು ಪ್ರಸ್ತುತಪಡಿಸಿದರು. ಅನಂತರ ರಮಾಕಾಂತ್‌ ಗಾಯಕ್ವಾಡ್‌ ರಾಗ್‌ ಬಾಗೇಶ್ರೀ ಮತ್ತು ಠುಮ್ರಿಗಳೊಂದಿಗೆ ಮನಸೂರೆಗೊಂಡರು. ಗಿಳಿಗುಂಡಿ ಮನೆಯ ಬಾಲೆ ಸುಂದರ ರಾಗ್‌ ಮಾಲಾ ಬಂಧಿಶ್‌ ಹಾಡಿದಳು. ನಂತರ ಗಿಳಿಗುಂಡಿ ಮನೆಯ ಗುರುಪ್ರಸಾದ್‌ ಹೆಗಡೆಯವರ ಸಾರಂಗಿ ವಾದನದಲ್ಲಿ ರಾಗ್‌ ಮಾರೂ ಬಿಹಾಗ್‌ ಪ್ರಸ್ತುತಿಗೊಂಡಿತು. 

ಆಕಾಶವಾಣಿಯ ಕಲಾವಿದರಾದ ಉಸ್ತಾದ್‌ ರಫೀಕ್‌ ಖಾನ್‌ ಇವರಿಂದ ಸಿತಾರ್‌ ವಾದನ ನಡೆಯಿತು. ರಾಗ್‌ ಕೌನ್ಸಿàಕಾನಡಾ, ಹಾಗೂ ಮಿಶ್ರ ಶಿವರಂಜಿನಿಯಲ್ಲಿ ಒಂದು ಧುನ್‌ ಸುಂದರವಾಗಿ ಮೂಡಿ ಬಂದವು. ಕೊನೆಯ ಕಛೇರಿಯಲ್ಲಿ ಹಿರಿಯ ಕಲಾವಿದ ಡಾ| ಪಂಡಿತ್‌ ರಾಮ್‌ ದೇಶಪಾಂಡೆಯವರು ಜೋಗ್‌, ಕಾಫಿ ಕಾನಡಾ, ಹಿಂದೋಳ್‌ ಪಂಚಮ್‌, ಭೈರವಿ ರಾಗಗಳನ್ನು ಪ್ರಸ್ತುತಪಡಿಸಿದರು. 

    ತಬಲಾದಲ್ಲಿ ಗುರುಮೂರ್ತಿ ವೈದ್ಯ, ಡಾ| ಉದಯ್‌ ಕುಲಕರ್ಣಿ , ಭಾರವಿ ದೇರಾಜೆ ಸುರತ್ಕಲ್‌, ಗಜಾನನ ಹೆಗಡೆ ಗಿಳಿಗುಂಡಿ ಹಾಗೂ ಹಾರ್ಮೋನೀಯಮ್‌ನಲ್ಲಿ ಗುರುಪ್ರಸಾದ್‌ ಹೆಗಡೆ ಮತ್ತು ಭರತ್‌ ಹೆಗಡೆ ಹೆಬ್ಬಲಸು ಹಾಗೂ ಸಾರಂಗಿಯಲ್ಲಿ ಗುರುಪ್ರಸಾದ್‌ ಹೆಗಡೆ ಸಾಥ್‌ ನೀಡಿದರು.

 ವಸುಧಾ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.