ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸುವ ಕನ


Team Udayavani, Oct 11, 2019, 5:42 AM IST

u-9

ಸಂಬಂಧಗಳನ್ನು ಸ್ವಚ್ಛವಾಗಿಟ್ಟುಕೊಂಡಷ್ಟು ಬದುಕು ಸಂತೋಷವಾಗುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಗಳು ಸಾಂಸಾರಿಕ ಸಂಬಂಧಗಳನ್ನು ರೂಪಿಸುತ್ತವೆ ವಿನಹ ಪ್ರಚಲಿತ ಫ್ಯಾಷನ್‌ ಲೋಕದ ಅತಿ ಆಸೆಯ ಜೀವನ ಕ್ರಮಗಳಲ್ಲ ಎನ್ನುವುದು ಸುಮನಸಾ ಕೊಡವೂರು ಪ್ರಸ್ತುತ ಪಡಿಸಿದ ತುಳು ಸಾಂಸಾರಿಕ ಹಾಸ್ಯಮಯ ಕನ ನಾಟಕದ ಆಶಯ.

ಪ್ರತಿಯೋರ್ವರಿಗೂ ಬದುಕು ಒಂದು ಸುಂದರ ಅವಕಾಶ. ದೈನಂದಿನ ಏರಿಳಿತಗಳಿಗೆ ಹೊಂದಿಕೊಂಡು ಜೀವಿಸಿದಾಗ ಅದ್ಭುತವಾದ ಅನುಭವ ಪ್ರಾಪ್ತಿಯಾಗುತ್ತದೆ. ಇಂತಹ ಅನುಭವಗಳು ಮನುಷ್ಯನನ್ನು ಒಳ್ಳೆಯವನನ್ನಾಗಿಸಿ ಆಂತರಿಕ ಮತ್ತು ಬಾಹ್ಯವಾಗಿ ಎತ್ತರಕ್ಕೆ ಬೆಳೆಸುತ್ತದೆ. ಈ ರೀತಿ ಒಳ್ಳೆಯತನವನ್ನೆ ಬದುಕಿನ ಮೂಲವಾಗಿಸಿಕೊಂಡ ಕನಕ ಎಂಬವನ ಸಾಂಸಾರಿಕ ನೆಲೆಗಟ್ಟು ಕಥೆಯ ವಸ್ತು. ಸಮಾಜಮುಖೀಯೂ, ಸ್ವಾಭಿಮಾನಿಯೂ ಆದ ಪತ್ರಕರ್ತ ಕನಕ ರಕ್ತಸಂಬಂಧಕ್ಕೆ ಆದ್ಯತೆ ನೀಡುತ್ತಾ ಸಹೋದರತ್ವದ ವಾತ್ಸಲ್ಯದಿಂದ ಉನ್ನತಿಯ ಕನಸುಗಳನ್ನು ಕಾಣುತ್ತಾನೆ.

ಪರಿವರ್ತನೆಯ ಕಾಲಘಟ್ಟದಲ್ಲಿ ಗುರುಹಿರಿಯರ ಸಕಾರಾತ್ಮಕ ಚಿಂತನೆಗಳನ್ನು ಬಹುತೇಕ ಕಿರಿಯರು ನಕಾರಾತ್ಮಕವಾಗಿ ಸ್ವೀಕರಿಸಿದಾಗ ಸೌಹಾರ್ದ ಸಂಬಂಧಗಳು ಕವಲೊಡೆಯುತ್ತದೆ. ಯಾವತ್ತೂ ಆಸೆ ಆಕಾಂಕ್ಷೆಗಳು ಸಹಜ ಸಂಸ್ಕಾರವನ್ನು ಮೀರಿದಾಗ ದಡ ತಲುಪಿದಾಕ್ಷಣ ದೋಣಿಯನ್ನು ಮರೆತು ಬಿಡುವ ವ್ಯಕ್ತಿತ್ವವಾಗಿಬಿಡುತ್ತದೆ. ಸಭ್ಯ ಸಂಗತಿಗಳಲ್ಲಿರುವ ಸಂತಸ ಮರೆತು ಮನಸ್ಸು ವಿಲಕ್ಷಣ ಸಂಭ್ರಮಕ್ಕೆ ಹಾತೊರೆಯುತ್ತದೆ.

ದೀಪವೊಂದು ಬೆಳಗಬೇಕಾದರೆ ಅದಕ್ಕೋಸ್ಕರ ಉರಿದ ಬತ್ತಿ, ಸವೆದ ಎಣ್ಣೆ, ಒದಗಿದ ಹಣತೆಯ ಸಹಕಾರವು ಅಮೂಲ್ಯವಾದದ್ದು. ಆದರೆ ಈ ಸಹಕಾರ ಸ್ವಾರ್ಥವಿಲ್ಲದ ತ್ಯಾಗದಿಂದ ದೀಪದ ಕನಸನ್ನು ಕಂಡಿರುತ್ತದೆ ವಿನಹ ಅದು ಬೆಂಕಿಯಾಗಿ ಸುಖ, ನಿಷ್ಠೆಯನ್ನು ಸುಡಬೇಕೆಂದು ಖಂಡಿತಾ ಬಯಸುವುದಿಲ್ಲ.

ಬಹಳಷ್ಟು ಅರ್ಥಗರ್ಭಿತ ಕಥಾಹಂದರವಿರುವ ಮತ್ತು ಇವತ್ತಿನ ದಿನಮಾನಕ್ಕೆ ತುಂಬ ಹತ್ತಿರವೆನಿಸುವ ನಾಟಕವಾಗಿ ಕನ ರೂಪುಗೊಂಡಿದೆ. ಹಿರಿತನದ ಆಶಯಗಳನ್ನು ಮರೆಯದಿರುವ ಸಮಾಜ ನಿರ್ಮಾಣವಾಗಬೇಕೆನ್ನುವ ಈ ಕಥೆಯನ್ನು ಆರು ಬಾರಿ ದಿ| ರತ್ನವರ್ಮ ಹೆಗ್ಗಡೆ ಶ್ರೇಷ್ಠ ನಾಟಕ ಪ್ರಶಸ್ತಿ ಪುರಸ್ಕೃತ ರವಿಕುಮಾರ್‌ ಕಡೆಕಾರ್‌ರವರು ಉತ್ತಮ ಸಂದೇಶಗಳಾಧರಿತ ಸಂಭಾಷಣೆಯಲ್ಲಿ ಬರೆದಿದ್ದಾರೆ.

ಇಡೀ ನಾಟಕದಲ್ಲಿ ಯಾವುದೇ ಅಶ್ಲೀಲ ಪದಗಳಿಲ್ಲದ ಹಾಸ್ಯ ಸನ್ನಿವೇಶಗಳಿದ್ದು ಅದನ್ನು ನಿರೂಪಿಸಿದ ರೀತಿ ಮೆಚ್ಚುವಂತದ್ದು. ಹರೀಶ್‌ ಕಲ್ಯಾಣಪುರ, ವಿನಯ್‌ ಕಲ್ಮಾಡಿ, ಜೀವನ್‌ ಕುಮಾರ್‌, ಮಾ| ಮುರುಗೇಶ್‌ ಅವರ ನೈಜ ಶೈಲಿಯ ಹಾಸ್ಯಾಭಿನಯವಿದೆ. ಪ್ರಮುಖ ಪಾತ್ರವಾದ ಕನಕನಾಗಿ ಪ್ರಬುದ್ಧ ರಂಗನಟ ಯೋಗೀಶ್‌ ಕೊಳಲಗಿರಿ ಅಭಿನಯಿಸಿದ್ದು, ಸಮಾಜ ಮತ್ತು ಕೌಟುಂಬಿಕ ಕಾಳಜಿಯ ಜೀವಂತಿಕೆ ಎದ್ದು ಕಾಣುತ್ತದೆ. ಸಂದರ್ಭಕ್ಕೆ ತಕ್ಕುದಾದ ಬೆಳಕಿನ ಸಂಯೋಜನೆಯನ್ನು ನಿಖೀಲ್‌ ಕೊಡವೂರು ಮಾಡಿದ್ದು, ನಿರ್ದೇಶನದೊಂದಿಗೆ ಸಂಗೀತ ನಿರ್ವಹಣೆಯನ್ನು ಮಾಡಿದ ಚಂದ್ರಕಾಂತ್‌ ಕಲ್ಮಾಡಿಯವರ ಪ್ರತಿಭೆ ಶಹಬ್ಟಾಸ್‌ ಎನ್ನುವಂತದ್ದು. ಗಾಯಕ ನವೀನ್‌ ಚಂದ್ರ ಕೊಪ್ಪ ಸ್ವರದಲ್ಲಿ ಸುಶ್ರಾವ್ಯ ಗೀತೆಗಳಿದ್ದು, ಸಂಗೀತ ನಿರ್ದೇಶಕ ಶರತ್‌ ಉಚ್ಚಿಲ ಸಂಯೋಜನೆಯಲ್ಲಿ ನಿರ್ಮಾಣಗೊಂಡಿದೆ.

ಜಯರಾಮ್‌ ನೀಲಾವರ

ಟಾಪ್ ನ್ಯೂಸ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.