ಸುನಾದ ಯುವದನಿಯಲ್ಲಿ ಅನೀಶ್‌ ಗಾಯನ


Team Udayavani, Apr 14, 2017, 3:50 AM IST

14-KALA-7.jpg

ಸಂಗೀತವು ಮನಸ್ಸಿಗೆ ಆಹ್ಲಾದವನ್ನೊದಗಿಸುವ ಕಲೆ. ಈ ಕಾರಣದಿಂದ ಅದು ಆಕರ್ಷಕವಾದ ಮಾನಸ ಸಂಪರ್ಕ ಮಾಧ್ಯಮ. ಆಡಿದ ಮಾತಿಗಿಂತ ಹಾಡಿದ ಮಾತು ಲೇಸು ಎಂಬ ನಾಣ್ನುಡಿ ಅರ್ಥಪೂರ್ಣವಾದುದು ಈ ಕಾರಣದಿಂದಲೇ. ಭಗವಂತನ ಸಾಕ್ಷಾತ್ಕಾರಕ್ಕೆ ಅತ್ಯಂತ ಸುಲಭ ಹಾಗೂ ಉತ್ಕೃಷ್ಟವಾದ ಮಾರ್ಗವೇ ಸಂಗೀತಾರಾಧನೆ. ಮಾನವನ ಲೌಕಿಕ ಜಂಜಾಟವನ್ನು ಸಡಿಲ ಮಾಡಿ ಅವನನ್ನು ಮಾನವೀಯತೆಗೆ ಒಯ್ದು, ಸುಸಂಸ್ಕೃತನನ್ನಾಗಿ ಮಾಡುವ ಏಕೈಕ ಸಾಧನವೇ ಸಂಗೀತ ಕಲೆ. ಇಂತಹ ಸಂಗೀತ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಬಹಳ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಪುತ್ತೂರಿನ ಸುನಾದ ಸಂಗೀತ ಕಲಾ ಶಾಲೆಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇವುಗಳಲ್ಲಿ ಬಹಳ ಮುಖ್ಯವಾದುದು “ಸುನಾದ ಯುವದನಿ’ ಕಾರ್ಯಕ್ರಮ. ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸುನಾದ ಯುವ ದನಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮಾಲಿಕೆಯ 152ನೇ ಕಾರ್ಯಕ್ರಮವು ಎಪ್ರಿಲ್‌ 2ರಂದು ಪುತ್ತೂರಿನ ಸುನಾದ ಸಭಾಂಗಣದಲ್ಲಿ ಸಂಪನ್ನಗೊಂಡಿತು.

ಈ ಸಂಚಿಕೆಯ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ಯನ್ನು ಉದಯೋನ್ಮುಖ ಕಲಾವಿದರಾದ ಅನೀಶ್‌ ವಿ. ಭಟ್‌ ಬಹಳ ಪ್ರೌಢ ರೀತಿಯಲ್ಲಿ ನಡೆಸಿ ಕೊಟ್ಟರು. ಇವರಿಗೆ ವಯಲಿನ್‌ನಲ್ಲಿ ಕಾರ್ತಿಕೇಯ ಆರ್‌. ಬೆಂಗಳೂರು, ಮೃದಂಗದಲ್ಲಿ ಅಕ್ಷಯ ನಾರಾಯಣ  ಕಾಂಚನ ಹಾಗೂ ಘಟಂನಲ್ಲಿ ವಿ| ಮೈಸೂರು ಮಂಜುನಾಥ್‌ ಸಹಕರಿಸಿದರು. 

ಕಲಾವಿದರು ಅಭೋಗಿ ರಾಗದ ವರ್ಣ ಎವ್ವರಿಬೋಧದೊಂದಿಗೆ ಕಛೇರಿಯನ್ನು ಆರಂಭಿಸಿದರು. ಬಳಿಕ ಧೇನುಕ‌ ರಾಗದ ಪ್ರಸಿದ್ಧ ಕೃತಿ ತೆಲಿಯಲೇರು ರಾಮ ಚುರುಕಾದ ಸ್ವರಪ್ರಸ್ತಾರದೊಂದಿಗೆ ಭಕ್ತಿಪ್ರಧಾನವಾಗಿ ಮೂಡಿಬಂತು. ಅನಂತರದ ಅಠಾಣ ರಾಗ, ವಿಳಂಬ ಲಯದ ಬಾಲಕನಕಮಯ ಎಂಬ ಕೃತಿಯು ಮನೋಜ್ಞವಾಗಿ ಮೂಡಿಬಂತು. ತದನಂತರ ಬಿಲಹರಿ ರಾಗದ ಖಂಡಛಾಪು ತಾಳದ ತೊಲಿಜನ್ಮ ಕೃತಿಯು ಸೊಗಸಾದ ಆಲಾಪನೆಯೊಂದಿಗೆ ಪ್ರಸ್ತುತಗೊಂಡಿತು. ಸಾರಸಾಂಗಿ ರಾಗದ ಸ್ವಾತಿ ತಿರುನಾಳ್‌ರವರ ಪ್ರಸಿದ್ಧ ಕೃತಿ ಜಯ ಜಯ ಪದ್ಮನಾಭ ಕೃತಿಯು ಉತ್ತಮವಾದ ಸ್ವರಪ್ರಸ್ತಾರದೊಂದಿಗೆ ಸಂಗೀತ ರಸಿಕರನ್ನು ಭಾವಪೂರ್ಣಗೊಳಿಸುವಲ್ಲಿ ಯಶಸ್ವಿಯಾಯಿತು.

ಕಲಾವಿದರು ಕಾರ್ಯಕ್ರಮದ ಪ್ರಧಾನ ಕೃತಿಯಾಗಿ ಸಾರ್ವಕಾಲಿಕ ರಾಗವಾದ ಕಲ್ಯಾಣಿಯ ವಿಳಂಬ ಲಯದ ಏತವುನ್ನರ ಕೃತಿಯನ್ನು ಬಹಳ ಉತ್ಕೃಷ್ಟ ರೀತಿಯಲ್ಲಿ, ವಿದ್ವತ್‌ಪೂರ್ಣವಾಗಿ ಪ್ರಸ್ತುತಪಡಿಸಿದರು. ರಾಗ ಆಲಾಪನೆಯಲ್ಲಿ ದಾಟು ಪ್ರಯೋಗ, ದೀರ್ಘ‌ ಸ್ವರ, ಷಡ್ಜ ಪಂಚಮಗಳನ್ನು ವಜ್ಯì ಮಾಡಿ ಹಾಡಿದ ಪರಿ ಬಹಳ ಅನನ್ಯವಾಗಿತ್ತು. ಸೀತಾಗೌರಿ ಎಂಬಲ್ಲಿನ ನೆರವಲ್‌, ಸ್ವರ ಪ್ರಸ್ತಾರಗಳಲ್ಲಿ ಕಲಾವಿದರು ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದರು. ವಯಲಿನ್‌ನಲ್ಲಿ ಕಾರ್ತಿಕೇಯ ಉತ್ತಮವಾಗಿ ಸಹಕರಿಸಿದರು. ಕಛೇರಿಗೆ ಪೂರಕವಾಗಿ ಮೃದಂಗದಲ್ಲಿ ಅಕ್ಷಯ ನಾರಾಯಣ ಕಾಂಚನ ಹಾಗೂ ಘಟಂನಲ್ಲಿ ವಿ| ಮೈಸೂರು ಮಂಜುನಾಥ್‌ರವರ ತನಿ ಆವರ್ತನವು ಸಂಗೀತ ರಸಿಕರ ಮನ ರಂಜಿಸಿತು. ಬಳಿಕ ಎಂ. ಡಿ. ರಾಮನಾಥ್‌ ಅವರ ರಚನೆಯಾದ ಬಾಗೇಶ್ರೀ ರಾಗದ ಸಾಗರ ಶಯನ ಬಹಳ ಭಾವ ಪೂರ್ಣವಾಗಿ ಮೂಡಿಬಂತು. ಪವಮಾನದೊಂದಿಗೆ  ಕಾರ್ಯಕ್ರಮ ಮುಕ್ತಾಯಗೊಂಡಿತು. 

 ವಿ| ಶಿಲ್ಪಾ ಸಿ. ಎಚ್‌. ಹಾಗೂ ಡಾ| ರಾಮಕೃಷ್ಣ ಭಟ್‌ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರತೀ ತಿಂಗಳ ಮೊದಲ ರವಿವಾರದಂದು ನಡೆಯುತ್ತಿರುವ “ಸುನಾದ ಯುವದನಿ’ ಪೂರ್ಣಪ್ರಮಾಣದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿರುವುದು ನಿಜಕ್ಕೂ ಪ್ರಶಂಸನೀಯ. 

ಸಂಧ್ಯಾ ಸತ್ಯನಾರಾಯಣ್‌

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.