ಸಾಮಾಜಿಕ ನಾಟಕ ದೇವಾಲೇ ಖೇಳು


Team Udayavani, Mar 13, 2020, 5:49 PM IST

ಸಾಮಾಜಿಕ ನಾಟಕ ದೇವಾಲೇ ಖೇಳು

ನಾಯ್ಕನ ಕಟ್ಟೆ ವೆಂಕಟರಮಣ ದೇವಾಲಯದಲ್ಲಿ ಜರಗಿದ ವಾರ್ಷಿಕ ಮಹಾಸಭೆ ಮತ್ತು ಸಮ್ಮಿಲನದ ಅಂಗವಾಗಿ ವರಮಹಾಲಕ್ಷ್ಮೀ ವ್ರತ ಸಮಿತಿಯ ಸದಸ್ಯೆಯರಿಂದ ವಿದ್ಯಾ ಉದಯ ಭಟ್‌ ನಿರ್ದೇಶನದಲ್ಲಿ ಸಾಮೂಹಿಕ ನೃತ್ಯ, ಮಕ್ಕಳಿಂದ ಪ್ರತಿಭಾ ಪ್ರದರ್ಶನ ಹಾಗೂ ಸೇವಾ ಸಮಿತಿಯ ಸದಸ್ಯರಿಂದ ದೇವಾಲೇ ಖೇಳು ಸಾಮಾಜಿಕ ನಗೆ ನಾಟಕ ಸಂಪನ್ನಗೊಂಡಿತು.

ಕೊಂಕಣಿ ನಾಟಕಗಳು ಅಪರೂಪವಾಗತ್ತಿರುವ ಈ ದಿನಗಳಲ್ಲಿ ಹತ್ತು ವರ್ಷಗಳಿಂದ ನಿರಂತರವಾಗಿ ದೇವಾಲಯದ ವಾರ್ಷಿಕ ಸಮ್ಮಿಲನದಲಿ ಕೊಂಕಣಿ ನಾಟಕಗಳನ್ನು ಪ್ರದರ್ಶಿಸಿ ಈ ಕೊರತೆಯನ್ನು ನೀಗಿಸಲು ಸಫ‌ಲವಾಗಿದೆ.ದೇವಾಲೇ ಖೇಳು ನಾಟಕವನ್ನು ವೆಂಕಟರಮಣ ಸೇವಾ ಸಮಿತಿಯ ವಿಶ್ವಸ್ತಮಂಡಳಿಯ ಸದಸ್ಯ ಶ್ರೀಶ ಭಟ್‌ ರಚಿಸಿ ನಿರ್ದೇಶಿಸಿದರು.

ಊರಿನ ಸಜ್ಜನ ನಾಗರಿಕನೊಬ್ಬನಿಗೆ ಹಲವು ವರ್ಷ ಸಂತಾನ ಭಾಗ್ಯವಿಲ್ಲದೆ ಕೊರಗುತ್ತಿರುವಾಗ ಹರಕೆಯಿಂದ ಹುಟ್ಟಿದ ಅವಳಿ ಮಕ್ಕಳನ್ನು ನೋಡಿ ಸಂತಸ ಸಡಗ ಗಳಿಂದ ದಿನ ಕಳೆಯುತ್ತಿರಲು ,ಮುಂದೆ ಮಕ್ಕಳನ್ನು ಓದಿಸಿ ,ಮಗಳು ಸನಿಹದಲ್ಲಿದ್ದು ಮಗನು ಉತ್ತಮ ಉದ್ಯೋಗ ಸಿಕ್ಕಿ ವಿದೇಶದಲ್ಲಿರುತ್ತಾನೆ.

ಮುಂದೆ ಸೊಸೆಯ ಆಣತಿಯಂತೆ ಮಗ ತಂದೆಯ ಸಂಪರ್ಕ ಕಡಿದುಕೊಳ್ಳುತ್ತಾನೆ.ವೃದ್ಧಾಪ್ಯದಲ್ಲಿ ಮಗನ ಬರುವಿಕೆಗಾಗಿ ಕಾಯುವ ಮುಗ್ಧ ಮನಸುಗಳ ತೊಳಲಾಟ ,ಮಗಳ ಆಸರೆ ಗಳನ್ನು ದೇವಾಲೆ ಖೇಳು ನಾಟಕದಲ್ಲಿ ಮನಮುಟ್ಟುವಂತೆ ತೋರಿಸಲಾಗಿದೆ. ಇಂದಿನ ಸಮಾಜದಲ್ಲಿ ನಡೆವ ನೈಜ ಘಟನೆಗಳನ್ನು ಪ್ರದರ್ಶಿಸುವಲ್ಲಿ ನಾಟಕ ಸಫ‌ಲತೆಯನ್ನು ಕಂಡಿತು.

ವಿದ್ಯಾವಂತರಾದ ಮೇಲೆ ಊರು ದೇಶಗಳನ್ನು ಮರೆತು ಅದೆಷ್ಟೋ ಮಕ್ಕಳು ಮತ್ತು ಪೋಷಕರ ನಡುವಿನ ಕೊಂಡಿ ಕಳಚಿ ,ಪುನಃ ಬೆಸೆದ ಪರಿಯನ್ನು ಎಳೆಎಳೆಯಾಗಿ ಪ್ರದರ್ಶಿಸಲಾಯಿತು. ಮಗನು ಮರೆತ ಜವಾಬ್ದಾರಿಯನ್ನು ನೆನಪಿಸಿ ಕೊಡುವ ದೃಶ್ಯಗಳು ಉತ್ತಮವಾಗಿ ಮೂಡಿ ಬಂದಿತು.ನಾಟಕದ ಮೊದಲ ಭಾಗದಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ, ದ್ವಿತೀಯಾರ್ಧದಲ್ಲಿ ಕಣ್ಣನ್ನು ತೇವಗೊಳಿಸಿ ನಾಟಕದ ಸನ್ನಿವೇಶಗಳಲ್ಲಿ ತಾವೊ ಒಬ್ಬ ರಾಗುವಂತೆ ಮಾಡಿತು.  ರಮೇಶ ಪೈ ವೈದ್ಯರಾಗಿ, ವಿಶ್ವನಾಥ ನಾಯಕ್‌ ಅರ್ಚಕರಾಗಿ,ರಾಮನಾಥ ಭಟ್‌ ವಕೀಲರಾಗಿ ,ಉಪ್ರಳ್ಳಿ ನಾರಾಯಣ ಶ್ಯಾನುಭಾಗ್‌ – ಶ್ರೀಮತಿ ಶ್ಯಾನುಭಾಗ್‌ ದಂಪತಿ ತಂದೆ – ತಾಯಿಯಾಗಿ ,ಸ್ನೇಹಾ ಶ್ಯಾನುಭಾಗ್‌ ಮಗಳಾಗಿ, ಗುರುಪ್ರಸಾದ ನಾಯಕ್‌ ನಿಧಿ ನಾಯಕ್‌ ಮಗ ಸೊಸೆಯಾಗಿ ಪಾತ್ರಗಳಿಗೆ ಜೀವ ತುಂಬಿದರು.

ರಾಧಾಕೃಷ್ಣ ನಾಯಕ್‌, ಶಶಿಧರ ಶೆಣೈ ವಿಷ್ಣು ಪೈ ,ಗೋಪಿ ಭಟ್ಟ, ಶ್ವೇತಾ ಭಟ್‌, ಸುರೇಂದ್ರ ಪೈ ,ಸತೀಶ ಕಾಮತ್‌ ನೈಜ ಅಭಿನಯದ ಮೂಲಕ ಮಿಂಚಿದರು. ವಿನಾಯಕ ಕಾಮತ್‌ ಹಾರ್ಮೋನಿಯಂ, ಆದಿನಾಥ ಕಿಣಿ ತಬಲಾ,ಪೂರ್ಣಿಮಾ ಪೈ, ಅಜಿತ್‌ ಭಂಡಾರ್‌ಕರ್‌, ತುಳಸಿದಾಸ ಗಡಿಯಾರ್‌ ಸಂಗೀತದಲ್ಲಿ ಮುದ ನೀಡಿದರು.ಕತೆ,ಸಂಬಾಷಣೆ ,ಹಾಡುಗಳು ಮತ್ತು ನಿರ್ದೇಶನದಲ್ಲಿ ಶ್ರೀಶ ಭಟ್‌ ನಾಯ್ಕನಕಟ್ಟೆ ಇವರದ್ದು.

ಕೆ.ಪುಂಡಲೀಕ ನಾಯಕ್‌

ಟಾಪ್ ನ್ಯೂಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.