ರಸದೌತಣವಾದ ತ್ರಿದಿನ ಯಕ್ಷ ವೈಭವ

ಶ್ರೀ ದುರ್ಗಾಪರಮೆಶ್ವರೀ ಯಕ್ಷಗಾನ ಕಲಾ ಮಂಡಳಿ ಕೊಲ್ಲಂಗಾನ ಪ್ರಸ್ತುತಿ

Team Udayavani, Jun 28, 2019, 5:00 AM IST

10

ರಂಭೆ ಪಾತ್ರ, ಭಾಷಾ ಸಂಸ್ಕೃತಿ ಯಾವ ರೀತಿಯ ಪಾತ್ರಕ್ಕೂ ಬೆಲೆ ತರುತ್ತದೆ ಎನ್ನುವುದಕ್ಕೆ ಸಾಕ್ಷಿಯಾಯಿತು. ಶ್ವೇತಕುಮಾರನು ಆಕೆಯೊಂದಿಗೆ ದಿನವೊಂದರ ಸುಖಕ್ಕೆ ಬರುವ ಸನ್ನಿವೇಶವಾದರೂ ಅಲೆವೂರಾಯರ ಗಂಭೀರ, ಸ್ಪಷ್ಟ ಮಾತು ಕಿಂಚಿತ್ತೂ ಋಣಾತ್ಮಕ ಆಲೋಚನೆಗೆ ಆಸ್ಪದ ಕೊಡದೇ ಶಿವ ಪಂಚಾಕ್ಷರಿಯ ಪಠಣದ ಅವಶ್ಯಕತೆಯನ್ನು ಹೇಳಿತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆಯಲ್ಲಿ ತ್ರಿದಿನ ಯಕ್ಷ ವೈಭವದ ವೈತರಣಿಯು ಅಡೆತಡೆಯಿಲ್ಲದೇ ಹರಿದು ಯಕ್ಷರಸಿಕರ ಮನಸ್ಸಿಗೆ ತಂಪೆರೆಯಿತು. ರಾಜ ಅತಿಕಾಯ-ಇಂದ್ರಜಿತು ಮತ್ತು ಗಜೇಂದ್ರ ಮೋಕ್ಷ ಹಾಗೂ ಕೊನೆಯ ದಿನ ಶ್ವೇತಕುಮಾರ ಚರಿತ್ರೆ ಪ್ರಸಂಗಗಳು ಕಲಾವಿದರಿಗೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರದರ್ಶನಕ್ಕೂ, ಪ್ರತಿಭೆಯನ್ನು ಹರಿತಗೊಳಿಸುವುದಕ್ಕೂ ಅವಕಾಶ ನೀಡಿತು.

ಶ್ರೀ ದುರ್ಗಾಪರಮೆಶ್ವರೀ ಯಕ್ಷಗಾನ ಕಲಾ ಮಂಡಳಿ ಕೊಲ್ಲಂಗಾನ ಕಾಸರಗೋಡು ಅವರು ಪ್ರದರ್ಶಿಸಿದ ಶ್ವೇತಕುಮಾರ ಚರಿತ್ರೆ, ಕುಮಾರಿ ಹೇಮಸ್ವಾತಿ ಕುರಿಯಜೆಯವರ ಭಾಗವತಿಕೆಯೊಂದಿಗೆ ಪ್ರಾರಂಭಗೊಂಡಿತು. ಈ ಅರಳು ಪ್ರತಿಭೆಯ ಭಾವಗತಿ ಯಕ್ಷಲೋಕದಲ್ಲಿ ಮುಂದೆ ತನ್ನ ಛಾಪನ್ನು ಭದ್ರವಾಗಿ ಮೂಡಿಸುವತ್ತ ಹೆಜ್ಜೆ ಇಟ್ಟಂತಿತ್ತು. ತಾಳಜ್ಞಾನ ಹಾಗೂ ಎಲ್ಲೂ ಬತ್ತದ ಸ್ವರದಿಂದ ಭಾಗವತಿಕೆ ಮನಸೆಳೆಯಿತು.

ತನ್ನ ತಂದೆಯ ಉತ್ತರಾಧಿಕಾರಿಯಾಗಿ ರಾಜ್ಯಭಾರ ಮಾಡುತ್ತಿದ್ದ ಶ್ವೇತಕುಮಾರ ಬೇಸರ ಕಳೆಯಲು ವನ ವಿಹಾರಕ್ಕೆ ಹೊರಟಾಗ, (ಬ್ರಹ್ಮನ) ಪುತ್ರಿಯಾದ ತ್ತೈಲೋಕ ಸುಂದರಿ ಭೂಮಿಗಿಳಿದು ಅದೇ ವನ ಸಂಚಾರಕ್ಕೆಂದು ಬಂದವಳ ಭೇಟಿಯಾಗುತ್ತದೆ. ಆಕೆಯ ಅದ್ವಿತೀಯ ರೂಪಕ್ಕೆ ಮರುಳಾಗುವಲ್ಲಿಂದ ಶ್ವೇತಕುಮಾರ ಚರಿತ್ರೆಯ ಕಥೆ ಪ್ರಾರಂಭವಾಗುತ್ತದೆ. ಶ್ವೇತಕುಮಾರನಾಗಿ ಉಬರಡ್ಕ ಉಮೇಶ ಶೆಟ್ಟಿ ಹಾಗೂ ತ್ತೈಲೋಕ ಸುಂದರಿಯಾಗಿ ಸಂಜಯ ಕುಮಾರ್‌ ಶೆಟ್ಟಿ ಗೋಣಿಬೀಡು ಪಾತ್ರ ನಿರ್ವಹಿಸಿದರು. ವರ್ತಮಾನಕ್ಕೆ ಥ‌ಳುಕು ಹಾಕಿದ ಅರ್ಥಗಾರಿಕೆಯಿಂದ ಸಮಾಜದಲ್ಲಾಗುವ ತಪ್ಪುಗಳಿಗೆ ಬುದ್ಧಿ ಹೇಳುವಂತೆ ಚುರುಕು ಮುಟ್ಟಿಸುವ ಮಾತುಗಳಲ್ಲಿ ಇಬ್ಬರೂ ಸ್ಪರ್ಧಾತ್ಮಕವಾಗಿದ್ದರು. ಶ್ವೇತಕುಮಾರನ ಪದ್ಯಗಳಿಗೆ ಮತ್ತು ಮಾತುಗಳಿಗೆ ಅರ್ಥ ಬರುವಂತೆ ತ್ತೈಲೋಕ ಸುಂದರಿಯು ರೂಪ, ಭಾವಗಳಲ್ಲಿ ಪ್ರೇಕ್ಷಕರ ಮನ ಮೆಚ್ಚಿಸುವ ಚಲನವಲನಗಳು ಸೊಗಸಾಗಿದ್ದವು. ಮೇಳದ ಕಲಾವಿದರೂ, ಯಜಮಾನರೂ ಆದ ತಂತ್ರಿ ಗಣಾಧಿರಾಜ ಉಪಾಧ್ಯಾಯರ ಅಬ್ಬರದ ಪ್ರವೇಶದೊಂದಿಗೆ ದುರ್ಜಯಾಸುರ ಮೈನವಿರೇಳಿಸಿದ ಪಾತ್ರ ನಿರ್ವಹಣೆ, ಸುಭಾಶ್ಚಂದ್ರ ರೈ ತೋಟ ಇವರು ಲೋಹಿತನೇತ್ರನಾಗಿ, ಪ್ರವೀಣ ನಾರ್ಣಕಜೆ ಶಿವೆಯಾಗಿ ಪಾತ್ರಗಳಿಗೆ ಜೀವಂತಿಕೆ ನೀಡಿದರು, ಶಿವೆಯ ಮಾತು ಮತ್ತು ಅಭಿನಯ ನಿಜ ಭಾವಾಭಿವ್ಯಕ್ತವೆನಿಸಿತು. ಓರ್ವ ಘಾಸಿಗೊಂಡ ಹೆಣ್ಣಿನ ನೋವು, ತಿರಸ್ಕಾರಗಳನ್ನು ಮನೋಜ್ಞವಾಗಿ ಅಭಿನಯಿಸಿದ್ದು ಶಿವೆಯ ಪ್ಲಸ್‌ ಪಾಯಿಂಟ್‌.

ಶ್ವೇತ ಕುಮಾರನ ಮಂತ್ರಿಯ ಮಗ ಸಿತಕೇತನಾಗಿ ಲಕ್ಷ್ಮಣ ಆಚಾರ್ಯ ಎಡಮಂಗಲ ಅವರದ್ದು ಚುರುಕಿನ ಕುಣಿತ ಮತ್ತು ನಿರರ್ಗಳ ವಾಗ್ಝರಿ. ಶ್ವೇತಕುಮಾರನು ಪ್ರೇತನಾದವನು ತನ್ನ ಸತಿಯ ನೆನೆಯುತ್ತಿದ್ದನು ಎಂಬ ಭಾಗವತ ಜಯರಾಮ ಅಡೂರು ಅವರ ಸುಮಧುರ ಕಂಠದ ಭಾಗವತಿಕೆಯಲ್ಲಿ ಶ್ವೇತಕುಮಾರನ ದುರಂತ ಅಂತ್ಯಕ್ಕೆ ಮರುಕವೂ, ಪ್ರೇತದ ಪಾತ್ರಕ್ಕೆ ಜೀವ ತುಂಬಿದ ರಘುನಾಥ ರೈ ಅಂಕತಡ್ಕ ಅವರ ಹಾಸ್ಯಕ್ಕೆ ನಗುವುದು ಹೀಗೆ ಭಾವ ಸಮ್ಮಿಶ್ರದಿಂದ ಕೂಡಿದ ಪ್ರೇಕ್ಷಕವರ್ಗ ಮುಂದಿನ ಕತೆಯನ್ನು ಆಸ್ವಾದಿಸಿತು.

ರವಿ ಅಲೆವೂರಾಯ ಅವರ ರಂಭೆ ಪಾತ್ರ, ಒಂದು ಭಾಷಾ ಸಂಸ್ಕೃತಿ ಯಾವ ರೀತಿಯ ಪಾತ್ರಕ್ಕೂ ಬೆಲೆ ತರುತ್ತದೆ ಎನ್ನುವುದಕ್ಕೆ ಸಾಕ್ಷಿಯಾಯಿತು. ಈ ಪಾತ್ರವು ಜನರಲ್ಲಿ ಮೂಡಿಸುವ ಕಲ್ಪನೆಯೇ ಬೇರೆ. ಶ್ವೇತಕುಮಾರನು ಆಕೆಯೊಂದಿಗೆ ದಿನವೊಂದರ ಸುಖಕ್ಕೆ ಬರುವ ಸನ್ನಿವೇಶವಾದರೂ ರವಿ ಅಲೆವೂರಾಯರ ಗಂಭೀರ, ಸ್ಪಷ್ಟ ಮಾತು ಕಿಂಚಿತ್ತೂ ಋಣಾತ್ಮಕ ಆಲೋಚನೆಗೆ ಆಸ್ಪದ ಕೊಡದೇ ಮಾತುಕತೆಯ ಹಿಂದಿನ ಧಾರ್ಮಿಕ ಸತ್ಯವನ್ನು ತೆರೆದಿಟ್ಟು ಶಿವ ಪಂಚಾಕ್ಷರಿಯ ಪಠಣದ ಅವಶ್ಯಕತೆಯನ್ನು ಹೇಳುತ್ತಾ ಪ್ರೇಕ್ಷಕರ ಭಾವನೆಗಳನ್ನು ತಮ್ಮ ಮಾತಿನಲ್ಲಿ ನಿಯಂತ್ರಿಸಿ ಪಾತ್ರದ ಪ್ರಾಮುಖ್ಯವನ್ನು ತೋರಿಸಿಕೊಟ್ಟರು.ಪ್ರೇತವು ಮತ್ತೆ ಶ್ವೇತಕುಮಾರನಾಗಿ ದುರ್ಜಯನ ವಧೆಯೊಂದಿಗೆ ವಿಧಿ ಲಿಖೀತದಂತೆ ದುಷ್ಟ ಸಂಹಾರಕ್ಕಾಗಿ ಎನ್ನುವಲ್ಲಿಗೆ ಕತೆ ಮುಕ್ತಾಯಗೊಂಡಿತು. ಚಂಡೆವಾದಕರಾಗಿ ಕುಮಾರ ಸುಬ್ರಹ್ಮಣ್ಯ, ಎರಡನೇ ದುರ್ಜಯನಾಗಿ ಈಶ್ವರ, ಚಿತ್ರಗುಪ್ತನಾಗಿ ಸುಂದರ ಇಂದ್ರಾಜೆ ಪಾತ್ರ ನಿರ್ವಹಿಸಿದರು. ಪುಟಾಣಿಗಳಾದ ಶ್ರೀಮಾ ಸುಳ್ಯ, ಮಾನ್ಸಿ ಸುರೇಶ್‌ ರೈ, ಅನ್ವಿತ್‌ ಗೋಪ ಚುರುಕಿನ ನಾಟ್ಯ ಪ್ರದರ್ಶಿಸಿ ಪುಳಕಗೊಳಿಸಿದರು.

ವಾರಿಜಾಕ್ಷಿ ಯಶ್‌. ಡಮ್ಮಡ್ಕ

ಟಾಪ್ ನ್ಯೂಸ್

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.