ರಂಜಿಸಿದ ವಿದ್ಯಾರ್ಥಿಗಳ ಯಕ್ಷ ವೈಭವ


Team Udayavani, Apr 19, 2019, 6:00 AM IST

7

ಗುರುಪುರ ಕೈಕಂಬದಲ್ಲಿ ಇತ್ತೀಚೆಗೆ ಯಕ್ಷನಾಟ್ಯ ಕಲಾ ಕೇಂದ್ರ ತಕಧಿಮಿ ತಂಡ ಕೈಕಂಬ ಇದರ ವಿದ್ಯಾರ್ಥಿಗಳಿಂದ ಯಕ್ಷವೈಭವ ನಡೆಯಿತು. ಈ ಯಶಸ್ವಿ ಪ್ರದರ್ಶನದಲ್ಲಿ ಕಲಾವಿದರಾಗಿ ಯುವಕ-ಯುವತಿಯರು ಮಾತ್ರವಲ್ಲ, ಕಿರಿಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳೂ ಇದ್ದರು. ಒಂದುವರೆ ವರ್ಷದಿಂದ ಕಲಾವಿದ ರಕ್ಷಿತ್‌ ಶೆಟ್ಟಿ ಪಡ್ರೆಯವರಿಂದ ತರಬೇತಿಯ ಪಡೆಯುತ್ತಿರುವ ತಕಧಿಮಿ ತಂಡದ ವಿದ್ಯಾರ್ಥಿಗಳು ಅಂದು ಮೊದಲಿಗೆ “ಕೃಷ್ಣಂ ವಂದೇ ಜಗದ್ಗುರು’ ಎಂಬ ಯಕ್ಷ ನಾಟ್ಯ ರೂಪಕವನ್ನು ಪ್ರಸ್ತುತಪಡಿಸಿದರೆ, ಅನಂತರ “ಹನುಮೋದ್ಭವ’ ಪ್ರಸಂಗವನ್ನು ಬಯಲಾಟವಾಗಿ ಪ್ರದರ್ಶಿಸಿದರು.ಯಕ್ಷರೂಪಕದಲ್ಲಿ ತಮಗೊಪ್ಪುವ ವೇಷಭೂಷಣಗಳನ್ನು ಧರಿಸಿ ಪಾಲ್ಗೊಂಡ ಬಾಲಕ-ಬಾಲಕಿಯರು ವಿಷ್ಣುವಿನ ಅವತಾರಗಳನ್ನು ನಾಟ್ಯ, ಕುಣಿತದ ಮೂಲಕ ಮನಮೋಹಕವಾಗಿ ಪ್ರದರ್ಶಿಸಿದರು.ಭಾವಾಭಿನಯಕ್ಕೆ ಹೆಚ್ಚಿನ ಒತ್ತು ನೀಡಿದ್ದರೆ ಈ ನೃತ್ಯರೂಪಕವು ಪರಿಪೂರ್ಣವಾಗುತ್ತಿತ್ತು.

ಕಿರಿಯ ಮತ್ತು ಹಿರಿಯರ ಕೂಡುವಿಕೆಯಲ್ಲಿ ಪ್ರದರ್ಶನಗೊಂಡ “ಹನುಮೋದ್ಭವ’ ಬಯಲಾಟವು ಮನರಂಜಿಸುವಲ್ಲಿ ಯಶಸ್ವಿಯಾಯಿತು. ವೀರರಸಕ್ಕೆ ಹೆಚ್ಚು ಆದ್ಯತೆಯಿರುವ ಈ ಪ್ರಸಂಗದಲ್ಲಿ ಕಿರಿಯರೂ ಉತ್ಸಾಹದಿಂದ ಅಭಿನಯಿಸಿದರು. ಹನುಮನಾಗಿ ವೇಷ ಮಾಡಿದ ಬಾಲಕನ ದಿಟ್ಟ ಅಭಿನಯ ಎಲ್ಲರ ಮನಸೆಳೆಯಿತು. ಯಾವುದೇ ಅಳುಕಿಲ್ಲದೆ ತನ್ನ ದಿಗಿಣ, ಕುಣಿತ ಹಾಗೂ ಕರುಣಾರಸ, ವೀರರಸದ ಮಾತುಗಾರಿಕೆಯಿಂದ ಹನುಮಂತನ ಪಾತ್ರಕ್ಕೆ ಈತ ಜೀವ ತುಂಬಿದರು. ದೇವೇಂದ್ರನ ಬಲಗಳಾಗಿ ಪುಟ್ಟ ಮಕ್ಕಳು ಮಾಡಿದ ಪ್ರವೇಶ ಕುಣಿತ, ಹನುಮನೊಡನೆ ಮಾಡಿದ ಯುದ್ಧದ ದೃಶ್ಯಗಳು ಹಾಗೂ ಅವರ ವೀರರಸದ ಮಾತುಗಳು ಕಣ್ಣಿಗೆ ಹಬ್ಬವಾಯಿತು. ಅಂಜನಿ, ದೇವೇಂದ್ರ, ರಾಹು, ವಿಷ್ಣು ಮುಂತಾದ ಪಾತ್ರಗಳನ್ನು ಮಾಡಿದ ತಂಡದ ಯುವ ಕಲಾವಿದರ ನಿರ್ವಹಣೆ ತೃಪ್ತಿಕರವಾಗಿತ್ತು. ಆದರೆ ಮಾತುಗಾರಿಕೆಯಲ್ಲಿ ಹಾಗೂ ಮಾತಿನ ಶೈಲಿಯಲ್ಲಿ ಇವರು ಇನ್ನಷ್ಟು ಪಳಗಬೇಕು. ರಾಕ್ಷಸ ಹಾಗೂ ಸಹಚರರ ವಿಶಿಷ್ಟವಾದ ಪ್ರವೇಶ ಕುಣಿತ ಮುದ ನೀಡಿತು. ಮುನಿಯ ಹೋಮಹವನದಲ್ಲಿ ಬ್ರಾಹ್ಮಣರಾಗಿ ಕಾಣಿಸಿಕೊಂಡ ಪುಟ್ಟ ಮಕ್ಕಳ ಕಲರವ ಪ್ರದರ್ಶನದ ಸೊಗಸನ್ನು ಹೆಚ್ಚಿಸಿತು.ಭಾಗವತರಾಗಿ ಗಿರೀಶ್‌ ರೈ ಕಕ್ಯಪದವು ಹಾಗೂ ಪ್ರಖ್ಯಾತ್‌ ಶೆಟ್ಟಿ ಮಕ್ಕಳ ಭಾವವನ್ನು ಅರಿತು ಸುಶ್ರಾವ್ಯವಾಗಿ ಹಾಡಿದರು. ಮದ್ದಳೆಯಲ್ಲಿ ಗುರುಪ್ರಸಾದ್‌, ಚೆಂಡೆಯಲ್ಲಿ ಪದ್ಮನಾಭ ಉಪಾಧ್ಯಾಯ ಹಾಗೂ ಚಕ್ರತಾಳದಲ್ಲಿ ರಾಜೇಂದ್ರ ಕೃಷ್ಣ ಸಹಕರಿಸಿದರು.

ನರಹರಿ ರಾವ್‌ ಕೈಕಂಬ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.