ನೆನಪಿನಲ್ಲುಳಿಯುವ ರಾಜಾ ಯಯಾತಿ-ಗದಾಯುದ್ಧ-ರಕ್ತರಾತ್ರಿ


Team Udayavani, Mar 29, 2019, 6:00 AM IST

3

ರಂಗಸ್ಥಳ ಮಂಗಳೂರು ಇದರ ಸಂಯೋಜನೆಯ ತೆಂಕು ಬಡಗಿನ ಕೂಡಾಟ ಮಂಗಳೂರು ಪುರಭವನದಲ್ಲಿ ಜರುಗಿತು. ಪ್ರಸಂಗ “ರಾಜಾ ಯಯಾತಿ-ಗದಾಯುದ್ಧ-ರಕ್ತರಾತ್ರಿ’. ಕೆಲ ದಿನಗಳ‌ ಹಿಂದೆ ತನ್ನ ಭೀಷ್ಮನಿಗೆ ಸಾಳ್ವನಾದ ಹುಡಗೋಡು ಚಂದ್ರಹಾಸರು ಕಣ್ಣೆದುರೇ ರಂಗದಲ್ಲಿ ಕುಸಿದು ಸಾವನ್ನಪ್ಪಿದ ನೋವು ಮಾಸುವ ಮೊದಲೇ ಮಂಗಳೂರಿನ ತನ್ನ ಅಭಿಮಾನಿಗಳಿಗಾಗಿಯೇ ಆಗಮಿಸಿ ಯಯಾತಿ ಪಾತ್ರ ಮಾಡಿದ ಬಳ್ಕೂರರು ಅಮೋಘ ಅಭಿನಯ ನೀಡಿ ರಂಜಿಸಿದರು.

ವೃಷಪರ್ವನ ಕುವರಿ ಶರ್ಮಿಷ್ಠೆ ವನವಿಹಾರಕ್ಕೆಂದು ಗುರುಪುತ್ರಿ ದೇವಯಾನಿಯೊಡನೆ ಬಂದು ನೀರಾಟವಾಡಿ ಮೇಲೆ ಬಂದಾಗ ಪ್ರಮಾದವಶಾತ್‌ ಉಟ್ಟ ಸೀರೆ ಅದಲು ಬದಲಾದುದಕೆ ದೇವಯಾನಿಯನ್ನು ಬಾವಿಗೆ ತಳ್ಳಿದಾಗ ಕಾಪಾಡಿದ ಯಯಾತಿಯೊಂದಿಗೆ ಪ್ರೇಮಾಂಕುರವಾಗಿ ಮದುವೆಯಾಗುತ್ತದೆ. ಮಾಡಿದ ತಪ್ಪಿಗೆ ಶರ್ಮಿಷ್ಠೆ ಜೀವನ ಪರ್ಯಂತ ಆಕೆಯ ದಾಸಿಯಾಗುತ್ತಾಳೆ.ಶರ್ಮಿಷ್ಠೆಗೂ ಮನಸೋತ ಯಯಾತಿ ಆಕೆಯಲ್ಲೂ ಮಕ್ಕಳನ್ನು ಪಡೆಯುತ್ತಾನೆ. ಆ ಸಂದರ್ಭದಲ್ಲಿ ಇಬ್ಬರು ಹೆಂಡಿರ ಮುದ್ಧಿನ ಗಂಡನಾಗಿ ಬಳ್ಕೂರರ ಅಭಿನಯ ನೆನಪಲ್ಲುಳಿಯುವಂತೆಯೂ, ದೇವಯಾನಿ,ಶರ್ಮಿಷ್ಠೆಯರಾಗಿ ನೀಲ್ಕೋಡು,ರಾಜೀವರ ಅಭಿನಯ ಶ್ರೇಷ್ಠಮಟ್ಟದ್ದಾಗಿತ್ತು. ವೃಷಪರ್ವನಾಗಿ ಉಪ್ಪುಂದ ನಾಗೇಂದ್ರ, ಶುಕ್ರಾಚಾರ್ಯನಾಗಿ ಪ್ರೊ| ಶಶಾಂಕ್‌ ಅಮೋಘ ಅಭಿನಯ ನೀಡಿದರು.

ಒಂದೆಡೆ ತನ್ನ ತಂದೆಯ ಅಗಲುವಿಕೆಯ ನೋವು, ಮತ್ತೂಂದೆಡೆ ಹುಡಗೋಡು ಚಂದ್ರಹಾಸರ ಸಾವಿನ ನೋವು , ಮರುದಿನವೇ ತಂದೆಯವರ ವೈಕುಂಠ ಸಮರಾಧನೆ ಇದ್ದರೂ ಈ ಎಲ್ಲಾ ಸಂಕಟಗಳ ಮಧ್ಯೆಯೂ ಜಲವಳ್ಳಿಯವರ ಆ ದಿನದ ಗದಾಯುದ್ಧದ ಕೌರವನ ಅಭಿನಯ ಉತ್ತಮವಾಗಿ ಮೂಡಿಬಂತು. ತಂದೆಯವರು ( ದೃತರಾಷ್ಟ್ರ ) ಹೇಗಿದ್ದಾರೆಂದು ಕೌರವ ಸಂಜಯನಲ್ಲಿ ಕೇಳುವ ಸನ್ನಿವೇಷದಲ್ಲಿ ತನ್ನ ತಂದೆಯ ನೆನಪಾಗಿ ಗಳಗಳನೆ ಅತ್ತು ಸಾವರಿಸಲು ಕನಿಷ್ಠ ಎರಡು ನಿಮಿಷಗಳು ಬೇಕಾಗಿತ್ತು.

73ರ ಹರೆಯದ ಕೊಳ್ತಿಗೆ ನಾರಾಯಣ ಗೌಡರ ಗದಾಯುದ್ಧದ ಭೀಮ ಜಲವಳ್ಳಿಯವರ ಕೌರವನಿಗೆ ಸರಿಮಿಗಿಲಾಗಿ ಅಮೋಘ ಅಭಿನಯದಿಂದ ಮಂತ್ರಮುಗ್ಧರನ್ನಾಗಿಸಿದರು.ಗಂಡಿಮಜಲು ಗೋಪಾಲ ಭಟ್ಟರ ಅಂದಿನ ರಕ್ತರಾತ್ರಿಯ ಅಶ್ವತ್ಥಾಮ ಮೈಮನ ರೋಮಾಂಚನಗೊಳಿಸಿತು. ಇನ್ನುಳಿದಂತೆ ಅಮ್ಮುಂಜೆ,ಚಿಟ್ಟಾಣಿ,ಪೆರುವೊಡಿ,ಪಾಟಾಳಿ,ಇನ್ನಿತರರು ರಂಗದಲ್ಲಿ ಹುಡಿ ಹಾರಿಸಿದರು.ಹಿಲ್ಲೂರು, ಹೊಸಮೂಲೆ, ಬಾಳ್ಕಲ…, ಯನ್‌.ಜಿ., ದೇಲಂತಮಜಲು, ಉಳಿತ್ತಾಯ, ಸಮರ್ಥ ಹಿಮ್ಮೇಳದೊಂದಿಗೆ ಒಂದು ಒಳ್ಳೆಯ ಯಕ್ಷಗಾನ ಚಿರಕಾಲ ನೆನಪಲ್ಲುಳಿಯುವಂತೆ ಮೂಡಿಬಂತು.

ಸದಾಶಿವ ನೆಲ್ಲಿಮಾರ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.