ಯಕ್ಷಗಾನದಲ್ಲಿ ಪುಂಗಿಯ ಪುನರಾಗಮನ


Team Udayavani, Jul 7, 2017, 4:13 PM IST

KALA-6.jpg

ಸುಮಾರು ಆರೇಳು ದಶಕಗಳ ಹಿಂದೆ ಕರಾವಳಿ ಕನ್ನಡ ಜಿಲ್ಲೆಗಳ ಯಕ್ಷಗಾನದ ಹಿಮ್ಮೇಳ ದಲ್ಲಿ ಆಧಾರ ಶ್ರುತಿಯಾಗಿ ಪುಂಗಿ (ಸೋರೆ ಬುರುಡೆ)ಯನ್ನು ಬಳಸುತ್ತಿದ್ದರು. ಪುಂಗಿಯನ್ನು ಕಾಡು ಸೋರೆಕಾಯಿಯಿಂದ ತಯಾರಿಸುತ್ತಾರೆ. ಇದು ಮಲೆನಾಡಿನಲ್ಲಿ ಮಾತ್ರ ಬೆಳೆಯುತ್ತದೆ. ಇದು ಊರಸೋರೆಯಿಂದ ಗಾತ್ರದಲ್ಲಿ ಕಿರಿದು. ಇದರ ಸಿಪ್ಪೆ ತುಂಬ ಗಟ್ಟಿ. ಈ ಕಾಯಿಯನ್ನು ಹಿಂದಿನಿಂದಲೂ ವಾದ್ಯೋಪಕರಣ ತಯಾರಿಗೆ ಬಳಸುತ್ತಿದ್ದರು.

ಯಕ್ಷಗಾನದಲ್ಲಿ ಬಳಕೆಯಾಗುವುದು ಒಂಟಿ ನಳಿಗೆಯ ಪುಂಗಿ. ಇದರ ಸ್ವರ ತಾರ ಸಪ್ತಕದ ಷಡ್ಜ ಸ್ವರವಾಗಿರುತ್ತದೆ. ತಾರ ಷಡ್ಜದ ಪುಂಗಿಯ ಸ್ವರ ಮತ್ತು ಮಧ್ಯ ಸಪ್ತಕದ ಮದ್ದಳೆಯ ಚಾಪುಗಳು ಮೇಳನಗೊಳ್ಳುವುದಿದ್ದು, ಅವೆರಡರ ನಡುವೆ ಭಾಗವತನ ದನಿ ಸಂಚರಿಸುತ್ತದೆ. ಇದರಿಂದ ಹಾರ್ಮೋನಿಯಮ್‌ನ ಎರಡು (ಮಧ್ಯ ಮತ್ತು ತಾರ) ಷಡ್ಜಗಳನ್ನು ಇರಸಿದಂತಾಗುತ್ತದೆ. ಮದ್ದಳೆಯ ದೀರ್ಘ‌ ನಾದ ನಡು ನಡುವೆ ಮಾತ್ರ ಸಿಗುವುದರಿಂದ ಹಾರ್ಮೋನಿಯಮ್‌ನ ಸಂದರ್ಭದಲ್ಲಾಗುವಂತೆ ಭಾಗವತನ ದನಿ ಶ್ರುತಿಯಲ್ಲಿ ಕರಗಿ ಸ್ಪಷ್ಟತೆ ಕುಂಠಿತ ವಾಗುವ ಅವಕಾಶವಿಲ್ಲ. ಸೋರೆ ಬುರುಡೆಯ ನಾದ ಹಾರ್ಮೋನಿಯಂನ ನಾದದಂತೆ ಅಲೆ ಅಲೆ ಯಾಗಿ ಬರುವಂಥದ್ದಲ್ಲ. ಸೋರೆಯ ನಾದ ಧಾರೆ ಕಡೆಯದೆ ಸಿಗುವಂಥದ್ದು. ಭಾಗವತರ ಪದ ಹೆಚ್ಚು ದೂರ ಕೇಳಲು ಸಾಧ್ಯ. ಈ ಕುರಿತಾದ ವಿಸ್ತೃತ ವಿವರ ಡಾ| ಕೆ. ಎಂ. ರಾಘವ ನಂಬಿಯಾರ್‌ ಅವರ “ಹಿಮ್ಮೇಳ’ ಗ್ರಂಥದಲ್ಲಿದೆ. 

    ಆದರೆ ಯಕ್ಷಗಾನದಲ್ಲಿ ಪುಂಗಿಯ ಬಳಕೆ ನಿಂತು ದಶಕಗಳೇ ಕಳೆದುದರಿಂದ ಈಗ ಅದರ ತಯಾರಿಯೂ ದೊಡ್ಡ ಸವಾಲೇ! ಆ ತಜ್ಞತೆ ಮಂಜುನಾಥ ಪ್ರಭು ಚೇರ್ಕಾಡಿಯವರಲ್ಲಿ ಇರುವು ದನ್ನು ಗುರುತಿಸಿದ ಲೇಖಕ ಬೇಳೂರು ರಾಘವ ಶೆಟ್ಟಿಯವರು ಹರಿಹರ-ದಾವಣಗೆರೆ ಕಡೆಯಿಂದ ಸೋರೆಕಾಯಿಯನ್ನು ತರಿಸಿ ಕೊಟ್ಟು, ಪ್ರೋತ್ಸಾಹಿಸಿರುತ್ತಾರೆ. ಜೂನ್‌ 25, 2017ರಂದು ಸಾಲಿಗ್ರಾಮದ ಏಕದಂತ ಮಿನಿಹಾಲ್‌ನಲ್ಲಿ ಸೋಮಯಾಜಿ ಪ್ರಕಾಶನ (ರಿ.) ಚಿತ್ರಪಾಡಿ ಹಾಗೂ ಲೇಖಕರ ಹಿತರಕ್ಷಣಾ ವೇದಿಕೆ (ರಿ.), ಸಾಲಿಗ್ರಾಮ ಇವರ ಸಹಯೋಗದಲ್ಲಿ ಜರಗಿದ ಬೇಳೂರು ರಾಘವ ಶೆಟ್ಟಿಯವರ “ಒಳಸುತ್ತಿನೊಳಗೊಂದು ಹುಡುಕಾಟ’ ಕೃತಿ ಲೋಕಾರ್ಪಣೆಯಂದು ಈ ಪುಂಗಿಯ ಪ್ರಯೋಗ ಮಂಜುನಾಥ ಪ್ರಭು ಬಳಗದವರಿಂದ ಸಂಪನ್ನಗೊಂಡಿದೆ.

ಭಾಗವತರಾಗಿ ಶಶಿಕಲಾ ಎಂ. ಪ್ರಭು ಹಾಗೂ ಅನಂತ ಪದ್ಮನಾಭ ಭಟ್‌, ಮದ್ದಳೆವಾದಕರಾಗಿ ಮಂಜುನಾಥ ಪ್ರಭು ಸಹಕರಿಸಿದ್ದರು. ಕಾರ್ಯಕ್ರಮದ ಕೇಂದ್ರ ಬಿಂದುವಾದ ಪುಂಗಿಯನ್ನು ಊದಿದವರು ಸಂಜೀವ ದೇವಾಡಿಗ ಮತ್ತು ಸೂರ್ಯ ದೇವಾಡಿಗ. ಈ ಸಂದರ್ಭದಲ್ಲಿ ವಿಶಿಷ್ಟ ಪದಬಂಧಗಳುಳ್ಳ ಪದಗಳ ಸಹಿತ ಹಲವು ಯಕ್ಷಗಾನದ ಹಾಡುಗಳನ್ನು ಭಾಗವತರು ಹಾಡಿದರು. ಪುಂಗಿಯ ಶ್ರುತಿಯೊಂದಿಗೆ ಹಾಡಿದ ಈ ಪದಗಳು ಸ್ಪಷ್ಟವಾಗಿ ಕೇಳಿಬಂದು, ಎಲ್ಲರ ಗಮನ ಸೆಳೆದವು. ಬಹಳ ಕಾಲದ ಅನಂತರ ಈ ಶ್ರುತಿ ಸಂಗೀತೋಪಕರಣದ ಬಳಕೆಯಾಗಿದ್ದು, ಪರಿಷ್ಕರಣೆಯೊಂದಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿ ನಿರ್ವಹಣೆ ತೋರಬಹುದೆಂಬ ಆಶಯ ವ್ಯಕ್ತವಾಯಿತು.  

ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಟಾಪ್ ನ್ಯೂಸ್

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.