ನೆಲಹಾಸಿನಂತೆ ಕಾಣುವ ರಂಗೋಲಿ, ನೀರ ಮೇಲೂ -ಒಳಗೂ ರಂಗೋಲಿ


Team Udayavani, Dec 14, 2018, 6:00 AM IST

5.jpg

ಜಿಎಸ್‌ಬಿಯವರ ಆಡಳಿತಕ್ಕೆ ಒಳಪಟ್ಟ ಬಹುತೇಕ ಎಲ್ಲ ವೆಂಕಟರಮಣ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದಲ್ಲಿ ವಿಶ್ವರೂಪ ದರ್ಶನ ನಡೆಯುತ್ತದೆ. ಬೆಳಗಿನ ಜಾವದ ಜಾಗರದಲ್ಲಿ ಹಣತೆಗಳನ್ನು ಬೆಳಗಿ ಭಗವಂತನ ದಿವ್ಯರೂಪದ ದರ್ಶನ ಪಡೆಯುವ ವಿಶಿಷ್ಟ ಅನುಭೂತಿ. ಕೆಲವು ದೇವಸ್ಥಾನಗಳಲ್ಲಿ ಮುಂಜಾನೆಯ ಚುಮುಚುಮು ಚಳಿಗೆ ಸಾವಿರಾರು ಮಂದಿ ಶ್ರದ್ಧಾ ಭಕ್ತಿ ಭಾವದಿಂದ ಸೇರಿರುತ್ತಾರೆ. ಕುಂದಾಪುರ ಪೇಟೆ ವೆಂಕಟರಮಣ ದೇವಸ್ಥಾನದ ವಿಶ್ವರೂಪ ದರ್ಶನಕ್ಕೆ ಆಗಮಿಸಿದ ಭಕ್ತರು ಅರೆಕ್ಷಣ ಚಕಿತರಾಗುತ್ತಿದ್ದುದು ಅಲ್ಲಿದ್ದ ವರ್ಣರಂಗೋಲಿಗೆ. ದೊಡ್ಡಗಾತ್ರದಲ್ಲಿ ರಚಿಸಿದ್ದ ವೆಂಕಟರಮಣನ ಚಿತ್ತಾಕರ್ಷಕ ರಂಗೋಲಿ ಮನಸೆಳೆಯುತ್ತಾ ದೀಪಗಳ ಬೆಳಕಿನಲ್ಲಿ ಇನ್ನಷ್ಟು ದೇದೀಪ್ಯಮಾನವಾಗಿ ಕಂಗೊಳಿಸುತ್ತಿತ್ತು. ಏಕೆಂದರೆ ಅದರ ರೇಖೆಗಳು ಅಷ್ಟು ಸಪೂರವಾಗಿದ್ದವು. ವರ್ಣಗಳನ್ನು ಹಾಕಲು ಗಾಳಿಸುವ ತಟ್ಟೆಯನ್ನು ಬಳಸಿರಲಿಲ್ಲ. ಕೈಯಿಂದಲೇ ಸೂಕ್ಷ್ಮವಾಗಿ ಅಷ್ಟು ದೊಡ್ಡ ರಂಗೋಲಿಯನ್ನು ಬಹಳ ಶ್ರದ್ಧೆಯಿಂದ ಸೊಗಸಾಗಿ ಮೂಡಿಸಲಾಗಿತ್ತು. ಹಾಗಾಗಿ ರಂಗೋಲಿಯ ಕುರಿತಾದಷ್ಟೇ ಕುತೂಹಲ ಅದನ್ನು ಬಿಡಿಸಿದವರ ಕುರಿತೂ ಇತ್ತು.

ಕುಂದಾಪುರದ ಪೇಟೆ ವೆಂಕಟರಮಣ ದೇವಸ್ಥಾನವಷ್ಟೇ ಅಲ್ಲ ನಗರದ ಮೈಲಾರೇಶ್ವರ, ದತ್ತಾತ್ರೇಯ, ಲಕ್ಷ್ಮೀನಾರಾಯಣ ಮೊದಲಾದ ದೇವಾಲಯಗಳು, ಮುಲ್ಕಿ, ಮಂಗಳೂರು, ಉಡುಪಿ, ಕಲ್ಯಾಣಪುರ, ಚಿಟಾ³ಡಿ, ಅಂಬಲಪಾಡಿ ಹೀಗೆ ವಿವಿಧೆಡೆ ತಮ್ಮ ರಂಗೋಲಿಕಲಾಚಾತುರ್ಯ ಮೆರೆದವರು ಕುಂದಾಪುರದ ಆಟಕೆರೆ ಶ್ರೀಲಕ್ಷ್ಮೀ ಪೈ ಅವರು.35 ವರ್ಷಗಳಿಂದ ರಂಗೋಲಿಯ ಕುರಿತು ಆಸಕ್ತರಾದ ಇವರು ಪ್ರೌಢಶಾಲಾ ಹಂತದಲ್ಲಿದ್ದಾಗ ಡಾ| ವಿ.ಎಸ್‌.ಆಚಾರ್ಯರ ಪತ್ನಿ ಶಾಂತಾ ಆಚಾರ್ಯ ಅವರು ಕಡಿಯಾಳಿ ನವರಾತ್ರಿ ಸಂದರ್ಭ ಏರ್ಪಡಿಸಿದ ರಂಗೋಲಿ ಸ್ಪರ್ಧೆಯನ್ನು ನೋಡಿದ್ದರು. ಆಸಕ್ತಿ ಮೂಡಿತು. ನಂತರ ಭಾಗವಹಿಸಿದ್ದರು. ಮೊದಲೆರಡು ವರ್ಷ ಬಹುಮಾನವೂ ಬಂದಿರಲಿಲ್ಲ. ಹಾಗಂತ ಬೇಸರವೂ ಇರಲಿಲ್ಲ. ಆದರೆ ಅಲ್ಲಿ ಭಾಗವಹಿಸಿದವರಿಗೆ ಕೊಟ್ಟ ಪುಸ್ತಕಗಳೇ ಪ್ರೇರಣೆಯಾದವು. ನಂತರ ಸತತ 10 ವರ್ಷ ಪ್ರಥಮ ಬಹುಮಾನಕ್ಕೆ ಭಾಜನರಾಗಿ, ಇನ್ನು ಭಾಗವಹಿಸಿದರೆ ಬಹುಮಾನ ಖಾತರಿ ಎಂದು ತಿಳಿಯುತ್ತಿದ್ದಂತೆ ಸಂಘಟಕರಿಂದ ಸ್ಪರ್ಧೆಯ ತೀರ್ಪುಗಾರರಾಗಿ ಆಯ್ಕೆಯಾದರು. 

ಚುಕ್ಕಿ ರಂಗೋಲಿಯಲ್ಲೂ ಒಂದಷ್ಟು ಹೊಸತನಗಳನ್ನು ಕಂಡುಕೊಳ್ಳುವ ಮೂಲಕ ರಂಗೋಲಿ ಕಲಾವಿದೆ ಎನಿಸಿಕೊಂಡರು. “ಬೆಣ್ಣೆ ತಿನ್ನುವ ಕೃಷ್ಣ ರಂಗೋಲಿ’ಯನ್ನು ಪರ್ತಗಾಳಿ ಶ್ರೀಗಳು ಮೆಚ್ಚಿದ್ದರೆ, “ಹೂವುಗಳಿಂದ ರಚಿಸಿದ ಶಂಖ’ವನ್ನು ಕಂಡು ಕಾಶೀಮಠಾಧೀಶರು ಹರಸಿದ್ದರು. 

ನೆಲಹಾಸಿನಂತೆ ಕಾಣುವ ರಂಗೋಲಿ ಇವರ ವಿಶೇಷಗಳ ಪೈಕಿ ಪ್ರಮುಖ. ತೆಂಗಿನ ನಾರಿನ ಕಸ ಅಥವಾ ಹೂವುಗಳನ್ನು ಬಳಸಿ ಕಾಪೆìಟ್‌ನಂತೆಯೇ ಕಾಣುವ ರಂಗೋಲಿ ಬಿಡಿಸುವಲ್ಲಿ ಸಿದ್ಧಹಸ್ತರು. ಮಡಚಿದ ಕಾಪೆìಟ್‌ ಮಾದರಿಯಲ್ಲಿ ಮೈಸೂರಿನಲ್ಲಿ ರಚಿಸಿದ ರಂಗೋಲಿ ನಿಜ ಕಾಪೆìಟ್ಟೋ ರಂಗೋಲಿಯೋ ಎಂದು ತಿಳಿಯದೇ ಗಣ್ಯರು ಕೂಡಾ ದಂಗಾಗಿದ್ದರಂತೆ. 3 ಗಂಟೆಯಲ್ಲಿ ಯಾವುದೇ ಸಲಕರಣೆ ಬಳಸದೇ 13 ಅಡಿ ದೊಡ್ಡ ರಂಗೋಲಿ ಬಿಡಿಸುವ ವೇಗಸಾಮರ್ಥ್ಯ ಪಡೆಯಲು ಸಾಧ್ಯವಾದದ್ದು ಸತತ ಪರಿಶ್ರಮ ಹಾಗೂ ಅದರ ಮೇಲಿನ ಪ್ರೀತಿಯಿಂದ. 

ನೀರಿನ ಮೇಲೆ, ನೀರಿನ ಒಳಗೂ ರಂಗೋಲಿ ಹಾಕುವ ಅಚ್ಚರಿಯ ಕಲಾವಿದೆ ಇವರು. ರಂಗೋಲಿಯಲ್ಲಿ ಯಾವುದಾದರೊಂದು ದಾಖಲೆ ಮಾಡಬೇಕೆಂಬ ಮನೋಭೂಮಿಕೆ ಹೊಂದಿದ್ದಾರೆ. 30 ವರ್ಷದಿಂದ ಆಕಾಶವಾಣಿ ಕಲಾವಿದೆಯಾಗಿದ್ದು ಆಕಾಶವಾಣಿಯಲ್ಲಿ ಸುಗಮಸಂಗೀತದಲ್ಲಿ ಬಿ ಹೈಗ್ರೇಡ್‌ ಕಲಾವಿದೆ. ಹೂಮಾಲೆ ಕಟ್ಟುವುದರಲ್ಲಿ ಕೂಡಾ ತಮ್ಮದೇ ವಿಶೇಷಣವನ್ನು ಬೆಳೆಸಿಕೊಂಡಿದ್ದು ಹೂಮಾಲೆಗಳಿಂದಲೇ ದೇವತಾರೂಪದ ಅಲಂಕಾರ ಮಾಡುವ ಚಾತುರ್ಯ ಹೊಂದಿದ್ದಾರೆ. 

 ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.