ಸುಂದರ ಸುನಾದ ಸಂಗೀತ
Team Udayavani, Feb 8, 2019, 12:30 AM IST
ಸುನಾದ ಸಂಗೀತ ಶಾಲೆಯ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳು ಕ್ರಮ ಪ್ರಕಾರ ತಮ್ಮ ಸರದಿ ಬಂದಾಗ ತಮ್ಮ ಗುಂಪಿನೊಂದಿಗೆ ಸುಶ್ರಾವ್ಯವಾಗಿ ಹಾಡುತ್ತಾರೆ. ವಯಲಿನ್ ಮತ್ತು ಮೃದಂಗದಲ್ಲಿ ಅಲ್ಲಿನ ವಿದ್ಯಾರ್ಥಿಗಳೇ ಸಹಕರಿಸಿದ್ದು ಖುಷಿ ಎನಿಸಿತು. ಮಕ್ಕಳು ತಮಗಾದ ಪಾಠದಲ್ಲೇ ಸರದಿ ಪ್ರಕಾರ ಮೃದಂಗವನ್ನು ಪುಟ್ಟ ಪುಟ್ಟ ಕೈಗಳಲ್ಲಿ ಬಾರಿಸುತ್ತಿದ್ದದ್ದು,ವಯಲಿನ್ ನುಡಿಸುತ್ತಿದ್ದದ್ದು ಗಮನ ಸೆಳೆದ ವಿಚಾರ. ಒಂದೊಂದು ಶಾಖೆಯಲ್ಲೂ ಎರಡೆರಡು ದಿನ ಸಂಗೀತ ಕಾರ್ಯಕ್ರಮ ನಡೆಯಿತು.
ಕೊನೆಯಲ್ಲಿ ವಿ| ಗಾಯತ್ರಿ ವೆಂಕಟರಾಘವನ್ ಚೆನ್ನೈ ಅವರ ಕಛೇರಿ. ಸ್ವರ ಆಲಾಪನೆ, ತನಿ, ನೆರವಲ್ ಎಲ್ಲವೂ ಇನ್ನು ಹೇಗೆ ಹಾಡಬಹುದು ಎಂಬ ಕುತೂಹಲ ಹುಟ್ಟಿಸುತ್ತಿತ್ತು. ಹಾಡುವ ರೀತಿ ವಿಭಿನ್ನವಾಗಿತ್ತು. ಗಜವದನ ಬೇಡುವೆ ಕೇದಾರ ರಾಗವನ್ನು ಮೊದಲಿಗೆ ಹಾಡಿದರು. ಅನಂತರ ಶ್ರೀ ರಾಗದ ವಂದೇ ವಾಸುದೇವಂ ಸ್ವರ ಆಲಾಪನೆ ಮಾಡಿ ಹಾಡಿದರು. ಅನಂತರ ಬಂಟು ರೀತಿ ಕೋಲು ಕೃತಿ ಆಲಾಪನೆ ಮುಖಾಂತರ ಸ್ವರ ಹಾಕಿ ಹಾಡಿದರು. ಅದನ್ನು ಮಕ್ಕಳು ಗುರುತಿಸಿ ರಾಗ ಹಂಸನಾದ ಬಂಟು ರೀತಿ ಕೃತಿ ಎಂದು ಮಕ್ಕಳೇ ಚರ್ಚಿಸಿದ್ದು ಅತೀವ ಸಂತೋಷ .ಹಲವು ಆವರ್ತಗಳ ಜನನೀ ನಿನ್ನುವಿನಾ ರೀತಿ ಗೌಳ, ಶಂಕರಾಬಾರಣ ಸ್ವರ, ರಾಗ ಸುಧಾ(ತನಿ) ವಿಜೃಂಭಿಸಿತು.ಮಂತ್ರ ಮುಗ್ಧರಾಗುವಂತೆ ಮಾಡಿದ್ದು ರಾಗ- ತಾನ- ಪಲ್ಲವಿ. 5 ರಾಗಗಳನ್ನೊಳಗೊಂಡ ಪಂಚಮುಖೀ ಅನಂತರದ ಸರದಿಯಲ್ಲಿ. ಕಂಡು ಧನ್ಯನಾದೆ ಬೇಹಾಗ್ ರಾಗ, ಸರಸ್ವತಿಯ ಜಯ ಜಯ ಹೇ ಭಗವತಿ ತಿಲ್ಲಾನ, ಮೈತ್ರೀಮ್ ಭಜನಾ, ಮಂಗಳದೊಂದಿಗೆ ಕೊನೆಗೊಂಡಿತು.
ವೇಣಿ ಪ್ರಸಾದ್