ರಸದೌತಣವಾದ ಶ್ರೀ ರಾಮ ಪಟ್ಟಾಭಿಷೇಕ


Team Udayavani, Mar 13, 2020, 5:45 PM IST

srirama-pattabhikshek

ಮೂಡಬಿದಿರೆ ಯಲ್ಲಿ ಯಕ್ಷೊàಪಾಸನಮ್‌ ಮೂಡಬಿದ್ರಿಯ ಎಂ. ಶಾಂತಾರಾಮ ಕುಡ್ವಾ ಅವರ ಸಂಯೋಜಕತ್ವದಲ್ಲಿ ಅತಿಥಿ ಕಲಾವಿದರಿಂದೊಡಗೂಡಿ ನೆರವೇರಿದ ಪಾರ್ತಿ ಸುಬ್ಬ ವಿರಚಿತ ಶ್ರೀ ರಾಮ ಪಟ್ಟಾಭಿಷೇಕ ತಾಳಮದ್ದಳೆ ಕೂಟ ಜನಮನ ಗೆದ್ದಿತು.

ಚಕ್ರವರ್ತಿ ದಶರಥನು ರಾಜ್ಯಭಾರವನ್ನು ಹಿರಿಯ ಪತ್ನಿ ಕೌಸಲ್ಯಾ ದೇವಿಯ ಪುತ್ರನಾದ ಶ್ರೀ ರಾಮಚಂದ್ರನಿಗೆ ವಹಿಸಿಕೊಡಲು ಉತ್ಸುಕನಾಗಿ ಮೂಹೂರ್ತ ನಿಗದಿಪಡಿಸುತ್ತಾನೆ. ವಿಚಾರ ತಿಳಿದ ಕೈಕೇಯಿಯ ದಾಸಿ ಮಂಥರೆಯು ಕೈಕೇಯಿಯ ಮನಸ್ಸನ್ನು ಕೆಡಿಸಿ ಹುಳಿ ಹಿಂಡುತ್ತಾಳೆ.ಹೀಗೆ ಮಂಥರೆಯಿಂದ ಮನ ಪರಿವರ್ತನೆಗೊಂಡ ಕೈಕೇಯಿಯು ಪಟ್ಟಾಭಿಷೇಕದ ದಿನ, ಸಮಾರಂಭಕ್ಕೆ ಹೋಗದೆ ತನ್ನ ಸೌಂದರ್ಯವನ್ನು ಏಕಾಏಕಿ ಅಸ್ತವ್ಯಸ್ತಗೊಳಿಸಿ ಶೋಕಾಗಾರದಲ್ಲಿ ಮಲಗಿದ್ದ ಸಂದರ್ಭದಲ್ಲಿ ತನ್ನನ್ನು ಕಾಣಲು ಬಂದ ದಶರಥನಲ್ಲಿ ಅಂದು ಕೊಟ್ಟ ನ್ಯಾಸವಾಗಿ ಉಳಿದಿರುವ ಎರಡು ವರವನ್ನು ಕೇಳಲು ಇದೀಗ ಬಯಸಿದ್ದು ಆ ಪ್ರಕಾರ ನಿಗದಿತ ಮೂಹೂರ್ತದಲ್ಲಿ ತನ್ನ ಮಗನಾದ ಭರತನಿಗೆ ಪಟ್ಟ ಕಟ್ಟಬೇಕು ಹಾಗೂ ರಾಮನನ್ನು ಕಾಡಿಗಟ್ಟಬೇಕು ಎಂದು ಹೇಳುತ್ತಾಳೆ.ಈ ಅನಿರೀಕ್ಷಿತ ಆಘಾತದಿಂದ ದುಃಖೀತನಾಗಿ ಮರುಗುತ್ತಿದ್ದ ತಂದೆಯನ್ನು ರಾಮನು ಸಮಾಧಾನಪಡಿಸಿ, ಪತ್ನಿ ಸೀತೆ, ತಮ್ಮ ಲಕ್ಷ್ಮಣನೊಂದಿಗೆ ಕಾಡಿಗೆ ಹೊರಡಲು ಸಿದ್ಧವಾಗುತ್ತಾನೆ.ಹೀಗೆ ಮಂಥರೆಯ ಕುತಂತ್ರದಿಂದ ಶ್ರೀ ರಾಮ ಪಟ್ಟಾಭಿಷೇಕ ಮುರಿದು ಬೀಳುತ್ರದೆ.

ಮಂಥರೆಯಾಗಿ ಶಾಂತಾರಾಮ ಕುಡ್ವಾರವರು ಕೈಕೇಯಿಯ ಮನಪರಿವರ್ತನೆ ಮಾಡಿ ಹುಳಿ ಹಿಂಡುವ ರಾಜಕೀಯ ಸೃಷ್ಟಿಸಿದ ಸನ್ನಿವೇಶ ಪ್ರಸಕ್ತ ರಾಜಕೀಯ ಸ್ಥಿತಿಗತಿಯನ್ನು ನೆನಪಿಗೆ ತರಿಸುವಂತೆ ಮಾಡಿತು.

ರಾಜಕೀಯ ಷಡ್ಯಂತ್ರಗಳನ್ನು ಕದ್ದಾಲಿಸುವುದು ತಪ್ಪಲ್ಲ,ತನಗೆ ಕಿವಿ ಕೇಳುವುದಿಲ್ಲವಾದರೂ ,ಗೋಡೆಗೆ ಕಿವಿ ಕೊಟ್ಟು ಕೇಳಿದಾಗ, ಪಿಸುಪಿಸು, ಗುಸುಗುಸು, ಮಿಣಿಮಿಣಿ ಮಾತುಗಳು ಆವಾಗ ಮಾತ್ರ ಕೇಳುವುದು. ಅದು ದೇವರು ಕೊಟ್ಟ ವರ ಎಂದು ಹೇಳಿದ್ದು ನಗೆಗೆಡಲಿನಲ್ಲಿ ತೇಲಿಸಿತು.
ಕೈಕೇಯಿಯಾಗಿ ತಾರಾನಾಥ ವರ್ಕಾಡಿ ಮತ್ತು ದಶರಥನಾಗಿ ಶಂಭು ಶರ್ಮ ವಿಟ್ಲರವರ ಸಂವಾದ ದೀರ್ಘ‌ಕಾಲದವರೆಗೆ ನಡೆದು ಪ್ರಬುದ್ಧತೆ ಮೆರೆಯಿತು. ನ್ಯಾಸವಾಗಿ ಉಳಿದುಕೊಂಡಿದ್ದ ಮತ್ತೆರಡು ವರಗಳನ್ನು ಅನ್ಯಾಯವಾದಾಗ ತಾನು ಕೇಳುವುದು ತನ್ನ ಹಕ್ಕು,ಕೊಡುವುದು ಅದು ನಿಮ್ಮ ಔದಾರ್ಯವಲ್ಲ ,ಬದ್ಧತೆ ಎಂದು ಕೈಕೇಯಿ ಕೆಣಕಿದುದು ಮಾರ್ಮಿಕವಾಗಿತ್ತು.ಮಂಗಳಕರವಾದ ವಾತಾವರಣದಲ್ಲಿ ನಮ್ಮ ಹೃದಯವನ್ನು ಕೂಡ ಮಂಗಳಕರವಾಗಿ ಅಂತರಂಗದಲ್ಲಿ ಶುದ್ಧವನ್ನಿಟ್ಟುಕೊಳ್ಳಬೇಕು. ಅಂತಹ ಅಂತರಂಗ ಶುದ್ಧಿಯಿಂದ ಏನೂ ಬೇಕಾದರೂ ಕೇಳು ಕೊಡುತ್ತೇನೆ.ಅದು ನಿನ್ನದಾಯಿತೆಂದು ತಿಳಿ ಎಂದು ಅಷ್ಟೇ ಮಾರ್ಮಿಕವಾದ ನುಡಿ ದಶರಥನಾಗಿ ಶಂಭು ಶರ್ಮಾರ¨ªಾಗಿತ್ತು.ಶ್ರೀ ರಾಮನಾಗಿ ಯುವ ಅರ್ಥದಾರಿ ಸುನಿಲ್‌ ಹೊಲಾಡು ದಶರಥನನ್ನು ಸಮಾಧಾನಪಡಿಸಿದ ರೀತಿ, ಕೈಕೆಯಿಯೊಂದಿಗಿನ ಸಂವಾದ ಮರ್ಯಾದಾ ಪುರುಷೋತ್ತಮನ ದಾಟಿಯಲ್ಲಿ ಅರ್ಥ ಹೇಳಿ ಅರ್ಥಗಾರಿಕೆಯಲ್ಲಿ ಉತ್ತಮ ಭವಿಷ್ಯವಿದೆ ಎಂದು ಶ್ರುತ ಪಡಿಸಿದರು.ಲಕ್ಷ್ಮಣನಾಗಿ ಹಿರಿಯ ಅರ್ಥದಾರಿ ದಾಮೋದರ ಸಫ‌ಲಿಗರವರು ತಮಗೆ ಒದಗಿ ಬಂದ ಎರಡು ಪದ್ಯಗಳಲ್ಲಿ ಅರ್ಥ ಪ್ರಬುದ್ಧತೆ ಮೆರೆದರು.ಉತ್ತಮ ರಸದೌತಣ ಒದಗಿಸಿದ ಈ ಕಥಾನಕದ ಹಿಮ್ಮೇಳದಲ್ಲಿ ಮೊದಲಾರ್ಧದಲ್ಲಿ ಭಾಗವತರಾಗಿ ಗಿರೀಶ್‌ ರೈ ಕಕ್ಕೆಪದವು,ಅನಂತರದ ಮಾಧವ ಆಚಾರ್ಯ ಸಂಪಿಗೆ ಸುಮಧುರವಾಗಿ ಹಾಡಿದರು.ಚೆಂಡೆಯಲ್ಲಿ ರವಿರಾಜ್‌ ಜೈನ್‌,ಮದ್ದಳೆಯಲ್ಲಿ ಆನಂದ ಗುಡಿಗಾರ ಮತ್ತು ಶ್ರವಣ ಕುಮಾರ್‌ರವರು ಸಾಥ್‌ ನೀಡಿದರು.

ಎಂ.ರಾಘವೇಂದ್ರ ಭಂಡಾರ್ಕರ್‌

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.