ಯಕ್ಷ – ನಾಟ್ಯ ಶೈಲಿಯಲ್ಲಿ ಪುಣ್ಯಕೋಟಿ ನೃತ್ಯರೂಪಕ 


Team Udayavani, Jan 25, 2019, 12:30 AM IST

w-4.jpg

ಇನ್ನಂಜೆ ಪರಿಸರದ ವಿದ್ಯಾರ್ಥಿಗಳು ಇತ್ತೀಚೆಗೆ ಎಸ್‌.ವಿ.ಎಚ್‌. ಕನ್ನಡ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವದಂದು ಕೆ.ಜಿ. ಕೃಷ್ಣ ನಿರ್ದೇಶನದಲ್ಲಿ ಯಕ್ಷಗಾನ ಶೈಲಿಯಲ್ಲಿ ಪುಣ್ಯಕೋಟಿ ಎಂಬ ನೃತ್ಯ ರೂಪಕ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಅಚ್ಚುಕಟ್ಟಾದ ವೇಷಭೂಷಣ, ಪರಿಪೂರ್ಣ ರಂಗನಡೆ  ಈ ಪ್ರದರ್ಶನದ ಹೆಚ್ಚುಗಾರಿಕೆಯಾಗಿತ್ತು. ಭಾವಪೂರ್ಣ ಅಭಿನಯದ ಮೂಲಕ ಮತ್ತೂಮ್ಮೆ ಪ್ರೇಕ್ಷಕರೆಲ್ಲರೂ ಪುಣ್ಯಕೋಟಿಗಾಗಿ, ಕರುವಿಗಾಗಿ ಕಣ್ಣಂಚಿನಲ್ಲಿ ನೀರು ತರಿಸಿದ ಪ್ರದರ್ಶನ ಇದಾಗಿತ್ತು. ಪುಣ್ಯಕೋಟಿಯ ಹಾಡಿನ ಪ್ರತಿಯೊಂದು ಸಾಲುಗಳಿಗೂ ತಮ್ಮ ಭಾವನೆಗಳನ್ನು ತುಂಬಿ ಅರ್ಥಪೂರ್ಣವಾಗಿ ಪ್ರದರ್ಶಿಸಿ ಮುಕ್ತ ಪ್ರಶಂಸೆಗೆ ವಿದ್ಯಾರ್ಥಿಗಳು ಪಾತ್ರರಾದರು. 

ಸತ್ಯನಿಷ್ಠೆ, ಧರ್ಮನಿಷ್ಠೆಯನ್ನೇ ತನ್ನ ಜೀವಾಳ ವಾಗಿಸಿಕೊಂಡ ಗೋವನ್ನು ಆಧರಿಸಿಕೊಂಡ ಕಥೆ ಪುಣ್ಯಕೋಟಿಯದ್ದು. ಮನೋಜ್ಞ ಭಾಗವತಿಕೆಗೆ ಸರಿಯಾದ ಭಾವ-ಅನುಭಾವ, ತಾಳಕ್ಕೆ ತಕ್ಕಂತೆ ಹೆಜ್ಜೆ-ಗೆಜ್ಜೆ, ರಂಗಕ್ಕೆ ತಕ್ಕುದಾದ ದೃಶ್ಯ-ಶ್ರಾವ್ಯಗಳು ಸಮ್ಮಿಲನಗೊಂಡು ಇಡೀ ನೃತ್ಯರೂಪಕ ಅದ್ಭುತವಾಗಿ ಮೂಡಿ ಮಂತ್ರಮುಗ್ಧಗೊಳಿಸಿದ ಪ್ರದರ್ಶನವಾಯಿತು. ಪುಣ್ಯಕೋಟಿ ಹಾಗೂ ಹುಲಿಯ ಪಾತ್ರಗಳ ಅದ್ಭುತ ನಟನೆ ಇಡೀ ರೂಪಕದ ಅಂದವನ್ನು ಮತ್ತಷ್ಟು ಹೆಚ್ಚಿಸಿತು. ಗೊಲ್ಲನ ಪಾತ್ರಧಾರಿ ಕುಮಾರಿ ನಿರೀಕ್ಷಾ ಅವರು ದನ-ಕರುಗಳೊಂದಿಗೆ ತೋರಿದ ಮಮತೆಯ ಅವಿನಾಭಾವ ಸಂಬಂಧ ಮೂಕವಿಸ್ಮಿತರನ್ನಾಗಿಸಿತು. 

ಕರುವಿನ ಪಾತ್ರ ನಿರ್ವಹಿಸಿದ ಕುಮಾರಿ ಅಮೃತಾ, ತಾಯಿ ಪುಣ್ಯಕೋಟಿಯೊಂದಿಗೆ ಅಮ್ಮಾ ನೀನು ಸಾಯಲೇಕೆ? ನನ್ನ ತಬ್ಬಲಿ ಮಾಡಲೇಕೆ? ಎಂಬ ದುಃಖಭರಿತ ಹಾಡಿನ ಸಾಲಿಗೆ ಭಾವಪೂರ್ಣವಾಗಿ ಅಭಿನಯಿಸಿ, ಎಲ್ಲರ ಮಾತೃಹೃದಯ ಕರಗುವಂತೆ ಮಾಡಿತು. ಹುಲಿಯ ಪಾತ್ರದಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ನಟರಾಜ ಉಪಾಧ್ಯ ಇವರು ಪಾತ್ರಕ್ಕೆ ತಕ್ಕುದಾಗಿ ಕ್ರೌರ್ಯ, ರೌದ್ರತೆಯನ್ನು ಅದ್ಭುತವಾಗಿ ಅಭಿನಯಿಸಿದರು. ಹಸಿದ ವೇಳೆಗೆ ಸಿಕ್ಕಿದೊಡವೆಯನ್ನು ಹಿಡಿಯುವ ರೀತಿ, ಪುಣ್ಯಕೋಟಿಯ ಭರವಸೆಯ ಮಾತುಗಳಿಗೆ ಒಪ್ಪಿ ಕಳುಹಿಸಿಕೊಡುವಾಗ ಅಂತಹ ಘೋರ ಪ್ರಾಣಿ ಹುಲಿಯಲ್ಲಿ ಕಂಡುಬಂದ ದಯಾಪರತೆ ನಂತರ ಕೊನೆಗೆ ಕೊಟ್ಟ ಮಾತಿಗೆ ತಪ್ಪದೆ ಮರಳಿದ, ಸತ್ಯಕ್ಕಾಗಿ ಪ್ರಾಣಾರ್ಪಣಕ್ಕೂ ಹಿಂಜರಿಯದ ಧೇನುವಿಗಾಗಿ ಹುಲಿ ಪ್ರಾಣ ತ್ಯಾಗ ಮಾಡುವ ಕರುಣಾದ್ರ ಸ್ಥಿತಿ ಭಾವಪರವಶರಾಗುವಂತೆ ಮಾಡಿತು. 

ಇಡೀ ರೂಪಕದ ಕೇಂದ್ರ ಬಿಂದುವಾದ ಪುಣ್ಯಕೋಟಿಯ ಪಾತ್ರಕ್ಕೆ ಜೀವ ತುಂಬಿದ ವಿದ್ಯಾರ್ಥಿನಿ ಕು| ಪದ್ಮಶ್ರೀಯ ಭಾವಪೂರ್ಣ ಅಭಿನಯ, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ತನ್ನ ಕರುಳ ಕುಡಿಯನ್ನು ತಬ್ಬಲಿಯನ್ನಾಗಿಸಿ ಹುಲಿಗೆ ಆಹಾರವಾಗಲು ತೆರಳುವ ಸನ್ನಿವೇಶ ಸಹ ಕಲಾವಿದೆಯರೂ, ಇಡೀ ಸಭೆಯೂ ಕಣ್ಣೀರು ಸುರಿಸುವಂತಾಯಿತು. 

ಕರು ಮತ್ತು ಪುಣ್ಯಕೋಟಿಯ ಸಂಭಾಷಣೆ, ಮಗುವಿನ ತಬ್ಬಲಿತನವನ್ನು ಅರ್ಥೈಸಿ ಅಕ್ಕ-ತಂಗಿ ಧೇನುಗಳಿಗೆ ಕಂದನ ಹೊಣೆಯನ್ನು ಹೊರಿಸಿ, ತಾನು ಹುಲಿಯ ಬಾಯಿಗೆ ಆಹಾರವಾಗಿ ಹೊರಡುವ ಗಂಭೀರತೆ ಯಾರನ್ನೂ ಅಳಿಸುವಂತದಾಗಿತ್ತು. ಒಟ್ಟಿನಲ್ಲಿ ಈ ರೂಪಕ ಸಹೃದಯರ ಮನಮಿಡಿಯುವಂತೆ ಮಾಡಿತು. ಕೆ.ಜೆ. ಸಹೋದರರ ಹಿಮ್ಮೇಳ ಸಹಕಾರವಿತ್ತು. 

ಪ್ರದೀತಾ ಶ್ರೀಕಾಂತ ಆಚಾರ್ಯ 

ಟಾಪ್ ನ್ಯೂಸ್

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.