ಬೆಜ್ಜ ಯಕ್ಷೋತ್ಸವದಲ್ಲಿ ಸಾಧಕ ಸಮ್ಮಾನ


Team Udayavani, Apr 7, 2017, 3:43 PM IST

007-KALA-3.jpg

ಮಂಜೇಶ್ವರ -ಹೊಸಂಗಡಿಗೆ ಸನಿಹದ ಹಳ್ಳಿ ಬೆಜ್ಜ. ಇಲ್ಲಿ ನಾಡಿನ ಹೆಮ್ಮೆಯ ಕಲೆ ಯಕ್ಷಗಾನ ಕಲಾ ಪ್ರದರ್ಶನ ನಡೆದು ಬಂದ ದಾರಿ ರೋಚಕವಾದದ್ದು.

ಎಂಬತ್ತರ ದಶಕದಲ್ಲಿ ಬೆಜ್ಜ ಪರಿಸರದ ಕಲಾ ಪ್ರೇಮಿಗಳು ತಮ್ಮಷ್ಟಕ್ಕೇ ವಾರದ ಕೂಟಗಳನ್ನು ನಡೆಸುತ್ತಿದ್ದರು. ಬಳಿಕ ಸ್ಥಳೀಯ ವೃತ್ತಿಕಲಾವಿದರನ್ನು ಕರೆಸಿ ನಾಟ್ಯ ತರಗತಿ ಆರಂಭಿಸಿದರು. 1992ರಿಂದ ಬೆಜ್ಜಗುತ್ತು ನಾರಾಯಣ ಹೆಗ್ಡೆ ಮನೆಯವರು ಮುಖ್ಯವಾಗಿ ಉದ್ಯಮಿ ರಾಮಚಂದ್ರ ಹೆಗ್ಡೆಯವರ ನೇತೃತ್ವದಲ್ಲಿ ವಿವಿಧ ಮೇಳಗಳ ಬಯಲಾಟಗಳನ್ನು ಆಯೋಜಿಸುತ್ತಾ ಬಂದರು. 2006ರಲ್ಲಿ ರಾಮಚಂದ್ರ ಹೆಗ್ಡೆ ಕೀರ್ತಿಶೇಷರಾದಾಗ ಅವರ ಸಹೋದರ ಮೋಹನ ಹೆಗ್ಡೆ ಕಲಾಪ್ರೇಮಿಗಳ ಸೇರುವಿಕೆಯೊಂದಿಗೆ ರಾಮಚಂದ್ರ ಹೆಗ್ಡೆ ವೇದಿಕೆ ಎಂಬ ಕಲಾ ವೇದಿಕೆಯನ್ನು ರಚಿಸಿ ಯಕ್ಷೋತ್ಸವವನ್ನು ಮುನ್ನಡೆಸುತ್ತಾ ಬಂದಿದ್ದಾರೆ. 2006ರಿಂದ ವರ್ಷಕ್ಕೊಬ್ಬ ಹಿರಿಯ ಕಲಾವಿದರಿಗೆ ನಿಧಿ ಸಹಿತ ಸಮ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ.

ಇದೀಗ ಎಪ್ರಿಲ್‌ 7, 2017ರಂದು ರಾತ್ರಿ ಬೆಜ್ಜ ಯಕ್ಷೋತ್ಸವದ ಬೆಳ್ಳಿ ಹಬ್ಬ ಜರಗಲಿದ್ದು, “ಬೆಳ್ಳಿ ಗೆಜ್ಜೆ’ ಸ್ಮತಿ ಸಂಚಿಕೆ ಬಿಡುಗಡೆಗೊಳ್ಳಲಿದೆ. ಸಾಲಿಗ್ರಾಮ ಮೇಳದವರಿಂದ “ಸತ್ಯ ಹರಿಶ್ಚಂದ್ರ ಲವಕುಶ’ ಯಕ್ಷಗಾನ ಬಯಲಾಟ ಜರಗಲಿದೆ. ಬಡಗುತಿಟ್ಟಿನ ಖ್ಯಾತ ಭಾಗವತ ಸುರೇಶ ಶೆಟ್ಟಿ ಅವರಿಗೆ ಬೆಳ್ಳಿಹಬ್ಬ ವಿಶೇಷ ಸಮ್ಮಾನ ಹಾಗೂ ತೆಂಕುತಿಟ್ಟಿನ ಹಿರಿಯ ಕಲಾವಿದ ಬೇತ ಕುಂಞ ಕುಲಾಲ್‌ ಅವರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನಗೊಳ್ಳಲಿದೆ.

ಸುರೇಶ ಶೆಟ್ಟಿ  ಶಂಕರನಾರಾಯಣ
ಸುಶ್ರಾವ್ಯ ಕಂಠದ ಭಾಗವತ ಸುರೇಶ ಶೆಟ್ಟಿ ಪೌರಾಣಿಕ -ಸಾಮಾಜಿಕ ಎರಡೂ ಬಗೆಯ ಯಕ್ಷಗಾನ ಪ್ರಸಂಗಗಳ ಭಾಗವತಿಕೆಯಲ್ಲಿ ನಿಪುಣರು. ಕುಂದಾಪುರ ತಾಲೂಕಿನ ಹಿಲಿಯಾಣದವರಾದ ಶೆಟ್ಟರು ಕಾಳಿಂಗ ನಾವಡರ ಭಾಗವತಿಕೆಯಿಂದ ಪ್ರಭಾವಿತರಾಗಿ ಯಕ್ಷಗಾನದತ್ತ ಸೆಳೆಯಲ್ಪಟ್ಟರು. ಕೋಟದ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ಭಾಗವತ ಕೆ.ಪಿ. ಹೆಗ್ಡೆಯವರಲ್ಲಿ ಭಾಗವತಿಕೆ ಕಲಿತರು. ಕಮಲಶಿಲೆ, ಹಾಲಾಡಿ, ಸಾಲಿಗ್ರಾಮ, ಪೆರ್ಡೂರು, ಮುಂತಾದ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ ಶೆಟ್ಟರು ಪೆರ್ಡೂರು ಮೇಳವೊಂದರಲ್ಲೇ ಸುಮಾರು 20 ವರ್ಷ ಭಾಗವತರಾಗಿ ಮೆರೆದವರು. 

ಬೇತ ಕುಂಞ ಕುಲಾಲ್‌
73ರ ಹರೆಯದ ಬೇತ ಕುಂಞ ಕುಲಾಲ್‌ ತೆಂಕುತಿಟ್ಟಿನ  ಪ್ರಾತಿನಿಧಿಕ ಕಲಾವಿದ ರಲ್ಲಿ ಓರ್ವರು. ಯಾವುದೇ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುವ ವಿದ್ಯೆ ಇವರಿಗೆ ಕರತಲಾಮಲಕ. ಸಾಂಪ್ರದಾಯಿಕ ವೇಷಗಳ ಬಗ್ಗೆ ನಿಖರ ಮಾಹಿತಿ ಹೊಂದಿರುವ ಬೇತ ಕುಂಞ ಹಲವಾರು ಕಮ್ಮಟಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗ ವಹಿಸಿದ್ದಾರೆ. ಸುಂಕದಕಟ್ಟೆ ಮೇಳದಲ್ಲಿ ಸುದೀರ್ಘ‌ ಕಾಲ ಪೀಠಿಕೆ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. 

ಕುರಿಯ ವಿಠಲ ಶಾಸ್ತ್ರಿಗಳಿಂದ ಯಕ್ಷಗಾನ ತರಬೇತಿಯನ್ನು ಪಡೆದು ರಂಗ ಪ್ರವೇಶಿಸಿ ಹಂತ ಹಂತವಾಗಿ ಬೆಳೆದು ಬಂದವರು. ಧರ್ಮಸ್ಥಳ, ಮೂಲ್ಕಿ, ಸೌಕೂರು, ಕುತ್ಯಾಳ, ಸುಬ್ರಹ್ಮಣ್ಯ, ಮೇಳಗಳ ತಿರುಗಾಟ ನಡೆಸಿ 33 ವರ್ಷಗಳ ಕಾಲ ಸುಂಕದಕಟ್ಟೆ ಮೇಳವೊಂದರಲ್ಲೇ ದುಡಿದಿದ್ದಾರೆ.

ಯೋಗೀಶ ರಾವ್‌ ಚಿಗುರುಪಾದೆ

ಟಾಪ್ ನ್ಯೂಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.