ವಿಜೃಂಭಿಸಿದ ಜಾಂಬವತೀ ಕಲ್ಯಾಣ-ಗರುಡ ಗರ್ವಭಂಗ


Team Udayavani, Aug 9, 2019, 5:00 AM IST

e-9

ಮೂಡಬಿದಿರೆಯಲ್ಲಿ ಜು. 27 ರಂದು ಯಕ್ಷ ಸಂಗಮದ ಸಂಘಟಕ ಎಂ. ಶಾಂತಾರಾಮ ಕುಡ್ವರ ಸಂಚಾಲಕತ್ವದಲ್ಲಿ, ಇಲ್ಲಿನ ಸಮಾಜ ಮಂದಿರದಲ್ಲಿ ರಾತ್ರಿ ಇಡೀ ಜಾಂಬವತೀ ಕಲ್ಯಾಣ- ಗರುಡ ಗರ್ವಭಂಗ ತಾಳಮದ್ದಳೆ ಜರಗಿತು.

ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳು ರಚಿಸಿದ ಜಾಂಬವತೀ ಕಲ್ಯಾಣದಲ್ಲಿ ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಬಲರಾಮನಾಗಿ ಒಡ್ಡೋಲಗದ ಸಂದರ್ಭ,ತನ್ನ ಹುಟ್ಟಿಗೆ ಕಾರಣವಾದ ವಿಚಿತ್ರ ಸನ್ನಿವೇಶ, ಮೊದಲ 7 ತಿಂಗಳುಗಳ ಕಾಲ ತಾಯಿ ದೇವಕಿಯ ಗರ್ಭದಲ್ಲಿದ್ದು, ಕಂಸನ ಕ್ರೂರ ಕೃತ್ಯಕ್ಕೆ ಹೆದರಿ ವಾಸುದೇವನು ಅನಂತರ ಈ ಪಿಂಡವನ್ನು ರೋಹಿಣಿ ದೇವಿಯ ಗರ್ಭಕ್ಕೆ ಆಕರ್ಷಿಸಿ, ಅಲ್ಲಿ ಭದ್ರವಾಗಿಟ್ಟು ,ಹೀಗೆ ನಂತರ ತಾನು ಜನ್ಮ ತಳೆದ ಜನ್ಮ ವೃತ್ತಾಂತದ ಕತೆಯನ್ನು ಪೀಠಿಕೆಯಲ್ಲಿ ಚಂದವಾಗಿ ವಿಷದ ಪಡಿಸುತ್ತಾ ತಾನು ಸಂಕರ್ಷಣನೆನಿಸಿ ಕೊಂಡ ಬಗೆಯನ್ನು,ತನ್ನ ಸಾಮರ್ಥ್ಯವನ್ನು,ಕೃಷ್ಣ-ಬಲರಾಮರ ಅನ್ಯೋನ್ಯ ಸಂಬಂಧವನ್ನು ಹೇಳಿ ರಂಜಿಸಿದರು.

ನಾರಾದನಾಗಿ ಗಾಂಭೀರ್ಯ,ವ್ಯಂಗ್ಯ ಹಾಸ್ಯಮಿಶ್ರಿತ ಮಾತುಗಳಿಂದ ಬಲರಾಮನನ್ನು ತಿವಿದ ಅರ್ಥದಾರಿ ತಾರಾನಾಥ ವರ್ಕಾಡಿಯವರು ಈ ಕಥಾ ಪ್ರಸಂಗದ ಪ್ರಮುಖ ವಸ್ತುವಾದ ಮಾಂಡಲೀಕನಾದ ಸತ್ರಾರ್ಜಿತನ ತಮ್ಮ ಪ್ರಸೇನನನ್ನು ಕೊಂದು ಆತನಿಂದ ದಿನವೊಂದಕ್ಕೆ 8 ಮಣ ಬಂಗಾರವನ್ನು ನೀಡುವ ಶ್ಯಮಂತಕ ಮಣಿಯನ್ನು ನಿನ್ನ ಸಹೋದರನಾದ ಶ್ರೀಕೃಷ್ಣನು ಅಪಹರಿಸಿದ್ದಾನೆ,ಹೀಗೆಂದು ದ್ವಾರಕೆಯ ಜನರಾಡುತ್ತಿದ್ದಾರೆ ಎಂದು ಹೇಳಿ ಶ್ರೀಕೃಷ್ಣ-ಬಲರಾಮರ ಮಧ್ಯೆ ವೈಮನಸ್ಸು ಹುಟ್ಟಿಸುವ ಮಾತುಗಳನ್ನಾಡಿ ಪ್ರೇಕ್ಷಕರಿಗೆ ಕಲಹಪ್ರಿಯ ನಾರದನ ದರ್ಶನ ಮಾಡಿಸಿದರು.

ಕೃಷ್ಣ ನಾಗಿ ರಾಧಾಕೃಷ್ಣ ಕಲ್ಚಾರ್‌ರವರು ಅಮೂಲ್ಯವಾದ ಸೂರ್ಯ ಪ್ರಭೆಯುಳ್ಳ ಶ್ಯಮಂತಕ ಮಣಿಯನ್ನು ತಾನು ಸತ್ರಾರ್ಜಿತನಲ್ಲಿ ಕೇಳಿದ್ದು ಹೌದು,ಆತ ನಿರಾಕರಿಸಿದ್ದೂ ಹೌದು.ಆದರೆ ಮುಂದೆ ಏನಾಯಿತೆಂದು ತನಗೆ ತಿಳಿದಿಲ್ಲ ಅಣ್ಣಾ, ಈ ಬಗ್ಗೆ ನಿನ್ನಿಂದ ಯಾವುದೇ ಶಿಕ್ಷೆಗೂ ಒಳಗಾಗಲು ಸಿದ್ಧನಿದ್ದೇನೆ.ಘಟಸರ್ಪಗಳ ಮಧ್ಯೆ ನನ್ನನ್ನು ದೂಡು,ಕೈಯಲ್ಲಿ ಬೆಂಕಿಯನ್ನು ಹಿಡಿಸು ಎಂದು ನುಡಿದಾಗ,ಅವೆಲ್ಲಾ ನಿನ್ನ ಮಾಯೆಯ ಪ್ರಭಾವದಿಂದ ಪರಿಣಾಮ ಬೀರುವುದೇ ಎಂಬ ಬಲರಾಮನ ನುಡಿಗೆ, ಕೊನೆಗೆ ತನ್ನ ಪ್ರೀತಿಯ ಹೆತ್ತವರ ಹೆಸರಿನಲ್ಲಿ ಪ್ರಮಾಣ ಮಾಡಿ ಬಲರಾಮನ ಸಂಶಯ ನಿವಾರಿಸಿದ ರೀತಿ ಭಾವನಾತ್ಮಕವಾಗಿ ಮುಟ್ಟಿತು.

ಜಾಂಬವಂತನಾಗಿ ವಿಟ್ಲ ಶಂಭು ಶರ್ಮಾರವರು ನಾಗರಿಕರ ಅನಾಗರಿಕತನ ಮತ್ತು ಕಾಡಿನಲ್ಲಿ ವಾಸಿಸುವ ಜೀವಿಗಳ ಜೀವನದ ಅನಿವಾರ್ಯತೆಯ ಬಗ್ಗೆ ವಿಶಿಷ್ಟವಾಗಿ ತಿಳಿಸಿ ಪ್ರೇಕ್ಷಕರ ಹುಬ್ಬೇರಿಸಿದರು.

ಭಾಗವತರಾಗಿ ಪ್ರಸಾದ ಬಲಿಪ, ಮೋಹನ ಶೆಟ್ಟಿಗಾರ ಚೆಂಡೆಯಲ್ಲಿ, ಕೃಷ್ಣಪ್ರಕಾಶ್‌ ಉಳಿತ್ತಾಯ ಮೃದಂಗವಾದಕರಾಗಿ ,ಚಕ್ರತಾಳದಲ್ಲಿ ವಸಂತ ವಾಮದಪದವು ಸಾಥ್‌ ನೀಡಿದರು.

ಎರಡನೇ ಪ್ರಸಂಗ ಬಲಿಪ ನಾರಾಯಣ ಭಾಗವತರು ರಚಿಸಿದ ಗರುಡ ಗರ್ವಭಂಗ ಕಥಾ ಪ್ರಸಂಗದಲ್ಲಿ ಹನುಮಂತನ ಪಾತ್ರದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಶ್ರೀರಾಮ ನಿರ್ಯಾಣದ ನಂತರ ಶ್ರೀರಾಮನ ಸಾಂಗತ್ಯವಿಲ್ಲದ ಒಂಟಿತನದ,ವೈರಾಗ್ಯದ ಬದುಕನ್ನು ದುಃಖೀಸುವ ಆ ಸನ್ನಿವೇಶ ಮನಮಿಡಿಯುವಂತಿತ್ತು .

ನಾರಾದನಾಗಿ ವಾಸುದೇವ ರಂಗಾ ಭಟ್‌ ಎಂದಿನ ತಮ ದಾಟಿಯಲ್ಲಿ ಬಲರಾಮನ ಹೆಸರನ್ನು ಪ್ರಸ್ತಾಪಿಸಿ ಆತನ ಸಾಮ್ರಾಜ್ಯ,ಸಾಮರ್ಥ್ಯವನ್ನು ವರ್ಣಿಸಿ ಹನುಮಂತ ಬಲರಾಮರ ಮಧ್ಯೆ ಕಲಹಪ್ರಿಯ ಸನ್ನಿವೇಶವನ್ನು ಸೃಷ್ಟಿಸಿ ತಮ್ಮ ಒಗಟಾದ ಪಾಂಡಿತ್ಯಭರಿತ ಅರ್ಥದ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡರು.

ದ್ವಾರಕಾಧೀಶ-ಬಲರಾಮನಾಗಿ ವಾಸುದೇವ ಸಾಮಗರವರು ಈ ಸಂದರ್ಭ ಒಂದಿಷ್ಟು ಪ್ರಚಲಿತ ರಾಜಕೀಯ ನಡೆಗಳ ಬಗ್ಗೆ,ರಾಜಕೀಯ ಕುರಿತಾಗಿ ವ್ಯಂಗ್ಯ ಭರಿತ ತಿವಿತದ ಹಾಸ್ಯದ ಮಾತುಗಳಿಂದ ಗೆರಿಲ್ಲಾ ಯುದ್ಧ,ಅನುದಾನ ಬಿಡುಗಡೆ ಮುಂತಾಗಿ ಅರ್ಥ ಹೇಳಿ ಪ್ರೇಕ್ಷಕರನ್ನು ನಿದ್ರೆಗೆ ಜಾರದ ಹಾಗೆ ನೋಡಿಕೊಂಡರು.ಗರುಡ ಗರ್ವಭಂಗದ ಶ್ರೀಕೃಷ್ಣನಾಗಿ ಉಜಿರೆ ಅಶೋಕ ಭಟ್ಟರು ವಿದ್ವತ್ತಿನ ಪ್ರದರ್ಶನದ ಮೂಲಕ ಪಾತ್ರದ ಪರಿಪೂರ್ಣತೆಯ ಔಚಿತ್ಯವನ್ನು ಸಮರ್ಥಿಸಿಕೊಂಡರು. ಗಣೇಶ ಕನ್ನಡಿಕಟ್ಟೆಯವರು ಏರು ಧ್ವನಿಯಲ್ಲಿ, ಪ್ರಸಂಗಕ್ಕೆ ಪೂರಕವಾಗಿ ಶ್ರಿ ಕೃಷ್ಣನೊಂದಿಗೆ ಅಹಂಕಾರದ ಮಾತುಗಳಲ್ಲಿ ವಾದಕ್ಕೆ ಇಳಿದುದು ಸ್ವಲ್ಪ ಮಟ್ಟಿಗೆ ವಿಪರೀತವೆನಿಸಿತಾದರೂ ಮನೋರಂಜನೆ ಒದಗಿಸಿತು.

ರವಿಚಂದ್ರ ಕನ್ನಡಿಕಟ್ಟೆಯವರು ಈ ಪ್ರಸಂಗದಲ್ಲಿ ಭಾಗವತರಾಗಿ, ದೇವಾನಂದ ಭಟ್‌ ರವರು ಚೆಂಡೆಯಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್‌ ಮದ್ದಳೆಯಲ್ಲಿ ,ವಸಂತ ವಾಮದಪದವು ಅವರು ಚಕ್ರತಾಳದಲ್ಲಿ ಸಹಕರಿಸಿದರು.

ಎಂ.ರಾಘವೇಂದ್ರ ಭಂಡಾರ್‌ಕರ್‌

ಟಾಪ್ ನ್ಯೂಸ್

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.