ಜನಮನ ರಂಜಿಸಿದ ನೃತ್ಯಾರ್ಪಣಂ 


Team Udayavani, Dec 21, 2018, 6:00 AM IST

nrityarpanam-1.jpg

ಗುರುವು ಕಲೆಯಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಂಡು ಪರಿಪೂರ್ಣತೆಯತ್ತ ಹೆಜ್ಜೆ ಹಾಕಿದಾಗ ಮಾತ್ರ ಶಿಷ್ಯನಲ್ಲಿ ಆ ಕಲೆಯು ಮೈತಳೆಯುವಂತೆ ಮಾಡುವ ಮೂಲಕ ಕಲಾ ಪ್ರೌಢಿಮೆಯನ್ನು ಪಡೆಯಲಿ ಸಾಧ್ಯ ಎಂಬ ಸಂದೇಶವನ್ನು ಕಲಾಸಕ್ತರಿಗೆ ನೀಡಿದವರು ವಿ| ಮಂಜುನಾಥ್‌ ಎನ್‌. ಪುತ್ತೂರು ಹಾಗೂ ದೀಪ್ತಿ ಮಂಜುನಾಥ್‌. ಇವರು ಇತೀ¤ಚೆಗೆ ತಮ್ಮ ಶ್ರೀಮಂಜುನಾಥ ನೃತ್ಯ ಕಲಾ ಶಾಲೆಯ “ನೃತ್ಯಾರ್ಪಣಂ – 2018’ನ್ನು ವಿದ್ಯಾರ್ಥಿಗಳೊಂದಿಗೆ ಯಶಸ್ವಿಯಾಗಿ ಪ್ರಸ್ತುತಪಡಿಸಿದರು.
 
ಮೊದಲಿಗೆ ಆರಭೀ ರಾಗ ಆದಿತಾಳದ ಪುಷ್ಪಾಂಜಲಿಯ ಮೂಲಕ ನಟರಾಜನಿಗೆ, ಅಷ್ಟದಿಕಾಲಕರಿಗೆ ವಂದಿಸಿದ ವಿದ್ಯಾರ್ಥಿಗಳು ನೃತ್ತ ಭಾಗದಲ್ಲಿ ಹಿಡಿತವನ್ನು ಸಾಧಿಸಿದ್ದು, ಭವಿಷ್ಯದಲ್ಲಿ ಉತ್ತಮ ಕಲಾವಿದರಾಗುವ ಎಲ್ಲಾ ಲಕ್ಷಣಗಳನ್ನೂ ತೋರಿದರು. ಕಲ್ಯಾಣಿ ರಾಗ ಆದಿತಾಳದ ಜತಿಸ್ವರದ ಲವಲವಿಕೆಯಿಂದ ಶೀಘ್ರ ಗತಿಯಲ್ಲಿ ಸುಂದರ ವಿನ್ಯಾಸಗಳಿಂದ ಕೂಡಿದ ನೃತ್ತ ಬಂಧವು ಪೇÅಕ್ಷಕರ ಮನಸೂರೆಗೊಂಡಿತು. ನಾಟೆ ರಾಗ ಆದಿತಾಳದ ಗಣೇಶ ಕೌತ್ವಂ, ಪುಟಾಣಿಗಳಿಂದ ಪ್ರದರ್ಶಿಸಲ್ಪಟ್ಟ ಶಂಕರಾಭರಣ ರಾಗ ಆದಿತಾಳದ “ಗುಮ್ಮನ ಕರೆಯದಿರೆ’ , ಶುದ್ಧ ಸಾವೇರಿ ರಾಗ ತ್ರಿಶ್ರ ನಡೆಯ “ಆಡಲು ಪೋಗೋಣ’ ನೃತ್ಯದಲ್ಲಿ ಕೃಷ್ಣನ ಬಾಲಲೀಲೆಗಳು, ಸೀತಾ ಸ್ವಯಂವರ ಸಂಚಾರಿಗಳಲ್ಲಿ ವಿದ್ಯಾರ್ಥಿಗಳು ಮನೋ ಅಭಿನಯವನ್ನು ನೀಡುವ ಮೂಲಕ ತಮ್ಮೊಳಗಿನ ಕಲಾ ಪ್ರೌಢಿಮೆಯನ್ನು ಸಾದರಪಡಿಸಿದರು. ರಾಗಮಾಲಿಕೆ ಆದಿತಾಳದ “ಜಗನೋ¾ಹನನೇ ಕೃಷ್ಣ’ದಲ್ಲಿ ತಾಯಿ ಯಶೋಧೆಗೆ ಬಾಯಲ್ಲಿ ಮೂರು ಜಗವನೇ° ತೋರಿಸಿ ತಾನಾರೆಂಬುದನ್ನು ಜಗತ್ತಿಗೇ ತಿಳಿಸಿದ ಕೃಷ್ಣನ ಅವತಾರ ಹಾಗೂ ಭಸ್ಮಾಸುರ ಮೋಹಿನಿ ಸಂಚಾರಿಗಳು ಭಕ್ತಿಯ ಪರಾಕಾಷ್ಠೆಗೇರುವಂತೆ ಮಾಡಿತು.
 
ರಾಗಮಾಲಿಕೆ ಆದಿತಾಳದ “ಶೋಕಗಳು’, ಮೋಹನ ರಾಗ ಆದಿತಾಳದ “ಮೆಲ್ಲ ಮೆಲ್ಲನೇ ಬಂದನೇ’, ಷಣ್ಮಖಪ್ರಯ ರಾಗ ಆದಿತಾಳದ “ಯಾದವ ನೀ ಬಾ’, ಹಂಸಧ್ವನಿ ರಾಗ ಆದಿತಾಳದ “ಗಜವದನಾ ಬೇಡುವೆ’, ಶುದ್ಧ ಧನ್ಯಾಸಿ ರಾಗ ಆದಿತಾಳದ “ಹಿಮಗಿರಿ ತನಯೇ’, ಸಿಂಧು ಭೈರವೀ ರಾಗ ಆದಿತಾಳದ “ಶೀÅ ಗಣೇಶ’, ಕಲ್ಯಾಣೀ ರಾಗ ಆದಿತಾಳದ “ನೃತ್ಯಧಿ ನೃತ್ಯಧಿ’ ಮುಂತಾದ ನೃತ್ಯದಲ್ಲಿ ವಿದ್ಯಾರ್ಥಿಗಳು ಶಿಸ್ತುಬದ್ಧ ಅಡವು, ಅಭಿನಯಗಳಲ್ಲಿ ಭವಿಷ್ಯದ ಉತ್ತಮ ಕಲಾವಿದರಾಗುವ ಎಲ್ಲಾ ಲಕ್ಷಣಗಳಿವೆ. 

ಸ್ವಾಮಿ ವಿವೇಕಾನಂದರ ಶಿಕಾಗೊ ಭಾಷಣದ 125ನೇ ವರ್ಷದ ಸವಿನೆನಪಿಗಾಗಿ “ವೀರ ಸನ್ಯಾಸಿ’ ಎಂಬ ನೃತ್ಯ ರೂಪಕವು ಪ್ರದರ್ಶಿಸಲ್ಪಟ್ಟಿತು. ಕೊನೆಯಲ್ಲಿ ನಾಟೆ ರಾಗ ಆದಿ ತಾಳದ ತಿಲ್ಲಾನವು ಮೈಅಡವುಗಳು, ಅರುಧಿಗಳು ಹಾಗೂ ರಂಗಾಕ್ರಮಣಗಳಿಂದ ಉತ್ತಮ ರೀತಿಯಲ್ಲಿ ಪ್ರದರ್ಶಿಸಲ್ಪಟ್ಟಿತು. ಒಟ್ಟಿನಲ್ಲಿ ಶ್ರದ್ಧೆ, ಶಿಸ್ತುಬದ್ಧ ಕಲಿಕೆ, ಗುರು ಶಿಷ್ಯರ ಉತ್ತಮ ಬಾಂಧವ್ಯವು ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಸಫ‌ಲವಾಗಿದೆ ಎಂಬುದನ್ನು ಈ ಕಾರ್ಯಕ್ರಮ ಸಾದರಪಡಿಸಿತು.

ಹಿಮ್ಮೇಳದಲ್ಲಿ ನಟುವಾಂಗ ಗುರುಗಳಾದ ವಿ| ಮಂಜುನಾಥ್‌ ಎನ್‌. ಪುತ್ತೂರು ಹಾಗೂ ದೀಪ್ತಿ ಮಂಜುನಾಥ್‌, ಹಾಡುಗಾರಿಕೆಯಲ್ಲಿ ವಿ| ಧನ್ಯತಾ ಪುತ್ತೂರು, ಮೃದಂಗದಲ್ಲಿ ವಿ| ಶ್ರೀಧರ್‌ ರೈ, ಕಾಸರಗೋಡು, ಕೊಳಲಿನಲ್ಲಿ ವಿ| ಸುರೇಂದ್ರ ಆಚಾರ್‌ ಕಾಸರಗೋಡು, ಕೀಬೋರ್ಡ್‌ನಲ್ಲಿ ದಿನೇಶ್‌ ರಾವ್‌ ಸುಳ್ಯ ಸಹಕರಿಸಿದರು. 

ಮಂಜುನಾಥ ನೃತ್ಯ ಕಲಾ ಶಾಲೆ ಪ್ರಸ್ತುತಿ
ಶ್ರದ್ಧೆ, ಶಿಸ್ತುಬದ್ಧ ಕಲಿಕೆ, ಗುರು ಶಿಷ್ಯರ ಉತ್ತಮ ಬಾಂಧವ್ಯವು ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಸಫ‌ಲವಾಗಿದೆ ಎಂಬುದನ್ನು ಈ ಕಾರ್ಯಕ್ರಮ ಸಾದರಪಡಿಸಿತು.

– ವೀಣಾ ಕೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.