ರಂಜಿಸಿದ ಶನೀಶ್ವರ ಮಹಾತ್ಮೆ


Team Udayavani, Mar 1, 2019, 12:30 AM IST

v-7.jpg

ಗುರುಪುರ-ಕೈಕಂಬದಲ್ಲಿ ಇತ್ತೀಚೆಗೆ ಜರಗಿದ “ಯಕ್ಷತರಂಗಿಣಿ’ಯ ಯಕ್ಷ ಸಂಭ್ರಮದಂಗವಾಗಿ ಹನುಮಗಿರಿ ಮೇಳದವರು ಶನೀಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶಿಸಿದರು. ವಿಷ್ಣುವಾಗಿ ಎಂ.ಕೆ.ರಮೇಶ್‌ ಆಚಾರ್ಯ ಮತ್ತು ಪರಮೇಶ್ವರನಾಗಿ ಪೆರ್ಲ ಜಗನ್ನಾಥ ಶೆಟ್ಟಿಯವರದ್ದು ಚಿಕ್ಕ ಪಾತ್ರವಾದರೂ ಚೊಕ್ಕದಾದ ನಿರ್ವಹಣೆ. ಪ್ರಜ್ವಲ್‌ ಕುಮಾರ್‌ ಬೃಹಸ್ಪತಿ ಋಷಿಯಾಗಿ ಮಾತಿನ ವೈಖರಿಯಿಂದ ಮೆಚ್ಚುಗೆಗೆ ಪಾತ್ರರಾದರು. ಶನೀಶ್ವರನಾಗಿ ಪೂರ್ವಾರ್ಧದಲ್ಲಿ ಸದಾಶಿವ ಶೆಟ್ಟಿಗಾರ ಹಾಗೂ ಉತ್ತರಾರ್ಧದಲ್ಲಿ ಶಿವರಾಮ್‌ ಜೋಗಿಯವರ ಗತ್ತು ಗಾಂಭೀರ್ಯದ ಪಾತ್ರ ನಿರ್ವಹಣೆ ಅಮೋಘವಾಗಿತ್ತು. ಜಗದಾಭಿರಾಮ (ಭೃಗುರಾಜ), ಸದಾಶಿವ ಕುಲಾಲ್‌ (ಸತ್ಯಶೇಖರ), ಅಕ್ಷಯ್‌ ಭಟ್‌(ಸತ್ಯವ್ರತ),ಬಂಟ್ವಾಳ ಜಯರಾಮ ಆಚಾರ್ಯ (ದೂತ ಹಾಗೂ ರೈತ) ಪಾತ್ರಕ್ಕೆ ನ್ಯಾಯ ಒದಗಿಸಿದರು. 

ಯಾವುದೇ ಗುಣದ ಪಾತ್ರಕ್ಕೂ ಜೀವ ತುಂಬಬಲ್ಲ ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿಯವರು ವಿಕ್ರಮಾದಿತ್ಯನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅವರ ಅರ್ಥಗಾರಿಕೆ ಕೇಳಲು ಬಹಳ ಸೊಗಸು. ಅಪಾರ ಶಬ್ದ ಭಂಡಾರ ಹೊಂದಿರುವ ಸೀತಾರಾಮ್‌ ಕುಮಾರ್‌ ಮಂತ್ರವಾದಿ, ಕುದುರೆ ವ್ಯಾಪಾರಿ ಹಾಗೂ ನಂದಿ ಶೆಟ್ಟರಾಗಿ ನಗೆಗಡಲಲ್ಲಿ ತೇಲಿಸಿದರು. ದರೋಡೆಕೋರರ ಪೈಪೋಟಿಯ ದಿಗಿಣ ಮುದನೀಡಿತು. ನಂದಿ ಶೆಟ್ಟಿಯ ಮಗಳು ಅಲೋಳಿಕೆಯಾಗಿ ಸಂತೋಷ್‌ ಹಿಲಿಯಾಣ ಸೊಬಗಿನ ನಾಟ್ಯ ಹಾಗೂ ಮೋಹಕ ಮಾತುಗಳಿಂದ ಮನ ಸೆಳೆದರು. ಚಂದ್ರಸೇನ ಮಹಾರಾಜನಾಗಿ ಸುಬ್ರಾಯ ಹೊಳ್ಳ ಮತ್ತು ಮಗಳು ಪದ್ಮಾವತಿಯಾಗಿ ರಕ್ಷಿತ್‌ ಪಡ್ರೆ ತಮಗಿದ್ದ ಸೀಮಿತ ಅವಕಾಶದಲ್ಲೇ ಪ್ರತಿಭೆಯನ್ನು ಮೆರೆದರು. ಕೈಕಾಲು ಕಳೆದುಕೊಂಡು ವ್ಯಥೆಪಡುವ ವಿಕ್ರಮನ ಪಾತ್ರಕ್ಕೆ ಜಯಾನಂದ ಸಂಪಾಜೆ ಜೀವ ತುಂಬಿದರು.ಪದ್ಯಾಣ ಗಣಪತಿ ಭಟ್‌ ಮತ್ತು ರವಿಚಂದ್ರ ಕನ್ನಡಿಕಟ್ಟೆ ಅವರ ಸಂಪ್ರದಾಯಬದ್ಧವಾದ ಭಾಗವತಿಕೆ ಇಡೀ ಪ್ರಸಂಗದ ಹೆಗ್ಗುರುತಾಗಿತ್ತು. 

ನರಹರಿ ರಾವ್‌ ಕೈಕಂಬ 

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.