ದೇವ ಭಕ್ತಿ, ದೇಶ ಭಕ್ತಿಯ ಸಂಗಮವಾದ ಸಾಂಸ್ಕೃತಿಕ ಸಂಜೆ 


Team Udayavani, Nov 23, 2018, 6:00 AM IST

7.jpg

ಬೈಂದೂರಿನ ಶಾರದೋತ್ಸವದ ಅಂಗವಾಗಿ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡ ಪ್ರಸ್ತುತಪಡಿಸಿದ ನೃತ್ಯ ಕಾರ್ಯಕ್ರಮ ದೇವ ಭಕ್ತಿ-ದೇಶ ಭಕ್ತಿಯ ಸಂಗಮವಾಯಿತು. ರೋಮಾಂಚನಕಾರಿ ಅಭಿನಯದ ಮಹಿಷ ಮರ್ದಿನಿ ನೃತ್ಯ ಮನಸೆಳೆಯಿತು. ದೇವಿಯ ಭೀಬತ್ಸ ಕಣ್ಣುಗಳು, ಹಾವ-ಭಾವ, ಭಯ ಹುಟ್ಟಿಸುವ ರೌದ್ರಾವತಾರ  ರೋಮಾಂಚನಗೊಳಿಸಿತು. ಪೌರಾಣಿಕ ಕಥನವನ್ನು ಪರಿಣಾಮ ಕಾರಿಯಾಗಿ ನೃತ್ಯದ ಮೂಲಕ ಪ್ರಸ್ತುತೀಕರಿಸುವ ಕ್ಲಿಷ್ಟಕರ ಕೆಲಸವನ್ನು ಶ್ವೇತಾ ಅರೆಹೊಳೆ ನೇತೃತ್ವದಲ್ಲಿ ಹದಿಹರೆಯದ ಸದಸ್ಯರು ಕಠಿಣ ಪರಿಶ್ರಮದ ಮೂಲಕ ಸಾಕಾರಗೊಳಿಸಿದರು. 

ದೇವಿಯ ರೂಪದಲ್ಲಿ ರಂಗದ ಮೇಲೆ ಅವತರಿಸಿದ ಶ್ವೇತಾ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರನ್ನು ಭಾವವಿಭೋರಗೊಳಿಸಿದರು. ಅಸತ್ಯ ಮತ್ತು ಅಸುರಿ ಶಕ್ತಿಯ ಮೇಲೆ ಸತ್ಯ ಮತ್ತು ಮಾನವೀಯ ಮೌಲ್ಯಗಳ ವಿಜಯದ ಸಂಕೇತವಾದ ಮಹಿಷಾಸುರನ ವಧೆ ಮತ್ತು ಭಕ್ತರನ್ನು ಅನುಗ್ರಹಿಸುವ ನೃತ್ಯರೂಪಕ ಉತ್ತಮ ಸಮನ್ವಯ, ಪಾತ್ರಗಳ ತಾದಾತ್ಮತೆಯಿಂದ ಚಿರಸ್ಥಾಯಿಯಾಗಿರುವಂತೆ ಮಾಡಿತು. ಇಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ತಂತ್ರಜ್ಞಾನದ ಸಹಾಯದಿಂದ ಮಾಡಲಾಗುವ ಅಸುರೀ ಸಂಹಾರದ ವೈಭವೋಪೇತ ದೃಶ್ಯವನ್ನು ಅಷ್ಟೇ ಸಮರ್ಥವಾಗಿ ಮತ್ತು ಆಕರ್ಷಕವಾಗಿ ರಂಗದಲ್ಲಿ ಪ್ರದರ್ಶಿಸಿದ ರೀತಿ ಪ್ರಶಂಸೆಗೆ ಪಾತ್ರವಾಯಿತು. ಅಮೋಘ ರಂಗ ತಂತ್ರದ ಮೂಲಕ ಪ್ರದರ್ಶಿಸಿದ ಜಗಜ್ಜನನಿಯ ವಿರಾಟ್‌ ರೂಪದರ್ಶನವನ್ನು ಪ್ರೇಕ್ಷಕರು ಹರ್ಷಿತರಾಗಿ ಕಣ್ತುಂಬಿಕೊಂಡರು. ಆಕರ್ಷಕ ವೇಷಭೂಷಣ, ಪ್ರಸಾಧನಗಳಿಂದ ಹಾಗೂ ಉತ್ತಮ ಬೆಳಕಿನ ನಿರ್ವಹಣೆಯ ಜತೆಯಲ್ಲಿ ಪ್ರತಿಷ್ಠಾನದ ಮುಖ್ಯಸ್ಥ ಸದಾಶಿವ ರಾವ್‌ ಅವರ ಸಂಕ್ಷಿಪ್ತ ಹಿನ್ನೆಲೆ ವಿವರಣೆ ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಯಿತು. 

ಹರಿಯಿತು ರಾಷ್ಟ್ರಭಕ್ತಿಯ ಹೊಳೆ 
    ಕಾರ್ಯಕ್ರಮದ ಉತ್ತರಾರ್ಧದಲ್ಲಿ ದೇಶ ರಕ್ಷಣೆಯಲ್ಲಿ ತೊಡಗಿದ ಸೈನಿಕರ ಜೀವನಾಧಾರಿತ ನೃತ್ಯ “ಚಕ್‌ ದೇ ಇಂಡಿಯಾ’ ರಾಷ್ಟ್ರ ಭಕ್ತಿಯನ್ನು ಬಡಿದೆಬ್ಬಿಸಿತು. ಜನಪ್ರಿಯ ಹಿಂದಿ ಹಾಡುಗಳನ್ನಾಧರಿಸಿ ಸಂಯೋಜಿಸಿದ ನೃತ್ಯ ರೂಪಕ ಸೈನಿಕರ ತ್ಯಾಗ,ಬಲಿದಾನದ ಮಹತ್ವವನ್ನು ವಿಷದೀಕರಿಸಿತು. ಭಾರತ-ಚೀನ ಯುದೊœàತ್ತರದಲ್ಲಿ ನೆಹರೂರವರ ಕಣ್ಣುಗಳನ್ನು ತೇವಗೊಳಿಸಿತ್ತೆನ್ನಲಾದ ಲತಾ ಮಂಗೇಶ್ಕರ್‌ ಅವರ ಎ ಮೇರೇ ವತನ್‌ ಕೇ ಲೋಗೋ ಜರಾ ಆಂಖ್‌ ಮೇ ಭರಲೋ ಪಾನೀ, ಜೋ ಶಹೀದ್‌ ಹುಯೆ ಉನಿ ಜರಾ ಯಾದ್‌ ಕರಲೋ ಖುರ್ಬಾನಿ…’ ಕಣ್ಣಾಲಿಗಳು ತುಂಬುವಂತೆ ಮಾಡಿತು. ಸಂದೇಶೇಂ ಆತಾ ಹೈ…ಹಮೇ ತಡಪಾತೇ ಹೈ…ಘರ್‌ ಕಬ್‌ ಆವೋಗೇ…’ ಹಾಡು ತಮ್ಮನ್ನು ಪ್ರೀತಿಸುವ ಜೀವಗಳಿಂದ ಸಹಸ್ರಾರು ಮೈಲಿ ದೂರದ ದೇಶದ ಸೀಮೆಯಲ್ಲಿದ್ದು ಪ್ರಾಣವನ್ನೇ ಪಣವಾಗಿಟ್ಟು ಶತ್ರುಗಳಿಂದ ಅನವರತ ರಾಷ್ಟ್ರವನ್ನು ರಕ್ಷಿಸುವ ಸೈನಿಕರ ಮಾನಸಿಕ ತಳಮಳದ ಚಿತ್ರಣ ಮನತಟ್ಟಿತು.  ಧಾರ್ಮಿಕ ಮಹತ್ವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶದ ಕುರಿತು ಚಿಂತಿಸುವಂತೆ, ದೇಶ ರಕ್ಷಕರ ಬಲಿದಾನವನ್ನು ಸ್ಮರಿಸುವಂತೆ ಪ್ರೇರೇಪಿಸುವ ಅಪೂರ್ವ ಕಾರ್ಯಕ್ರಮವಾಯಿತು. 

ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.