ಭರತನಾಟ್ಯದಲ್ಲಿ ರಾಮಾಯಣದ ಘಟನಾವಳಿ 


Team Udayavani, May 18, 2018, 6:00 AM IST

k-8.jpg

ಪುತ್ತೂರಿನ ಜನತೆಗೆ ಕಲೆಯ ರಸದೌತಣ ನೀಡುತ್ತಾ ಬಂದಿರುವ ಸಂಸ್ಥೆಗಳಲ್ಲಿ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ(ರಿ.)ಯೂ ಒಂದು. ಈ ಸಂಸ್ಥೆಯು “ನೃತ್ಯಾಂತರಂಗ’ ಎಂಬ ಸರಣಿ ಕಾರ್ಯಕ್ರಮದ ಮೂಲಕ ಹಲವಾರು ನೃತ್ಯಪಟುಗಳಿಗೆ ಅವಕಾಶವನ್ನು ನೀಡುತ್ತಾ ಬಂದಿದೆ. ಈ ಕಾರ್ಯಕ್ರಮದ 42 ನೇ ಸರಣಿಯಲ್ಲಿ ರಾಮಾಯಣದ ಸನ್ನಿವೇಶಗಳ ರಸದೌತಣವನ್ನು ವಿ| ಬಿ. ದೀಪಕ್‌ ಕುಮಾರ್‌ ಹಾಗೂ ಅವರ ಪತ್ನಿ ಪ್ರೀತಿಕಲಾ ಉಣಬಡಿಸಿದ್ದಾರೆ.

    ನೃತ್ಯವು ವಿಶ್ವಾಮಿತ್ರ ಮಹರ್ಷಿಗಳ ಹೋಮಕ್ಕೆ ಯಾವುದೇ ಲೋಪ ಉಂಟಾಗದಂತೆ ರಾಮ ಕಾವಲಾಗಿ ನಿಂತು, ಅಹಲೆಗೆ ಜೀವ ತುಂಬುವ ಸನ್ನಿವೇಶದೊಂದಿಗೆ ಪ್ರಾರಂಭವಾಯಿತು. ಇಲ್ಲಿ ರಾಮನ ಶಾಂತತೆ, ಅಹಲೆಯ ಭಕ್ತಿಯನ್ನು ತಮ್ಮ ಅಭಿನಯದ ಮೂಲಕ ತೋರಿಸಿದರು.

ಸೀತಾಕಲ್ಯಾಣದಲ್ಲಿ ರಾಮನು ಶಿವಧನುಸ್ಸನ್ನು ಮುರಿದು ಸೀತೆಯನ್ನು ವಿವಾಹವಾದ ಕಥೆಯನ್ನು ಅಭಿನಯಿಸಿದರು. ನಂತರ ಮಂಥರೆಯು ಕೈಕೇಯಿಗೆ ರಾಮನನ್ನು ವನವಾಸಕ್ಕೆ ಕಳುಹಿಸಿ, ಭರತನಿಗೆ ಪಟ್ಟಾಭಿಷೇಕ ಮಾಡುವ ಮೋಸದ ಸಲಹೆ ನೀಡಿ ಆಕೆ ಈ ವರವನ್ನು ದಶರಥನಲ್ಲಿ ಪಡೆದ ರೀತಿ ಮತ್ತು ದಶರಥನ ದುಃಖವನ್ನು ಕಣ್ತುಂಬಿ ಬರುವಂತೆ ಅಭಿನಯಿಸಿದರು.

ಚಿತ್ರಕೂಟದ ಕಥೆಯನ್ನು ಭರತ ರಾಮನಿಗೆ ದಶರಥನ ಮರಣದ ವಾರ್ತೆಯನ್ನು ತಿಳಿಸಿ ರಾಜ್ಯಕ್ಕೆ ಬಾ ಎಂದು ಕರೆಯುವುದು, ಅದರಲ್ಲಿ ಸಫ‌ಲನಾಗದೆ ರಾಮನ ಪಾದುಕೆಯನ್ನು ತೆಗೆದುಕೊಂಡು ಹೋಗುವ ಭಾತೃತ್ವದ ಸನ್ನಿವೇಶವನ್ನು ಸೊಗಸಾಗಿ ಮೂಡಿಬಂತು.  ಕೊನೆಯಲ್ಲಿ ಸೀತಾಪಹರಣ, ಲಂಕಾದಹನ, ರಾವಣನ ವಿನಾಶವನ್ನು ಮತ್ತು ಈ ವಿನಾಶ ಕಾರ್ಯದಲ್ಲಿ ಹನುಮಂತ ಹಾಗೂ ಅವನ ಸೈನ್ಯದ ಸಹಾಯ ಹಸ್ತವನ್ನು ಅಚ್ಚುಕಟ್ಟಾಗಿ ಅಭಿನಯಿಸಿ ಮನಗೆದ್ದರು. 

ಈ ಎಲ್ಲಾ ಸನ್ನಿವೇಶಗಳ ನಡುವೆ ಜತಿಗಳೂ ಒಳಗೊಂಡಿದ್ದು ಎಲ್ಲಿಯೂ ಸುಸ್ತು ಅಥವಾ ಅರೆಮಂಡಿ ಕಡಿಮೆಯಾದದ್ದು ಕಂಡುಬಂದಿಲ್ಲ. ಒಟ್ಟಾರೆಯಾಗಿ ಕಥೆ ಹಾಗೂ ಅಭಿನಯ ಜತಿಗಳನ್ನೊಳಗೊಂಡ ಈ ರಾಮಾಯಣ ಕಥಾವಸ್ತುವಿನ ಪ್ರಸ್ತುತಿ ಉತ್ತಮವಾಗಿತ್ತು.

 ನಿಶಿತಾ 

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.