ದೀನ ದುರ್ಬಲರಿಗಾಗಿ ಕುಣಿದ ರಾಧೆ-ಕೃಷ್ಣ-ಗೋಪಿಕೆಯರು

ನೃತ್ಯನಿಕೇತನ ಕೊಡವೂರು ಪ್ರಸ್ತುತಿ

Team Udayavani, Sep 20, 2019, 5:00 AM IST

t-16

ಆತ್ಮ ಸಂತೋಷಕ್ಕಾಗಿ, ಕೃಷ್ಣ ಮೇಲಿನ ಭಕ್ತಿಯಿಂದ/ಪ್ರೀತಿಯಿಂದ, ಮನರಂಜನೆಯ ಜೊತೆಗೆ ಸಾಮಾಜಿಕ ಕಳಕಳಿಯ ಸಂದೇಶ ನೀಡುತ್ತಾ ಸಂಗ್ರಹವಾದ ಹಣವನ್ನು ಆರ್ಥಿಕವಾಗಿ ಹಿಂದುಳಿದವರಿಗೆ, ವೈದ್ಯಕೀಯ ವೆಚ್ಚ, ಶಿಕ್ಷಣ, ಮನೆ ನಿರ್ಮಾಣದಂತಹ ಸಮಾಜಮುಖೀ ಕಾರ್ಯಗಳಿಗಾಗಿ ವೇಷ ಹಾಕುವವರಿದ್ದಾರೆ.

ಶ್ರೀ ಕೃಷ್ಣಜನ್ಮಾಷ್ಟಮಿಗೆ ವೇಷ ಹಾಕುವುದು ಈಗೀಗ ಒಂದು ಹೊಸ ಆಯಾಮ ಪಡೆದುಕೊಂಡಿದೆ. ಹಲವರು ಆತ್ಮ ಸಂತೋಷಕ್ಕಾಗಿ, ಮತ್ತೆ ಕೆಲವರು ಕೃಷ್ಣ ಮೇಲಿನ ಭಕ್ತಿಯಿಂದ/ಪ್ರೀತಿಯಿಂದ, ಇನ್ನು ಕೆಲವರು ಮನರಂಜನೆಯ ಜೊತೆಗೆ ಸಾಮಾಜಿಕ ಕಳಕಳಿಯ ಸಂದೇಶ ನೀಡುತ್ತಾ ಸಂಗ್ರಹವಾದ ಹಣವನ್ನು ಆರ್ಥಿಕವಾಗಿ ಹಿಂದುಳಿದವರಿಗೆ, ವೈದ್ಯಕೀಯ ವೆಚ್ಚ-ಶಿಕ್ಷಣ, ಮನೆ ನಿರ್ಮಾಣದಂತಹ ಸಮಾಜಮುಖೀ ಕಾರ್ಯಗಳಿಗಾಗಿ ವೇಷ ಹಾಕುವವರಿದ್ದಾರೆ. ಈ ಪ್ರಯತ್ನಕ್ಕೆ ಪೂರಕವಾಗಿ ಸಮೂಹ ಸಂಚಲನವೊಂದನ್ನು ಈ ಬಾರಿಯ ಶ್ರೀ ಕೃಷ್ಣ ಲೀಲೋತ್ಸವದಂದು ನೃತ್ಯನಿಕೇತನ ಕೊಡವೂರು ಇದರ ವಿದ್ಯಾರ್ಥಿನಿಯರು ಮಾಡಿದ್ದಾರೆ.

ಆಯ್ದ ಮನೆಗಳಲ್ಲಿ ರಾಧಾಕೃಷ್ಣ ನೃತ್ಯ ಪ್ರದರ್ಶನ ನೀಡಿ ಸಂಗ್ರಹವಾದ ಮೊತ್ತವನ್ನು ಸಮಾಜದ ದೀನ-ದುರ್ಬಲರಿಗೆ ಜಾತಿ-ಮತ-ಧರ್ಮ ಬೇಧವಿಲ್ಲದೆ ಹಂಚುವ ಪ್ರಯತ್ನ ಪ್ರಶಂಸನೀಯ. ಸಂಗ್ರಹಿಸಿದ ಹಣವನ್ನು ವಿತರಿಸುವ ಸಮಾರಂಭ ಇತ್ತೀಚೆಗೆ ನಡೆದು ಈ ಸಂದರ್ಭದಲ್ಲಿ ಕುಣಿದಾಡೋ ಕೃಷ್ಣ ಎನ್ನುವ ನೃತ್ಯ ಕಾರ್ಯಕ್ರಮ ನೀಡಿದರು. ಕೃಷ್ಣನಿಗರ್ಪಿತವಾದ ಮೊದಲ ನೃತ್ಯ ಕುಸುಮದಲ್ಲಿ ಮುನಿಸಿಕೊಂಡ ರಾಧೆಯನ್ನು ಒಲಿಸಿಕೊಳ್ಳಲು ಕೃಷ್ಣನು ಹೆಣೆದ ಮಾಯಾಜಾಲ ಪರಿಣಾಮಕಾರಿಯಾಗಿ ಅಭಿವ್ಯಕ್ತವಾಯಿತು. ರಾಧೆಯ ಸಮಕ್ಷಮ ಇತರ ಗೋಪಿಕೆಯರೊಂದಿಗೆ ಸರಸ-ಸಲ್ಲಾಪ, ಅವರೊಂದಿಗೆ ಒಲವಿನ ಒಡನಾಟ ಕಂಡು ರಾಧೆ ಹುಸಿಕೋಪದಿಂದ ಕೃಷ್ಣನನ್ನು ನಿರ್ಲಕ್ಷಿಸುವುದು, ಕೃಷ್ಣನ ರಮಿಸುವಿಕೆ ಇತ್ಯಾದಿಗಳನ್ನು ಕಲಾವಿದೆಯರು ಸೊಗಸಾಗಿ ವ್ಯಕ್ತಪಡಿಸಿದರು. ಮುಂದಿನ ನೃತ್ಯದಲ್ಲಿ ಕಾರಿರುಳಿನಲ್ಲಿ ರಾಧೆಯನ್ನು ಭಯಭೀತಳನ್ನಾಗಿಸಿ ತನ್ಮೂಲಕ ಆಕೆಯ ಸಾಮೀಪ್ಯ ಸಾಧಿಸಿ, ಕತ್ತಲೆಗೆ ಹೆದರಿದಂತೆ ನಟಿಸಿ ಅಮ್ಮ ಯಶೋದಾಳನ್ನು ದೀಪ ತರುವಂತೆ ಬಿನ್ನೆçಸುವ, ತನ್ನ ಸಲಹೆಯಂತೆ ಅಡಗಿ ಕುಳಿತ ರಾಧೆಯನ್ನು ಯಶೋದೆಗೆ ತೋರಿಸಿ ಆಕೆಯನ್ನು ಮುಜುಗರಕ್ಕೀಡು ಮಾಡುವ, ತಾಯಿಗೆ ತನ್ನ ಹಾಗೂ ರಾಧೆಯ ಪ್ರಣಯದಾಟ ಪರಿಚಯಿಸುವ ಮುಂತಾದ ತುಂಟಾಟಗಳನ್ನು ವಿ|ಅನಘಾಶ್ರೀ ಪ್ರಸ್ತುತ ಪಡಿಸಿದರು.

ಗೋಪಿಕೆಯರ ವಸ್ತ್ರಾಪಹರಣ, ಅವರೊಂದಿಗೆ ಕಣ್ಣಮುಚ್ಚಾಲೆಯಾಟ, ವೇಣಿಯೊಂದಿಗೆ ವೇಣುನಿನಾದ ಮುಂತಾದ ಕೃಷ್ಣಲೀಲೆಗಳನ್ನು ಸುರಭಿ ಸುಧೀರ್‌ ಅಭಿನಯಪೂರ್ವಕ ನೃತ್ಯ ಸಂಚಲನದೊಂದಿಗೆ ಸಾಕಾರಗೊಳಿಸಿದರು. ಬಾಹ್ಯ ಚಕ್ಷುಗಳಿಲ್ಲದಿದ್ದರೂ ಅಂತಃಚಕ್ಷುವಿನಿಂದ ಕೃಷ್ಣನನ್ನು ಆರಾಧಿಸುತ್ತಿದ್ದ ಸೂರದಾಸನಿಗೆ ಶ್ರೀಕೃಷ್ಣನು ತನ್ನ ಸುಂದರ ರೂಪವನ್ನು ನೋಡಲು ದಿವ್ಯ ಚಕ್ಷುಗಳನ್ನಿತ್ತು ಮತ್ತೆ ಆತನ ಕೋರಿಕೆಯಂತೆ ಹುಟ್ಟು ಕುರುಡನನ್ನಾಗಿಸಿದ ದೃಶ್ಯಾವಳಿಗಳು ಅಂತಃಕರಣ ಕಲಕುವಂತೆ ಮೂಡಿ ಬಂದವು. ಕೊನೆಯ ನೃತ್ಯದಲ್ಲಿ ಗೋಪಿಕೆಯರ ಮನದಿಂಗಿತವನ್ನು ಪೂರೈಸುವ ವಿವಿಧ ರೂಪ-ಶೈಲಿಗಳಲ್ಲಿ ಪ್ರಕಟವಾಗುವ ತುಂಟ-ನಂಟ ಕೃಷ್ಣನನ್ನು ನಯನಮನೋಹರವಾಗಿ ಚಿತ್ರಿಸಿದ ನೃತ್ಯ ಕಲಾವಿದೆಯರು ಅಭಿನಂದನಾರ್ಹರು.

ಜನನಿ ಭಾಸ್ಕರ ಕೊಡವೂರು

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.