ತಾಳಮದ್ದಳೆಯ ಪಾರಂಪರಿಕ ಪ್ರಯೋಗ


Team Udayavani, Jan 4, 2019, 12:30 AM IST

x-61.jpg

ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯ ದೇವಸ್ಥಾನ ಎಂದರೆ ನೆನಪಿಗೆ ಬರುವುದು ಯಕ್ಷಗಾನ. ಇಲ್ಲಿ ಪ್ರತಿ ದಿನ ಯಕ್ಷಗಾನ ನಿರಂತರವಾಗಿ ಉಸಿರಾಡುತ್ತಿರುತ್ತದೆ. ಯಕ್ಷಗಾನ ಪ್ರಿಯರಿಗೆ ಈ ಜಾಗವು ನಿರಂತರ ಯಕ್ಷಗಾನದ ರಸದೌತಣವನ್ನು ನೀಡುತ್ತಾ ಬಂದಿದೆ. ಬಡಗು, ಬಡಾಬಡಗು, ತೆಂಕುತಿಟ್ಟಿನ ಎಲ್ಲ ಪ್ರಸಿದ್ಧ ಮೇಳಗಳು ಒಂದಾದರೂ ಪ್ರದರ್ಶನ ನೀಡಿದೆ. ತಾಳಮದ್ದಳೆ ಕೂಟವು ನಿರಂತರ ನಡೆಯುತ್ತಿರುತ್ತದೆ. ಈ ಸಲ ಡಿ. 25 ರಂದು ದೇವಸ್ಥಾನದ ಬಯಲು ರಂಗ ಮಂಟಪದಲ್ಲಿ ತಾಳಮದ್ದಳೆ ಪರಂಪರೆಯ ವಿಶಿಷ್ಠ ಪ್ರಯೋಗ ಜೋಡುಕೂಟ ವೈಭವದಲ್ಲಿ “ಕರ್ಣಾವಸಾನ’ ಎಂಬ ಮಹಾಭಾರತದ ಕಥಾನಕ ಪ್ರಸಿದ್ಧ ಕಲಾವಿದರ ಕೊಡುವಿಕೆಯಿಂದ ಜರಗಿತು. ಒಂದು ಪಾತ್ರವನ್ನು ಇಬ್ಬಿಬ್ಬರು ಅರ್ಥದಾರಿಗಳು ವ್ಯಾಖ್ಯಾನಿಸುವ ಒಂದು ಸುಂದರ ಸನ್ನಿವೇಶ ಕಿಕ್ಕಿರಿದು ಸೇರಿದ ಶ್ರೋತೃಗಳನ್ನು ಮಂತ್ರಮುಗ್ಧರಾಗುವಂತೆ ಮಾಡಿತು. ಪ್ರಸಂಗ ಈ ಪ್ರಯೋಗಕ್ಕೆ ಹೇಳಿ ಮಾಡಿಸಿದಂತಿತ್ತು.

ಮೊದಲ ಭಾಗದಲ್ಲಿ ಭಾಗವತರಾಗಿ ಬಲಿಪ ಪ್ರಸಾದ್‌, ಬಲಿಪ ಶಿವ ಶಂಕರ, ಪಟ್ಲ ಸತೀಶ್‌ ಶೆಟ್ಟಿ, ಗಿರೀಶ್‌ ರೈ ಕಕ್ಕೆಪದವು ಇವರ ಸುಶ್ರಾವ್ಯ ಕಂಠಸಿರಿಯಲ್ಲಿ, ಕರ್ಣನಾಗಿ ಉಜಿರೆ ಅಶೋಕ್‌ ಭಟ್‌, ಸುಣ್ಣಂಬಲ ವಿಶ್ವೇಶ್ವರ ಭಟ್‌, ಅರ್ಜುನನಾಗಿ ಜಬ್ಟಾರ್‌ ಸಮೊ ಸಂಪಾಜೆ, ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ, ಕೃಷ್ಣನಾಗಿ ವಾದಿರಾಜ ಕಲ್ಲೂರಾಯ ಮತ್ತು ಪವನ್‌ ಕುಮಾರ್‌ ಕಿರಣಕೆರೆ ವಾಕ್ಚತುರ್ಯದಿಂದ ಯಕ್ಷಗಾನ ಪ್ರೇಮಿಗಳು ಮಂತ್ರ ಮುಗ್ಧರಾಗುವಂತೆ ಮಾಡಿದರು. ಇಲ್ಲಿ ಅವರಿಗೆ ತಮ್ಮ ಪ್ರತಿಭೆಯನ್ನು ಪ್ರಸ್ತುತ ಪಡಿಸಲು ಅವಕಾಶವೂ ತುಂಬಾ ಇತ್ತು. 

ಎರಡನೇ ಭಾಗದಲ್ಲಿ , ಕರ್ಣನಾಗಿ ವಾಸುದೇವ ರಂಗ ಭಟ್‌, ಸಂಕದಗುಂಡಿ ಗಣಪತಿ ಭಟ್‌, ಅರ್ಜುನನಾಗಿ ದಿನೇಶ್‌ ಶೆಟ್ಟಿ ಕಾವಲ್ಕಟ್ಟೆ, ಸದಾಶಿವ್‌ ಆಳ್ವ ತಲಪಾಡಿ, ಶಲ್ಯನಾಗಿ ವಿಟ್ಲ ಶಂಭು ಶರ್ಮ, ಗಣೇಶ್‌ ಶೆಟ್ಟಿ ಕನ್ನಡಿಕಟ್ಟೆ, ಸರ್ಪಾಸ್ತ್ರದಲ್ಲಿ ರಾಮ ಜೋಯಿಸ ಬೆಳ್ಳಾರೆ, ಮಿಂಚಿದರು.ರವಿಚಂದ್ರ ಕನ್ನಡಿಕಟ್ಟೆ, ದೇವಿ ಪ್ರಸಾದ್‌ ಆಳ್ವ ತಲಪಾಡಿ ಭಾಗವತರಾಗಿ ಸಹಕರಿಸಿದರು. ಚೆಂಡೆ ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್‌ ಬೊಳಿಂಜಡ್ಕ , ಮುರಾರಿ ಕಡಂಬಳಿತ್ತಾಯ, ಚೈತನ್ಯ ಕೃಷ್ಣ ಪದ್ಯಾಣ , ಕಡಬ ವಿನಯ್‌ ಆಚಾರ್‌, ಪೂರ್ಣೇಶ್‌ ಆಚಾರ್‌ ಸಹಕರಿಸಿದರು. ಈ ತಾಳಮದ್ದಳೆ ಕೂಟವು ಕೇವಲ ಮನೋರಂಜನೆ ಕೂಟವಾಗದೆ , ವಿದ್ವತ್‌ಪೂರ್ಣವೂ ಆಗಿತ್ತು. 

ಯೋಗೀಶ್‌ ಕಾಂಚನ್‌ 

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.