ಸಂಪ್ರದಾಯಬದ್ಧವಾಗಿ ನಡೆದ ಭೀಷ್ಮ ವಿಜಯ

ಯಕ್ಷದೇಗುಲ ಕಲಾವಿದರ ಪ್ರಸ್ತುತಿ

Team Udayavani, Dec 6, 2019, 4:46 AM IST

ws-5

ಸುಮಾರು ನಾಲ್ಕೈದು ದಶಕಗಳ ಹಿಂದೆ ವೇಷಗಳ ಹಿಂಭಾಗದಲ್ಲಿ ಪಾಕು ಸೀರೆಯನ್ನು ಕಟ್ಟುವ ಕ್ರಮ ಇದ್ದಂತಿಲ್ಲ. ಕಿರೀಟ ವೇಷಗಳಿಗೆ ಕಿರೀಟದ ಕೆಳಭಾಗಕ್ಕೆ ಕಟ್ಟಿದ ಚೌರಿ ಮತ್ತು ಸೊಂಟದ ಕೆಳಭಾಗಕ್ಕೆ ಕಟ್ಟುತ್ತಿದ್ದ ತ್ರಿಕೋನಾಕರದ ಬಟ್ಟೆ ಹಿಂಭಾಗವನ್ನು ಮುಚ್ಚುತ್ತಿತ್ತು.

ಇತ್ತೀಚಿಗೆ ಸೌಕೂರು ದುರ್ಗಾಪರಮೇಶ್ವರಿ ದೇವಳದ ಸಭಾಭವನದಲ್ಲಿ ಬಣ್ಣದ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಪ್ರತಿಷ್ಠಾನದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಯಕ್ಷದೇಗುಲ ಕಲಾವಿದರು ಕೆ. ಮೋಹನ್‌ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದ “ಭೀಷ್ಮವಿಜಯ’ ಪ್ರಸಂಗವು ಸಂಪ್ರದಾಯ ಶೈಲಿಯ ರಂಗ ನಡೆ, ಕುಣಿತ, ವೇಷಭೂಷಣಗಳ ಮೂಲಕ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಯಿತು.

ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಯವರು ರಚಿಸಿದ ಪ್ರಸಂಗ “ಭೀಷ್ಮವಿಜಯ’. ಕಾಶೀರಾಜ ಪ್ರತಾಪಸೇನ ಮೂವರು ಹೆಣ್ಣು ಮಕ್ಕಳಿಗೆ ಸ್ವಯಂವರವನ್ನು ಏರ್ಪಡಿಸುವುದು, ಸಾಲ್ವ ಶೃಂಗಾರ, ಭೀಷ್ಮ ಪಣವನ್ನು ಗೆದ್ದು ಮೂವರನ್ನು ಹಸ್ತಿನಾವತಿಗೆ ಕರೆತರುವುದು. ತಮ್ಮನಾಗಿರುವ ವಿಚಿತ್ರವೀರ್ಯನನ್ನು ವರಿಸುವಂತೆ ಹೇಳುವುದು. ಅಂಬಿಕೆ-ಅಂಬಾಲಿಕೆಯರು ಒಪ್ಪುವುದು. ಅಂಬೆ, ಸಾಲ್ವ ಪ್ರಣಯವನ್ನು ಭೀಷ್ಮನಲ್ಲಿ ತಿಳಿಸುವುದು, ಬ್ರಾಹ್ಮಣರ ಜೊತೆಯಲ್ಲಿ ಅಂಬೆಯನ್ನು ಕಳಿಸಿಕೊಡುವುದು, ಸಾಲ್ವ ಅಂಬೆಯನ್ನು ತಿರಸ್ಕರಿಸುವುದು, ವಿವಾಹವಾಗುವಂತೆ ಅಂಬೆ ಪುನಃ ಭೀಷ್ಮನನ್ನು ಕೇಳುವುದು. ಭೀಷ್ಮ ನಿರಾಕರಿಸುವುದು, ಆತನ ಮೇಲಿನ ಪ್ರತೀಕಾರಕ್ಕಾಗಿ ಅಂಬೆ ಕಿರಾತ ಏಕಲವ್ಯನನ್ನು ಕರೆತರುವುದು, ಕಿರಾತನಿಗೆ ಜೀವದಾನ, ಹೋತ್ರವಹನ- ಶೈಖಾವತ್ಸ್ಯ ಪ್ರಕರಣ. ಶೈಖಾವತ್ಸéನ ಮೂಲಕ ವಿಷಯ ತಿಳಿದ ಗುರು ಪರಶುರಾಮರು ಭೀಷ್ಮನಿಗೆ ತಿಳಿಹೇಳುವುದು ಗುರು-ಶಿಷ್ಯರ ಸಂಗ್ರಾಮ, ಪರಶುರಾಮರು ಶಿಷ್ಯನನ್ನು ಮೆಚ್ಚುವುದು, ಅಂಬೆಯ ಶಪಥ ಮತ್ತು ಅಗ್ನಿಪ್ರವೇಶ ಇದು ಪ್ರಸಂಗದ ಕಥಾ ಹಿನ್ನಲೆ.

ನಡುತಿಟ್ಟಿನ ಪ್ರಾತಿನಿಧಿಕ ಕೊಂಡಿಯಾಗಿ, ವೃತ್ತಿ ಮತ್ತು ಹವ್ಯಾಸಿ ಕಲಾವಿದರೊಂದಿಗೆ ಸಮರ್ಥವಾಗಿ ವೇಷ ನಿರ್ವಹಿಸುತ್ತಿರುವ ಸುಜಯೀಂದ್ರ ಹಂದೆಯವರು ಕುಣಿತ-ಶೈಲಿ, ಹದವರಿತ ಮಾತು, ವೇಷಭೂಷಣಗಳ ಮೂಲಕ ಪರಂಪರೆಯನ್ನು ನೆನಪಿಸಿ ಮೆಚ್ಚುಗೆಗಳಿಸಿದರು. ಸುಮಾರು ನಾಲ್ಕೈದು ದಶಕಗಳ ಹಿಂದೆ ವೇಷಗಳ ಹಿಂಭಾಗದಲ್ಲಿ ಪಾಕು ಸೀರೆಯನ್ನು ಕಟ್ಟುವ ಕ್ರಮ ಇದ್ದಂತಿಲ್ಲ. ಕಿರೀಟ ವೇಷಗಳಿಗೆ ಕಿರೀಟದ ಕೆಳಭಾಗಕ್ಕೆ ಕಟ್ಟಿದ ಚೌರಿ ಮತ್ತು ಸೊಂಟದ ಕೆಳಭಾಗಕ್ಕೆ ಕಟ್ಟುತ್ತಿದ್ದ ತ್ರಿಕೋನಾಕರದ ಬಟ್ಟೆ ಹಿಂಭಾಗವನ್ನು ಮುಚ್ಚುತ್ತಿತ್ತು. ಕೇದಗೆ ಮುಂದಲೆ ವೇಷಗಳಿಗೆ ನಾಟಕ ವೇಷಗಳಂತೆ ಪಾಕು ರೀತಿಯಲ್ಲಿ ಚೌಕಕಾರ ವಿನ್ಯಾಸ ಹೊಂದಿದ ಬಟ್ಟೆಯನ್ನು ಕಟ್ಟುತ್ತಿದ್ದು ಅದಕ್ಕೆ ಬೆನ್ನುವಸ್ತ್ರ ಎನ್ನುತ್ತಿದ್ದರು. ಮತ್ತು ಎದೆಕಟ್ಟಿನ ಮೇಲೆ ಅಡ್ಡಲಾಗಿ “ಡಾಲು’ ಎನ್ನುವ ಪರಿಕರವನ್ನು ಧರಿಸುತ್ತಿದ್ದರು ಎಂಬುದು ತಿಳಿದವರ ಅಭಿಪ್ರಾಯ. ವೇಷ ಸೌಂದರ್ಯಕ್ಕಾಗಿ ಹಲವಾರು ಮಾರ್ಪಾಡುಗಳನ್ನು ತಂದಿರುವ ಕೋಟ ಶಿವರಾಮ ಕಾರಂತರು ವೇಷಗಳ ಹಿಂದೆ ಪಾಕು ಸೀರೆಗಳನ್ನು ಬಳಸುತ್ತಿದ್ದು, ಮುಂದೆ ಈ ಸುಂದರ ಬದಲಾವಣೆ ಸಾರ್ವತ್ರಿಕವಾಯಿತು.

ಭೀಷ್ಮನ ವೇಷಗಾರಿಕೆಯಲ್ಲಿ ಹಿಂದಿನ ಕ್ರಮವನ್ನ ತೋರಿಸಿರುವುದು ಪ್ರಶಂಸೆಗೆ ಪಾತ್ರವಾಯಿತು. ಹಿತಮಿತವಾದ ಕುಣಿತ, ಮಾತುಗಾರಿಕೆ ಮತ್ತು ಮನೋಜ್ಞ ಅಭಿನಯದ ಮೂಲಕ ಅಂಬೆಯ ಪಾತ್ರ ನಿರ್ವಹಿಸಿದ ಮನೋಜ್‌ ಭಟ್‌ ಆಂಗಿಕ ಚರ್ಯೆಗಳ ಮೂಲಕ ನಗೆಯುಕ್ಕಿಸುವ ನರಸಿಂಹ ತುಂಗ ಬ್ರಾಹ್ಮಣನಾಗಿ ರಂಜಿಸಿದರು. ಅಂತೆಯೇ ಸಾಲ್ವನ ಪಾತ್ರವನ್ನು ಬಣ್ಣದ ವೇಷದಲ್ಲಿ ನಿರ್ವಹಿಸುತ್ತಿದ್ದುದು ಕ್ರಮ. ಕೆರೆಮನೆ ಶಂಭು ಹೆಗಡೆಯವರು ಆ ಪಾತ್ರವನ್ನು ಕೆಂಪು ಮುಂಡಾಸಿನ ವೇಷವನ್ನಾಗಿಸಿ ಶೃಂಗಾರ ರಸಕ್ಕೆ ಪ್ರಾಧಾನ್ಯತೆಯನ್ನು ನೀಡಿ ಪರಿಷ್ಕರಿಸುವುದರಿಂದ ಹಾಗೆಯೇ ಆ ಪಾತ್ರವನ್ನು ನಿರ್ವಹಿಸುವುದು ರೂಢಿಯಾಗಿರಬೇಕು. ಉಳಿದ ವೇಷಗಳಿಗಿಂತ ಒಂದೆರಡು ಗಂಟೆ ಹೆಚ್ಚು ಸಮಯ ಹಿಡಿಯುವ ಬಣ್ಣದ ವೇಷವನ್ನು ಕೃಷ್ಣಮೂರ್ತಿ ಉರಾಳರು ನಿರ್ವಹಿಸಿ ಸಾಲ್ವನ ಪಾತ್ರಕ್ಕೆ ಮುಂಡಾಸು ವೇಷದ ಕೊರತೆ ಕಂಡುಬಾರದಂತೆ ನ್ಯಾಯ ಒದಗಿಸಿಕೊಟ್ಟರು.

ಅಕ್ಕಿಹಿಟ್ಟಿನಿಂದ ಚುಟ್ಟಿಯಿಟ್ಟು ಆಕರ್ಷಕವಾದ ಮುಖವರ್ಣಿಕೆಯ ಮೂಲಕ ತಮ್ಮ ಪ್ರಸಾದನ ಕಲೆಗಾರಿಕೆಯನ್ನು ತೋರಿಸಿಕೊಟ್ಟರು. ವೈವಿಧ್ಯಕ್ಕಾಗಿ ಕಿರಾತ ವೇಷಕ್ಕೆ ಕೋರೆ ಮುಂಡಾಸು ಹಾಗೂ ಜೋಡಿ ಮುಂಡಾಸು ಕಟ್ಟುವ ಕ್ರಮವೂ ಇದೆ. ಸುದರ್ಶನ ಉರಾಳರು ಕಿರಾತ ವೇಷದ ಕೋರೆ ಮುಂಡಾಸನ್ನು ಅಟ್ಟೆಕಟ್ಟಿ ಸುಂದರವಾಗಿ ವಿನ್ಯಾಸಗೊಳಿಸಿರುವುದು ವಿಶೇಷ. ಏಕಲವ್ಯನ ಪಾತ್ರ ನಿರ್ವಹಿಸಿದ ಪ್ರಣವ್‌ ಭಟ್‌ ಕುಣಿತ ಮತ್ತು ಮಾತುಗಳಲ್ಲಿ ವಿಭಿನ್ನತೆಯನ್ನು ಮೆರೆದರು. ಕಿರಾತನ ಸಹಚರರಾಗಿ ನರಸಿಂಹ ತುಂಗ, ಶಿವಾನಂದ ಕೋಟ, ನವೀನ್‌ ಮಣೂರು ಅವರು ಪಡೆವೇಷಗಳ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಕುಣಿತ ಮತ್ತು ಹಾಸ್ಯಭರಿತ ಮಾತುಗಳಿಂದ ರಂಜಿಸಿದರು. ಪರಶುರಾಮನ ವೇಷದಲ್ಲಿ ಕಾಣಿಸಿಕೊಂಡ ತಮ್ಮಣ್ಣ ಗಾಂವ್ಕರ್‌ ಪಾತ್ರೋಚಿತ ನಿರ್ವಹಣೆಯಿಂದ ಗಮನಸೆಳೆದರು. ಭೀಷ್ಮ ಮತ್ತು ಪರಶುರಾಮನ ಸಂಭಾಷಣೆಯ ಸನ್ನಿವೇಷ ಉತ್ತಮವಾಗಿ ಮೂಡಿಬಂತು. ದೇವರಾಜದಾಸ್‌, ಲಂಬೋದರ ಹೆಗಡೆ ಭಾಗವತಿಕೆಯಲ್ಲಿ ತಮ್ಮ ಪ್ರತಿಭೆಯನ್ನು ತೋರಿದರು. ಯಲ್ಲಾಪುರ ರಾಘವೇಂದ್ರ ಹೆಗಡೆ, ಮದ್ದಲೆ ವಾದನದಲ್ಲಿ ಹಾಗೂ ಕಟೆRàರಿ ಮಂಜುನಾಥ ನಾವಡ ಹಾಗೂ ಸುದೀಪ ಉರಾಳ ಅವರು ಸ್ಪರ್ಧಾತ್ಮಕ ಹಿಮ್ಮೇಳ ಸಾಂಗತ್ಯವನ್ನು ಒದಗಿಸಿದರು.

ರಾಘವೇಂದ್ರ ತುಂಗ ಕೋಟ

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.