ಭಾಸ್ಕರ ಜೋಶಿಗೆ ರಾಮಚಂದ್ರ ಭಟ್ಟ ಸಂಸ್ಮರಣಾ ಪ್ರಶಸ್ತಿ
Team Udayavani, Nov 29, 2019, 4:39 AM IST
ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀ ವೇಷಧಾರಿ ಭಾಸ್ಕರ ಜೋಶಿ ಶಿರಳಗಿ ಅವರು ಈ ಬಾರಿಯ ಅರೆಶಿರೂರು ದಿ|ರಾಮಚಂದ್ರ ಭಟ್ಟ ಸಂಸ್ಮರಣಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ನ. 30 ರಂದು ಕುಂದಾಪುರದ ಯಳಜಿತ ಗ್ರಾಮದ ಹೆರಗುಡಿ ಶ್ರೀ ಬಲಮುರಿ ಸಿದ್ಧಿವಿನಾಯಕ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಲಿದೆ.
ಭಾಸ್ಕರ ಜೋಶಿ ಅವರು ಉತ್ತರಕನ್ನಡದ ಶಿರಳಗಿಯವರು. ಹದಿನೈದನೆಯ ವಯಸ್ಸಿನಲ್ಲಿ ಯಕ್ಷಗಾನದತ್ತ ಆಕರ್ಷಿತರಾಗಿ ಕೊಳಗಿ ಮೇಳದಲ್ಲಿ ರಂಗ ಪ್ರವೇಶಿಸಿ, ಕೊಳಗಿ ಅನಂತ ಹೆಗಡೆಯವರಿಂದ ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಂಡು, ಮುಂದೆ ಹೊಸ್ತೋಟ ಮಂಜುನಾಥ ಭಾಗವತರ ಮಾರ್ಗದರ್ಶನದಲ್ಲಿ ಪಳಗಿದರು. ಆನಂತರ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಅಧ್ಯಯನ ಮಾಡಿ ಕಾರಂತರ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಗಜಾನನ ಹೆಗಡೆ ಕೆರಮನೆಯವರ ಸಹಕಾರದಿಂದ ಸ್ತ್ರೀವೇಷಧಾರಿಯಾಗಿ ಮಿಂಚಿದರು.
ಇಡಗುಂಜಿ, ಅಮೃತೇಶ್ವರಿ, ಶಿರಸಿ, ಸಾಲಿಗ್ರಾಮ, ಪೆರ್ಡೂರು, ಬಚ್ಚಗಾರು ಮೇಳಗಳಲ್ಲಿ ಗೆಜ್ಜೆಕಟ್ಟಿ ನಲವತ್ತು ವರ್ಷ ರಂಜಿಸಿದರು.ಅವರ ದಾಕ್ಷಾಯಣಿ, ಅಂಬೆ, ಸುಭದ್ರೆ, ಶಾರದೆ, ಸೀತೆ, ದ್ರೌಪದಿ, ವಿಷಯೆ, ನಾಗಶ್ರೀ, ಚಿತ್ರಾವತಿ ಮೊದಲಾದ ಪಾತ್ರಗಳು ಜನಮಾನಸದಲ್ಲಿ ಚಿರಾಯುವಾಗಿವೆ.
ವಿಷ್ಣು ಭಟ್ಟ ಹೊಸ್ಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’