ಜಗದೊಡೆಯ ಶ್ರೀಕೃಷ್ಣನಿಗೆ ಅಷ್ಟೋತ್ತರಶತ ವೀಣಾವಂದನ


Team Udayavani, Aug 16, 2019, 5:00 AM IST

q-6

ಒಂದೆರಡು ವೀಣಾವಾದನ ಕಲಾವಿದರನ್ನು ಕಲೆ ಹಾಕುವುದೇ ದುಸ್ತರವಾದ ಈ ಕಾಲಘಟ್ಟದಲ್ಲಿ 108 (ಅಷ್ಟೋತ್ತರಶತ) ವೀಣಾವಾದಕರನ್ನು ಕಲೆ ಹಾಕಿ ಮೈಸೂರು ಬಾನಿ, ತಂಜಾವೂರು ಬಾನಿ, ತ್ರಿಶೂರು ಬಾನಿ ಹೀಗೆ ನಾನಾ ಶೈಲಿಗಳ ಕಲಾವಿದರ ವೀಣಾ ಝೇಂಕಾರವನ್ನು ಏಕಕಾಲದಲ್ಲಿ ಉಣ ಬಡಿಸುವ ಪ್ರಯತ್ನ ಮಣಿಪಾಲದ ಪಳ್ಳತ್ತಡ್ಕ ಕೇಶವ ಭಟ್‌ ಮೆಮೋರಿಯಲ್‌ ಟ್ರಸ್ಟ್‌ನಿಂದ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಜರುಗಿತು.

ವೀಣೆಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದೇ ಒಂದು ಸಮಸ್ಯೆ. ವೀಣಾ ಕಲಾವಿದರೂ ಬೇರೆ ಸಂಗೀತೋಪಕರಣಗಳಿಗೆ ಇರುವಷ್ಟು ಲಭ್ಯರಿಲ್ಲ. ಆದರೂ ಕಾಸರಗೋಡು, ಕಾರ್ಕಳ, ಮಂಗಳೂರು, ಉಡುಪಿ, ಮಣಿಪಾಲ, ಪುತ್ತೂರು ಮೊದಲಾದ ಪ್ರದೇಶಗಳಿಂದಲ್ಲದೆ, ಚಿಕ್ಕಮಗಳೂರು, ಬೆಂಗಳೂರಿನಿಂದಲೂ ವೀಣಾವಾದಕರನ್ನು ಕಲೆ ಹಾಕಲಾಯಿತು. ಲಂಡನ್‌ನಲ್ಲಿರುವ ವಂದನಾ ಶೆಣೈ, ಜರ್ಮನಿಯಲ್ಲಿರುವ ಸಹನಾ, ಬ್ರುನೋಯಿಯಲ್ಲಿರುವ ಕವಿತಾ ರವೀಂದ್ರ, ಅಮೆರಿಕದಲ್ಲಿರುವ ಚೇತನಾ ಬಡೇಕರ್‌ ಅವರು ಶತೋತ್ತರದ ಈ ವೀಣಾಮೇಳದಲ್ಲಿ ಪಾಲ್ಗೊಂಡದ್ದು ದೊಡ್ಡ ಅಚ್ಚರಿ.

ಹೋದ ವರ್ಷ 90 ವೀಣಾವಾದಕರು ತುಳಸಿ ಅರ್ಚನೆಯ ಸಂಕೇತವಾಗಿ ಸೀರೆಯ ಸಮವಸ್ತ್ರಧಾರಿಗಳಾಗಿ ಪಾಲ್ಗೊಂಡಿದ್ದರೆ ಈ ಬಾರಿ “ವೀಣಾ ವಂದನ’ ಕಲ್ಪನೆಯಡಿ ಸಮೃದ್ಧಿಯ ಸಂಕೇತವಾಗಿ ಹಸಿರು, ತ್ಯಾಗದ ಸಂಕೇತವಾಗಿ ಕೇಸರಿ ಹೊದಿಕೆಯ ಸಮವಸ್ತ್ರವನ್ನು ಧರಿಸಿದ್ದರು.

ಕೇವಲ ವಿದ್ಯಾರ್ಥಿಗಳಲ್ಲದೆ ವೈದ್ಯರು, ಎಂಜಿನಿಯರ್‌, ಲೆಕ್ಕಪರಿಶೋಧಕರು, ಬ್ಯಾಂಕರ್‌ ಕೂಡ ಪಾಲ್ಗೊಂಡಿದ್ದರು. ಬೆಂಗಳೂರಿನಿಂದ ಆಗಮಿಸಿದ ಡಾ|ರಾಮಕೃಷ್ಣನ್‌ ವೈದ್ಯಕೀಯ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವವರು. ಅರ್ಜುನ್‌ ಮುದ್ಲಾಪುರ್‌ ಬೆಂಗಳೂರು ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರು. ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯೇ ಹೆಚ್ಚು. ಇಬ್ಬರು ಮೃದಂಗ ವಾದಕರು, ವಿಶೇಷ ವಾದ್ಯವಾಗಿ ಆಫ್ರಿಕನ್‌ ಬುಡಕಟ್ಟು ಜನಾಂಗದವರು ಉಪಯೋಗಿಸುವ ರೇನ್‌ಸ್ಟಿಕ್‌ ಕಲಾವಿದರು ವೀಣಾವಾದಕರಿಗೆ ಸಾಥ್‌ ನೀಡಿದರು.

“ಪ್ರೀಣಯಾಮೋ ವಾಸುದೇವಂ…’, “ವಂದೇವಂದ್ಯಂ ಸದಾನಂದಂ…’, “ಪಾಲಯಾಚ್ಯುತ…’, “ತಾರಕ್ಕ ಬಿಂದಿಗೆ…’, “ಊರಿಗೆ ಬಂದರೆ ದಾಸಯ್ಯ…’ ಇತ್ಯಾದಿ ದಾಸವರೇಣ್ಯರ 11 ಹಾಡುಗಳನ್ನು ಸುಮಾರು ಒಂದೂವರೆ ಗಂಟೆ ಕಾಲ ನುಡಿಸಲಾಯಿತು. ಶಿವರಾಜ್‌ ಅವರ ಮಂತ್ರಪುಷ್ಪದ ವೇದ ಮಂತ್ರ, ಅಲೆವೂರು ರಾಮದಾಸ ಆಚಾರ್ಯರ ಸಾಮಗಾನವನ್ನೂ ವೀಣಾವಾದನಕ್ಕೆ ಬಗ್ಗಿಸಿದವರು ಸಂಘಟಕಿ ಪವನಕುಮಾರಿ ಮತ್ತು ಅರುಣಕುಮಾರಿಯವರು.

ಕೌಂಟುಂಬಿಕ ಜುಗಲ್ಬಂದಿ…
ಕಾರ್ಕಳದ ವಾಣಿಶ್ರೀ ಅವರು ಪುತ್ರ ಅಭಿನವನೊಂದಿಗೆ, ಸಾಣೂರಿನ ಜಯಲಕ್ಷ್ಮೀಯವರು ಮೊಮ್ಮಗ ಸಮೃದ್ಧನೊಂದಿಗೆ, ಕಾರ್ಕಳದ ಶಂಕರನಾರಾಯಣ ಭಟ್‌, ದಿವ್ಯಾ ದಂಪತಿ ಪುತ್ರಿ ಶ್ರಾವಣಿಯೊಂದಿಗೆ ವೀಣಾವಾದನ ನಡೆಸಿಕೊಟ್ಟರು. ತನಗಿಂತ ದೊಡ್ಡ ಗಾತ್ರದ ವೀಣೆಯನ್ನು ನುಡಿಸಿದವರು ಶ್ರಾವಣಿ. ಡಾ|ಬಾಲಚಂದ್ರ ಆಚಾರ್ಯ ಮೃದಂಗ, ಪತ್ನಿ ಪವನಕುಮಾರಿ ವೀಣೆ, ಪುತ್ರರಾದ ಶ್ರೇಯಸ್‌ ತಾಳ, ವೇಧಸ್‌ ರೇನ್‌ಸ್ಟಿಕ್‌ ನುಡಿಸಿದರು.

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.