ನಾವೀನ್ಯದ ಅನ್ವೇಷಣೆಯ ಕಾಂಚನ ಸಹೋದರಿಯರ ದ್ವಂದ್ವ ಗಾಯನ


Team Udayavani, Sep 7, 2018, 6:00 AM IST

1.jpg

ಇತ್ತೀಚಿನ ದಿನಗಳಲ್ಲಿ ದ್ವಂದ್ವಗಾಯನ ಯಾ ವಾದನಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತಸದ ವಿಷಯ. ಮನಸೂರೆಗೊಂಡ ಒಂದು ಉತ್ತಮವಾದ ಜಂಟಿ ಗಾಯನವನ್ನು ನೀಡಿದವರು “ಕಾಂಚನ ಸಹೋದರಿಯರು’ ಎಂದೇ ಪ್ರಸಿದ್ಧರಾಗಿರುವ ರಂಜನಿ ಮತ್ತು ಶ್ರುತಿರಂಜನಿ. ಆ.1ರಂದು ಪರ್ಕಳದ “ಸರಿಗಮ ಭಾರತಿ’ ಸಭಾಂಗಣದಲ್ಲಿ ಈ ಹಾಡುಗಾರಿಕೆ ನಡೆಯಿತು. ಸದಾ ನಾವೀನ್ಯದ ಅನ್ವೇಷಣೆಯಲ್ಲಿ ತೊಡಗಿರುವ ಮತ್ತು ಸಮಕಾಲೀನ ಗಾಯಕರಿಂದ ಭಿನ್ನ ರೀತಿಯಲ್ಲಿ ನಿರೂಪಿಸುವ ಈ ಗಾಯಕಿಯರ ಕಛೇರಿ ಒಂದು ವಿಶಿಷ್ಟವಾದ ಅನುಭವವಾಗಿತ್ತು.

ಸುಮಾರು 3 ಗಂಟೆ ಕಾಲ ನಡೆದ ಕಛೇರಿ ಯಲ್ಲಿ ಪ್ರಾರಂಭದಿಂದ ಅಂತ್ಯದವರೆಗೂ ಏಕಪ್ರಕಾರವಾಗಿ ವಿಜೃಂಭಿಸಿದ ಬಿಗುತನ, ಲವಲವಿಕೆ, ಹೊಸತನದ ಹೊಳಹುಗಳು, ಘನ, ನಯ ಎರಡಕ್ಕೂ ಸೈಯೆನ್ನುವ ಆತ್ಮವಿಶ್ವಾಸ. ಕೆಲವು ಕಾಲ ಮನದಲ್ಲಿ ನಿಲ್ಲುವಂತಿದ್ದು ಪಂಡಿತ, ಪಾಮರರಿಬ್ಬರನ್ನೂ ರಂಜಿಸಿದ ಕಛೇರಿ ಇದಾಗಿತ್ತು. ಅಟತಾಳ ಭೈರವಿ ವರ್ಣ ವಿಳಂಬ, ತಿಸ್ರ ಮತ್ತು 2-3ನೆ ಕಾಲಗಳಲ್ಲಿ ಸರಾಗವಾಗಿ ಮೂಡಿಬಂದು ಕಛೇರಿಗೆ ಗಟ್ಟಿಯಾದ ಬುನಾದಿಯೆನಿಸಿತು. ಭಾವಪೂರ್ಣವಾಗಿ, ಗಮಕಯುಕ್ತವಾಗಿ ನಿಧಾನಗತಿಯಲ್ಲಿ ಹಿಂಜಲಾದ ಯದುಕುಲ ಕಾಂಭೋಜಿಯ (ಎಚ್ಚರಿಗಗಾ) ರಾಗಾಲಾಪನೆ ಮತ್ತು ಖಂಡ ಏಕದಲ್ಲಿ ಹಾಡಲಾದ ಕ್ಷತ್ರಿಯ ಸಾಂದ್ರತೆ ಉತ್ಕೃಷ್ಟವಾಗಿತ್ತು. ಮುಂದೆ ರಂಜನಿ ರಾಗದ ಕೃತಿ (ದುರ್ಮಾರ್ಗ ಚರಾ) ಕರುಣೆ ಮತ್ತು ವಿಷಾಧ ಛಾಯೆಗಳನ್ನು ತೆರೆದಿಟ್ಟ ಆಲಾಪನೆ ಮತ್ತು ಆಕರ್ಷಕವಾದ “ಪೊರುತ್ತಂ’ ಒಳಗೊಂಡ ಸ್ವರಕಲ್ಪನೆಗಳಿಂದ ಕೂಡಿತ್ತು.

ಪ್ರಧಾನ ರಾಗ ಕೀರವಾಣಿ (ಗಲಿಕಿಯುಂಡ) ಪರ್ಯಾಯವಾಗಿ ನೀಡಲಾದ ರಾಗಾಲಾಪನೆ. ರಾಗ ಸಂಚಾರದ ಖಂಡಗಳನ್ನು ಭಿನ್ನ ಸ್ಥಾಯಿಗಳಲ್ಲಿ ಪರಸ್ಪರರಿಗೆ ಪೂರಕವಾಗುವಂತೆ ಹಾಡಿ ರಾಗಕ್ಕೆ ಅಂದವನ್ನು ನೀಡಿ ಪೋಷಿಸಿದ ಪರಿ ಅನನ್ಯ ಮತ್ತು ಅನುಕರಣೀಯ ಕೃತಿಯಲ್ಲಿ ನೆರವಲ್‌ ಮತ್ತು ಅಗಣಿತ ಮುಕ್ತಾಯಗಳ ಸ್ವರ ಕಲ್ಪನೆಗಳಿದ್ದವು. ಕಛೇರಿಯ ಮುಖ್ಯ ಅಂಗವಾಗಿ ಮೆರೆದದ್ದೆಂದರೆ “ಅವಧಾನ ಪಲ್ಲವಿ’. ಇದರಲ್ಲಿ ಕಲಾವಿದರು ಎರಡು ಕೈಗಳಿಂದ ಬೇರೆ ಬೇರೆ ತಾಳಗಳನ್ನು ಹಾಕುತ್ತ ಸಮನ್ವಯ ಸಾಧಿಸುವ ಸವಾಲಿದೆ.ಬಲಗೈಯಿಂದ “ಸಂಪದ್ವೇಷ್ಟಕ’ ಎಂಬ ಮಾರ್ಗ ತಾಳವನ್ನು ಹಾಗೆಯೇ ಎಡಗೈಯಿಂದ “ರಾಜತಾಳ’ ಎಂಬ ದೇಶೀ ತಾಳವನ್ನು “”ರಾವೇ ಬಾಲಾಂಬಿ | ಕೇ… ದಶ ಮಾತೃಕೇ ಸ್ವರೂಪಿಣಿ” ಎಂಬ ಪಲ್ಲವಿಯನ್ನು ಕಲ್ಯಾಣಿ ರಾಗದಲ್ಲಿ ಕ್ರಮಬದ್ಧವಾಗಿ ಹಾಡಿ ಶ್ರೊತೃಗಳನ್ನು ಬೆರಗುಗೊಳಿಸಿದರು. ರಾಗಮಾಲಿಕೆಯಲ್ಲಿ ಮಾಧುರ್ಯ ಪೂರ್ಣವಾದ ಸ್ವರವಿನಿಕೆಗಳನ್ನು ನೀಡಿ ಗಾಯನದಲ್ಲಿ ತಮ್ಮ ಬದ್ಧತೆ, ಏಕಾಗ್ರತೆ ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಕಠಿನವಾದ ಸ್ವರಸಾಧನೆಗೆ ಸಾಕ್ಷಿ ನೀಡಿದರು. 

ಸ್ವರ ನಂದಿನಿ (ಒಡೆಯರ ಅಪೂರ್ವ ಕೃತಿ) ಶಿವ ರಂಜನಿ (ಶಿವ ಶಿವ ಎನ್ನಿರೋ) ಕಾಪಿ (ಜಗದೋದ್ಧಾರನ) ಪ್ರಸ್ತುತಿಗಳಲ್ಲದೆ ರಾಗಮಾಲಿಕೆ (ಕ್ಷೀರಾಬ್ದಿ ಕನ್ನಿಕೆ)ಮತ್ತು ಪೂರ್ಣ ಚಂದ್ರಿಕ ರಾಗದ ತಿಲ್ಲಾನವನ್ನೂ ಸುಶ್ರಾವ್ಯವಾಗಿ ಹಾಡಿದ ಕಲಾವಿದೆಯರು ಈ ಸಂಗೀತ ಸಂಭ್ರಮವನ್ನು ಸಂಪನ್ನಗೊಳಿಸಿದರು. ಈ ಕಛೇರಿಯಲ್ಲಿ ಆದ್ರìತೆ ಮತ್ತು ಲಾಲಿತ್ಯಗಳಿದ್ದವು. ಅಂತೆಯೇ ಹಿಂದಿನ ಲಾಕ್ಷಣಿಕರು ಸಿದ್ಧಗೊಳಿಸಿದ್ದ ತಾಳ ಪ್ರಮಾಣಗಳಿಗೆ ಮತ್ತೂಮ್ಮೆ ಪುನರ್ಜಿವನ ನೀಡುವ ಕಾಳಜಿಯೂ ಇದ್ದು ಇದೊಂದು ಸಂಪೂರ್ಣ ಕಛೇರಿ ಎನಿಸಿತು.

ವಯಲಿನ್‌ನಲ್ಲಿ ಬಿ. ರಘುರಾಂ ಬೆಂಗಳೂರು ಮತ್ತು ಮೃದಂಗದಲ್ಲಿ ಬಾಲಕೃಷ್ಣ ಕಾಮತ್‌ ಕೊಚ್ಚಿ ಸಹವಾದದಿಂದ ಕಛೇರಿಗೆ ಕಳೆ ನೀಡಿದ್ದಾರೆ. “ಸರಿಗಮ ಭಾರತಿ ಸಂಗೀತ ಶಾಲೆ’ಯ ನಿರ್ದೇಶಕಿ ಶ್ರೀಮತಿ ಉಮಾಶಂಕರಿ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಈ ಕಛೇರಿಯನ್ನು ಆಯೋಜಿಸಿದ್ದರು.

ಸರೋಜ ಆರ್‌. ಆಚಾರ್ಯ 

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.