ಪೂರ್ವಿಯ ಅಪೂರ್ವ ರಂಗ ಪ್ರವೇಶ


Team Udayavani, Nov 15, 2019, 3:59 AM IST

ff-4

ವಕೀಲ ವೃತ್ತಿಗೆ ಕಾಲಿಡುತ್ತಿರುವ ವಿ ದ್ಯಾರ್ಥಿನಿ. ಎಳೆಯ ವಯಸ್ಸಿನಿಂದಲೇ ಭರತನೃತ್ಯ ಮುಂತಾ ದ ಲಲಿತಕಲೆಗಳಲ್ಲಿ ಅಪಾರ ಆಸಕ್ತರು. ಹತ್ತು ವರ್ಷಗಳಿಂದ ಭರತ ನೃತ್ಯದಲ್ಲಿ ಮಾಡಿದ ಶ್ರದ್ಧೆಯ ಸಾಧನೆ ಫ‌ಲಶ್ರುತಿಯೇ ರಂಗ ಪ್ರವೇಶದ ಸಂಭ್ರಮ. ಬೆಳ್ತಂಗಡಿ ತಾಲೂಕಿನ ವೇಣೂರಿನ ಶಿಲಾ ಬಾಲಿಕೆ ಪೂರ್ವಿ ಹೆಗ್ಡೆಯವರ ಕಲಾ ಪ್ರದರ್ಶನ ನ.10ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದ ರಂಗಮಂಟಪದಲ್ಲಿ ಕಣ್ಮನಗಳಿಗೆ ಮಧುರ ಅನುಭವ ನೀಡಿತು.

ವಿ| ಡಾ| ಲಲಿತಾ ಶ್ರೀನಿವಾಸನ್‌ ಅವರ ಬಳಿ ಮೈಸೂರು ಶೈಲಿಯ ಭರತ ನೃತ್ಯ ಕಲೆಯನ್ನು ಕರಗತ ಮಾಡಿಕೊಂಡ ಪೂರ್ವಿ ಹೆಗ್ಡೆಯವರ ರಂಗ ಪ್ರವೇಶದ ಮೊದಲ ಕಾರ್ಯಕ್ರಮದಲ್ಲಿಯೇ ವೇಗದ ಗತಿ, ಭಾವ ಪ್ರದರ್ಶನ, ದಣಿವರಿಯದ ಹೆಜ್ಜೆಗಳ ಮೂಲಕ ಓರ್ವ ಪ್ರಬುದ್ಧ ಕಲಾವಿದೆ ರಂಗಕ್ಕಡಿಯಿಡುತ್ತಿರುವ ಎಲ್ಲ ಲಕ್ಷಣಗಳೂ ಗೋಚರಿಸಿದವು. ಗಣೇಶ ಮತ್ತು ಶಿವಸ್ತುತಿಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮ. ನಾಟಿ ರಾಗ, ಆದಿ ತಾಳದಲ್ಲಿ ವಿಘ್ನೇಶ್ವರನಿಗೆ ಪುಷ್ಪಾಂಜಲಿ ಅರ್ಪಿಸುವ ಶ್ಲೋಕಕ್ಕೆ ಭಕ್ತಿ ಭಾವವನ್ನು ಶ್ರುತಪಡಿಸಿದ ರೀತಿ, ನಿಧಾನ ಗತಿಯ ಹೆಜ್ಜೆಗಳಿಗೆ ಮನ ಮುಟ್ಟುವ ಅಭಿವ್ಯಕ್ತಿಯ ಮೂಲಕ ಮನ ಗೆದ್ದಿತು.

ಜಯದೇವ ಕವಿಯ ಅಷ್ಟಪದಿಯನ್ನು ಜತಿಸ್ವರದ ಹೆಜ್ಜೆಗಳಿಗೆ ಆಯ್ದುಕೊಂಡ ಕಲಾವಿದೆ ವಸಂತ ರಾಗ, ಆದಿತಾಳದ ಗೀತೆಗೆ ಶೃಂಗಾರ ಭಾವವನ್ನು ಮೋಹಕವಾಗಿ ಕಣ್ಣುಗಳಲ್ಲಿ ಹೊರಚೆಲ್ಲುವ ಪರಿ ಅಮೋಘವಾಗಿತ್ತು. ವಿರಹ, ಸಾಮೀಪ್ಯಗಳ ರೋಮಾಂಚಕ ಸನ್ನಿವೇಶ, ರಾಧಾ – ಕೃಷ್ಣರ ಪ್ರಣಯದ ಭಾವಸ್ಪರ್ಶ ಮನ ಮುಟ್ಟಿತು, ಹೃದಯ ತಟ್ಟಿತು. ಬಳಿಕ ಸಾರಂಗ ಮತ್ತು ಯಮನ್‌ ಕಲ್ಯಾಣಿ ರಾಗಗಳಲ್ಲಿ ಪ್ರಸ್ತುತಪಡಿಸಿದ ಶ್ಲೋಕಗಳಿಗೆ ನರ್ತಿಸಿದ ಪರಿ ಕಲಾವಿದೆಯ ಪರಿಪುಷ್ಟ ಸಾಧನೆಯ ಸೊಬಗನ್ನು ಕಣ್ಮುಂದೆ ತಂದವು.

ಸಾವೇರಿ ರಾಗ ಆದಿತಾಳದ ವರ್ಣ, ಶುದ್ಧ ಧನ್ಯಾಸಿ ರಾಗ, ಆದಿ ತಾಳದ ಕೃತಿಗಳಲ್ಲಿ ದಣಿವರಿಯದ ಧ್ರುತಗತಿಯ ಹೆಜ್ಜೆಗಳ ಮೂಲಕ ಕಲೆಯ ರಸಪಾಕವನ್ನು ಹಂಚುತ್ತ ಹೋದ ಪೂರ್ವಿ ಅಟಾನಾ ರಾಗ, ಮಿಶ್ರಛಾಪು ತಾಳದ ದೇವರನಾಮದಲ್ಲಿ ಭಕ್ತಿ ರಸಭಾವದ ಪ್ರದರ್ಶನದಲ್ಲಿ ತನ್ಮಯಗೊಳಿಸಿದರು. ಬೇಹಾಗ್‌ ರಾಗ, ಆದಿ ತಾಳದಲ್ಲಿ ಜಾವಳಿ, ಕದನ ಕುತೂಹಲ ರಾಗ ಆದಿ ತಾಳದಲ್ಲಿ ತಿಲ್ಲಾನ, ಮಧ್ಯಮಾವತಿ ರಾಗದ ಭರತವಾಕ್ಯದ ಮೂಲಕ ಕೊನೆಗೊಂಡ ಕಾರ್ಯಕ್ರಮದಲ್ಲಿ ಪರಿಣತ ಕಲಾವಿದೆಯ ಗುಣ ಲಕ್ಷಣಗಳಿಂದ ಪ್ರದರ್ಶನದಲ್ಲಿ ಮಿಂಚಿದ ಪೂರ್ವಿ ಭವಿಷ್ಯದ ದಿನಗಳಲ್ಲಿ ಸಮರ್ಥ ಗುರುವಿನ ಪ್ರಬುದ್ಧ ಶಿಷ್ಯೆಯಾಗುವ ಎಲ್ಲ ಸೂಚನೆಗಳಿಂದ ಪರಿಪೂರ್ಣ ರಸ ರಂಜನೆಯನ್ನು ನೀಡಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ವಿ. ಕಾರ್ತಿಕ್‌ ಹೆಬ್ಟಾರ್‌(ಕೊಳಲು), ವಿ. ನಾರಾಯಣ ಸ್ವಾಮಿ(ವಯೊಲಿನ್‌), ವಿ. ದಯಾಕರ್‌(ವೀಣೆ) ಅವರೊಂದಿಗೆ ವಿ. ಕಾರ್ತಿಕ್‌ ಸಾತವಳ್ಳಿ(ಅಲಂಕಾರ), ಅರ್ಮುಗಮ್‌(ವಸ್ತ್ರ ವಿನ್ಯಾಸ) ಹಾಗೂ ಡಾ| ರೇಖಾ ರಾಜೀವ್‌ ಅವರ ಬೆಳಕಿನ ವ್ಯವಸ್ಥೆ ಪ್ರದರ್ಶನವನ್ನು ಸಂಪನ್ನಗೊಳಿಸುವಲ್ಲಿ ಪೂರಕವಾಗಿ ಸಹಕರಿಸಿತು.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.