ವರ್ತಮಾನದ ತಲ್ಲಣಗಳ ಮುಖಾಮುಖಿ ವೃತ್ತದ ವೃತ್ತಾಂತ 


Team Udayavani, May 25, 2018, 6:00 AM IST

c-11.jpg

ಭೂಮಿಕಾ ಹಾರಾಡಿ ರಂಗ ತಂಡದವರು ಬ್ರಹ್ಮಾವರದಲ್ಲಿ ನಡೆದ “ಬಣ್ಣ’ ನಾಟಕೋತ್ಸವದಲ್ಲಿ ಪ್ರದರ್ಶಿಸಿದ “ವೃತ್ತದ ವೃತ್ತಾಂತ’ ನಾಟಕ ರಂಜನೆಯ ಜೊತೆಗೆ ಸಾಮಾಜಿಕ ಕಳಕಳಿಯುಳ್ಳ ಸಂದೇಶವನ್ನು ನೀಡುವಲ್ಲಿ ಸಫ‌ಲವಾಯಿತು.

ಎಚ್‌.ಎಸ್‌. ವೆಂಕಟಮೂರ್ತಿ ಮತ್ತು ಜಿ.ಎನ್‌.ರಂಗನಾಥ್‌ ಇವರ ಕೃತಿ ಆಧರಿಸಿ ರಚಿಸಿದ ಈ ನಾಟಕ ವರ್ತಮಾನದ ತಲ್ಲಣಗಳೊಂದಿಗೆ ನೇರವಾಗಿ ಮುಖಾಮುಖೀಯಾಗುವ ಪ್ರಯೋಗವಾಗಿದೆ. ಅಧಿಕಾರದ ಆಸೆಯಿಂದಾಗಿ ಛಿದ್ರವಾಗುವ ರಾಜನ ಕುಟುಂಬ ಮತ್ತು ಅದರ ಒಂದು ಜೀವಂತ ತುಣುಕಿನ ಸುತ್ತ ಹೆಣೆದ ಸೊಗಸಾದ ನಾಟಕವಿದು. ನಾಟಕದ ಆದಿಯಲ್ಲಿಯೇ ರಾಜನು ಪ್ರಜೆಗಳ ಕ್ಷೇಮ ವಿಚಾರಿಸುವ ಸಭೆಯ ದೃಶ್ಯ ಮಾರ್ಮಿಕವಾಗಿ ಮೂಡಿ ಬಂದಿದೆ. ನೆಪ ಮಾತ್ರಕ್ಕೆ ಸಭೆ ನಡೆಸುವ ಇಂದಿನ ಅವಕಾಶವಾದಿ ರಾಜಕಾರಣಿಗಳನ್ನು ಅಣಕಿಸುವಂತಿರುವ ಈ ದೃಶ್ಯ ಪ್ರಜೆಗಳೆಡೆಗಿನ ಆಳುವವರ ತಿರಸ್ಕಾರವನ್ನು ಬಿಂಬಿಸುತ್ತದೆ.

 ಪಟ್ಟದಾಸೆಗಾಗಿ ಅಣ್ಣನ ಮೇಲೆಯೇ ದಂಗೆಯೆದ್ದು ರಾಜ್ಯವನ್ನು ಹಿಡಿತಕ್ಕೆ ಪಡೆವ ಯುವರಾಜ, ಪ್ರಾಣ ಉಳಿಸಿಕೊಳ್ಳಲು ಓಡುವ ರಾಣಿ ತನ್ನ ಸೀರೆ ಒಡವೆಗಳಂತಹ ವೈಭೋಗದ ವಸ್ತುಗಳನ್ನು ಹೊತ್ತೂಯ್ದು ಹಸುಗೂಸನ್ನು ಅರಮನೆಯಲ್ಲಿ ಬಿಟ್ಟು ಹೋಗುವ ದೃಶ್ಯ ಮನುಷ್ಯನು ಐಷಾರಾಮದ ಆಸೆಗಾಗಿ ಮನುಷ್ಯತ್ವವನ್ನು ಮತ್ತು ಸಂಬಂಧಗಳನ್ನು ಕಳೆದುಕೊಳ್ಳುವ ವಾಸ್ತವವನ್ನು ದಾಖಲಿಸುತ್ತವೆ. ಪ್ರೀತಿ, ಕರುಣೆ, ಮಾನವೀಯತೆ ಅರಮನೆಯಲ್ಲಿ ಅಥವಾ ಸಿರಿತನದಲ್ಲಿ ಇಲ್ಲ, ಅದು ಇರುವುದಾದರೆ ಬಡತನದಲ್ಲಿ ಎನ್ನುವುದನ್ನು ವಲ್ಲಿಯ ಪಾತ್ರದ ಮೂಲಕ ಹೇಳಲಾಗಿದೆ. ಸಾವಿನ ದವಡೆಯಲ್ಲಿದ್ದ ಮಗುವನ್ನು ಬಿಟ್ಟು ಹೋಗಲಾರದೆ ಎದೆಗಪ್ಪಿಕೊಂಡು ಓಡುವ ವಲ್ಲಿ ಮಾನವೀಯತೆಯ ರೂಪಕವಾಗಿ ನಿಲ್ಲುತ್ತಾಳೆ. ಅಲ್ಲಿಂದ ಆಕೆ ಮಗುವನ್ನು ಉಳಿಸಿಕೊಳ್ಳಲು ತಾನೇ ತಾಯಿಯಾಗಿ ಪಡುವ ಪರಿಪರಿಯಾದ ಕಷ್ಟಗಳು ಭಾವುಕವಾದ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಒಂದೆಡೆ ಕಿತ್ತು ತಿನ್ನುವ ಹಸಿವು ಮತ್ತೂಂದೆಡೆ ಮಗುವನ್ನು ಕೊಲ್ಲಲು ಬೆನ್ನಟ್ಟಿರುವ ಯವರಾಜನಿಂದ ಮಗುವನ್ನು ಪಾರು ಮಾಡುವ ವಲ್ಲಿಯ ಹೋರಾಟ ಒಂದು ದೃಶ್ಯಕಾವ್ಯದಂತೆ ಕಟ್ಟಿಕೊಟ್ಟಿದ್ದಾರೆ ಕಲಾವಿದರು. ವಲ್ಲಿ ತನ್ನ ಪ್ರಿಯಕರನನ್ನು ಒಲ್ಲದ ಮನಸ್ಸಿನಿಂದ ಯುದ್ಧಕ್ಕೆ ಕಳುಹಿಸಿಕೊಡುವ ಸನ್ನಿವೇಶ ಎಲ್ಲಾ ಸೈನಿಕರ ಮಡದಿಯರ ನೋವಿನ ರೂಪಕದಂತೆ ಕಾಡುತ್ತದೆ. ಯುದ್ಧ ಮುಗಿಸಿ ಬರುವೆನೆಂದು ಹೇಳಿಹೋದ ಮಲ್ಲನಿಗಾಗಿ ವಲ್ಲಿ ಎಂಟು ವರ್ಷ ಕಾಯುತ್ತಾಳೆ. ಅಂತೂ ಯುದ್ಧ ಮುಗಿದು ಮಲ್ಲ ಅವಳನ್ನು ಸೇರುತ್ತಾನೆ. ಅಲ್ಲಿಗೆ ನಾಟಕ ಹೊಸ ತಿರುವು ಪಡೆದುಕೊಳ್ಳುತ್ತದೆ. ಯುವರಾಜನ ಜೊತೆ ಒಪ್ಪಂದ ಮಾಡಿಕೊಂಡ ರಾಣಿ ತನ್ನ ಪಾಲಿನ ರಾಜ್ಯಕ್ಕೆ ರಾಜನನ್ನಾಗಿ ಮಾಡಲು ತಾನು ಅಂದು ಬಿಟ್ಟು ಹೋದ ಮಗುವಿಗಾಗಿ ಶೋಧ ನಡೆಸುತ್ತಾಳೆ. ನೋಡು ನೋಡುತ್ತಿದ್ದಂತೆಯೇ ವಲ್ಲಿಯ ಜೀವವಾಗಿದ್ದ ಕೂಸು ಬಲವಂತವಾಗಿ ಅರಮನೆ ಸೇರುತ್ತದೆ. 

ಕೊನೆಯಲ್ಲಿ ಈ ಪ್ರಕರಣಕ್ಕೆ ನ್ಯಾಯ ಒದಗಿಸಲು ಸೃಷ್ಟಿಯಾದ ನ್ಯಾಯಧೀಶನ ಪಾತ್ರ ಬಹಳ ವಿಶೇಷವಾಗಿ ರೂಪಿತವಾಗಿದೆ. ಮೇಲ್ನೋಟಕ್ಕೆ ವಿದೂಷಕನಂತೆ ಗೋಚರಿಸುವ ಈತ ಆಳದಲ್ಲಿ ಚಿಂತನೆಗೆ ಹೆಚ್ಚುತ್ತಾನೆ. ಈ ಪಾತ್ರದಲ್ಲಿ ಭಿನ್ನ ಆಯಾಮವನ್ನು ಕಾಣಬಹುದಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಅಧಿಕಾರ ಹಣದ ಕಡೆಗೇ ವಾಲಿರುವ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಸರಿಪಡಿಸಲು ಮತ್ತೆ ಗಾಂಧಿಯೇ ಹುಟ್ಟಿಬರಬೇಕೇನೋ ಅಥವಾ ಅವರ ಚಿಂತನೆಗಳು ನಮ್ಮೊಳಗೆ ಮತ್ತೆ ಜೀವಂತಗೊಳ್ಳಬೇಕೇನೋ ಎಂಬ ಗಂಭೀರವಾದ ಚಿಂತನೆಗೆ ಒಡ್ಡುತ್ತದೆ ಈ ನ್ಯಾಯಾಧೀಶನ ಪಾತ್ರ. 

ರೋಹಿತ್‌ ಬೈಕಾಡಿಯವರ ಸಂಗೀತ ನೆನಪಿನಲ್ಲಿ ಉಳಿಯುವಂತದು.ª ಉತ್ತಮ ರಂಗಪರಿಕರ ಮತ್ತು ವಸ್ತ್ರ ವಿನ್ಯಾಸ ನಾಟಕಕ್ಕೆ ಪೂರಕವಾಗಿದ್ದವು.ಅರ್ಜುನ್‌ ಪೂಜಾರಿ, ಸುಕೇಶ ಶೆಟ್ಟಿ ಕೊರ್ಗಿ, ಶರಣ್ಯ, ರವಿ ಪೂಜಾರಿ, ವಿN°àಶ್‌ ತೆತ್ಕಾರ,ರವಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚೆಲ್ಲು ಚೆಲ್ಲಾಗಿ ಇರುವ ಹುಡುಗಿ ತಾಯಿಯಾಗಿ ಗಂಭೀರವಾಗುವ ವಲ್ಲಿ ಪಾತ್ರದಲ್ಲಿ ಶ್ವೇತಾ ಮಣಿಪಾಲ ಉತ್ತಮ ಪಾತ್ರ ನಿರ್ವಹಣೆ ಮಾಡಿದ್ದಾರೆ. 

ಸಚಿನ್‌ ಅಂಕೋಲ 

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.