ಪುರುಷೋತ್ತಮ ಪೂಂಜರಿಗೆ ಸರ್ಪಂಗಳ ಪ್ರಶಸ್ತಿ


Team Udayavani, Jul 27, 2018, 6:00 AM IST

1.jpg

ಕರುಣರಸ, ವಿಷಾದ ಭಾವಗಳನ್ನು ಪ್ರಧಾನವಾಗಿರಿಸಿಕೊಂಡು ಪ್ರಸಂಗ ಬರೆದು “ಸ್ಟಾರ್‌ವ್ಯಾಲ್ಯೂ’ ಪಡೆಯುವುದು ಕಷ್ಟ. ಆದರೆ, ಮಾನಿಷಾದ  ಪ್ರಸಂಗ, ಪುರುಷೋತ್ತಮ ಪೂಂಜರಿಗೆ “ಸ್ಟಾರ್‌ ವ್ಯಾಲ್ಯೂ’ ತಂದುಕೊಟ್ಟಿತು. ಅದರಲ್ಲಿ ವೀರ, ಹಾಸ್ಯ, ಶೃಂಗಾರ ಇಲ್ಲವೆಂದಲ್ಲ ; ಸಹೃದಯ ಪ್ರೇಕ್ಷಕನ ಮನಸ್ಸಿನಲ್ಲಿ ಸ್ಥಾಯಿಯಾಗಿ ಉಳಿಯುವುದು “ಕರುಣ’ ಮಾತ್ರ. ಅದೇ ಪ್ರಸಂಗದ ಘನತೆ. ಕವಿ ಪುರುಷೋತ್ತಮ ಪೂಂಜರದ್ದೂ ಘನತೆಯ ವ್ಯಕ್ತಿತ್ವವೇ.

ನಾಲ್ಕು ದಶಕಗಳ ಕಾಲ ವಿವಿಧ ಮೇಳಗಳಲ್ಲಿ ಭಾಗವತಿಕೆ ಮಾಡಿದ್ದ ಪುರುಷೋತ್ತಮ ಪೂಂಜರು, ಮತೊ¤àರ್ವ ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿಗಳಿಂದ, “ಪರಿಪೂರ್ಣ ಭಾಗವತ’ ಎಂದು ಹೊಗಳಿಸಿಕೊಂಡವರು. ಅವರು ಮದ್ದಲೆಯ ವಾದನ ಕುಶಲಿ, ಚೆಂಡೆ ನುಡಿತದಲ್ಲಿÉಯೂ ಪರಿಣತ. ಪೂರ್ಣಪ್ರಮಾಣದ “ಚೆಂಡೆ ಪೀಠಿಕೆ’ ಪ್ರಸ್ತುತಪಡಿಸಬಲ್ಲ ಅನುಭವಿ. ನಾಟ್ಯಾಭಿನಯ, ಹೆಜ್ಜೆಗಾರಿಕೆಗಳನ್ನು ಬಲ್ಲ ಪರಿಪೂರ್ಣ ವೇಷಧಾರಿ. ಬಣ್ಣಗಾರಿಕೆಯ ಪರಿಶ್ರಮಿ. ತಾಳಮದ್ದಲೆಯಲ್ಲಿ ಯಾವುದೇ ಪಾತ್ರವನ್ನು ಅನಾವರಣಗೊಳಿಸಬಲ್ಲ ಸಮರ್ಥ ಅರ್ಥಧಾರಿ. ಉಳಿದ ಪಾತ್ರಧಾರಿಗಳಿಗೆ “ಅರ್ಥ’ವನ್ನು, ಪ್ರಸಂಗದ ನಡೆಯನ್ನು ಹೇಳಿಕೊಡಬಲ್ಲ ನಿರ್ದೇಶಕ. ಪ್ರಸಂಗ ರಚನೆಯಲ್ಲಂತೂ ಅವರದ್ದು ಮೇಲ್ಪಂಕ್ತಿಯ ಹೆಸರು. ಪೌರಾಣಿಕ-ಕಾಲ್ಪನಿಕ ಎರಡೂ ವಿಭಾಗಗಳಲ್ಲಿ, ತುಳು-ಕನ್ನಡ ಎರಡೂ ಭಾಷೆಗಳಲ್ಲಿ ಸುಮಾರು 35ಕ್ಕಿಂತಲೂ ಅಧಿಕ ಪ್ರಸಂಗಗಳ ರಚಯಿತ. ಷೇಕ್ಸ್‌ಪಿಯರ್‌ನಂಥ ಪಾಶ್ಚಾತ್ಯ ನಾಟಕಕಾರನ ಕತೆಗಳನ್ನು ಯಕ್ಷಗಾನದ ಪ್ರಸಂಗವಾಗಿ ಅಳವಡಿಸಿದ ಪ್ರಯೋಗಶೀಲ.

1953ರಲ್ಲಿ ಮಂಗಳೂರು ತಾಲೂಕಿನ ಮಂಜನಾಡಿಯ ಬೊಟ್ಟಿಕೆರೆಯಲ್ಲಿ ಜನಿಸಿದ ಪುರುಷೋತ್ತಮ ಪೂಂಜರು ಮಂಗಳೂರು ಸರಕಾರಿ ಕಾಲೇಜಿನ ಬಿ.ಎಸ್ಸಿ. ಪದವೀಧರರು. ಕಾಲೇಜಿಗೆ ಹೋಗುತ್ತಿರುವಾಗಲೇ ಯಕ್ಷಗಾನದ ಉತ್ಕಟ ಸೆಳೆತ ಇತ್ತು. ಪಿಯುಸಿಯಲ್ಲಿ ವೈಶಾಲಿನಿ  ಪರಿಣಯ ಪ್ರಸಂಗ ಬರೆದು ಕವಿ ಎನಿಸಿಕೊಂಡವರು. ಪುರುಷೋತ್ತಮರಿಗೆ ಯಕ್ಷಗಾನದ ವಿವಿಧ ವಿಭಾಗಗಳನ್ನು ಕಲಿಸಿ ಗುರುವಾಗಿ ಒದಗಿದವರು ಅನೆಗುಂಡಿ ಗಣಪತಿ ಭಟ್ಟರು. 

ಜುಲೈ 28ರಂದು ಉಡುಪಿಯ ಪೂರ್ಣಪ್ರಜ್ಞ ಸಭಾಗೃಹದಲ್ಲಿ ಜರಗುವ ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಸ್ಮಾರಕ “ಏಳನೆಯ ವರ್ಷದ ಯಕ್ಷೋತ್ಸವ’ದಲ್ಲಿ ಪುರುಷೋತ್ತಮ ಪೂಂಜರನ್ನು ಪ್ರಶಸ್ತಿಯೊಂದಿಗೆ ಗೌರವಿಸಲಾಗುತ್ತಿದೆ.

ಶ್ರೀಕುಮಾರ್‌ ಕೆ. ಎನ್‌.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.